Author: Author AIN

ಖಲಿಸ್ಥಾನ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿ ನಾಲ್ಕನೆ ಭಾರತೀಯನನ್ನು ಬಂಧಿಸಲಾಗಿದೆ. ಬ್ರಾಂಪ್ಟನ್ ನಿವಾಸಿ, 22 ವರ್ಷದ ಅಮರ್ದೀಪ್ ಸಿಂಗ್ ಬಂಧಿತ ಆರೋಪಿ.  ಮೊದಲ ಹಂತದ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಈತನ ವಿರುದ್ಧ ಹೊರಿಸಲಾಗಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿನ ಪಾತ್ರಕ್ಕಾಗಿ ಸಿಂಗ್ ಅವರನ್ನು ಮೇ 11 ರಂದು ಬಂಧಿಸಲಾಯಿತು ಎಂದು ಸಂಯೋಜಿತ ನರಹತ್ಯೆ ತನಿಖಾ ತಂಡ ತಿಳಿಸಿದೆ. ಈತ ಬಂದೂಕುಗಳನ್ನು ಹೊಂದಿದ್ದ ಆರೋಪಗಳಿಗಾಗಿ ಅವರು ಈಗಾಗಲೇ ಪೀಲ್ ಪ್ರಾದೇಶಿಕ ಪೊಲೀಸರ ವಶದಲ್ಲಿದ್ದ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. “ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪಾತ್ರ ವಹಿಸಿದವರನ್ನು ಹೊಣೆಗಾರರನ್ನಾಗಿ ಮಾಡಲು ನಡೆಯುತ್ತಿರುವ ನಮ್ಮ ತನಿಖೆಯ ಸ್ವರೂಪವನ್ನು ಈ ಬಂಧನವು ತೋರಿಸುತ್ತದೆ” ಎಂದು IHIT ಯ ಉಸ್ತುವಾರಿ ಅಧಿಕಾರಿ ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಹೇಳಿದ್ದಾರೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಐಎಚ್‌ಐಟಿ ತನಿಖಾಧಿಕಾರಿಗಳು ಮೇ 3 ರಂದು ಮೂವರು ಭಾರತೀಯ ಪ್ರಜೆಗಳಾದ ಕರಣ್…

Read More

ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಇತಿಹಾಸ ನಿರ್ಮಿಸಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮ್ಯಾಸೆಚೂಟ್ಸ್‍ನ 62 ವರ್ಷದ ರಿಚರ್ಡ್ ಸ್ಲೇಮನ್ ಅವರು ಕೆಲ ದಿನಗಳ ಹಿಂದೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ಕೊನೆಯುಸಿರೆಳೆದಿದ್ದಾರೆ. ಮ್ಯಾಸೆಚೂಟ್ಸ್‍ನ ನಿಧನಕ್ಕೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿರುವುದು ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ರಿಕ್ ಸ್ಲೇಮನ್ ಅವರ ಹಠಾತ್ ಮರಣದ ಬಗ್ಗೆ ಮಾಸ್ ಜನರಲ್ ಟ್ರಾನ್ಸ್‍ಪ್ಲಾಂಟ್ ತಂಡವು ತೀವ್ರವಾಗಿ ದುಃಖಿತವಾಗಿದೆ. ಇದು ಅವರ ಇತ್ತೀಚಿನ ಕಸಿ ಫಲಿತಾಂಶವಾಗಿದೆ ಎಂದು ನಮಗೆ ಯಾವುದೇ ಸೂಚನೆ ಇಲ್ಲ ಎಂದು ಮ್ಯಾಸಚೂಸೆಟ್ಸ ಜನರಲ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ರಿಚರ್ಡ್ ಸ್ಲೇಮನ್ ಮ್ಯಾಸಚೂಸೆಟ್ಸ್‍ನ ವೇಮೌತ್‍ನ ನಿವಾಸಿಯಾಗಿದ್ದು ಹಂದಿ ಮೂತ್ರಪಿಂಡ ಕಸಿ ಮಾಡುವ ಮೊದಲು ಅವರು ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದರು. ಅದೇ ಮ್ಯಾಸಚೂಸೆಟ್ಸ ಜನರಲ್ ಹಾಸ್ಪಿಟಲ್ ತಂಡವು ಡಿಸೆಂಬರ್ 2018 ರಲ್ಲಿ ಮಾನವ ಮೂತ್ರಪಿಂಡ ಕಸಿ ಮಾಡುವ ಮೊದಲು ಹಲವಾರು ವರ್ಷಗಳ ಕಾಲ…

Read More

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಜ್ವಾಲಾಮುಖಿಯ ಇಳಿಜಾರಿನಲ್ಲಿ ಹರಿಯುವ ಭಾರೀ ಮಳೆ ಮತ್ತು ತಣ್ಣನೆಯ ಲಾವಾ ಮತ್ತು ಮಣ್ಣಿನ ಧಾರಾಕಾರವು ಹಠಾತ್ ಪ್ರವಾಹಕ್ಕೆ ಕಾರಣವಾಗಿದ್ದು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾನ್ಸೂನ್ ಮಳೆ ಮತ್ತು ಮರಾಪಿ ಪರ್ವತದ ಮೇಲೆ ತಣ್ಣನೆಯ ಲಾವಾ ಹರಿವಿನಿಂದ ದೊಡ್ಡ ಮಣ್ಣಿನ ಕುಸಿತವು ನದಿಯ ದಡವನ್ನು ಭೇದಿಸಲು ಮತ್ತು ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಅಗಾಮ್ ಮತ್ತು ತನಾಹ್ ದಾತಾರ್ ಜಿಲ್ಲೆಗಳಲ್ಲಿ ಮಧ್ಯರಾತ್ರಿಯ ಮೊದಲು ಪರ್ವತದ ಹಳ್ಳಿಗಳ ಮೂಲಕ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಪ್ರವಾಹವು ಜನರನ್ನು ಮುಳುಗಿಸಿತು ಮತ್ತು 100 ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ನೀರಿನಲ್ಲಿ ಮುಳುಗಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ. ಲಾಹಾರ್ ಎಂದೂ ಕರೆಯಲ್ಪಡುವ ತಣ್ಣನೆಯ ಲಾವಾವು ಜ್ವಾಲಾಮುಖಿ ವಸ್ತು ಮತ್ತು ಬೆಣಚುಕಲ್ಲುಗಳ ಮಿಶ್ರಣವಾಗಿದ್ದು ಅದು ಮಳೆಯಲ್ಲಿ ಜ್ವಾಲಾಮುಖಿಯ ಇಳಿಜಾರುಗಳಲ್ಲಿ ಹರಿಯುತ್ತದೆ. ರಕ್ಷಕರು 11 ಮೃತದೇಹಗಳನ್ನು…

Read More

ಇಸ್ರೇಲ್ ನೊಂದಿಗಿನ ಪ್ರಕ್ಷುಬ್ಧತೆ ತೀವ್ರಗೊಳ್ಳುತ್ತಿದ್ದು, ಇರಾನ್ ನ ಪರಮಾಣು ಶಕ್ತಿ ಕುರಿತ ಮಹತ್ವಾಕಾಂಕ್ಷೆಗೆ ಇರಾನ್ ನ ಅತ್ಯುನ್ನತ ನಾಯಕ ಆಯತುಲ್ಲಾ ಅಲಿ ಖಾಮಿನೈಯವರ ಸಲಹೆಗಾರರೊಬ್ಬರು ಮತ್ತೊಮ್ಮೆ ಕಿಡಿ ಹಚ್ಚಿದ್ದಾರೆ. ಒಂದು ವೇಳೆ ಇರಾನ್ ನ ಅಸ್ತಿತ್ವಕ್ಕೆ ಇಸ್ರೇಲ್ ನಿಂದ ಬೆದರಿಕೆ ಇದೆ ಎಂದು ಕಂಡು ಬಂದರೆ, ಪರಮಾಣು ಕುರಿತ ತನ್ನ ನಿಲುವನ್ನು ಇರಾನ್ ಬದಲಿಸಿಕೊಳ್ಳಲಿದೆ ಎಂದು ಸಲಹೆಗಾರ ಕಮಲ್ ಖರ್ರಾಝಿ ಎಚ್ಚರಿಸಿದ್ದಾರೆ. “ನಾವು ಪರಮಾಣು ಬಾಂಬ್ ತಯಾರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಆದರೆ, ಇರಾನ್ ಅಸ್ತಿತ್ವಕ್ಕೇನಾದರೂ ಬೆದರಿಕೆ ಕಂಡು ಬಂದರೆ, ನಮ್ಮ ಸೇನಾ ನಿಲುವನ್ನು ಮಾರ್ಪಡಿಸಿಕೊಳ್ಳದೆ ಬೇರೆ ಆಯ್ಕೆಯಿಲ್ಲ” ಎಂದು ಖರ್ರಾಝಿ ತಿಳಿಸಿದ್ದಾರೆ. ಎಪ್ರಿಲ್ ತಿಂಗಳ ಆರಂಭದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ತನ್ನ ದೂತಾವಾಸದ ಮೇಲೆ ನಡೆದ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ನೇರವಾಗಿ ಇಸ್ರೇಲ್ ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ಭಾರಿ ಪ್ರಮಾಣದ ಸ್ಫೋಟಕ ಡ್ರೋನ್ ಗಳು ಹಾಗೂ ಕ್ಷಿಪಣಿಗಳ ದಾಳಿ ನಡೆಸಿದ್ದರಿಂದ ಇರಾನ್ ಹಾಗೂ ಇಸ್ರೇಲ್ ನಡುವಿನ ಪ್ರಕ್ಷುಬ್ಧತೆ…

Read More

ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭೀಕರ ರಸ್ತೆ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದು, ನಟಿಯ ಸಾವಿನ ಸುದ್ದಿ ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ನಟಿ ಪವಿತ್ರಾ ಅವರು ಪ್ರಯಾಣಿಸುತ್ತಿದ್ದ ಕಾರು ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿದೆ. ಭೀಕರ ಅಪಘಾತದಲ್ಲಿ ನಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂಲತಃ ಮಂಡ್ಯದವರಾದ ಪವಿತ್ರಾ ಅವರು ರೋಬೋ ಫ್ಯಾಮಿಲಿ, ನೀಲಿ, ರಾಧಾ ರಮಣ, ಜೋಕಾಲಿ ಸೀರಿಯಲ್‌ನಲ್ಲಿ ಪವಿತ್ರಾ ನಟಿಸಿದ್ದರು. ತೆಲುಗಿನ ‘ತ್ರಿನಯನಿ’ ಸೀರಿಯಲ್‌ನಲ್ಲಿ ವಿಲನ್ ಆಗಿ ಪವಿತ್ರಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತಕ್ಕೀಡಾಗಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಅಲ್ಲಿ ಸಂಚರಿಸುತ್ತಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ದುರಂತದಲ್ಲಿ ನಟಿ ಪವಿತ್ರಾ ಜಯರಾಂ ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ನಟಿಸುತ್ತಿದ್ದು, ಅಲ್ಲಿ ಕೂಡ ಬಹಳಷ್ಟು ಜನಪ್ರಿಯತೆ ಪಡೆದಿದ್ದರು. 

Read More

ತಮಿಳು ಚಿತ್ರರಂಗದ ಖ್ಯಾತ ನಟ ಸಿಂಭು ಹೆಸರು ಸದಾ ವಿವಾದದ ಮೂಲಕ ಕೇಳುತ್ತಲೇ ಇರುತ್ತದೆ. ಇದೀಗ ಸಿಂಭು ವಿರುದ್ಧ ನಿರ್ಮಾಪಕರೊಬ್ಬರು ದೂರು ನೀಡಿದ್ದು, ಈ ಕೂಡಲೇ ನಟ ಸಿಂಭು ಅನ್ನು ತಮಿಳು ಚಿತ್ರರಂಗದಿಂದ ದೂರವಿಡಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡದ ‘ಮಫ್ತಿ’ ಸಿನಿಮಾದ ರೀಮೇಕ್ ‘ಪತ್ತು ತಲ’ ಸಿನಿಮಾದಲ್ಲಿ ಸಿಂಭು ನಟಿಸಿದ್ದರು. ಅದಕ್ಕೂ ಮುನ್ನ ‘ವೆಂದು ತನಿದಿತ್ತು ಕಾಡು’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಬಳಿಕ ‘ಕೊರೊನಾ ಕಿಂಗ್’ ಹೆಸರಿನ ಸಿನಿಮಾನಲ್ಲಿ ಸಿಂಭು ನಟಿಸಬೇಕಿತ್ತು. ‘ಕೊರೊನಾ ಕಿಂಗ್’ ಸಿನಿಮಾವನ್ನು ಗೋಕುಲ್ ಎನ್ ಕೃಷ್ಣ ನಿರ್ದೇಶನ ಮಾಡಿ, ಇಶಾರಿ ಕೆ ಗಣೇಶ್ ನಿರ್ಮಾಣ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಸಿಂಭು ಹೊರ ಬಂದಿದ್ದರು. ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ‘ಕೊರೊನಾ ಕಿಂಗ್’ ಸಿನಿಮಾದಿಂದ ಸಿಂಭು ಹೊರ ಬಂದಿದ್ದಾರೆ. ಬಳಿಕ ‘ಪತ್ತು ತಲ’ ಸಿನಿಮಾ ಪ್ರಾರಂಭಿಸಿದರು. ಆದರೆ ಈಗ ‘ಕೊರೊನಾ ಕಿಂಗ್’ ನಿರ್ಮಾಪಕ ಇಶಾರಿ ಕೆ ಗಣೇಶ್ ಸಿಂಭು ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಸಿಂಭು…

Read More

ಒರ್ಹಾನ್ ಅವತ್ರಮಣಿ ಅಲಿಯಾಸ್ ಒರಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಖ್ಯಾತಿ ಸದ್ದು ಮಾಡುತ್ತಿದ್ದಾರೆ. ಒರಿ ಕೆಲವು ಖಾಸಗಿ ಕಾರ್ಯಕ್ರಮಗಳಗೆ ಭಾಗಿ ಆದರೆ ಲಕ್ಷಗಟ್ಟಲೆ ಹಣ ಸಿಗಲಿದೆ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು. ಸದ್ಯ ಒರಿ ಕರಣ್ ಜೋಹರ್ ಅವರ ಧರ್ಮ ಕೋರ್​ಸ್ಟೋನ್ ಏಜೆನ್ಸಿ ಈಗ ಇವರ ಈವೆಂಟ್​ಗಳನ್ನು ಮ್ಯಾನೇಜ್ ಮಾಡುತ್ತಿದ್ದಾರೆ. ಇತ್ತೀಚೆಗೆ ಒರಿ ಅವರು ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಒರಿ, ತಾವು ಕೆಲಸ ಮಾಡದೆ ಇರಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ‘ಸಿನಿಮಾ ಅಥವಾ ಶೋಗಳನ್ನು ಮಾಡಲು ನನಗೆ ಇಷ್ಟ ಇಲ್ಲ. ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ಯಾರು ಯೋಚಿಸುತ್ತಾರೆ ಹೇಳಿ. ಯಾರೂ ಯೋಚಿಸುವುದಿಲ್ಲ. ನನಗೆ ಕೆಲಸ ಅಂದರೆ ಬೇಸರ. ಟಿವಿ, ಸಿನಿಮಾಗಳಲ್ಲಿ ತುಂಬಾನೇ ಕೆಲಸ ಇರುತ್ತದೆ. ಈ ಕ್ಷೇತ್ರದಲ್ಲಿ ಕೆಲಸ ಅನ್ನೋದು ಮುಗಿಯೋದೆ ಇಲ್ಲ. ಮನೆಗೂ ನೀವು ಕೆಲಸವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ನಮ್ಮ ಜೀವನ ಕೆಲಸದ ಜೊತೆಯೇ ಸಾಗುತ್ತದೆ. ಇದು ಸುಲಭ ಎಂದು ಜನರಿಗೆ ಅನಿಸುತ್ತದೆ. ಆದರೆ, ಸುಲಭ…

Read More

ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ನಟ ರೂಪೇಶ್ ಶೆಟ್ಟಿ ಸಖತ್ ಸದ್ದು ಮಾಡ್ತಿದ್ದಾರೆ.ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಕೆಲಸಗಳಲ್ಲಿ ರೂಪೇಶ್ ತೊಡಗಿಕೊಂಡಿದ್ದಾರೆ. ಸದ್ಯ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಟೈಟಲ್ ಮೂಲಕವೇ ಗಮನ ಸೆಳೆದಿದ್ದು ಅಧಿಪತ್ರ ಸಿನಿಮಾ ಇದೀಗ ಟೀಸರ್ ಮೂಲಕ ಸದ್ದು ಮಾಡುತ್ತಿದೆ. ಈ ಚಿತ್ರದ ಟೀಸರ್‌ನಲ್ಲಿ ಎರಡು ವಿಚಾರ ಹೆಚ್ಚು ಕುತೂಹಲ ಮೂಡಿಸುತ್ತದೆ. ಕಾಂತಾರ ಹಾಗೂ ಉಳಿದವರು ಕಂಡಂತೆ ಎರಡೂ ಚಿತ್ರಗಳು ಈ ಒಂದು ಸಿನಿಮಾ ಟೀಸರ್ ನೋಡಿದಾಗ ನೆನಪಿಗೆ ಬರುತ್ತವೆ. ಆದರೆ, ಈ ಸಿನಿಮಾಗಳಿಗೂ ಅಧಿಪತ್ರ ಚಿತ್ರಕ್ಕೂ ಎಲ್ಲೂ ಸಂಬಂಧವೇ ಇಲ್ಲ. ಕರಾವಳಿ ಭಾಗದ ಕಥೆ ಹೊತ್ತು ಬಂದಿರುವ ಅಧಿಪತ್ರ ಸಿನಿಮಾ ಮೊದಲ‌ ತುಣುಕಿನಲ್ಲಿ‌ ಕರಾವಳಿ ಭಾಗದ ವಿಶೇಷ ಆಚರಣೆ ಆಟಿ ಕಳಂಜಾ , ಯಕ್ಷಗಾನ, ಹುಲಿ ಕುಣಿತದ ಜೊತೆಗೆ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಕುರಿಸುವ ಕಂಟೆಂಟ್ ಕೂಡ ಇದೆ. ಆದರೆ ಆ ಕಂಟೆಂಟ್…

Read More

‘ಬಿಗ್ ಬಾಸ್ ಹಿಂದಿ ಸೀಸನ್16’ರಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದ ಗಾಯಕ ಅಬ್ದು ರೋಜಿಕ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. 20 ವರ್ಷದ ರೋಜಿಕ್ ಇದೀಗ ತಮ್ಮ ಮದುವೆಯ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ಮನ ಗೆದ್ದ ಹುಡುಗಿಯ ಬಗ್ಗೆ ಅಬ್ದು ರೋಜಿಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಅಬ್ದು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಇದರ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. ಅಲ್ಲಿ ಅವರ ಭಾವಿ ಪತ್ನಿ ಬಿಳಿ ಬುರ್ಖಾ ಧರಿಸಿದ್ದು ಮುಖ ಕಾಣಿಸಿಲ್ಲ. ಶಾರ್ಜಾ ಎಮಿರೇಟ್‌ನ 19 ವರ್ಷದ ಅಮೀರಾ ಅವರನ್ನು ಅಬ್ದು ಮದುವೆ ಆಗಿತ್ತಿದ್ದಾರೆ. ದುಬೈ ಮಾಲ್‌ನಲ್ಲಿ ಇವರ ಭೇಟಿ ನಡೆದಿದೆ. ಮೊದಲ ಬಾರಿಗೆ ಅಬ್ದು ಅಮೀರಾ ಅವರನ್ನು ನೋಡಿದ್ದು, ಮೊದಲ ನೋಟದಲ್ಲೇ ಇಬ್ಬರಿಗೂ ಇಷ್ಟವಾಗಿದೆ. ಈಗ ಇಬ್ಬರು ಮದುವೆ ಆಗುತ್ತಿದ್ದಾರೆ.  ‘ನನ್ನ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ’ ಎಂದು ಅಬ್ದು ಹೇಳಿದ್ದಾರೆ. ನವ ಜೋಡಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ. ಅಬ್ದು ರೋಜಿಕ್…

Read More

ಕನ್ನಡ ಚಿತ್ರರಂಗ ಯುವರಾಜ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹಾಗೂ ಮಗನೊಂದಿಗೆ ಜಯನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ, ರೇವತಿ ಮತ್ತು ಅವ್ಯಾನ್ ದೇವ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಗರ್ಭಗುಡಿಯ ಮುಂದೆ ಫೋಟೋ ತೆಗೆಸಿಕೊಂಡಿದ್ದು ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಖಿಲ್ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಸ್ಟಾರ್ ಜೋಡಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು ಅಭಿಮಾನಿಗಳ  ಸಾಮಾಜಿಕ ಜಾಲಾ ತಾಣದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನೂ ಸಿನಿಮಾದ ವಿಷಯಕ್ಕೆ ಬರುವುದಾದದರೆ 2021ರಲ್ಲಿ ತೆರೆಕಂಡ ರೈಡರ್ ಸಿನಿಮಾದ ಬಳಿಕ ನಿಖಿಲ್ ನಟನೆಯ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲ. ಯದುವೀರ್ ಸಿನಿಮಾ ಅನೌನ್ಸ್ ಆಗಿದ್ದು  ಈ ಚಿತ್ರದಲ್ಲಿ ನಿಖಿಲ್ ಸಖತ್ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 2020 ಏಪ್ರಿಲ್ 17ರಂದು ನಿಖಿಲ್ ಕುಮಾರ್ ಮತ್ತು ರೇವತಿ…

Read More