Author: Author AIN

ಸಿನಿಮಾ ನಟರ ಚಿತ್ರಗಳನ್ನು, ವಿಡಿಯೋಗಳನ್ನು ಅನುಮತಿ ಇಲ್ಲದೆ ಬಳಸುವಂತಿರಲಿಲ್ಲ. ಆದರೆ ಇದೀಗ ಕೆಲವು ಬಾಲಿವುಡ್ ನಟರು ತಮ್ಮ ಸ್ಟೈಲ್, ಡೈಲಾಗ್​, ಹಾವಭಾವದ ಮೇಲೂ ಹಕ್ಕುಸ್ವಾಮ್ಯ ಸಾಧಿಸಿದ್ದು, ಅವರ ಸ್ಟೈಲ್ ಅನ್ನು ಯಾರೂ ನಕಲು ಸಹ ಮಾಡುವಂತಿಲ್ಲ. ಅಮಿತಾಬ್ ಬಚ್ಚನ್ ಈಗಾಗಲೇ ಆ ರೀತಿಯ ಹಕ್ಕುಸ್ವಾಮ್ಯವನ್ನು ಪಡೆದಿದ್ದಾರೆ. ಅವರ ಶೈಲಿಯನ್ನು, ಅವರ ಹಿಂದಿನ ಯಾವುದೇ ಸಿನಿಮಾದ ಪಾತ್ರವನ್ನು ಸಹ ಯಾವುದೇ ಮಿಮಿಕ್ರಿ ಕಲಾವಿದರು ಸಹ ನಕಲು ಮಾಡುವಂತಿರಲಿಲ್ಲ. ಈಗ ಜಾಕಿ ಶ್ರಾಫ್ ಸಹ ಇದೇ ರೀತಿಯ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ರೀತಿಯಲ್ಲಿ ಜಾಕಿ ಶ್ರಾಫ್ ಅವರನ್ನು ಸಹ ಹಲವಾರು ಮಿಮಿಕ್ರಿ ಕಲಾವಿದರು, ಹಾಸ್ಯ ಕಲಾವಿದರು ನಕಲು ಮಾಡುತ್ತಿದ್ದರು. ಆದರೆ ಈಗ ಜಾಕಿ ಶ್ರಾಫ್ ತಮ್ಮ ವ್ಯಕ್ತಿತ್ವ, ಶೈಲಿ, ಸಂಭಾಷಣೆ, ಹಾವಭಾವದ ಮೇಲೆ ಹಕ್ಕುಸ್ವಾಮ್ಯ ಆದೇಶ ತಂದಿದ್ದು, ಇನ್ನು ಮುಂದೆ ಯಾರೂ ಸಹ ಯಾವುದೇ ಟಿವಿ, ಸಿನಿಮಾಗಳಲ್ಲಿ ಜಾಕಿ ಶ್ರಾಫ್ ಅವರನ್ನು ನಕಲು ಮಾಡುವಂತಿಲ್ಲ ಮಾತ್ರವಲ್ಲ ಅವರ ಜನಪ್ರಿಯ ಸಂಭಾಷಣೆಗಳನ್ನು ಸಹ ಹೇಳುವಂತಿಲ್ಲ.…

Read More

ನಟಿ ಪವಿತ್ರಾ ಜಯರಾಂ ನಿಧನ ಹೊಂದಿದ ಬೆನ್ನಲ್ಲೇ ಅವರ ಗೆಳೆಯ ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ತಮ್ಮ ಪತಿ ಸಾವಿನ ಬಗ್ಗೆ ಮಾತನಾಡಿರುವ ಕಿರುತೆರೆ ನಟ ಚಂದು ಪತ್ನಿ ಶಿಲ್ಪಾ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಚಂದು ಹಾಗೂ ಪವಿತ್ರಾ ಅವರ ಸ್ನೇಹ ಬರೀ ಸ್ನೇಹವಾಗಿರಲಿಲ್ಲ. ಅವರಿಬ್ಬರು ತುಂಬಾ ಆತ್ಮೀಯರಾಗಿದ್ದರು. ಇಬ್ಬರು ಗಂಡ – ಹೆಂಡತಿಯಂತೆ ಇದ್ದರು. ನಾನು, ನನ್ನ ಗಂಡ ತುಂಬ ಚೆನ್ನಾಗಿದ್ದೆವು. ಪವಿತ್ರಾ ಬಂದಮೇಲೆ ಎಲ್ಲ ಹಾಳಾಯ್ತು. ನನಗೆ 4 ವರ್ಷದ ಒಂದು ಮಗು, 8 ವರ್ಷದ ಒಂದು ಮಗು ಇದೆ. ಮೊದಲೆಲ್ಲ ಚಂದು ಮಕ್ಕಳನ್ನು ನೋಡದೆ ಇರುತ್ತಿರಲಿಲ್ಲ. ಚಂದ್ರಕಾಂತ್ ಜೀವನಕ್ಕೆ ಪವಿತ್ರಾ ಬಂದ ಮೇಲೆ ಅವರು ಮನೆಗೆ ಬರೋದು ಅಪರೂಪ ಆಗಿತ್ತು. ಪವಿತ್ರಾ ಜಯರಾಮ್ ಅವರು ಸಾಯುವ 4 ದಿನದ ಮುಂಚೆ ಚಂದ್ರಕಾಂತ್ ಜೊತೆ ಊಟಿಗೆ ಹೋಗಿದ್ದರು. ಅಲ್ಲಿ ಅವರು ರೀಲ್ಸ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಎಂದು ಶಿಲ್ಪಾ ಹೇಳಿದ್ದಾರೆ. 2004ರಲ್ಲಿ ನನಗೂ ಚಂದ್ರಕಾಂತ್​ಗು ಪರಿಚಯವಾಯ್ತು.…

Read More

ಎರಡು ವರ್ಷದ ಹಿಂದೆ ಟ್ವಿಟರ್​​​ನಿಂದ​ ಮಾಲೀಕತ್ವ ಪಡೆದ ಬಳಿಕ ಎಲೋನ್​ ಮಸ್ಕ್​, ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಾ ತಮ್ಮ ಹಿಡಿತ ಸಾಧಿಸಿದರು. ಲೋಗೋದಿಂದ ಹಲವು ವಿಷಯಗಳಲ್ಲಿ ಮಾರ್ಪಾಡುಗಳನ್ನು ಮಾಡಿದರು. ಆದರೆ, ಇದರ ಯುಆರ್​ಎಲ್​ ಮಾತ್ರ ಬದಲಾವಣೆ ಕಂಡಿರಲಿಲ್ಲ. ಇದೀಗ ಮಸ್ಕ್​ ಯುಆರ್​ಎಲ್​ ಒಡೆತನ ಸಾಧಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಡೊಮೈನ್​ ಯುಆರ್​ಎಲ್​ ಎಂಬುದು ಸಾಮಾಜಿಕ ಜಾಲತಾಣದ ವೆಬ್​ಸೈಟ್​ಗಳ ಮೂಲವನ್ನು ತಿಳಿಸುತ್ತದೆ. ಯಾವುದೇ ಒಂದು ಸಂಸ್ಥೆಯ ವೆಬ್​ಸೈಟ್​​ ಈ ಡೊಮೈನ್​ಗಳ ಹಿಡಿತ ಸಾಧಿಸುವುದು ಅವಶ್ಯ. ಅದರ ಅನುಸಾರವಾಗಿ ಬ್ರೌಸಿಂಗ್​ನಲ್ಲಿ ಇಷ್ಟು ದಿನ Twitter.com ಆಗಿದ್ದ ಎಕ್ಸ್​ ಇನ್ಮುಂದೆ ಅಧಿಕೃತವಾಗಿ X.com ಆಗಿರಲಿದೆ. X ಲಾಗಿನ್​ ಯುಆರ್​ಎಲ್​ನಿಂದ ಟ್ವಿಟರ್​ ಸಂಪೂರ್ಣವಾಗಿ ಕಣ್ಮರೆಯಾಗಲಿದೆ. ಈ ಮೂಲಕ ಡೊಮೈನ್​ ಒಡೆತನವನ್ನು ಇದೀಗ ಮಸ್ಕ್​ ಪಡೆದಿದ್ದಾರೆ. ಈ ಕುರಿತು ತಿಳಿಸಿರುವ ಮಸ್ಕ್​, ‘ಇದೀಗ ಟ್ವಿಟರ್​ ಸಂಪೂರ್ಣವಾಗಿ ಎಕ್ಸ್​​.ಕಾಮ್​ ವಲಸೆ ಬಂದಿದೆ. ಸಂಪೂರ್ಣವಾಗಿ ಟ್ವಿಟರ್​ ಬ್ರೌಸರ್​ನಿಂದ ಎಕ್ಸ್​ ಡೊಮೈನ್​ ಬಂದಿದೆ. ಎಲ್ಲಾ ಕೋರ್​ ವ್ಯವಸ್ಥೆ ಇದೀಗ ಎಕ್ಸ್​.ಕಾಂ ಆಗಿರಲಿದೆ. ಇನ್ಮುಂದೆ ಬ್ರೌಸಿಂಗ್​…

Read More

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 2024ರ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ನಟಿ ಶೋಭಿತಾ ಧೂಳಿಪಾಲ ಗಮನ ಸೆಳೆದಿದ್ದಾರೆ. ನೇರಳೆ ಬಣ್ಣದ ಕಾರ್ಡೆಲಿಯಾ ಜಂಪ್‌ಸೂಟ್​ ದಿರಿಸಿನಲ್ಲಿ ನಟಿ ಬೆಕ್ಕಿನ ನಡಿಗೆಯಲ್ಲಿ ಮಿಂಚಿದ್ದಾರೆ. ಕೇನ್ಸ್‌ಗೆ ಹೊರಡುವ ಮೊದಲು ಶೋಭಿತಾ ಧೂಳಿಪಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಫೋಟೋಸ್​ಗೆ ಮನೋಹರವಾದ ಪೋಸ್ ನೀಡಿದರು. ಅಲ್ಲಿಂದ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತಮ್ಮ ಬಹು ನಿರೀಕ್ಷಿತ ಚೊಚ್ಚಲ ಪ್ರವೇಶ ಪಡೆದರು. ನೇರಳೆ ಬಣ್ಣದ ಸುಂದರ ದಿರಿಸಿನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದರು. ಶೋಭಿತಾ ಧೂಳಿಪಾಲ ಧರಿಸಿದ್ದ ಆಕರ್ಷಕವಾದ ಜಂಪ್‌ಸೂಟ್​ ಅನ್ನು ವಿನ್ಯಾಸಕಿ ನಮ್ರತಾ ಜೋಶಿಪುರ ವಿನ್ಯಾಸ ಮಾಡಿದ್ದಾರೆ. ಇಂತಹದ್ದೇ ದಿರಿಸನ್ನು ಕಳೆದ ವರ್ಷದ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನಟಿ ಅಥಿಯಾ ಶೆಟ್ಟಿ ಪ್ರದರ್ಶಿಸಿದ್ದರು. ಈ ಉಡುಪಿನ ಬೆಲೆ 1.8 ಲಕ್ಷ ರೂಪಾಯಿ ಆಗಿದೆ. ಕ್ಯಾನೆಸ್​ ಫಿಲ್ಮ್​ ಫೆಸ್ಟ್​ನಲ್ಲಿ ಶೋಭಿತಾ ಮ್ಯಾಗ್ನಮ್ ಇಂಡಿಯಾ ಐಸ್ ಕ್ರೀಮ್ ಬ್ರ್ಯಾಂಡ್​ ಅನ್ನು ಪ್ರತಿನಿಧಿಸಿದರು. ಈ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್…

Read More

ಕ್ರೇಜಿಸ್ಟಾರ್ ವಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್ ಮೆಂಟ್’ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ಮಾಪಕ ಉದಯ್ ಕೆ ಮಹ್ತಾ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ, ಇದು ರವಿಚಂದ್ರನ್ ಅವರಿಗಾಗಿಯೇ ಮಾಡಿರುವ ಕಥೆ. ಲೀಗಲ್ ಥ್ರಿಲ್ಲರ್ ಜಾನರ್​ ಚಿತ್ರ ಇದಾಗಿದೆ. ‘ಯದ್ಧಕಾಂಡ’ ಚಿತ್ರದಲ್ಲಿ ವಕೀಲರಾಗಿ ರವಿಚಂದ್ರನ್ ಅವರ ಅಭಿನಯ ಇಂದಿಗೂ ಜನಪ್ರಿಯ. ಬಹಳ ವರ್ಷಗಳ ನಂತರ ಈ‌ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್, ಧನ್ಯ, ಮೇಘನಾ ಗಾಂವ್ಕರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಅವರನ್ನು ಒಳಗೊಂಡ ಬಹು ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಇನ್ನು ಈ ಕಥೆ ಸಿನಿ ಪ್ರೇಕ್ಷಕರಿಗೆ ನಿರಾಸೆ ಮಾಡೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಟ ರವಿಚಂದ್ರನ್ ಮಾತನಾಡಿ, ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಲು ಒಪ್ಪಿಕೊಂಡೆ. ಈ ತಂಡದ ಜೊತೆಗೆ ಕೆಲಸ ಮಾಡಿದ್ದು…

Read More

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಮೌಲ್ಯವು ಹೆಚ್ಚಳವಾಗಿದ್ದು, “ಸಂಡೇ ಟೈಮ್ಸ್‌ ರಿಚ್‌ಲಿಸ್ಟ್‌’ನಲ್ಲಿ ದಂಪತಿ 275ನೇ ಸ್ಥಾನದಿಂದ 245ನೇ ಸ್ಥಾನಕ್ಕೆ ಏರಿದ್ದಾರೆ.   2022-23ರಲ್ಲಿ ದಂಪತಿ ಪಡೆದ ಲಾಭಾಂಶವೂ ಹೆಚ್ಚಳವಾಗಿದ್ದು, ರಿಷಿ ಸುನಕ್‌ 23.24 ಕೋಟಿ ರೂ. ಲಾಭಾಂಶ ಪಡೆದಿದ್ದರೆ, ಅಕ್ಷತಾ 137.30 ಕೋಟಿ ರೂ. ಲಾಭಾಂಶ ಗಳಿಸಿದ್ದಾರೆ. ಇದರೊಂದಿಗೆ ದಂಪತಿಯ ನಿವ್ವಳ ಆಸ್ತಿ ಮೌಲ್ಯವು 6,873 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಬೆಂಗಳೂರು ಮೂಲದ ಇನ್ಫೋಸಿಸ್‌ನಲ್ಲಿ ಅಕ್ಷತಾ ಮೂರ್ತಿ ಹೊಂದಿರುವ ಷೇರುಗಳೇ ದಂಪತಿಯ ಅತ್ಯಂತ ಮೌಲ್ಯಯುತ ಆಸ್ತಿ ಯಾಗಿದೆ. ಬ್ರಿಟನ್‌ನಲ್ಲಿರುವ ಅತ್ಯಂತ ಶ್ರೀಮಂತ ಕುಟುಂಬಗಳ ಸಾಲಿನಲ್ಲಿ ಈ ಬಾರಿಯೂ ಭಾರತೀಯ ಮೂಲದ ಹಿಂದುಜಾ ಕುಟುಂಬ ಅಗ್ರ ಸ್ಥಾನದಲ್ಲಿದೆ.

Read More

ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ನಿಶ್ವಿಕಾ ನಾಯ್ಡು ನಾಳೆ 28ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಆದರೆ ನಿಶ್ವಿಕಾ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದು ಇದಕ್ಕೆ ಕಾರಣವನ್ನು ನೀಡಿದ್ದಾರೆ. ‘ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ. ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ’ ಎಂದು ನಿಶ್ವಿಕಾ ಬರೆದುಕೊಂಡಿದ್ದಾರೆ. ‘ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ’ ಎಂದು…

Read More

ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ನಟನೆಯ ಅರವಿಂದ ‘ಸಮೇತ ವೀರ ರಾಘವ’ ಸಿನಿಮಾದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ನಟಿ ಇಶಾ ರೆಬ್ಬಾ ಆರೋಪಿಸಿದ್ದಾರೆ. ಆ ಸಿನಿಮಾದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ಆರೋಪ ಮಾಡಿದ್ದಾರೆ. ವಿಶೇಷವಾಗಿ ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಟಿ ಇಶಾ ರೆಬ್ಬಾ ‘ಲೈಫ್ ಈಸ್ ಬ್ಯೂಟಿಫುಲ್’, ‘ಅಂತಕ ಮುಂದು ಆ ತರವಾತ’, ‘ಓಯ್’ ಇನ್ನೂ ಹಲವು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ತ್ರಿವಿಕ್ರಮ್, ಇಶಾ ರೆಬ್ಬ ಅವರನ್ನು ಸಂಪರ್ಕಿಸಿದಾಗ, ಈ ಸಿನಿಮಾದ ಎರಡನೇ ನಾಯಕಿ ನೀವಾಗಿರುತ್ತೀರ ಎಂದಿದ್ದರಂತೆ. ಸಿನಿಮಾಕ್ಕಾಗಿ ಪ್ರವಾಸವನ್ನು ಮೊಟಕುಗೊಳಿಸಿ ಬಂದಿದ್ದರಂತೆ ಇಶಾ ರೆಬ್ಬ, ಸಿನಿಮಾದಲ್ಲಿ ಜೂ ಎನ್​ಟಿಆರ್ ಜೊತೆಗೆ ಒಂದು ಹಾಡನ್ನು ಸಹ ಶೂಟ್ ಮಾಡಲಾಗಿತ್ತಂತೆ. ಹಾಡಿಗಾಗಿ ಬುಲೆಟ್ ಚಲಾಯಿಸುವುದನ್ನು ಸಹ ಇಶಾ ಕಲಿತರಂತೆ…

Read More

ಕರಾವಳಿ ಬೆಡಗಿ, ತೆಲುಗು ಬ್ಯೂಟಿ ನಟಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟಿ ಕನ್ನಡದ ಹುಡುಗನ ಕೈ ಹಿಡಿಯುತ್ತಿರುವ ಸುದ್ದಿ ಕೇಳಿ ಕನ್ನಡಿಗರು ದಿಲ್ ಖುಷ್ ಆಗಿದ್ದಾರೆ. ಅನುಷ್ಕಾ ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆ ನಿರ್ಮಾಪಕನಿಗೂ 42 ವರ್ಷ ಎನ್ನಲಾಗಿದೆ. ಅನುಷ್ಕಾ ಮದುವೆಗೆ ತಯಾರಿ ಶುರುವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಮದುವೆ ಸುದ್ದಿ ಬಗ್ಗೆ ಅನುಷ್ಕಾ ಕುಟುಂಬ ಅಧಿಕೃತ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಅಕ್ಕಿನೇನಿ ನಾಗಾರ್ಜುನ ನಟನೆಯ ‘ಸೂಪರ್’ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟ ಅನುಷ್ಕಾ ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಆ ಬಳಿಕ ‘ಅರುಂಧತಿ’, ‘ಬಾಹುಬಲಿ’ ಅಂತಹ ಸಿನಿಮಾ ನಟಿಯ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. ಸದ್ಯ ಅನುಷ್ಕಾ ನಟನೆಯ ಹೊಸ ಚಿತ್ರದ ಪೋಸ್ಟರ್‌…

Read More

ಕಳೆದ ನಾಲ್ಕೈದು ದಿನಗಳ ಹಿಂದೆ ಕನ್ನಡದ ನಟಿ, ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದ ನಟಿ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ನಿಧನರಾದರು. ಈಗ ಇನ್ನೊಂದು ಶಾಕಿಂಗ್​ ಸುದ್ದಿ ಕೇಳಿಬಂದಿದೆ. ಪವಿತ್ರಾ ಜಯರಾಮ್​ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದು ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪವಿತ್ರಾ ಜಯರಾಮ್​ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗಿನ ಹಲವು ಧಾರಾವಾಹಿಗಳಲ್ಲಿ ಚಂದು ನಟಿಸುತ್ತಿದ್ದರು. ಇತ್ತೀಚೆಗೆ ಅವರು ಪವಿತ್ರಾ ಜಯರಾಮ್​ ಜೊತೆ ಬೆಂಗಳೂರಿಗೆ ಬಂದಿದ್ದರು. ಸಿನಿಮಾವೊಂದಕ್ಕೆ ಸಹಿ ಮಾಡಿದ ಬಳಿಕ ಅವರು ಪುನಃ ಹೈದರಾಬಾದ್​ಗೆ ಹಿಂದಿರುಗುವಾಗ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಚಂದುಗೆ ಪೆಟ್ಟಾಗಿತ್ತು. ಅದನ್ನು ನೋಡಿ ಗಾಬರಿಗೊಂಡ ಪವಿತ್ರಾ ಅವರ ಉಸಿರು ನಿಂತುಹೋಗಿತ್ತು. ಆ ದುರಂತದ ನೆನಪು ಮಾಸುವುದಕ್ಕೂ ಮುನ್ನವೇ ಚಂದು ನಿಧನರಾಗಿದ್ದಾರೆ. ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ಏನು…

Read More