Author: Author AIN

ಭಾರತೀಯ ರೈಲ್ವೆಯಲ್ಲಿ ಆನ್‌ಲೈನ್‌ ಸೇವೆಗಳು ಇದ್ದರೂ ಕ್ಯೂಆರ್‌ ಕೋಡ್‌ ಸೇವೆ ಇರಲಿಲ್ಲ. ಅದರಲ್ಲೂ ಟಿಕೆಟ್‌ ಬುಕ್ಕಿಂಗ್‌ಗೆ ಪ್ರಯಾಣಿಕರು ಕ್ಯೂರ್‌ಆರ್‌ ಕೋಡ್‌ ಸೇವೆ ಆರಂಭಿಸುವಂತೆ ಒತ್ತಾಯಿಸುತ್ತಲೇ ಇದ್ದರು. ಆದರೆ ರೈಲ್ವೆ ಇದನ್ನು ಆರಂಭಿಸಲು ಮೀನ ಮೇಷ ಎಣಿಸುತ್ತಲೇ ಇತ್ತು. ಇದೀಗ ಗ್ರಹಕರ ಮನವಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ರೈಲ್ವೆ ಆನ್ ಲೈನ್ ಪಾವತಿಗೆ ಕ್ಯೂಆರ್ ಕೋಡ್ ಆರಂಭಿಸಲಾಗಿದೆ. ರೈಲ್ವೆ ಪ್ರಯಾಣಕ್ಕೆ ಪರ್ಯಾಯ ಇಲ್ಲದೇ ಇದ್ದುದರಿಂದ ಜನ ಇರುವ ಸೌಲಭ್ಯವನ್ನೇ ಬಳಸಿಕೊಂಡು ಮುಂಗಡ ಟಿಕೆಟ್‌ ಇಲ್ಲವೇ ದಿನದ ಪ್ರಯಾಣದ ಟಿಕೆಟ್‌ ಪಡೆದು ಸಂಚರಿಸುತ್ತಿದ್ದರು. ಈಗ ಭಾರತೀಯ ರೈಲ್ವೆ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಕ್ಯೂಆರ್‌ ಕೋಡ್‌ ಸೇವೆಯನ್ನು ಟಿಕೆಟ್‌ ಬುಕ್ಕಿಂಗ್‌ ಸೇವೆಗೆ ಆರಂಭಿಸಿದೆ. ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಕ್ಯೂಆರ್‌ ಕೋಡ್‌ ಬಳಸುವ ಸೇವೆ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಇದನ್ನು ದೇಶಾದ್ಯಂತ ಜಾರಿಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಏಪ್ರಿಲ್‌ 1ರಿಂದಲೇ ಕ್ಯೂಆರ್‌ ಕೋಡ್‌ ಸೇವೆಯು ಆರಂಭಗೊಂಡಿದೆ. ಬರೀ ಟಿಕೆಟ್‌ ಮಾತ್ರವಲ್ಲದೇ…

Read More

‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ನಾಳೆ ತಮ್ಮ 28ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡ್ತಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ರಶ್ಮಿಕಾ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಬರ್ತಡೇಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ರಶ್ಮಿಕಾ ನಟನೆಯ ಬಹುನಿರೀಕ್ಷಿತ ‘ದಿ ಗರ್ಲ್‌ಫ್ರೆಂಡ್‌’ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಲಿದೆ. ಅಲ್ಲು ಅರವಿಂದ್ ಮತ್ತು ಇತರರು ಸೇರಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ ‘ದಿ ಗರ್ಲ್‌ಫ್ರೆಂಡ್‌’ ಸಿನಿಮಾದ ಕಥೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಇದು ಯಾವ ಥರದ ಸಿನಿಮಾ? ಇದರಲ್ಲಿ ರಶ್ಮಿಕಾ ಮಂದಣ್ಣ ಪಾತ್ರವೇನು ಎಂಬುದು ರಿಲೀಸ್ ಆಗಲಿರುವ ಟೀಸರ್‌ನಿಂದ ಗೊತ್ತಾಗಲಿದೆ. ಅದಕ್ಕಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ದಿ ಗರ್ಲ್ ಫ್ರೆಂಡ್ ಸಿನಿಮಾವು ಬಹುಭಾಷೆಯಲ್ಲಿ ತೆರೆಗೆ ಬರುತ್ತಿದ್ದು, ಎಲ್ಲ…

Read More

ಬಾಲಿವುಡ್ ನಟಿ ಅನಿತಾ ಹಸ್ಸನಂದನಿ ಬರೋಬ್ಬರಿ 8 ವರ್ಷಗಳ ಬಳಿಕ ತೆಲುಗಿಗೆ ಕಮ್‌ಬ್ಯಾಕ್ ಮಾಡಿದ್ದಾರೆ. ತೆಲುಗಿನ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಮತ್ತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ನಟಿ ಎಂಟ್ರಿಕೊಡ್ತಿದ್ದಾರೆ. ‘ಓ ಭಾಮಾ ಅಯ್ಯೋ ರಾಮ’ ಚಿತ್ರದ ಮೂಲಕ ಅನಿತಾ ಟಾಲಿವುಡ್ ಅಂಗಳಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ. ತೆಲುಗು ನಟ ಸುಹಾಸ್ ಮತ್ತು ಮಾಳವಿಕಾ ಮನೋಜ್ ಜೋಡಿಯಾಗಿ ನಟಿಸುತ್ತಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮವು ಹೈದರಾಬಾದ್ ನಲ್ಲಿ ಸರಳವಾಗಿ ನಡೆದಿದೆ. ‘ಓ ಭಾಮಾ ಅಯ್ಯೋ ರಾಮ’ ಚಿತ್ರವು ಪಕ್ಕಾ ಲವ್ ಸ್ಟೋರಿಯಾಗಿದ್ದು ಚಿತ್ರದಲ್ಲಿ ಅನಿತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನಿತಾ ಪಾತ್ರದಿಂದ ಟ್ವಿಸ್ಟ್ ಸಿಗಲಿದೆಯಂತೆ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರುವ ಪ್ರಾಮುಖ್ಯತೆ ನೋಡಿ ಇಷ್ಟವಾಗಿ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಚಿತ್ರವನ್ನು ರಾಮ್ ಗೋಧಾಲ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ನಲ್ಲ ಮತ್ತು ಪ್ರದೀಪ್ ತಲ್ಲಪು ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ‘ವೀರಕನ್ನಡಿಗ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ…

Read More

ತಮಿಳು ಚಿತ್ರರಂಗದ ಪೋಷಕ ನಟಿ ಶರಣ್ಯ ಪೊನ್ವಣ್ಣನ್ ವಿರುದ್ಧ ದೂರು ದಾಖಲಾಗಿದೆ. ತನ್ನ ಅಭಿನಯದ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ನಟಿ ಇದೀಗ ಚಿಕ್ಕ ವಿಷಯಕ್ಕೆ ಕಿರಿಕ್ ಮಾಡಿಕೊಂಡಿದ್ದು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಸ್ಥಿತಿ ನಿರ್ಮಾಣವಾಗಿದೆ. ನಟಿ ಶರಣ್ಯ ಪೊನ್ವಣ್ಣನ್ ಅವರ ಪಕ್ಕದ ಮನೆಯಲ್ಲಿ ಶ್ರೀದೇವಿ ಎಂಬ ಮಹಿಳೆ ವಾಸವಾಗಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ಶರಣ್ಯ ಮತ್ತು ಶ್ರೀದೇವಿ ನಡುವೆ ಜಗಳ ನಡೆದಿದೆ. ‘ಶರಣ್ಯ, ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಶ್ರೀದೇವಿ ಆರೋಪಿಸಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಸಾಕ್ಷಿಯಾಗಿ ಸಿಸಿಟಿವಿ ಫೂಟೇಜ್‌ಗಳನ್ನು ನೀಡಿದ್ದಾರೆ. ಶರಣ್ಯ ಪತಿ ಪೊನ್ವಣ್ಣನ್ ಕೂಡ ಸಿನಿಮಾ ನಟರಾಗಿದ್ದು, ದಂಪತಿ ಚೆನ್ನೈನ ವಿರುಗಂಬಕ್ಕಂನಲ್ಲಿ ವಾಸವಾಗಿದೆ. ಸದಾ ಉತ್ತಮ ಪಾತ್ರಗಳನ್ನು ಮಾಡುವ ಶರಣ್ಯ ಸಣ್ಣ ಪಾರ್ಕಿಂಗ್ ವಿಚಾರಕ್ಕೆ ಈ ರೀತಿ ಜಗಳ ಮಾಡಿದ್ದಾರಾ ಎಂದು ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಸದ್ಯ ಪ್ರಕರಣದ ದಾಖಲಿಸಿಕೊಂಡಿರೋ ಪೊಲೀಸರು ನಟಿಯ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು…

Read More

ಸೂಕ್ಷ್ಮ ಮಾಹಿತಿಗಳನ್ನು ಹೊಂದಿರುವ ರಶ್ಯದ ಬೃಹತ್ ಜೈಲು ಡೇಟಾಬೇಸ್ ಗೆ ಹ್ಯಾಕರ್‌ ಗಳು ಕನ್ನ ಹಾಕಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ. ಇತ್ತೀಚೆಗೆ ಜೈಲಿನಲ್ಲಿ ಮೃತಪಟ್ಟ ರಶ್ಯದ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸರಕಾರಿ ವಿರೋಧಿ ಸೈಬರ್‍ಕ್ರಿ ಮಿನಲ್‍ಗಳು ನಡೆಸಿರುವ ಕೃತ್ಯ ಇದಾಗಿದೆ ಎಂದು ಶಂಕಿಸಲಾಗಿದೆ. ರಶ್ಯದ ಜೈಲುವ್ಯವಸ್ಥೆಯೊಂದಿಗೆ ಸಂಪರ್ಕದಲ್ಲಿರುವ ಕಂಪ್ಯೂಟರ್ ನೆಟ್‍ವರ್ಕ್ ಬಳಸಿ ಹ್ಯಾಕ್ ಮಾಡಲಾದ ಜೈಲು ಗುತ್ತಿಗೆದಾರರ ವೆಬ್‍ಸೈಟ್‍ನಲ್ಲಿ ನವಾಲ್ನಿಯ ಫೋಟೊ ಹಾಕಲಾಗಿದೆ. ಫೋಟೋದ ಕೆಳಗೆ `ಅಲೆಕ್ಸಿ ನವಾಲ್ನಿ ಚಿರಾಯುವಾಗಲಿ’ ಎಂದು ಬರೆದಿದ್ದು ಇದರ ಜೊತೆಗೆ ನವಾಲ್ನಿ ತನ್ನ ಪತ್ನಿ ಯೂಲಿಯಾ ಜತೆ ಭಾಗವಹಿಸಿದ್ದ ರಾಜಕೀಯ ರ್ಯಾಲಿಯ ಫೋಟೊವನ್ನು ಬಳಸಲಾಗಿದೆ. ವೆಬ್‍ಸೈಟ್‍ಗೆ ಕನ್ನ ಹಾಕಿದ್ದು ಮಾತ್ರವಲ್ಲ, 8 ಲಕ್ಷಕ್ಕೂ ಅಧಿಕ ರಶ್ಯನ್ ಕೈದಿಗಳ ಮಾಹಿತಿಯನ್ನು ಒಳಗೊಂಡ ಡೇಟಾಬೇಸ್ ಕೂಡಾ ಹ್ಯಾಕರ್‌ ಗಳ ವಶವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಶ್ಯನ್ ಜೈಲುಗಳ ಆನ್‍ಲೈನ್ ಅಂಗಡಿಗಳಲ್ಲಿ ಮಾರುವ ವಸ್ತುಗಳ ಬೆಲೆಯನ್ನೂ ಹ್ಯಾಕರ್‌ ಗಳು…

Read More

ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಕಳೆದ ವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಮಾಸ್ಟರ್ ಮೈಂಡ್ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿಷೇಧಿತ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಭಯೋತ್ಪಾದಕ ಸಂಘಟನೆ ಈ ಆತ್ಮಾಹುತಿ ದಾಳಿ ನಡೆಸಿದೆ ಎಂದು ಭಯೋತ್ಪಾದನೆ ನಿಗ್ರಹ ದಳ ಆರೋಪಿಸಿದೆ. ಆತ್ಮಹತ್ಯಾ ಬಾಂಬರ್ ನನ್ನು ಅಫ್ಘಾನಿಸ್ತಾನದಿಂದ ಕರೆತಂದ ಪ್ರಕರಣದ ಸೂತ್ರಧಾರ ಹಝ್ರತ್ ಬಿಲಾಲ್ ಸೇರಿದಂತೆ ಒಟ್ಟು 12 ಆರೋಪಿಗಳನ್ನು ವಿವಿಧೆಡೆ ನಡೆಸಿದ ದಾಳಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳನ್ನು ತಿಳಿಸಿದ್ದಾರೆ

Read More

ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಪಕ್ಷ ನಾಯಕರ #BoycotIndia ಅಭಿಯಾನಕ್ಕೆ ಪ್ರಧಾನಿ ಶೇಖ್ ಹಸೀನಾ ತಿರುಗೇಟು ನೀಡಿದ್ದಾರೆ. india-Out ಎನ್ನುವ ಮೊದಲು ನಿಮ್ಮ ಪತ್ನಿಯರು ಉಟ್ಟಿರುವ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ ಎಂದು ಸವಾಲು ಹಾಕಿದ್ದಾರೆ. ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುವ ಪ್ರತಿ ಪಕ್ಷದ ನಾಯಕರು ತಮ್ಮ ಪತ್ನಿಯರು ಮನೆಯಲ್ಲಿ ಪೆಟ್ಟಿಗೆಯಲ್ಲಿ ಇಟ್ಟಿರುವ ಮೇಡ್​ ಇನ್​ ಇಂಡಿಯಾ ಸೀರೆಗಳನ್ನು ಮೊದಲು ಸುಟ್ಟು ಹಾಕಬೇಕು ಎಂದು ‘ಇಂಡಿಯಾ ಔಟ್​’ ಅಭಿಯಾನ ನಡೆಸುತ್ತಿರುವ ವಿರೋಧ ಪಕ್ಷಗಳ ನಾಯಕರಿಗೆ ಟಾಂಗ್ ನೀಡಿದ್ದಾರೆ. ಭಾರತ ವಿರೋಧಿ ಅಭಿಯಾನ ನಡೆಸುತ್ತಿರುವ ವಿಪಕ್ಷ ನಾಯಕರ ಕ್ರಮವನ್ನು ಖಂಡಿಸಿರುವ ಶೇಖ್ ಹಸೀನಾ, ತಾವು ಅಧ್ಯಕ್ಷರಾಗಿರುವ ಆಡಳಿತಾರೂಢ ಅವಾಮಿ ಲೀಗ್​ನ ಸಭೆಯನ್ನುದ್ದೇಶಿಸಿ ಮಾತನಾಡಿ India-Out ಅಭಿಯಾನವನ್ನು ವಿರೋಧಿಸಿದರು. ಈ ವೇಳೆ ಭಾರತದ ಬೆನ್ನಿಗೆ ನಿಂತ ಅವರು, ‘ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ನಾಯಕರನ್ನು ತರಾಟೆಗೆ ತೆಗೆದುಕೊಂಡರು. “ನನ್ನ ಪ್ರಶ್ನೆಯೆಂದರೆ, ನಿಮ್ಮ ಹೆಂಡತಿಯರು ಎಷ್ಟು ಭಾರತೀಯ ಸೀರೆಗಳನ್ನು…

Read More

ಟಾಲಿವುಡ್ ಬ್ಯೂಟಿ ನಟಿ ಪೂಜಾ ಹೆಗ್ಡೆ ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಗೆಳೆಯನ ಜೊತೆ ಕಾರಿನಲ್ಲಿ ಕುಳಿತು ತೆರಳುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಪೂಜಾ ಹೆಗ್ಡೆ ಹೆಸರು ಹಲವು ನಟರ ಜೊತೆ ಕೇಳಿ ಬಂದಿತ್ತು. ಅದರಲ್ಲೂ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಪೂಜಾ ಅಂತ ಹೆಚ್ಚು ಸುದ್ದಿಯಾಗಿತ್ತು. ಆ ನಂತರ ಆ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ಸಿಕ್ಕಿತ್ತು. ಇದೀಗ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೋಟೆಲ್‌ನಿಂದ ಹೊರಬಂದು ಕಾರಿನಲ್ಲಿ ರೋಹನ್ ಮೆಹ್ರಾ ಹಾಗೂ ಪೂಜಾ ಒಟ್ಟಿಗೆ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಕ್ಯಾಮೆರಾ ಕಾಣಿಸುತ್ತಿದ್ದಂತೆ ನಟಿ ನಾಚಿ ನೀರಾಗಿದ್ದಾರೆ. ಕ್ಯಾಮೆರಾಗೆ ಸರಿಯಾಗಿ ಮುಖ ತೋರಿಸದೇ ಕೂತಿದ್ದ ಪೂಜಾಳನ್ನು ನೋಡಿದ ನೆಟ್ಟಿಗರು ನೀವಿಬ್ಬರು ಡೇಟಿಂಗ್ ನಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆರಂಭದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಪೂಜಾ ಹೆಗ್ಡೆ ಆ ಬಳಿಕ ಸತತ ಸೋಲುಗಳನ್ನೇ ನೀಡುತ್ತಿದ್ದಾರೆ. ಟಾಲಿವುಡ್ ಬಳಿಕ ಬಾಲಿವುಡ್…

Read More

ನಟ ಉನ್ನಿ ಮುಕುಂದನ್ ಸಿನಿಮಾಗಿಂತ ಹೆಚ್ಚಾಗಿ ಖಾಸಗಿ ಬದುಕಿನ ಬಗ್ಗೆಯೇ ಸುದ್ದಿಯಾಗುತ್ತಿರುತ್ತಾರೆ. ಉನ್ನಿ ಮುಕುಂದನ್ ಮಲಯಾಳಂ ನಟಿ ಅನುಶ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಉನ್ನಿ ಮುಕುಂದನ್ ಸ್ಪಷ್ಟನೆ ನೀಡಿದ್ದಾರೆ ನನ್ನ ಹೆಸರನ್ನು ಆಗಾಗ ಬೇರೆ ನಟಿಯರೊಂದಿಗೆ ಸೇರಿಸಲಾಗುತ್ತದೆ. ವಿಪರ್ಯಾಸವೆಂದರೆ, ಆ ನಟಿಯರೆಲ್ಲಾ ಈಗ ಮದುವೆ ಆಗಿದ್ದಾರೆ. ಹಾಗಾದ್ರೆ ಶೀಘ್ರದಲ್ಲಿಯೇ ಅನುಶ್ರೀ ಕೂಡ ಮದುವೆಯಾಗಬಹುದು ಎಂದು ಟ್ರೋಲಿಗರಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ಮೂಲಕ ಅನುಶ್ರೀ ಜೊತೆಗಿನ ಡೇಟಿಂಗ್ ಸುದ್ದಿ ಕೇವಲ ವದಂತಿಯಷ್ಟೇ, ಅದು ನಿಜವಲ್ಲ ಎಂದಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ನನ್ನ ಹೆಸರು ಇತರೆ ನಟಿಯರ ಜೊತೆ ಸೇರಿಕೊಳ್ಳುತ್ತದೆ. ಅನುಶ್ರೀ ಕೂಡ ಆಗಾಗ್ಲೆ ಇಂತಹ ಸುದ್ದಿಗಳನ್ನು ನನಗೆ ಶೇರ್ ಮಾಡುತ್ತಾರೆ. ಈ ರೀತಿಯ ಸುದ್ದಿಗಳಿಂದ ನನ್ನ ವೈಯಕ್ತಿಕ ಬದುಕಿಗೂ ಪರಿಣಾಮ ಬಿರುತ್ತದೆ ಎಂದು ನಟ ಹೇಳಿದ್ದಾರೆ.

Read More

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. 14 ವರ್ಷಗಳ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದೆ. ಸರ್ಕಾರಿ ಉಡುಗೊರೆ ಪಡೆದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿಗೆ ವಿಧಿಸಿದ್ದ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ. ತೋಷಾಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಉತ್ತರದಾಯಿತ್ವ ನ್ಯಾಯಾಲಯವು 14 ವರ್ಷಗಳ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಕೋರ್ಟ್ ಮೊರೆ ಹೋಗಿದ್ದರು. ಹಾಗೂ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಶಿಕ್ಷೆಯನ್ನು ನ್ಯಾಯಾಲಯ ಅಮಾನತುಗೊಳಿಸಿದೆ. ಶಿಕ್ಷೆಯ ವಿರುದ್ಧದ ಮೇಲ್ಮನವಿಯನ್ನು ಈದ್ ರಜಾದಿನಗಳ ನಂತರ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ತಿಳಿಸಿದ್ದಾರೆ.

Read More