Author: Author AIN

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್​ ನಿರ್ಮಾಣದ ‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾ ಏಪ್ರಿಲ್​ 19ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಕಿಂಗ್​ ವಿಡಿಯೋವೊಂದನ್ನು ನಿರ್ಮಾಪಕರು ಶೇರ್ ಮಾಡಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ಓರ್ವ ತೃತೀಯ ಲಿಂಗಿ ಕಾಣಿಸಿಕೊಂಡಿದ್ದಾರೆ. ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಬೋನಿತಾ ರಾಜ್​​​ಪುರೋಹಿತ್​ ಎನ್ನುವ ತೃತೀಯಲಿಂಗಿಗೆ ಅವಕಾಶ ನೀಡಲಾಗಿದೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇದು ಮಹತ್ವದ ಸಂಗತಿಯಾಗಿದೆ. 2010ರಲ್ಲಿ ಬಿಡುಗಡೆ ಆಗಿದ್ದ ‘ಲವ್​ ಸೆ*ಕ್ಸ್​ ಔರ್​ ದೋಖಾ’ ಸಿನಿಮಾದಲ್ಲೂ ನಿರ್ಮಾಪಕಿ ಏಕ್ತಾ ಕಪೂರ್​ ಅನೇಕ ಹೊಸಬರಿಗೆ ಅವಕಾಶ ನೀಡಿದ್ದರು. ಇದೀಗ ಪಾರ್ಟ್​ 2 ನಲ್ಲಿ ಬೋನಿತಾ ರಾಜ್​ಪುರೋಹಿತ್​ ಅವರಿಗೆ ಅವಕಾಶ ನೀಡಲಾಗಿದೆ. ತೃತೀಯಲಿಂಗಿಯನ್ನು ಮುಖ್ಯ ಪಾತ್ರದಲ್ಲಿ ಲಾಂಚ್​ ಮಾಡುತ್ತಿರುವ ಮೊದಲ ನಿರ್ಮಾಪಕಿ ಎಂಬ ಖ್ಯಾತಿಗೆ ಏಕ್ತಾ ಕಪೂರ್​ ಪಾತ್ರರಾಗುತ್ತಿದ್ದಾರೆ. ‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾದಲ್ಲಿ ಬೋನಿತಾ ರಾಜ್​ಪುರೋಹಿತ್​ ಅವರು ಕುಲು ಎಂಬ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ವಿವರಿಸುವ ವಿಡಿಯೋವನ್ನು…

Read More

ಕಳೆದ ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧಕ್ಕೆ ಆರು ತಿಂಗಳು ಕಳೆದಿದೆ. ಘಟನೆಯಲ್ಲಿ ಇದುವರೆಗೂ 30 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಇಸ್ರೇಲ್‍ನ ಸುಮಾರು 1,200 ಪ್ರಜೆಗಳು ಮೃತಪಟ್ಟಿದ್ದು ಹಮಾಸ್ 250ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಗಾಜಾದ ಹಮಾಸ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರ ಹಮಾಸ್ ದಾಳಿಗೆ ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ಕನಿಷ್ಠ 33,175 ಜನರು ಸಾವನ್ನಪ್ಪಿದ್ದಾರೆ. ಈಜಿಪ್ಟ್ ಗಡಿಭಾಗದ ಸನಿಹದಲ್ಲಿರುವ ರಫಾ ನಗರದಲ್ಲಿ 1 ದಶಲಕ್ಷಕ್ಕೂ ಅಧಿಕ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದು ಇದೀಗ ಈ ನಗರದ ಮೇಲೆ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ. ದಕ್ಷಿಣ ಇಸ್ರೇಲಿನಲ್ಲಿ ಹಮಾಸ್ ದಾಳಿಯು 1,170 ಇಸ್ರೇಲಿಗಳು ಮತ್ತು ವಿದೇಶಿಯರನ್ನು ಕೊಂದಿತು, ಅವರಲ್ಲಿ ಹೆಚ್ಚಿನವರು ನಾಗರಿಕರು, ಅಧಿಕೃತ ಇಸ್ರೇಲ್ ಪ್ರದೇಶದವರು ಎಂದು ತಿಳಿದು ಬಂದಿದೆ. ಗಾಝಾದಲ್ಲಿ 6 ತಿಂಗಳಿಂದ ಮುಂದುವರಿದಿರುವ ಸಂಘರ್ಷವು ಇಸ್ರೇಲ್‍ನ…

Read More

ಇಸ್ರೇಲ್‍ನ ಯಾವುದೇ ದೂತಾವಾಸಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್‍ನ ಉನ್ನತ ರಕ್ಷಣಾ ಸಲಹೆಗಾರ ರಹೀಮ್ ಸಫಾವಿ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ದಮಾಸ್ಕಸ್‍ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಇರಾನ್ ರೆವೊಲ್ಯುಷನರಿ ಗಾಡ್ರ್ಸ್‍ನ ಉನ್ನತ ಕಮಾಂಡರ್‍ಗಳ ಸಹಿತ 12 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ದೂಷಿಸಿರುವ ಇರಾನ್, ಇದಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ನಮಗೆ ಯಾರೆಲ್ಲಾ ಹಾನಿ ಮಾಡುತ್ತಾರೋ ಅಥವಾ ಹಾನಿ ಮಾಡಲು ಪ್ರಯತ್ನಿಸುತ್ತಾರೋ ಅವರಿಗೆ ನಾವು ಹಾನಿ ಮಾಡುತ್ತೇವೆ. ಈ ಸಿದ್ಧಾಂತವನ್ನು ನಾವು ಸದಾಕಾಲ ಪಾಲಿಸುತ್ತಿದ್ದೇವೆ’ ಎಂದು ರಹೀಮ್ ಸಫಾವಿ ಹೇಳಿದ್ದಾರೆ. ಭಾನುವಾರ ರವಿವಾರ ಟೆಹ್ರಾನ್‍ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಅವರು ಮಾತನಾಡಿದರು. ಇರಾನ್‍ನ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈ ಅವರ ಮಿಲಿಟರಿ ಸಲಹೆಗಾರರಾಗಿರುವ ಸಫಾವಿ ಅವರ ಹೇಳಿಕೆಯು `ಇರಾನ್‍ನ ದೂತಾವಾಸಕ್ಕೆ ನಡೆದ ದಾಳಿಗೆ ಅದೇ ರೀತಿಯಲ್ಲಿ ಉತ್ತರಿಸುವ’ ಸೂಚನೆಯನ್ನು ನೀಡಿದೆ ಎಂದು ವಿಶ್ಲೇಷಿಸಲಾಗಿದೆ. ಈ ಮಧ್ಯೆ, ಗಾಝಾದ…

Read More

ಬಾಲಿವುಡ್ ನಟಿ ಕಂಗನಾ ರಣಾವತ್​ ಗೆ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣಾ ಟಿಕೆಟ್ ನೀಡಿದೆ. ಮಂಡಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಕಂಗನಾ ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಿಸಿಕೊಂಡಿದ್ದಾರೆ. ಈ ಮಧ್ಯೆ ಕಂಗನಾ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಟಿ ಕಂಗನಾ ರಣಾವತ್ ಅವರು ಸಂದರ್ಶನವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರನ್ನು ಭಾರತದ ಮೊದಲ ಪ್ರಧಾನಿ ಎಂದು ಹೇಳಿದ್ದಾರೆ. ಈ ಹೇಳಿಕೆಯೇ ಸದ್ಯ ವೈರಲ್ ಆಗಿದೆ. ಕಂಗನಾ ರಣಾವತ್​​ರ ಪ್ರಕಾರ ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದರು. ಸರ್ದಾರ್ ಪಟೇಲ್ ಅವರಿಗೆ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಅವರು ಪ್ರಧಾನಿ ಆಗಲಿಲ್ಲ’ ಎಂದು ಹೇಳಿದ್ದಾರೆ. ಭಾರತದ ಮೊದಲ ಪ್ರಧಾನ ಮಂತ್ರಿ ಹೇಳಿಕೆ ನೀಡಿದ ಬಳಿಕ ಕಂಗನಾ ರಣಾವತ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಹಲವಾರು ನೆಟಿಗರು ಕಮೆಂಟ್ ಮಾಡುವ ಮೂಲಕ ಕಂಗನಾ ರಣಾವತ್…

Read More

ಚೀನಾದ ದಕ್ಷಿಣ ಕ್ಸಿನ್‌ ಜಿಯಾಂಗ್‌ನಲ್ಲಿ ಭಾನುವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಭೂಮಿಯ ಮೇಲ್ಮೈಯಿಂದ 24 ಕಿ.ಮೀ (14.91 ಮೈಲುಗಳು) ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಇಎಂಎಸ್‌ಸಿ ತಿಳಿಸಿದೆ.

Read More

ಹಜ್ ಯಾತ್ರೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮುಂಡಗೋಡ ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಅಣ್ಣನ ಮಗ ಆಯಾನ್ ರೋಣ ಹಜ್ ಯಾತ್ರೆಗೆಂದು ಮಾ.26ರಂದು ಮಕ್ಕಾ ಮದೀನಾಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದೀನಾ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

Read More

ನಟ ಧ್ರುವ ಸರ್ಜಾ ದಂಪತಿ ಮಕ್ಕಳಿಗೆ ಪಂಚಮುಡಿ ಶಾಸ್ತ್ರ ಮಾಡಿಸಲು ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮನೆದೇವರಿಗೆ ಮಕ್ಕಳ ಮೊದಲ ಮುಡಿ ಕೊಡುವ ಶಾಸ್ತ್ರ ಮಾಡಿದ್ದಾರೆ ಧ್ರುವ ಸರ್ಜಾ ದಂಪತಿ. ರುದ್ರಾಕ್ಷಿ ಹಾಗೂ ಹಯಗ್ರೀವನ ಪಂಚಮುಡಿ ಶಾಸ್ತ್ರ ಮಾಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧ್ರುವ ಸರ್ಜಾ ಕಳೆದ ಜನವರಿಯಲ್ಲಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದರು. ಪುತ್ರಿಗೆ ರುದ್ರಾಕ್ಷಿ ಪುತ್ರನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದರು. ಇದೀಗ ಇಬ್ಬರೂ ಮಕ್ಕಳಿಗೆ ಒಟ್ಟಿಗೆ ಮುಡಿ ಕೊಡಿಸಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ಧ್ರುವ ಸರ್ಜಾರ ಮನೆ ದೇವರು. ಹೀಗಾಗಿ ಮಕ್ಕಳ ಪ್ರಥಮ ಮುಡಿ ಮನೆದೇವರಿಗೆ ಅರ್ಪಿಸಿದ್ದಾರೆ. ರುದ್ರಾಕ್ಷಿ ಹಯಗ್ರೀವನಿಗೆ ಒಟ್ಟಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿದ್ದಾರೆ. ಈ ವೇಳೆ ಧ್ರುವ ಸರ್ಜಾರನ್ನು ನೋಡಲು ಸಾಕಷ್ಟು ಮಂದಿ ಆಗಮಿಸಿದ್ದರು.

Read More

ಸ್ಯಾಂಡಲ್‌ವುಡ್‌ನ ಹಿರಿಯ ನಟ ಸಿಹಿ ಕಹಿ ಚಂದ್ರು ಹಾಗೂ ಸಿಹಿ ಕಹಿ ಗೀತಾ ಅವರ ಪುತ್ರಿ ಹಿತಾ ಚಂದ್ರಶೇಖರ್‌, ಜೀವನದಲ್ಲಿ ಮಕ್ಕಳೇ ಬೇಡ ಎಂದು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣವು ಇದೆ. ಹಿತಾ ಚಂದ್ರ ಶೇಖರ್‌ 2019ರ ಡಿಸೆಂಬರ್‌ನಲ್ಲಿ ನಟ ಕಿರಣ್‌ ಶ್ರೀನಿವಾಸ್‌ ಜತೆಗೆ ಹಸೆಮಣೆ ಏರಿದ್ದಾರೆ. ಮದುವೆಯಾಗಿ ನಾಲ್ಕುವರೆ ವರ್ಷಗಳಾಗುತ್ತ ಬಂದರೂ ಈ ದಂಪತಿ ಮಕ್ಕಳು ಮಾಡಿಕೊಳ್ಳುವ ನಿರ್ಧಾರ ಮಾಡಿಲ್ಲ. ಮಗು ಮಾಡಿಕೊಳ್ಳುವ ಬಗ್ಗೆ ಸಂದರ್ಶನದಲ್ಲಿ ರಶ್ಮಿ ಪ್ರತಿಕ್ರಿಯೆ ನೀಡಿದ್ದಾರೆ. “ಮೊದಲನೇದಾಗಿ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಫೀಲಿಂಗ್‌ ಇಲ್ಲ. ನಾನು ಮತ್ತು ಕಿರಣ್‌ ಫ್ರೆಂಡ್ಸ್‌ ಆಗಿದ್ದಾಗಲೇ ಈ ವಿಚಾರವನ್ನು ಮಾತನಾಡಿಕೊಂಡಿದ್ವಿ. ಆತನಿಂದಲೂ ಇದಕ್ಕೆ ಪಾಸಿಟಿವ್‌ ಉತ್ತರವೇ ಸಿಕ್ಕಿತ್ತು. ಯಾಕೆ ನನ್ನದೇ ಆದ ಮಗು ಬೇಕು? ಎಂಬ ಭಾವನೆ ನನಗಿಲ್ಲ. ಈ ನಡುವೆ ಈ ಜಗತ್ತಿನಲ್ಲಿ ಏನೆನೆಲ್ಲ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಪ್ರಪಂಚಕ್ಕೆ ಇನ್ನೊಂದು ಮಗು ತರಲೇಬೇಕಾ? ಎಂಬ ಪ್ರಶ್ನೆ ಇತ್ತು. ನನ್ನ ಥಾಟ್ಸ್‌ ರೀತಿಯಲ್ಲಿಯೇ ಕಿರಣ್‌ಗೂ ಹಾಗೇ ಅನಿಸಿತ್ತು” “ಅಷ್ಟಕ್ಕೂ…

Read More

ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು 224 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ  ಬ್ರಿಟನ್‌ನಲ್ಲಿ ನಡೆದಿದೆ. 28 ವರ್ಷದ ನಿಕೋಲಸ್ ಮ್ಯಾಟ್ಸನ್ ತನ್ನ ಪತ್ನಿ ಹೋಲಿ ಬ್ರಮ್‌ಲೇ ಎಂಬ ಮಹಿಳೆಯನ್ನು ಕೊಲೆ ಮಾಡಿಬಳಿಕ ನೀರಿಗೆ ಎಸೆದಿದ್ದಾನೆ. ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು ನಂತರ ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ನದಿಗೆ ಎಸೆದಿದ್ದಾನೆ. ಬ್ರಾಮ್ಮಿ ನಾಪತ್ತೆಯಾದ ಎಂಟು ದಿನಗಳ ನಂತರ ,ಲಿಂಕನ್‌ಶೈರ್‌ನ ಬಾಸಿಂಗ್‌ಹ್ಯಾಮ್‌ನ ವಿಥಮ್ ನದಿಯಲ್ಲಿ ಹೋಲಿ ಬ್ರಮ್‌ಲೇ ಶವ ಪತ್ತೆಯಾಗಿತ್ತು. ವಾಕಿಂಗ್​ ಹೋಗಿದ್ದ ವ್ಯಕ್ತಿಯೊಬ್ಬರು ಇದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನ ಸಂಬಂಧ ನದಿ ಬಳಿಗೆ ಬಂದ ಪೊಲೀಸರು ಪ್ಲಾಸ್ಟಿಕ್ ಚೀಲವನ್ನು ನದಿಯಿಂದ ಮೇಲಕ್ಕೆತ್ತಿ ನೋಡಿದಾಗ ಅದರಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದೆ, ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ. ಈ ಘಟನೆ ಸಂಬಂಧ ಕೊಲೆಯಾದ…

Read More

ನಟಿ ಚೈತ್ರಾ ಆಚಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಚೈತ್ರಾ ಅವರ ಲೇಟೆಸ್ಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಉತ್ತಮ ಅಭಿನಯದಿಂದಲೇ ನಟಿ ಚೈತ್ರಾ ಆಚಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶೇಷ ಪಾತ್ರಗಳ ಮೂಲಕ ನಟಿ ಚೈತ್ರಾ ಆಚಾರ ಪ್ರೇಕ್ಷಕರ ಮನಗೆದ್ದಿದ್ದು, ಇದೀಗ ಬೋಲ್ಡ್ ಫೋಟೋ ಮೂಲಕ ಭಾರೀ ಸದ್ದು ಮಾಡ್ತಿದ್ದಾರೆ. ಚೈತ್ರ ಆಚಾರ್​ ಬಗೆ ಬಗೆ ಪೋಸ್​ ಕೊಟ್ಟ  ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಚೈತ್ರಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡುತ್ತಾರೆ. ಈಗ ಹಂಚಿಕೊಂಡಿರುವ ಫೋಟೋಗಳಲ್ಲೂ ಚೈತ್ರ ಮಾದಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಭಾರಿ ಚೈತ್ರಾ ಆಚಾರ್ ಫೋಟೋ ಹಂಚಿಕೊಂಡಾಗಲು ಒಂದಷ್ಟು ಮಂದಿ ನೆಗೆಟಿವ್ ಕಮೆಂಟ್ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ನಟಿ ಫೋಟೋಗಳಿಗೆ ಕಮೆಂಟ್ ಆಯ್ಕೆಯನ್ನು ಆಫ್ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ಚೈತ್ರಾ ಆಚಾರ್…

Read More