ಸ್ಯಾಂಡಲ್ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಏ.14 ರಂದು ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್ವುಡ್ ಗಣ್ಯರು ಜಗದೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದೀಗ ಕೈನೋವಿನ ನಡುವೆಯೂ ನಟ ದರ್ಶನ್ ಆಪ್ತ ಸ್ನೇಹಿತ ಸೌಂದರ್ಯ ಜಗದೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಸೌಂದರ್ಯ ಜಗದೀಶ್ ಆತ್ಮಹತ್ಯೆ ಕುಟುಂಬಸ್ಥರಿಗೆ, ಆಪ್ತರಿಗೆ ಶಾಕ್ ಕೊಟ್ಟಿದೆ. ಜಗದೀಶ್ಗೆ ಅಂತಿಮ ನಮನ ಸಲ್ಲಿಸಲು ಗಣ್ಯರು ಮನೆಗೆ ಭೇಟಿ ನೀಡುತ್ತಿದ್ದಾರೆ. ಹೀಗಿರುವಾಗ ಹಲವು ವರ್ಷಗಳ ಸ್ನೇಹಿತರಾದ ಜಗದೀಶ್ಗೆ ಅಂತಿಮ ದರ್ಶನ ಪಡೆಯಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದಾರೆ. ‘ಡೆವಿಲ್’ ಶೂಟಿಂಗ್ನಲ್ಲಿ ಕೈಗೆ ಏಟು ಮಾಡಿಕೊಂಡಿದ್ದರ ಹಿನ್ನಲೆ ಇತ್ತೀಚೆಗೆ ದರ್ಶನ್ ಎಡಗೈಗೆ ಸರ್ಜರಿ ಆಗಿತ್ತು. ಒಂದು ತಿಂಗಳುಗಳ ಕಾಲ ರೆಸ್ಟ್ ಅಗತ್ಯ ಎಂದು ವೈದ್ಯರು ಹೇಳಿದ್ದರು. ಕೈನೋವಿನ ನಡುವೆಯೂ ಜಗದೀಶ್ ಅಂತಿಮ ದರ್ಶನಕ್ಕೆ ದರ್ಶನ್ ಆಗಮಿಸಿ ಕುಟುಂಬದವರಿಗೆ ಸಂತೈಸಿದ್ದಾರೆ. ಈ ವೇಳೆ, ದರ್ಶನ್ ಜೊತೆ ನಟ ಧನ್ವೀರ್ ಗೌಡ ಮತ್ತು ಯಶಸ್…
Author: Author AIN
ಇರಾನ್ ದಾಳಿಯಿಂದಾಗಿ ಇಸ್ರೇಲ್ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಹಿನ್ನೆಲೆ ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಭಾರತೀಯರೆಲ್ಲರೂ ಶಾಂತವಾಗಿರಿ, ಸ್ಥಳೀಯ ಅಧಿಕಾರಿಗಳು ನೀಡಿದ ಸುರಕ್ಷತಾ ಕ್ರಮಗಳಿಗೆ ಬದ್ಧರಾಗಿರಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದೆ. ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, ಎಲ್ಲಾ ಭಾರತೀಯ ಪ್ರಜೆಗಳು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದೆ. ಪಶ್ಚಿಮ ಏಷ್ಯಾ ವಲಯದಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಇಸ್ರೇಲ್ ಮತ್ತು ಇರಾನ್ ನಡುವೆ ಹಗೆತನ ಹೆಚ್ಚುತ್ತಿರುವ ಬಗ್ಗೆ ಭಾರತ ಗಂಭೀರವಾಗಿ ಚಿಂತಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಿಖ್ ವ್ಯಕ್ತಿಯನ್ನು ಬೆತ್ತಲೆಯಾಗಿಸಿ ಹಲ್ಲೆ ನಡೆಸಲಾಗಿದೆ. ಹಲ್ಲೆಯ ವಿಡಿಯೋವನ್ನು ಚಿತ್ರೀಕರಿಸಿದ ದುಷ್ಕರ್ಮಿಗಳು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಈ ಆಘಾತಕಾರಿ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಡಿಕಲ್ ಮೆಜಾರಿಟಿ ಗುಂಪಿನ ಸದಸ್ಯರು ಸಂತ್ರಸ್ತೆಯನ್ನು ಬೆತ್ತಲೆಗೊಳಿಸಿ, ಕಟ್ಟಿಹಾಕಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಹಿಂದೂಗಳು ಮತ್ತು ಸಿಖ್ಖರು ಆಚರಿಸುವ ಮಹತ್ವದ ಹಬ್ಬವಾದ ವೈಶಾಖಿ ವಾರದ ಸಮಯದಲ್ಲಿ ಈ ಭಯಾನಕ ದಾಳಿ ಸಂಭವಿಸಿದೆ. ಈ ವಿಡಿಯೋ ನೆಟ್ಟಿಗರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅವರು ಸಿಖ್ ವ್ಯಕ್ತಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದರ ಬಗ್ಗೆ ಅಪನಂಬಿಕೆ ಮತ್ತು ಭಯಾನಕತೆಯನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ದುಷ್ಕರ್ಮಿಗಳ ಅನಾಗರಿಕ ಕೃತ್ಯಗಳನ್ನು ಖಂಡಿಸಿದ್ದಾರೆ, ತ್ವರಿತ ನ್ಯಾಯಕ್ಕೆ ಕರೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ನಡೆದಿದೆ ಎಂದು ಹೇಳಲಾದ ಈ ದಾಳಿಯು ದೇಶದ ಅಲ್ಪಸಂಖ್ಯಾತ ಸಮುದಾಯಗಳ ದುರ್ಬಲತೆಯನ್ನು ಒತ್ತಿಹೇಳುತ್ತದೆ ಮತ್ತು ಅವರ ಹಕ್ಕುಗಳ ಹೆಚ್ಚಿನ ರಕ್ಷಣೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾಗಿದ್ದರೂ, ವೈಶಾಖಿ ವಾರವು ಈ ಘೋರ ಹಿಂಸಾಚಾರದ ಕೃತ್ಯದಿಂದ ಹಾಳಾಗಿದ್ದು, ಸಿಖ್…
ಇರಾನ್ ದಾಳಿ ತಡೆಯಲು ಇಸ್ರೇಲ್ ಸಿದ್ದವಾಗಿದ್ದು, ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಆಕ್ರೋಶ ಹೊರ ಹಾಕಿದ್ದಾರೆ. ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ಇರಾನ್ನ ರಾಯಭಾರ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ತಡರಾತ್ರಿ ಇಸ್ರೇಲ್ ಪ್ರದೇಶವನ್ನು ನೇರವಾಗಿ ಗುರಿಯಾಗಿಸಿಕೊಂಡು ಸ್ಪೋಟಕ ಡ್ರೋನ್ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸಿರುವುದಕ್ಕೆ ನೆತನ್ಯಾಹ ಈ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್ ನಮ್ಮ ಮೇಲೆ ದಾಳಿ ನಡೆಸಬಹುದು ಎಂಬ ನಿರೀಕ್ಷೆಯಿತ್ತು. ಹೀಗಾಗಿ ನಾವು ನಮ್ಮ ರಕ್ಷಣಾತ್ಮಕ ವ್ಯವಸ್ಥೆಗಳನ್ನು ನಿಯೋಜಿಸಿಕೊಂಡಿದ್ದೇವೆ. ನಾವು ರಕ್ಷಣಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ಯಾವುದೇ ಸನ್ನಿವೇಶಕ್ಕೆ ಸಿದ್ಧರಿದ್ದೇವೆ ಅವರು ಎಚ್ಚರಿಸಿದ್ದಾರೆ. ಇರಾನ್ನ ನೇರ ದಾಳಿಯ ಜೊತೆಗೆ, ಅದರ ಮಿತ್ರರಾಷ್ಟ್ರಗಳ ಪಡೆಗಳು ಇಸ್ರೇಲಿ ಸ್ಥಾನಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದವು ಹೀಗಾಗಿ ಹಲವಾರು ಪ್ರದೇಶಗಳಲ್ಲಿ ಸೈರನ್ಗಳು ಮೊಳಗಿದವು ಮತ್ತು ಇಂದು ಮುಂಜಾನೆ ಜೆರುಸಲೆಮ್ನಲ್ಲಿ ಸ್ಪೋಟದ ಸದ್ದು ಕೇಳಿದೆ. ಡಮಾಸ್ಕಸ್ನಲ್ಲಿರುವ ತನ್ನ ದೂತಾವಾಸದ ಮೇಲೆ ಎಪ್ರಿಲ್ 1 ರಂದು ನಡೆದ ವೈಮಾನಿಕ ದಾಳಿಯ…
ನಿಮಗೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯಾ? ಹಾಗಿದ್ದರೆ ನೀವು ಇಂದೇ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಬಹುದು. ಒಟ್ಟು 4000 ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಮಾರ್ಚ್ 11 ರಿಂದ ನೋಂದಣಿ ನಡೆಯುತ್ತಿದ್ದು, ಈ ತಿಂಗಳ ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ವಿವಿಧ ಇಲಾಖೆಗಳಿಗೆ ಮೀಸಲಾಗಿದ್ದು, ಆನ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಭಾರತೀಯ ವ್ಯಾಪಾರಿ ನೌಕಾಪಡೆಯ ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನು ಮಾತ್ರ ಮಾಡಬಹುದು. ಇದನ್ನು ಮಾಡಲು ನೀವು ಈ ವೆಬ್ಸೈಟ್ಗೆ ಹೋಗಬೇಕು – sealanmaritime.in. ಈ ವೆಬ್ಸೈಟ್ನಿಂದ ಅರ್ಜಿಗಳನ್ನು ಸಹ ಮಾಡಬಹುದು, ಈ ನೇಮಕಾತಿಗಳ ವಿವರಗಳನ್ನು ಸಹ ಕಾಣಬಹುದು ಮತ್ತು ಹೆಚ್ಚಿನ ನವೀಕರಣಗಳ ಬಗ್ಗೆ ಮಾಹಿತಿಯನ್ನು ಸಹ ಕಾಣಬಹುದು. ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದ್ದು, ದಿನಾಂಕವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಹುಶಃ ಮೇ ಕೊನೆಯ ವಾರದಲ್ಲಿ ಪರೀಕ್ಷೆ ನಡೆಯಲಿದೆ. ಅದರ ವಿವರಗಳನ್ನು ತಿಳಿಯಲು ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ನೋಟಿಸ್ ಅನ್ನು ಪರಿಶೀಲಿಸುವುದು…
ಬಿಗ್ ಬಾಸ್ ಬೆಡಗಿ ಹಾಗೂ ಕಿರುತೆರೆಯ ನಟಿ ನಮ್ರತಾ ಗೌಡ ಇತ್ತೀಚೆಗೆ ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಬರ್ತಡೇ ಪಾರ್ಟಿಯಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿದ್ದು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ನಮೃತ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ನಟಿ ನಮ್ರತಾ ಗೌಡ ಬರ್ತ್ ಡೇ ಸೆಲೆಬ್ರೇಷನ್ ಮೂಡ್ನಲ್ಲಿದ್ದಾರೆ. ಕೈಯಲ್ಲಿ ಕೇಕ್ ಹಿಡಿದುಕೊಂಡು ಫೋಟೋಗೆ ಕ್ಯೂಟ್ ಆಗಿ ಫೋಸ್ ನೀಡಿದ್ದಾರೆ. ಬಿಗ್ ಬಾಸ್ ಬೆಡಗಿಯ ಹಾಟ್ ಫೋಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಲ್ಯಾಕ್ ಡ್ರೆಸ್ನಲ್ಲಿ ಮಿಂಚುತ್ತಿರುವ ನಮ್ರತಾ ಗೌಡ, ಯಾವ ಬಾಲಿವುಡ್ ಬ್ಯೂಟಿಗೂ ಕಡಿಮೆ ಇಲ್ಲದಂತೆ ಗ್ಲಾಮರಸ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಡಾರ್ಕ್ ಥೀಮ್ನಲ್ಲಿ ಕ್ಯಾಂಡಲ್ ಲೈಟ್ ನಲ್ಲಿ ನಮ್ರತಾ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ನಮ್ರತಾ…
ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಸಾವು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ದರ್ಶನ್, ಉಪೇಂದ್ರ, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಜೊತೆ ಉತ್ತಮವಾದ ಒಡನಾಟ ಹೊಂದಿದ್ದ ಜಗದೀಶ್ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಏಪ್ರಿಲ್ 11) ಮುಂಜಾನೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸೌಂದರ್ಯ ಜಗದೀಶ್ ಅವರ ಸಾವಿನ ಕುರಿತಂತೆ ಎರಡು ಪ್ರಮುಖ ಅನುಮಾನಗಳ ಸೃಷ್ಟಿ ಆಗಿದ್ದವು. ಅವುಗಳಿಗೆ ಸ್ನೇಹಿತ ಶ್ರೇಯಸ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಕೆಲವರ ಅನುಮಾನ. ಯಾಕೆಂದರೆ, ಕೆಲವು ದಿನಗಳ ಹಿಂದೆ ಬ್ಯಾಂಕ್ನವರು ಜಗದೀಶ್ಗೆ ನೋಟಿಸ್ ನೀಡಿ, ಮನೆಯನ್ನು ಸೀಜ್ ಮಾಡಲು ಬಂದಿದ್ದರು ಎಂಬ ಮಾಹಿತಿ ಇದೆ. ಆ ಕಾರಣದಿಂದ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಶಂಕೆ ಕೆಲವರದ್ದು, ಅದಕ್ಕೆ ಗೆಳೆಯ ಶ್ರೇಯಸ್ ಉತ್ತರಿಸಿದ್ದಾರೆ. ‘ಬ್ಯಾಂಕ್ ನೋಟಿಸ್ಗೂ ಆತ್ಮಹತ್ಯೆಗೂ ಸಂಬಂಧ ಇಲ್ಲ. ನೋಟಿಸ್ ಇತ್ಯಾದಿ ಎಲ್ಲ ಸುಮಾರು ದಿನದಿಂದ ಇರುವಂಥದ್ದು. ಬಿಸ್ನಿಸ್ ಬೇರೆ, ಇದು ಬೇರೆ.…
ಕನ್ನಡ ಚಲನಚಿತ್ರ ನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಇಂದು (ಏ.14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಲವ್ಲಿ ಸ್ಟಾರ್ ಪ್ರೇಮ್ ಜಗದೀಶ್ ನಿವಾಸಕ್ಕೆ ಭೇಟಿ ನೀಡಿದ್ದು, ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಯ್ತು ಎಂದಿದ್ದಾರೆ. ಸೌಂದರ್ಯ ಜಗದೀಶ್ಗೆ ಏನಾಯ್ತು ಎಂಬುದು ನನಗೆ ಗೊತ್ತಿಲ್ಲ. ಒಂದು ಅಪರೂಪದ ಸ್ನೇಹ ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಯಾರೇ ಸಹಾಯ ಕೇಳಿದ್ರು ಇಲ್ಲ ಎಂದು ಹೇಳುತ್ತಿರಲಿಲ್ಲ. ಇತ್ತೀಚೆಗೆ ಅವರ ಮನೆಯ ಡ್ರೈವರ್ ತೀರಿಕೊಂಡಿದ್ದರು. ಅವರ ಅತ್ತೆ ಕೂಡ ಇತ್ತೀಚೆಗೆ ನಿಧನರಾದರು. ಈಗ ಸೌಂದರ್ಯ ಜಗದೀಶ್ ಆತ್ಮಹತ್ಯೆಯ ಸುದ್ದಿ ಕೇಳಿ ಶಾಕ್ ಆಯ್ತು ಎಂದು ನಟ ಪ್ರೇಮ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಮಗಳ ಮದುವೆ ಅದ್ಧೂರಿಯಾಗಿ ಮಾಡಿದ್ದರು. ಖುಷಿ ಖುಷಿಯಾಗಿ ಇದ್ದರು. ಎಲ್ಲರನ್ನೂ ಕರೆದು ಪಾರ್ಟಿ ಮಾಡಿದ್ದರು. ಅವರಿಗೆ ಆರ್ಥಿಕ ಸಮಸ್ಯೆ ಏನು ಇರಲಿಲ್ಲ. ಒಂದು ಅಪರೂಪದ ಸ್ನೇಹವನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ.…
ತಮಿಳು ನಟ ಧನುಷ್ ಅವರ ತಂದೆ ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿ ಜೀವನಾಂಶ ಕೋರಿದ್ದ ಹಿರಿಯ ವ್ಯಕ್ತಿ ಕದಿರೇಷನ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹಲವು ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದ ಆರ್.ಕದಿರೇಶ್ನ್ (72) ಅವರನ್ನು ಇತ್ತೀಚೆಗೆ ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. 2015ರಲ್ಲಿ ಧನುಷ್ ತಮ್ಮ ಮಗ ಎಂದು ಮದುರೈ ಮೂಲದ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಮಯದಲ್ಲಿ ಈ ಸಂಗತಿ ಕಾಲಿವುಡ್ನಲ್ಲಿ ಭಾರಿ ಸಂಚಲನ ಸೃಷ್ಟಿಸಿತು.ಧನುಷ್ ನಾಯಕನಾಗಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಕದಿರೇಶನ್ ಮತ್ತು ಮೀನಾಕ್ಷಿಯ ಈ ವಾದ ಚರ್ಚೆಯ ವಿಷಯವಾಗಿತ್ತು. ಮಗ ಧನುಷ್ ನಮಗೆ ಹೇಳದೆ ಶಾಲೆಯಿಂದ ಓಡಿ ಹೋಗಿದ್ದ. ಬಳಿಕ ನಿರ್ದೇಶಕ ಕಸ್ತೂರಿ ರಾಜಾ ಅವರ ಮನೆ ಸೇರಿ ದತ್ತು ಪುತ್ರನಾದ. ತಮ್ಮ ಮಗ ಈಗ ಸುಸ್ಥಿತಿಯಲ್ಲಿದ್ದಾನೆ. ನಮಗೆ ತಿಂಗಳಿಗೆ ಜೀವನಾಂಶ ಕೊಡಿಸಿ ಎಂದು ಕದಿರೇಶನ್ ಮತ್ತು ಮೀನಾಕ್ಷ ದಂಪತಿ ಆಗ್ರಹಿಸಿದ್ದರು. ಆದರೆ, ಸಂಪೂರ್ಣ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು…
69 ವರ್ಷದ ಸ್ಪೇನ್ ನ ನಟಿ ಅನಾ ಒಬ್ರೆಗಾನ್ ನ 27 ವರ್ಷದ ಮಗ ಅಲೆಸ್ ಲೆಕ್ವಿಯೊ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಸಾಯುವ ಮೊದಲು ತಂದೆಯಾಗಬೇಕೆಂದು ಕನಸು ಕಂಡಿದ್ದ. ಅದರಂತೆ ಆತನ ಮರಣಕ್ಕೂ ಮೊದಲು ಆರೋಗ್ಯ ಕೇಂದ್ರದಲ್ಲಿ ವೀರ್ಯವನ್ನು ಸಂಗ್ರಹಿಸಲಾಗಿತ್ತು. ಅಲೆಸ್ ಲೆಕ್ವಿಯೊ ಮರಣದ ನಂತರ ಬಹಳ ಸಮಯದವರೆಗೆ ಅವನ ತಾಯಿಗೆ ಮಗನ ಕೊನೆಯ ಆಸೆ ತಿಳಿದಿರಲಿಲ್ಲ. ಇದರೊಂದಿಗೆ ಅಲೆಸ್ ಲೆಕ್ವಿಯೊ ವೀರ್ಯ ಸಂಗ್ರಹದ ಬಗ್ಗೆ ಅವಳು ತಿಳಿದುಕೊಂಡು, ಬಳಿಕ ತನ್ನ ಮಗನ ಆಸೆ ಪೂರೈಸಲು ನಿರ್ಧರಿಸಿದಳು. ಅದರಂತೆ ಹಲವು ವೈದ್ಯರನ್ನು ಸಂಪರ್ಕಿಸಿ, ಮಗನ ವೀರ್ಯದ ಮೂಲಕ ಮಗುವಿಗೆ ಜನ್ಮ ನೀಡಬೇಕೆಂದುಕೊಂಡಳು. ಕಳೆದ ವರ್ಷ ವೈದ್ಯರ ಬಳಿಗೆ ಹೋಗಿ ಎಲ್ಲಾ ಅಗತ್ಯ ಔಪಚಾರಿಕತೆ ಪೂರ್ಣಗೊಳಿಸಿದರು. ತನ್ನ ಜೀವಕ್ಕೆ ಅಪಾಯವಿದ್ದರೂ ಮಗನ ವೀರ್ಯಾಣುನೊಂದಿಗೆ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅನಿತಾ ಎಂದು ಹೆಸರಿಟ್ಟಿದ್ದಾಳೆ ಅನಾ ಒಬ್ರೆಗಾನ್. ಮಗುವಿನ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.…