Author: Author AIN

ಸಿನಿಮಾ ರಂಗದಲ್ಲಿ ಬಯೋಪಿಕ್ ಗಳು ಬರೋದು ಹೊಸದೇನು ಅಲ್ಲ. ಈಗಾಗಲೇ ಸಾಕಷ್ಟು ಜನರು ಜೀವನ ಬೆಳ್ಳಿ ಪರದೆ ಮೇಲೆ ರಾರಾಜಿಸಿದೆ. ಇದೀಗ ಖ್ಯಾತ ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ತೋರಿಸಲು ಪ್ರತಿಷ್ಠಿತ ಸಂಸ್ಥೆಯೊಂದು ಮುಂದಾಗಿದೆ. ಸುಬ್ಬಲಕ್ಷ್ಮಿ ಪಾತ್ರದಲ್ಲಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ. ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ ಬಯೋಪಿಕ್ ಗಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಗಾಯಕಿ ಸುಬ್ಬಲಕ್ಷ್ಮಿ ಪಾತ್ರಕ್ಕೆ ಕೀರ್ತಿ ಸುರೇಶ್ ಜೀವ ತುಂಬಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ತಮಿಳುನಾಡಿನ ಮಧುರೈನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುಬ್ಬಲಕ್ಷ್ಮಿ ಜಗತ್ತೇ ಹೆಮ್ಮೆ ಪಡುವ ಗಾಯಕಿಯಾದದ್ದು ಹೇಗೆ? ಆಕೆ ಎದುರಿಸಿದ ಸವಾಲುಗಳು ಮತ್ತು ಆಕೆಯ ಜೀವನದಲ್ಲಿ ನಡೆದ ದುರಂತ ಘಟನೆಗಳ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬರಲಿದೆ. ಸುಬ್ಬಲಕ್ಷ್ಮಿ ಪಾತ್ರಕ್ಕೆ ಕೀರ್ತಿ ಸೂಕ್ತ ಎಂದೆನಿಸಿ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಈ…

Read More

ನಟಿ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗ್ತಿದೆ. ಯಾವುದೇ ನಿರ್ದೇಶಕ, ನಟರು ನೋಡಿದ್ರು ಈಕೆಯ ತಮ್ಮ ಮುಂದಿನ ಸಿನಿಮಾದ ನಾಯಕಿಯಾಗ್ಬೇಕು ಎಂದು ದುಭಾಲು ಬೀಳ್ತಿದ್ದಾರೆ. ಸದ್ಯ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳನ್ನು ಹಿಡಿದುಕೊಂಡಿರುವ ರಶ್ಮಿಕಾ ಇದೀಗ ಜ್ಯೂ.ಎನ್‌ಟಿಆರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ‘ದೇವರ’ ಸಿನಿಮಾದ ಬಳಿಕ ಜ್ಯೂ.ಎನ್‌ಟಿಆರ್ ಮುಂದಿನ ಚಿತ್ರಕ್ಕಾಗಿ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಗೆ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಈ ಸಿನಿಮಾಗೆ ‌’ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆ. ಇದೇ ಆಗಸ್ಟ್‌ನಿಂದ ಶೂಟಿಂಗ್ ಮಾಡೋದಾಗಿ ತಾರಕ್ ಹುಟ್ಟುಹಬ್ಬದ ದಿನ ಚಿತ್ರತಂಡ ತಿಳಿಸಿದೆ. ಸಿನಿಮಾ ಘೋಷಣೆಯ ನಂತರ ಜ್ಯೂ.ಎನ್‌ಟಿಆರ್‌ಗೆ ನಾಯಕಿ ಯಾರಾಗ್ತಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಡ್ರ್ಯಾಗನ್ ಬಿಗ್ ಬಜೆಟ್‌ನಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸ್ಟಾರ್ ನಾಯಕಿನೇ…

Read More

1918ರಲ್ಲಿ ಮುಳುಗಿದ ಹಡಗೊಂದರಲ್ಲಿ ಸಿಕ್ಕಿದೆ ಭಾರತದ 10 ರೂ. ಮೌಲ್ಯದ ಎರಡು ನೋಟುಗಳನ್ನು ಲಂಡನ್‌ ನ ಹರಾಜು ಸಂಸ್ಥೆಯೊಂದು ಸದ್ಯದಲ್ಲೇ ಹರಾಜು ಹಾಕುತ್ತಿದೆ. ಮೇ 29ರಂದು ನಡೆಯುವ ನೂನನ್ಸ್‌ ಮೇಫೇರ್‌ ಹರಾಜಿನಲ್ಲಿ ವಿಶ್ವದ ವಿವಿಧ ಬ್ಯಾಂಕ್‌ ನೋಟುಗಳ ಹರಾಜು ನಡೆಯಲಿದ್ದು, ಭಾರತದ ಎರಡು 10 ರೂ.ನೋಟುಗಳಿಗೆ 2,000(2.11 ಲಕ್ಷ ರೂ.)ಗಳಿಂದ 2,600 ಗ್ರೇಟ್‌ ಬ್ರಿಟನ್‌ ಪೌಂಡ್‌(2.75 ಲಕ್ಷ ರೂ.) ಗಳು ದೊರೆಯುವ ನಿರೀಕ್ಷೆ ಇದೆ. 1918ರಲ್ಲಿ ಬಾಂಬೆಯಿಂದ ಲಂಡನ್‌ಗೆ ತೆರಳುತ್ತಿದ್ದ ಹಡಗು, ಜರ್ಮನ್‌ ಯು ಬೋಟ್‌ನಿಂದ ಮುಳುಗಡೆಯಾಗಿತ್ತು. 5, 10ರೂ. ಮುಖಬೆಲೆಯ ಬಹಳಷ್ಟು ನೋಟುಗಳು ನೀರು ಪಾಲಾಗಿ, ಕೆಲವು ನೋಟುಗಳು ಮಾತ್ರ ಹಾಗೇ ಉಳಿದುಕೊಂಡಿದ್ದವು. ಈ 10 ರೂ. ನೋಟುಗಳ ಜತೆಗೆ ಬ್ರಿಟಿಷ್‌ ಆಳ್ವಿಕೆ ಕಾಲದ 100 ಹಾಗೂ 5 ರೂ. ನೋಟುಗಳನ್ನೂ ಹರಾಜು ಹಾಕಲಾಗುತ್ತಿದೆ.

Read More

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ ಗೆ ‘ಆಶ್ಚರ್ಯಕರ’ ಮಿಲಿಟರಿ ಯೋಜನೆಗಳನ್ನು ಹೊಂದಿದ್ದಾರೆ ಎಂದು ಹೇಳಿಕೆ ಬೆನ್ನಲ್ಲೇ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಇಸ್ರೇಲ್ ವಿರುದ್ಧ “ಆಶ್ಚರ್ಯಕರ” ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ದೂರದರ್ಶನ ಭಾಷಣದಲ್ಲಿ ಹಿಜ್ಬುಲ್ಲಾ ನಾಯಕ ನಸ್ರಲ್ಲಾ, ನಮ್ಮ ಪ್ರತಿರೋಧದಿಂದ ನೀವು ಆಶ್ಚರ್ಯಗಳನ್ನು ನಿರೀಕ್ಷಿಸಬೇಕು, ಇಸ್ರೇಲ್ ನಿಂದ ಯಾವುದೇ ಆಶ್ಚರ್ಯಕರ ದಾಳಿಗಳನ್ನು ಎದುರಿಸಲು “ಪ್ರತಿರೋಧ” ಉತ್ತಮವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಹಲವಾರು ಇಸ್ರೇಲಿ ಜನರೊಂದಿಗಿನ ಸಭೆಯಲ್ಲಿ, ನೆತನ್ಯಾಹು ಇಸ್ರೇಲ್ “ಉತ್ತರಕ್ಕಾಗಿ ವಿವರವಾದ, ಪ್ರಮುಖ ಮತ್ತು ಆಶ್ಚರ್ಯಕರ ಯೋಜನೆಗಳನ್ನು ಹೊಂದಿದೆ. ನಾವು ಉತ್ತರದ ಮುಂಚೂಣಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.ಇಸ್ರೇಲ್ ನೂರಾರು ಹಿಜ್ಬುಲ್ಲಾ ಸದಸ್ಯರನ್ನು ನಿರ್ಮೂಲನೆ ಮಾಡಿದೆ ಎಂದು ನೆತನ್ಯಾಹು ಹೇಳಿದರು. 2023 ರ ಅಕ್ಟೋಬರ್ 8 ರಂದು ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಯಿತು, ಹಿಂದಿನ ದಿನ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಬೆಂಬಲವಾಗಿ ಹಿಜ್ಬುಲ್ಲಾ ಇಸ್ರೇಲ್ ಕಡೆಗೆ ರಾಕೆಟ್ಗಳನ್ನು ಹಾರಿಸಿದ ನಂತರ. ನಂತರ ಇಸ್ರೇಲ್ ಆಗ್ನೇಯ ಲೆಬನಾನ್ ಕಡೆಗೆ…

Read More

‌ಕೃತಕ ಬುದ್ಧಿಮತ್ತೆಯಿಂದಾಗಿ ಮುಂದಿನ ದಿನಗಳಲ್ಲಿ ಬಹುಶಃ ನಮ್ಮಲ್ಲಿ ಯಾರಿಗೂ ಕೆಲಸ ಸಿಗುವುದಿಲ್ಲ” ಎಂದು ಟೆಸ್ಲಾ ಮತ್ತು ಎಕ್ಸ್ ಮಾಲೀಕ ಎಲೋನ್ ಮಸ್ಕ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ವಿವಾ ಟೆಕ್ ಈವೆಂಟ್ನಲ್ಲಿ ವೆಬ್ಕ್ಯಾಮ್ ಮೂಲಕ ಮಾತನಾಡಿದ ಎಲೋನ್‌ ಮಸ್ಕ್‌, ಕೃತಕ ಬುದ್ಧಿಮತ್ತೆ (ಎಐ) ಅಂತಿಮವಾಗಿ ಎಲ್ಲಾ ಉದ್ಯೋಗಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಬಹುಶಃ ನಮ್ಮಲ್ಲಿ ಯಾರಿಗೂ ಕೆಲಸ ಸಿಗುವುದಿಲ್ಲ. ಭವಿಷ್ಯದಲ್ಲಿ, ಎಐ ಮತ್ತು ರೋಬೋಟ್ ಗಳು ನಿಮಗೆ ಬೇಕಾದ ಯಾವುದೇ ಸರಕು ಮತ್ತು ಸೇವೆಗಳನ್ನು ಒದಗಿಸುತ್ತವೆ ಎಂದಿದ್ದಾರೆ. ಮಸ್ಕ್ ಈ ಹಿಂದೆ ಎಐ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಈಗ ಗುರುವಾರ ತಮ್ಮ ಮುಖ್ಯ ಭಾಷಣದಲ್ಲಿ, ಅವರು ತಂತ್ರಜ್ಞಾನವನ್ನು ತಮ್ಮ “ಅತಿದೊಡ್ಡ ಭಯ” ಎಂದು ಬಣ್ಣಿಸಿದರು. ಅವರು ಇಯಾನ್ ಬ್ಯಾಂಕ್ಸ್ ಅವರ “ಕಲ್ಚರ್ ಬುಕ್ ಸೀರೀಸ್” ಅನ್ನು ಉಲ್ಲೇಖಿಸಿದರು, ಇದು ಸುಧಾರಿತ ತಂತ್ರಜ್ಞಾನದಿಂದ ಚಾಲಿತವಾದ ಸಮಾಜದ ಕಾಲ್ಪನಿಕ ಚಿತ್ರಣವಾಗಿದೆ, ಇದು ಅತ್ಯಂತ ವಾಸ್ತವಿಕ ಮತ್ತು “ಭವಿಷ್ಯದ ಎಐನ ಅತ್ಯುತ್ತಮ ಕಲ್ಪನೆಯಾಗಿದೆ.” ಭವಿಷ್ಯದಲ್ಲಿ ಉದ್ಯೋಗವಿಲ್ಲದೆ ಜನರು…

Read More

ಹಮಾಸ್‌ ಉಗ್ರರ ದಾಳಿ ಕುರಿತಂತೆ ಇಸ್ರೇಲ್‌ ಸೈನ್ಯಾಧಿಕಾರಿಗಳಿಂದ ನಡೆಸುತ್ತಿರುವ ತನಿಖೆಯಲ್ಲಿ ಹಮಾಸ್‌ಗೆ ಸೇರಿದ ತಂದೆ ಹಾಗೂ ಮಗ ಇಸ್ರೇಲ್‌ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಳೆದ ವರ್ಷದ ಅಕ್ಟೋಬರ್‌ 7ರಂದು ಇಸ್ರೇಲ್‌ ನಗರಗಳ ಮೇಲೆ ಹಮಾಸ್‌ ಉಗ್ರರು ದಾಳಿ ಮಾಡಿದ್ದರು. ಹಮಾಸ್‌ ಉಗ್ರರಾದ ಜಮಾಲ್‌ ಹುಸೇನ್‌ ಅಹ್ಮದ್‌ ರಾದಿ ಹಾಗೂ ಅವನ ಮಗ ಅಬ್ದುಲ್ಲಾ ಗಾಜಾ ಗಡಿ ಬಳಿ ಇರುವ ಕಿಬ್ಬುಟ್ಜ್ ನೀರ್‌ ಒಜ್‌ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ್ದರು. ಅಲ್ಲಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಜಮಾಲ್‌ ಅತ್ಯಾಚಾರವೆಸಗಿದ್ದ. ಅವನ ಮಗ ಅಬ್ದುಲ್ಲಾ ಹಾಗೂ ಅವನ ಸಹೋದರ ಅತ್ಯಾಚಾರವೆಸಗಿದ ಅನಂತರ, ತಂದೆ ಜಮಾಲ್‌ ಮಹಿಳೆಯನ್ನು ಹತ್ಯೆ ಮಾಡಿದ ಎಂದು ಅವರಿಬ್ಬರೂ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಹಮಾಸ್‌ ಉಗ್ರರು ತಮ್ಮ ಒತ್ತೆಸೆರೆಯಲ್ಲಿರಿಸಿಕೊಂಡಿರುವವರ ಮೇಲೆ ನಡೆಸುತ್ತಿರುವ ಅಮಾನುಷ ಕೃತ್ಯಗಳನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸಿದೆ. ಹಮಾಸ್‌ ಉಗ್ರರ ಈ ಅಮಾನವೀಯ ಕೃತ್ಯಗಳನ್ನು…

Read More

ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಅಮ್ಮನಾಗುವ ಸಂತಸದಲ್ಲಿದ್ದಾರೆ. ಇದುವರೆಗೂ ನಟಿಯ ಬೇಬಿ ಬಂಪ್ ಎಲ್ಲಿಯೂ ಸರಿಯಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ದೀಪಿಕಾರನ್ನು ನೋಡಿದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ದೀಪಿಕಾ ಪಡುಕೋಣೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ದಿನ ಅವರು ತಮ್ಮ ಫ್ರೆಗ್ನೆನ್ಸಿ ವಿಡಿಯೋವನ್ನು ಎಲ್ಲೂ ಶೇರ್ ಮಾಡಿಕೊಂಡಿರಲಿಲ್ಲ. ಇದೀಗ ದೀಪಿಕಾ ಮುಖದಲ್ಲಿ ಕಂಡ ತಾಯ್ತಾನದ ಕಳೆಯನ್ನು ನೋಡಿ ಅಭಿಮಾನಿಗಳು ಸೂಪರ್ ಮಮ್ಮಿ ಎನ್ನುತ್ತಿದ್ದಾರೆ.  ಹಳದಿ ಬಣ್ಣದ ಉಡುಪು ತೊಟ್ಟ ಸೌಂದರ್ಯವರ್ಧಕಗಳ ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ. ಬಳಿಕ ದೀಪಿಕಾ ಮೆಲ್ಲನ್ನೆ ನಡೆದು ಬಂದಿದ್ದು ಈಕೆಯ ಸೌಂದರ್ಯ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಆಕೆ ಮತ ಚಲಾಯಿಸಲು ಹೊರಟಾಗ ಹಲವಾರು ಜನ ಅವರು ಹೇಗೆ ಕಾಣುತ್ತಾರೆ ಎಂಬುದನ್ನು ಈಗಲಾದರೂ ನೋಡಬಹುದು ಎಂದು ಅಂದುಕೊಂಡು ಕಾತರಿಂದ ಕಾಯುತ್ತಿದ್ದರು. ಆದರೆ ಒಂದು ಬಿಳಿ ಶರ್ಟ್​ನ ವಿಡಿಯೋದಲ್ಲಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಸೌಂದರ್ಯ ಉತ್ಪನ್ನಗಳ ಕುರಿತು ಅವರು ವಿಡಿಯೋ ಮಾಡಿದ್ದಾರೆ.…

Read More

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ನಟನೆಯ ಸಿನಿಮಾಗಾಗಿ ಕಾದು ಕೂತಿದ್ದ ಅಭಿಮಾನಿಗಳಿಗೆ ‘ಮಾರ್ಟಿನ್‌’ ಚಿತ್ರತಂಡ ಗುಡ್‌ ನ್ಯೂಸ್‌ ನೀಡಿದೆ. ಸಾಕಷ್ಟು ದಿನಗಳಿಂದ ಫ್ಯಾನ್ಸ್ ಮಾರ್ಟಿನ್ ಗಾಗಿ ಕಾಯುತ್ತಿದ್ದು ಇದೀಗ ಇದೇ ಅಕ್ಟೋಬರ್‌ 11 ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಮಾರ್ಟಿನ್ ಧ್ರುವ ಸರ್ಜಾ ನಟನೆಯ 5ನೇ ಸಿನಿಮಾವಾಗಿದ್ದು, ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಉದಯ್ ಮೇಹತಾ ಬಿಗ್ ಬಜೆಟ್ ಸಿನಿಮಾವನ್ನು ಬಲು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದೆ.  ಪೊಗರು ಚಿತ್ರದ ರಿಲೀಸ್​ ಆದ  3 ವರ್ಷಗಳ ಬಳಿಕ ಮತ್ತೆ ತೆರೆಗೆ ಎಂಟ್ರಿ ಕೊಡಲಿರೋ ಆಕ್ಷನ್-ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ತಯಾರಿ ನಡೆಸಿದ್ದಾರೆ.  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾರ್ಟಿನ್​ ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಸುದ್ದಿಗೋಷ್ಠಿಯಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್, ನಿರ್ಮಾಪಕ ಉದಯ್ ಕೆ ಮೆಹ್ತಾ, ಸಂಗೀತ ನಿರ್ದೇಶಕ ರವಿ…

Read More

ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್  ಏಪ್ರಿಲ್​ 14ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಸಾವಿನ ಬಗ್ಗೆ ಪತ್ನಿ ರೇಖಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ‘ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್​ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ. ಈ ಮನೆಯನ್ನು ನಾನು ಮತ್ತು ಅವರು ಸೇರಿ ಕಟ್ಟಿದ್ದು. ಇಂದು ಅವರು ಇಲ್ಲ ಎಂದಾಗ ಈ ಮನೆಯಲ್ಲಿ ನಮಗೆ ಇರೋಕೆ ಆಗುತ್ತಿಲ್ಲ. ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯುವಾಗ ಡೆಟ್​ ನೋಟ್​ ಸಿಕ್ಕಿತು’ ಎಂದು ರೇಖಾ ಜಗದೀಶ್​ ಹೇಳಿದ್ದಾರೆ. ‘ಜಗದೀಶ್​ ಬರೆದ ಡೆತ್​ ನೋಟ್​ ನೋಡಿ ತುಂಬ ನೋವಾಯಿತು ಮತ್ತು ಶಾಕ್​ ಆಯ್ತು. ಬಿಸ್ನೆಸ್​ ಪಾರ್ಟ್ನರ್​ಗಳ ಬಗ್ಗೆ ಅವರು ಬರೆದಿದ್ದಾರೆ. ಅನ್ಯಾಯ ಆಗಿದೆ ಅಂತ ಬರೆದಿದ್ದಾರೆ. ತಮಗೆ ತುಂಬ ಕಾಟ, ಕಿರುಕುಳು ಕೊಡುತ್ತಾರೆ ಅಂತ ಈ ಮೊದಲು…

Read More

ಕಳೆದ ಭಾನುವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ಸಹೋದ್ಯೋಗಿಗಳ ಮೃತಪಟ್ಟಿದ್ದರು. ಅಧ್ಯಕ್ಷರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಕಾರಣಗಳ ಬಗೆಗಿನ ಮೊದಲ ವರದಿಯನ್ನು ಇರಾನ್​ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಬಿಡುಗಡೆ ಮಾಡಿದ್ದಾರೆ. ಅಪಘಾತದ ಕಾರಣಗಳ ಪರಿಶೀಲನೆಗಾಗಿ ನಿಪುಣರು ಮತ್ತು ತಂತ್ರಜ್ಞರನ್ನು ಒಳಗೊಂಡ ಹಿರಿಯ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯು ಸೋಮವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಇರಾನ್​ನ ಸಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಶುಕ್ರವಾರ ತಿಳಿಸಿದೆ. ವರದಿಯ ಪ್ರಕಾರ- ಹೆಲಿಕಾಪ್ಟರ್ ದಾರಿಯುದ್ದಕ್ಕೂ ತನ್ನ ಪೂರ್ವನಿರ್ಧರಿತ ಮಾರ್ಗದಲ್ಲಿಯೇ ಸಾಗಿತ್ತು ಮತ್ತು ನಿಗದಿತ ಹಾರಾಟದ ಮಾರ್ಗದಿಂದ ವಿಮುಖವಾಗಿರಲಿಲ್ಲ. ಅಪಘಾತ ಸಂಭವಿಸುವ ಸುಮಾರು ಒಂದೂವರೆ ನಿಮಿಷ ಮೊದಲು, ಅಪಘಾತಕ್ಕೀಡಾದ ಹೆಲಿಕಾಪ್ಟರ್​ನ ಪೈಲಟ್, ಅಧ್ಯಕ್ಷರ ಬೆಂಗಾವಲು ಪಡೆಯ ಇತರ ಎರಡು ಹೆಲಿಕಾಪ್ಟರ್​ಗಳನ್ನು ಸಂಪರ್ಕಿಸಿದ್ದರು ಎಂದು ವರದಿ ತಿಳಿಸಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್​ನ ಅವಶೇಷಗಳಲ್ಲಿ ಗುಂಡು ಅಥವಾ ಆ ರೀತಿಯ ವಸ್ತುಗಳ…

Read More