ವೇಗವಾಗಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 28 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ಅಪಘಾತದಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಸುಮಾರು 22 ಜನರಿಗೆ ಗಾಯಗಳಾಗಿದ್ದು, ಅವರನ್ನು ಬಾಸಿಮಾದ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.ಟರ್ಬತ್ನಿಂದ ಕ್ವೆಟ್ಟಾಗೆ ತೆರಳುತ್ತಿದ್ದ ಬಸ್ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಸುಮಾರು 700 ಕಿಲೋಮೀಟರ್ ದೂರದಲ್ಲಿರುವ ವಾಶುಕ್ ಪಟ್ಟಣದ ಸಮೀಪ ಕಂದಕಕ್ಕೆ ಬಿದ್ದ ಪರಿಣಾಮ ಈ ಘೋರ ದುರಂತ ಸಂಭವಿಸಿದೆ. ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಪ್ರಯಾಣಿಕರ ಬಸ್ನ ಟೈರ್ ಒಡೆದ ನಂತರ ಈ ಅಪಘಾತ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. ಅಪಘಾತಕ್ಕೆ ಚಾಲಕನ ಅತಿಯಾದ ವೇಗವೇ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖಾ ಮೂಲಗಳು ತಿಳಿಸಿವೆ. ಸಂಚಾರ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಅಷ್ಟೇನೂ ಅನುಸರಿಸದ ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.…
Author: Author AIN
ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ಸೌದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಹಿಂದೆ ಶ್ರೀರಾಮ್, ಮೈಲಾರಿ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸೌದತ್ತಿ ಎಲ್ಲಮ್ಮ ಅದೃಷ್ಟ ದೇವತೆ. ಹಾಗಾಗಿ ಉತ್ತರಕಾಂಡದ ಚಿತ್ರೀಕರಣದ ನಂತರ ಶಿವಣ್ಣ ಪತ್ನಿ ಸಮೇತ ದೇವಸ್ಥಾನಕ್ಕೆ ತೆರಳಿ ದೇವಿಯ ಆಶಿರ್ವಾದವನ್ನು ಪಡೆದಿದ್ದಾರೆ. ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಜೊತೆ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ ಧನಂಜಯ, ಐಶ್ವರ್ಯ ರಾಜೇಶ್,ಭಾವನಾ ಮೆನನ್, ದಿಗಂತ್ ಮಂಚಾಲೆ, ರಂಗಾಯಣ ರಘು, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್ ಹೆಸರಾಂತ ಗಾಯಕ,ಸಂಗೀತ…
ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ದಿನಕಳೆದಂತೆ ಜನರು ಮನೆಯಿಂದ ಹೊರ ಬರಲು ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಬೇಸಿಗೆ ಧಗೆ ಮುಂದುವರೆದಿರುವಂತೆಯೇ ಕಳೆದ 10 ವರ್ಷಗಳ ಅವಧಿಯಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ತಾಪಮಾನ 3 ಡಿಗ್ರಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇತ್ತೀಚಿನ ಉಷ್ಣ ಅಲೆಯ ಪರಿಸ್ಥಿತಿಯನ್ನು ಭಾರತದ ಹೆಚ್ಚಿನ ನಗರಗಳು ಅನುಭವಿಸುತ್ತಿದ್ದು, ಹೆಚ್ಚುತ್ತಿರುವ ಶಾಖ ದ್ವೀಪದ ಪರಿಣಾಮದಿಂದಾಗಿ ಪರಿಸ್ಥಿತಿಯು ಹದಗೆಡುತ್ತಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದ ಆರು ಮೆಟ್ರೋ ನಗರಗಳಾದ ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಮುಂಬೈ, ದೆಹಲಿ ಮತ್ತು ಹೈದರಾಬಾದ್ಗಳ ಹೀಟ್ವೇವ್ ಪರಿಸ್ಥಿತಿಗಳನ್ನು ತಮ್ಮ ಅಧ್ಯಯನಕ್ಕಾಗಿ ಟ್ರ್ಯಾಕ್ ಮಾಡಿದ್ದು, ಪ್ರಮುಖ ನಗರಗಳಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಭಾರತದ ನಗರಗಳ ಮೇಲೆ ಪರಿಣಾಮ ಬೀರುವ ಈ ಬದಲಾಗುತ್ತಿರುವ ಪ್ರವೃತ್ತಿಯ ಸ್ವರೂಪವು ಹೆಚ್ಚು ಆಳವಾಗಿ ಮತ್ತು ದೀರ್ಘವಾಗಿರುತ್ತದೆ ಎಂದು ವಿಶ್ಲೇಷಿಸಿದೆ. ಶಾಖದ ಒತ್ತಡವು ಏರುತ್ತಿರುವ ತಾಪಮಾನದ ಬಗ್ಗೆ ಮಾತ್ರವಲ್ಲ. ಇದು ಗಾಳಿಯ…
ಸೋಷಿಯಲ್ ಮೀಡಿಯಾದಿಂದ ಅದೆಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲವೂ ಇದೆ. ಇಂಡೋನೇಷ್ಯಾದಲ್ಲಿ ಯುವಕನೊಬ್ಬ ಮಾಡಿದ ಎಡವಟ್ಟು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಚಿಂತೆಗೀಡು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಹುಡುಗಿಯಿಂದ ಯುವಕನೋರ್ವ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಆಗಿದೆ. ಸಂತ್ರಸ್ತ ಯುವಕ ಇಂಡೋನೇಷ್ಯಾದ ನರಿಂಗಲ್ ಮೂಲದವನಾಗಿದ್ದು, ಕಳೆದ ವರ್ಷ ಈತನಿಗೆ 26 ವರ್ಷದ ಆದಿಂದಾ ಕನ್ಜಾ ಹೆಸರಿನ ಯುವತಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತಳಾದಳು. ಚಾಟ್ಗಳ ಮೂಲಕ ಇಬ್ಬರು ಸ್ನೇಹಿತರಾದರು ಮತ್ತು ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಅಲ್ಲದೆ, ಶೀಘ್ರದಲ್ಲೇ ವೈಯಕ್ತಿಕವಾಗಿ ಭೇಟಿಯಾಗಲು ಇಬ್ಬರು ನಿರ್ಧರಿಸಿದರು. ಇಬ್ಬರು ಭೇಟಿಯಾದಾಗಲೆಲ್ಲಾ ಕನ್ಜಾ ಸಾಂಪ್ರದಾಯಿಕ ಮುಸ್ಲಿಂ ಉಡುಗೆ ತೊಡುತ್ತಿದ್ದರು. ಹೀಗಾಗಿ ಒಮ್ಮೆಯೂ ಆಕೆಯ ಮುಖವನ್ನು ನೋಡಲಾಗಲಿಲ್ಲ ಎಂದು ಸಂತ್ರಸ್ತ ಯುವಕ ಹೇಳಿಕೊಂಡಿದ್ದಾನೆ. ತಾನು ಪ್ರೀತಿ ಮಾಡುತ್ತಿದ್ದ ಯುವತಿ ಮುಖ ಮುಚ್ಚಿಕೊಳ್ಳುವುದು ಯುವಕನಿಗೆ ಸಮಸ್ಯೆಯಾಗಿ ಕಾಣಲಿಲ್ಲ. ಮುಖ ನೋಡದೇ ಎಷ್ಟೋ ಮಂದಿ ಪ್ರೀತಿ ಮಾಡಿರುವಂತೆ ತನ್ನದು ಕೂಡ ಒಂದು ಪರಿಶುದ್ಧ ಪ್ರೀತಿಯ ಸಂಕೇತವೆಂದು ಭಾವಿಸಿದನು. ಇಬ್ಬರ ಪ್ರೀತಿ ಗಾಢವಾದಂತೆ ಕನ್ಜಾಳನ್ನು…
ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದ ಬಳಿಕ ನಟನೆಯಿಂದ ದೂರ ಉಳಿದಿರೋ ನಟಿ ರಾಧಿಕಾ ಪಂಡಿತ್ ಸದ್ಯ ಪತಿ, ಮಕ್ಕಳ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಯಶ್ ವೃತ್ತಿ ಬದುಕಿಗೆ ಬೆಂಬಲವಾಗಿರುವ ನಟಿ ಮಗಳು ಹಾಗೂ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ರಾಧಿಕಾ ಚಿತ್ರರಂಗದ ಜೊತೆಗಿನ ನಂಟನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಆದಾಗ್ಯೂ ನಟನೆಯಿಂದ ದೂರವೇ ಇದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ. ಅವರು ಯಾವಾಗ ನಟನೆಗೆ ಮರಳುತ್ತಾರೆ ಎನ್ನುವ ಪ್ರಶ್ನೆಯನ್ನು ಆಗಾಗ ಕೇಳಲಾಗುತ್ತದೆ. ಇದಕ್ಕೆ ರಾಧಿಕಾ ಕೊನೆಗೂ ಉತ್ತರ ನೀಡಿದ್ದಾರೆ. ರಾಧಿಕಾ ಪಂಡಿತ್ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಇತ್ತೀಚೆಗೆ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸೋದಾಗಿ ಹೇಳಿದ್ದರು. ಅದೇ ರೀತಿ, ಅವರು ಅಭಿಮಾನಿಗಳಿಗೆ ಪ್ರಶ್ನೆ ಕೇಳೋಕೆ ಅವಕಾಶ ನೀಡಿದ್ದರು. ಇದರಲ್ಲಿ ಹಲವು ರೀತಿಯ ಪ್ರಶ್ನೆಗಳು ರಾಧಿಕಾಗೆ ಬಂದಿವೆ. ‘ನಟನೆಗೆ ಕಂಬ್ಯಾಕ್ ಯಾವಾಗ’ ಎಂದು ಕೆಲವರು ಕೇಳಿದ್ದಾರೆ. ಇದಕ್ಕೆ ಅವರು ‘ಸರಿಯಾದ ಸಮಯ ಬಂದಾಗ’…
ಇಂದು ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಸುಮಲತಾ ಪ್ರತಿಭಾರಿಯೂ ವಿಶೇಷವಾಗಿ ವಿಶ್ ಮಾಡುತ್ತಾರೆ. ಅಂತೆಯೇ ಈ ವರ್ಷದ ಅಂಬಿ ಜನ್ಮದಿನಕ್ಕೆ ಸುಮಲತಾ ಬರ್ತ್ಡೇ ವಿಶ್ ತಿಳಿಸಿದ್ದಾರೆ. ‘ಸ್ವರ್ಗದಲ್ಲಿರುವ ನಿಮಗೆ ಜನ್ಮದಿನದ ಶುಭಾಶಯಗಳು’ ಎಂದು ಸುಮಲತಾ ಹೇಳಿದ್ದಾರೆ. ಅಂಬರೀಷ್ ಅವರ ಬಾಲ್ಯದ ಫೋಟೋ, ಯಂಗ್ ಆಗಿದ್ದಾಗಿನ ಫೋಟೋ ಹಾಗೂ ವಯಸ್ಸಾದ ಮೇಲಿನ ಫೋಟೋಗಳನ್ನು ಸುಮಲತಾ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಪ್ರೀತಿಯಿಂದ ಸಾಲುಗಳನ್ನು ಬರೆದುಕೊಂಡಿದ್ದು, ಆ ಸಾಲುಗಳು ಕವನ ರೂಪದಲ್ಲಿದೆ. ‘ನಿಮ್ಮ ನೆನಪಾಗುತ್ತಿದೆ.. ಯಾವಾಗಲೂ ನಗು ತರುತ್ತದೆ.. ನಿನ್ನನ್ನು ಮಿಸ್ ಮಾಡಿಕೊಳ್ಳೋದು ಯಾವಾಗಲೂ ಉಳಿಯುವ ನೋವು.. ನೀವು ನಮ್ಮ ಜೀವನದ ಒಂದು ಭಾಗ ಅದು ಪ್ರತಿ ದಿನ, ಪ್ರತಿ ಕ್ಷಣ ಮತ್ತು ಎಂದೆಂದಿಗೂ… ನೀವು ಬದುಕನ್ನು ಮೀರಿದವರು ನೀವೇ ಜೀವನ ಸ್ವರ್ಗದಲ್ಲಿರುವ ನಿಮಗೆ ಜನ್ಮದಿನದ ಶುಭಾಶಯಗಳು ಎಂದು ಸುಮಲತಾ ಬರೆದುಕೊಂಡಿದ್ದಾರೆ. ಡಾ.ಅಂಬರೀಷ್ ಫೌಂಡೇಶನ್ ಹಾಗೂ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ…
ಕಳೆದ ಒಂದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ರಫಾ ಮೇಲೆ ಎಲ್ಲರ ಕಣ್ಣು ಎನ್ನುವ ಫೋಟೋವೊಂದು ವೈರಲ್ ಆಗಿದೆ. ಸಾಖಷ್ಟು ಮಂದಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಆಲ್ ಐಸ್ ಆನ್ ರಾಫಾ’ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್ ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಫೆಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಭಾನುವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 45 ನಾಗರಿಕರು ಸಾವನ್ನಪ್ಪಿದ್ದಾರೆ. ‘ರಫಾ ಮೇಲೆ ಎಲ್ಲರ ಕಣ್ಣುಗಳು’ ಚಿತ್ರವು ನಡೆಯುತ್ತಿರುವ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳ ಕಚೇರಿಯ ನಿರ್ದೇಶಕ ರಿಕ್ ಪೀಪರ್ಕಾರ್ನ್ ಅವರ ಹೇಳಿಕೆಯಿಂದ ಈ ಘೋಷಣೆ ಹುಟ್ಟಿಕೊಂಡಿದೆ ಎಂದು ತೋರುತ್ತದೆ. ಫೆಬ್ರವರಿಯಲ್ಲಿ, “ಎಲ್ಲರ ಕಣ್ಣುಗಳು ರಫಾ ಮೇಲೆ ಇವೆ” ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನಗರವನ್ನು ಸ್ಥಳಾಂತರಿಸುವ ಯೋಜನೆಗೆ ಆದೇಶಿಸಿದ ಸ್ವಲ್ಪ ಸಮಯದ…
ಅಫ್ಘಾನ್ ನಾಗರಿಕರೊಬ್ಬರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ವೈರಲ್ ಆಗಿದೆ. ಪಾಕಿಸ್ತಾನದ ವಿರುದ್ಧ ಭಾರತದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿ ಹೋರಾಟ ಮಾಡಲು ಹೇಳಿರುವ ವಿಡಿಯೋ ಅದಾಗಿದೆ. ಭಾರತೀಯ ಯೂಟ್ಯೂಬರ್ ಜೊತೆ ನಡೆದ ಸಂಭಾಷಣೆಯ ವೀಡಿಯೊದಲ್ಲಿ ಹಿರಿಯ ನಾಗರೀಕನ ವಿಡಿಯೋ ಈಗ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಹಿರಿಯ ಅಫ್ಘಾನ್ ವ್ಯಕ್ತಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಸಹೋದರ ಬಂಧವನ್ನು ಎತ್ತಿ ತೋರಿಸುವ ಮೂಲಕ ಪ್ರಾರಂಭಿಸಿದರು. “ಭಾರತ ಮತ್ತು ಅಫ್ಘಾನಿಸ್ತಾನ ಸ್ನೇಹಿತರು. ನಾವು ಸಹೋದರರಂತೆ ಇದ್ದೇವೆ” ಎಂದು ಅವರು ದೃಢಪಡಿಸಿದರು, ಉಭಯ ರಾಷ್ಟ್ರಗಳನ್ನು ಒಂದುಗೂಡಿಸುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಒತ್ತಿಹೇಳಿದರು. ಈ ಸ್ನೇಹವು ಪರಸ್ಪರ ಶತ್ರು ಎಂದು ಬಣ್ಣಿಸಿದ ಪಾಕಿಸ್ತಾನದ ಬಗ್ಗೆ ಹಂಚಿಕೊಂಡ ದ್ವೇಷಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಯೂಟ್ಯೂಬರ್, “ನಾವಿಬ್ಬರೂ ಭೇಟಿಯಾಗಬಹುದಾದ ರಸ್ತೆಯನ್ನು ನೀವು ಮಾಡಿ” ಎಂದು ಸಲಹೆ ನೀಡಿದರು. “ನಾವು ಭೇಟಿಯಾಗುತ್ತೇವೆ, ಆದರೆ ನೀವು ಆ ಕಡೆಯಿಂದ ಬರುತ್ತೀರಿ ಮತ್ತು…
ಇತ್ತೀಚೆಗೆ ಕಾಡಾನೆ ಸೆರೆ ಹಿಡಿಯುವ ವೇಳೆ ದುರಂತ ಸಾವಿಗೀಡಾಗಿದ್ದ ದಸರಾ ಆನೆ ಅರ್ಜುನನ ಸಮಾಧಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಭಿಮಾನಿ ವಿರುದ್ಧ ಪ್ರಕರಣ ದಾಖಲಿಸಿದೆ. ಅರಣ್ಯ ಕಾಯಿದೆ 1963 ಮತ್ತು 1969 ರ ಅಡಿಯಲ್ಲಿ ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಹೆಚ್.ಡಿ.ಕೋಟೆ ನಿವಾಸಿ ನವೀನ್ ವಿರುದ್ಧ ಯಸಳೂರು ವಲಯ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಸಕಲೇಶಪುರ ತಾಲೂಕಿನ ದಬ್ಬೆಕಟ್ಟೆ ಮೀಸಲು ಅರಣ್ಯದಲ್ಲಿ ಇತ್ತೀಚೆಗೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ನವೀನ್ ಮತ್ತು ಆತನ ನೇತೃತ್ವದಲ್ಲಿ ಹಲವರು ಅತಿಕ್ರಮ ಪ್ರವೇಶ ಮಾಡಿದ್ದರು. ಅಲ್ಲದೆ ಅರ್ಜುನ ಆನೆ ಸಮಾಧಿ ಭೂಮಿಯನ್ನು ಅಗೆದು ಕಲ್ಲಿನ ಸ್ಲಾಬ್ಗಳಿಂದ ಬೇಲಿ ಹಾಕಿ ಸಮಾಧಿಯನ್ನು ವಿರೂಪಗೊಳಿಸಿದ್ದರು ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಸಮಾಧಿ ಸುತ್ತ ಬೇಲಿ ಹಾಕಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳೀಯರು ನೀಡಿದ್ದ ದೂರಿನ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾದಲ್ಲಿ ಮಿಂಚಿದ್ದ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಖ್ಯಾತಿ ಪಡೆದಿರುವ ನಟಿ ಅಮಲಾ ಪೌಲ್ ತುಂಬು ಗರ್ಭಿಣಿಯಾಗಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಜಗತ್ ದೇಸಾಯಿ ಎಂಬುವರನ್ನು ಎರಡನೇ ಮದುವೆಯಾದ ಅಮಲಾ ಪೌಲ್ ಈ ವರ್ಷಾರಂಭದಲ್ಲಿ ತಾವು ತಾಯಿ ಆಗುತ್ತಿರುವ ಸಂತಸವನ್ನ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಹಿಂದೆ ನಟಿ ಅಮಲಾ ಪೌಲ್ ನಿರ್ದೇಶಕ ಎಎಲ್ ವಿಜಯ್ ಅವರನ್ನು 12 ಜೂನ್ 2014 ರಂದು ಮದುವೆಯಾಗಿದ್ದರು. ಆದರೆ ಅವರ ಮದುವೆ ಕೇವಲ ಮೂರು ವರ್ಷಗಳ ಕಾಲ ಉಳಿಯಿತು. ಕೆಲ ಕಾರಣಗಳಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಬಳಿಕ ಕಾನೂನುಬದ್ಧವಾಗಿ ವಿಚ್ಛೇದನ ಪಡೆದು, ಆ ಬಳಿಕ ಜಗತ್ ಅವರನ್ನು ಅಮಲಾ ಮದುವೆಯಾದರು. ಜಗತ್ ದೇಸಾಯಿ ಅವರನ್ನು ಮದುವೆಯಾದ 2 ತಿಂಗಳಿಗೆ ನಟಿ ಅಮಲಾ ಪೌಲ್ ತಾನು ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡ್ರು. ನಟಿ ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ರು ಎನ್ನುವ ಸುದ್ದಿ ಕೂಡ…