Author: Author AIN

ಸಾಕಷ್ಟು ವರ್ಷಗಳಿಂದ ಹಿಂದಿ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದ ನಟ ಸಲ್ಮಾನ್ ಖಾನ್ ಇದೀಗ ಹೊರ ಬಂದಿದ್ದಾರೆ. ಇದಾಗಲೇ ಹಿಂದಿ ಬಿಗ್​ಬಾಸ್​ 17 ಸೀಸನ್​ಗಳನ್ನು ಮುಗಿಸಿದ್ದು, 18ನೇ ಸೀಸನ್​ಗೆ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ, ಓಟಿಟಿ ಬಿಗ್​ಬಾಸ್​ ಕೂಡ ಮಾಡಲಾಗಿದೆ ಓಟಿಟಿಯ ಎರಡು ಸೀಸನ್​ಗಳು ಇದಾಗಲೇ ಮುಗಿದು 3ನೇ ಸೀಸನ್​ಗೆ ಸಜ್ಜಾಗುತ್ತಿದ್ದಾರೆ. ಬಿಗ್​ಬಾಸ್​ 17 ಸೀಸನ್​ಗಳನ್ನೂ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರೇ ನಡೆಸಿಕೊಟ್ಟಿದ್ದರು. ಆದರೆ ಓಟಿಟಿಯಲ್ಲಿ ಸ್ವಲ್ಪ ಬದಲಾವಣೆ ಆಗಿದ್ದು, ಇದೀಗ ಮತ್ತೊಂದು ಕುತೂಹಲದ ಮಾಹಿತಿ ಹೊರ ಬಂದಿದೆ. ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ ಅನ್ನು ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. ಆದರೆ ಎರಡನೇ ಸೀಸನ್​ಗೆ ಸಲ್ಮಾನ್​ ಖಾನ್​ ಎಂಟ್ರಿ ಆಗಿತ್ತು. ಮೂರನೇ ಸೀಸನ್​ ಅನ್ನು ಕೂಡ ಸಲ್ಮಾನ್ ಖಾನ್ ಅವರೇ ನಡೆಸಿಕೊಡುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಹೊಸ ಪ್ರೊಮೋ ರಿಲೀಸ್​ ಆಗಿದೆ. ಅದರಲ್ಲಿ ಸಲ್ಮಾನ್​ ಖಾನ್​ ಹೆಸರು ಇಲ್ಲ. ಆದರೆ ಸೋನಂ ಕಪೂರ್​ ಸೋಷಿಯಲ್​…

Read More

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀರಿಲೀಸ್ ಈವೆಂಟ್​ನಲ್ಲಿ ತೆಲುಗು ನಟಿ ಅಂಜಲಿ ಅವರನ್ನು ಎಲ್ಲರ ಎದುರೇ ತಳ್ಳುವ ಮೂಲಕ ನಟ ಬಾಲಯ್ಯ ಸಾಕಷ್ಟು ಸುದ್ದಿಯಾಗಿದ್ದರು. ಬಾಲಯ್ಯ ಕುಡಿದು ನಟಿಯೊಂದಿಗೆ ಈ ರೀತಿ ವರ್ತಿಸಿದ್ದಾರೆ ಎಂದು ಸಾಕಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೆ ಈ ಬಗ್ಗೆ ನಿರ್ಮಾಪಕರು ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಸ್ವತಃ ನಟಿ ಅಂಜಲಿ ಘಟನೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಬಾಲಯ್ಯಗೆ ಧನ್ಯವಾದ ಹೇಳಿದ್ದಾರೆ. ಅನೇಕರು ಇದನ್ನು ತೇಪೆ ಹಚ್ಚುವ ಕೆಲಸ ಎಂದಿದ್ದಾರೆ. ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಡೆದಿದೆ. ಈ ವೇಳೆ ಬಾಲಯ್ಯ ಮದ್ಯ ಸೇವನೆ ಮಾಡಿದ್ದರು ಎನ್ನುವ ಆರೋಪ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಎದುರು ಮದ್ಯ ತುಂಬಿದೆ ಎನ್ನಲಾದ ಬಾಟಲಿ ಇತ್ತು. ಈ ಬಗ್ಗೆ ತಂಡ ಸ್ಪಷ್ಟನೆ ನೀಡಿತ್ತು. ‘ಅಸಲಿಗೆ ಅಲ್ಲಿ ಬಾಟಲಿ ಇರಲೇ ಇಲ್ಲ. ಗ್ರಾಫಿಕ್ಸ್ ಮಾಡಿದ ಬಾಟಲಿ ಇಡಲಾಗಿದೆ’ ಎಂದು ತಂಡ ಹೇಳಿಕೊಂಡಿತ್ತು. ಈಗ ಅಂಜಲಿ…

Read More

ಬಾಲಿವುಡ್​ ನಟಿ​ ಮಲೈಕಾ ಅರೋರಾ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆಗಿನ ಸಂಬಂಧದಿಂದ ಮಲೈಕ ಸುದ್ದು ಮಾಡುತ್ತಿರುತ್ತಾರೆ. ಹೋದಲ್ಲಿ ಬಂದಲೆಲ್ಲಾ ಕೈ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದ ಜೋಡಿ ಹಕ್ಕಿಗಳು ಏಕಾ ಏಕಿ ಬೇರೆಬೇರೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೆಲ್ಲಾ ಜಸ್ಟ್ ಗಾಳಿ ಸುದ್ದಿಯಷ್ಟೇ ಎಂದು ಮಲೈಕಾ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಅವರ ಬ್ರೇಕಪ್​ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಲೈಕಾ ಮ್ಯಾನೇಜರ್ ‘ಇಲ್ಲ ಇಲ್ಲ.. ಎಲ್ಲವೂ ವದಂತಿ’ ಎಂದು ಉತ್ತರಿದ್ದಾರೆ. ಹಾಗಾಗಿ ಸದ್ಯಕ್ಕಂತೂ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ನಡುವೆ ಬ್ರೇಕಪ್​ ಆಗಿಲ್ಲ ಎನ್ನಲಾಗುತ್ತಿದೆ. ಸೆಲೆಬ್ರಿಟಿಗಳ ನಡುವೆ ಪ್ರೀತಿ-ಪ್ರೇಮ ಚಿಗುರುವುದು, ಮದುವೆ ಆಗುವುದು, ಬ್ರೇಕಪ್​, ವಿಚ್ಛೇದನ ಆಗುವುದು ತುಂಬ ಕಾಮನ್​. ಹಾಗಾಗಿ ಪದೇ ಪದೇ ಇಂಥ ಗಾಸಿಪ್​ಗಳು ಕೇಳಿಬರುತ್ತಲೇ ಇರುತ್ತವೆ. ಆದರೂ ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಂತಾರೆ. ಹಾಗಾಗಿ ಗಾಸಿಪ್​…

Read More

ಪ್ರವಾಸಿ ವೀಸಾವನ್ನು ದುರುಪಯೋಗ ಪಡಿಸಿಕೊಂಡು ದ್ವೀಪ ರಾಷ್ಟ್ರದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದದ್ದಕ್ಕಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಎಂಟು ಭಾರತೀಯರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾದ ಸಿನ್ನಮನ್ ಗಾರ್ಡನ್ಸ್‌ ನ ವಸತಿ ಪ್ರದೇಶದಲ್ಲಿ ಐಟಿ ವ್ಯವಹಾರ ನಡೆಸುತ್ತಿರುವ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಲಸೆ ಅಧಿಕಾರಿಗಳು ಎಂಟು ಮಂದಿ ಭಾರತೀಯ ವ್ಯಕ್ತಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ವ್ಯಕ್ತಿಗಳೆಲ್ಲರೂ ಪ್ರವಾಸಿ ವೀಸಾಗಳನ್ನು ಹೊಂದಿದ್ದು, ಈ ಪೈಕಿ ಒಬ್ಬಾತನ ವೀಸಾ ಅವಧಿ ಮುಕ್ತಾಯಗೊಂಡಿದೆ. ಶ್ರೀಲಂಕಾದಲ್ಲಿ ಪ್ರವಾಸಿ ವೀಸಾಗಳ ಅಡಿಯಲ್ಲಿ ಉದ್ಯೋಗವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಂಧಿತ ಮಹಿಳೆ ಸೇರಿದಂತೆ ಎಂಟು ವ್ಯಕ್ತಿಗಳನ್ನು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಗಡೀಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯ ಘಟನೆ ಕಳೆದ ಮಾರ್ಚ್‌ ನಲ್ಲೂ ವರದಿಯಾಗಿತ್ತು. ಪ್ರವಾಸಿ ವೀಸಾಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ವೆಸ್ಟ್ ಕೋಸ್ಟ್ ರೆಸಾರ್ಟ್ ಪಟ್ಟಣವಾದ ನೆಗೊಂಬೊದಲ್ಲಿ 21 ಭಾರತೀಯರನ್ನು ಬಂಧಿಸಲಾಗಿತ್ತು. ಭಾರತವು ಶ್ರೀಲಂಕಾದ ಅತಿ ದೊಡ್ಡ ಒಳಬರುವ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಸದ್ಯ, ಶ್ರೀಲಂಕಾವು…

Read More

ಅಸ್ಸಾಂನ ಖಾಸಗಿ ಶಾಲೆಯೊಂದರಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಲಾಗಿರುವ ಐರಿಸ್ ಎಂಬ ಕೃತಕ ಬುದ್ಧಿಮತ್ತೆಯ ಶಿಕ್ಷಕಿಯು ವಿದ್ಯಾರ್ಥಿಗಳನ್ನು ತನ್ನ ಉತ್ತರದ ಮೂಲಕ ಖುಷಿಗೊಳಿಸಿದ್ದಾಳೆ. ಆಕೆಯ ಉತ್ತರಕ್ಕಾಗಿ ವಿದ್ಯಾರ್ಥಿಗಳು ಮತ್ತೆ ಮತ್ತೆ ಕಾಯುವಂತೆ ಈ ಶಿಕ್ಷಕಿ ಮಾಡಿದ್ದಾಳೆ. ಮನುಷ್ಯನ ದೇಹಾಕೃತಿ ಹೊಂದಿರುವ ಈ ಯಂತ್ರಚಾಲಿತ ಕೃತಕ ಬುದ್ಧಿಮತ್ತೆ ಶಿಕ್ಷಕಿಯು ಹಿಮೋಗ್ಲೋಬಿನ್ ಎಂದರೇನು ಎಂಬ ಪ್ರಶ್ನೆಗೆ ಎಲ್ಲ ಬಗೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದಳು ಎಂದು ಶಾಲಾ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಯಲ್ ಗ್ಲೋಬಲ್ ಶಾಲೆಯ ವಕ್ತಾರರು, “ಪ್ರಶ್ನೆಗಳು ಪಠ್ಯಕ್ರಮದ ಕುರಿತಾಗಿರಲಿ ಅಥವಾ ಇನ್ನಾವುದೇ ಪ್ರಶ್ನೆಯಾಗಿರಲಿ

Read More

ಇಬ್ಬರು ಮಕ್ಕಳ ತಾಯಿಯಾಗಿದ್ದರು ನಟಿ ಕರೀನಾ ಕಪೂರ್ ಖಾನ್ ಸೌಂದರ್ಯ ಕೊಂಚವೂ ಕಮ್ಮಿಯಾಗಿಲ್ಲ. ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಕರೀನಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಕರೀನಾ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ತೆಗೆದ ಫೋಟೋಗಳಾಗಿದ್ದು ಇದರಲ್ಲಿ ಕರೀನಾ ಧರಿಸಿದ್ದ ಡ್ರೆಸ್‌ ಎಲ್ಲರ ಗಮನಸೆಳೆದಿದೆ. ಬಾಲಿವುಡ್‌ ನಟಿ ಹಾಗೂ ಪಟೌಡಿ ಮನೆತನದ ಸೊಸೆ ಕರೀನಾ ಕಪೂರ್‌ ಖಾನ್‌ ಫ್ಯಾಶನ್‌ ಐಕಾನ್‌ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ. ಇದೀಗ ಕರೀನಾ ನೋಡಿ ಅಭಿಮಾನಿಗಳು ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕರೀನಾ ಕಪೂರ್​ ಖಾನ್​ ಅವರ ಈ ಫೋಟೋಗಳು ವೈರಲ್​ ಆಗಿವೆ. ನಟಿಯ ಬೋಲ್ಡ್​ ವೇಷ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಕೆಲವು ನಟಿಯರು ಮದುವೆ, ಮಕ್ಕಳು ಆದ ನಂತರ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಕರೀನಾ ಕಪೂರ್​ ಖಾನ್​ ಅವರು ಆ ರೀತಿ ಅಲ್ಲ. ಈಗ ಅವರು ಹಂಚಿಕೊಂಡಿರುವ…

Read More

ಜಮ್ಮು-ಕಾಶ್ಮೀರದಲ್ಲಿ ​ಕಂದಕಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 21 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಅಖ್ನೂರ್ ಪ್ರದೇಶದ ಜಮ್ಮು ಪೂಂಚ್ ಹೆದ್ದಾರಿಯ ತಾಂಡಾ ಮೋರ್‌ನಲ್ಲಿ ಸಂಭವಿಸಿದೆ. ಗಾಯಾಳುಗಳನ್ನು ಅಖ್ನೂರ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆದ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್‌ನಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಜಮ್ಮುವಿನ ಅಖ್ನೂರ್ ತಾಂಡಾ ಬಳಿ ಅಪಘಾತಕ್ಕೀಡಾಗಿದೆ ಎಂದು ಜಮ್ಮುವಿನ ಡೆಪ್ಯೂಟಿ ಕಮಿಷನರ್ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನ ಸೂಚಿಸಿದ್ದಾರೆ. ಜಮ್ಮು ಬಳಿಯ ಅಖ್ನೂರ್‌ನಲ್ಲಿ ಬಸ್ ಅಪಘಾತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ನೋವಾಗಿದೆ. ಅಗಲಿದ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಗಾಯಾಳುಗಳನ್ನು ಜಮ್ಮುವಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಕೆಲವು ಗಾಯಾಳುಗಳು ಚೌಕಿ ಚೌರಾ ಆಸ್ಪತ್ರೆ ಮತ್ತು ಅಖ್ನೂರ್ ಉಪಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

Read More

ಹಷ್‌ ಮನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ದೋಷಿ ಎಂದು ನ್ಯೂಯಾರ್ಕ್‌ ನ್ಯಾಯಾಲಯ ಘೋಷಿಸಿದೆ. ಈ ಮೂಲಕ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಮೊದಲ ಅಮೆರಿಕ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್‌ ಒಳಗಾಗಿದ್ದಾರೆ. ಪ್ರಕರಣದಲ್ಲಿ ಎಲ್ಲಾ 34 ಆರೋಪಗಳಲ್ಲಿಯೂ ಟ್ರಂಪ್‌ ದೋಷಿ ಎಂದು ನ್ಯೂಯಾರ್ಕ್‌ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜಾಮೀನು ಇಲ್ಲದೇ ಬಿಡುಗಡೆಯಾಗಿದ್ದ ಟ್ರಂಪ್‌ ಇದೀಗ ಅಪರಾಧಿಯಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಹಿಂದೆಂದೂ ಹೀಗಾಗಿರಲಿಲ್ಲ. ಡೊನಾಲ್ಡ್ ಟ್ರಂಪ್ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ತನ್ನ ರಾಜಮನೆತನದ ವಕೀಲ ಕೊಹೆನ್ ಮೂಲಕ ಹಣವನ್ನು ಒದಗಿಸಿದ್ದಾರೆ ಎಂದು ಆರೋಪಿಸಿದ್ದಾರೆ, ಆದ್ದರಿಂದ ಅಕೆ ತನ್ನ ರಹಸ್ಯಗಳನ್ನು ಬಹಿರಂಗಪಡಿಸುವುದಿಲ್ಲ. ಅವರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲೇ ಈ ಪ್ರಕರಣ ದಾಖಲಾಗಿತ್ತು. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದು, ರಿಪಬ್ಲಿಕನ್‌ ಪಕ್ಷದ ನಾಯಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಏರಬಹುದು ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಪ್ರಕರಣವೊಂದರಲ್ಲಿ ದೋಷಿಯಾಗಿದ್ದಾರೆ. ‘ನಾನು ತುಂಬಾ ಮುಗ್ಧ ಮನುಷ್ಯ. ನಿಜವಾದ…

Read More

ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದ ನಂದಮೂರಿ ಬಾಲಕೃಷ್ಣ ಸುದ್ದಿಯಲ್ಲಿದ್ದಾರೆ. ಈವೆಂಟ್​ನಲ್ಲಿ ಭಾಗಿಯಾಗಿದ್ದ ವೇಳೆ ಬಾಲಯ್ಯ ಅವರು ನಟಿ ಅಂಜಲಿ ಅವರನ್ನು ತಳ್ಳಿದ್ದರು. ಅದಕ್ಕೂ ಮೊದಲು ಬಾಲಯ್ಯ ಕಾಲ ಕೆಳಗೆ ಆಲ್ಕೋಹಾಲ್​ ಇದೆ ಎನ್ನಲಾದ ಬಾಟಲಿ ಒಂದು ಕಾಣಿಸಿತ್ತು. ಬಾಲಯ್ಯ ಅವರು ಕುಡಿದಿದ್ದರಿಂದಲೇ ಈ ರೀತಿ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಈಗ ಗ್ಯಾಂಗ್ ಆಫ್ ಗೋದಾವರಿ ಸಿನಿಮಾದ ನಿರ್ಮಾಪಕರು ಈ ವಿವಾದದಿಂದ ತಪ್ಪಿಸಿಕೊಳ್ಳಲು ಹಾರಿಕೆ ಉತ್ತರ ನೀಡಿದ್ದಾರೆ. ‘ಅದು ಗ್ರಾಫಿಕ್ಸ್ ಬಾಟಲಿ’ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಘಟನೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಬಾಲಯ್ಯ ಸಿಟ್ಟಲ್ಲಿ ಅಂಜಲಿ ಅವರನ್ನು ತಳ್ಳಿದ್ದರು. ಅಂಜಲಿ ಇದನ್ನು ಹಾಸ್ಯ ರೂಪದಲ್ಲೇ ಸ್ವೀಕರಿಸಿದ್ದಾರೆ. ಆದರೆ, ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಾಲಯ್ಯ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ‘ಕುಡಿದ ಏಟಲ್ಲಿ ಈ ರೀತಿ ಮಾಡಿದರು’ ಎನ್ನುವ ಆರೋಪ ಮಾಡಿದ್ದಾರೆ. ಈ ಘಟನೆಯಿಂದ ಎಚ್ಚೆತ್ತಿರುವ ಸಿನಿಮಾದ…

Read More

ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಪತಿ, ಮಗಳ ಜೊತೆ ಎಂಜಾಯ್ ಮಾಡುತ್ತಿರುವ ಪ್ರಿಯಾಂಕ ಹಿಂದೊಮ್ಮೆ ವಿಜಯ್ ದಳಪತಿ ಜೊತೆ ನಟಿಸಲು ಎಂದು ತಾಯಿ ಬಳಿ ಬಿಕ್ಕಿ ಬಿಕ್ಕಿ ಅಂತಿದ್ದರಂತೆ. ವಿಜಯ್ ಜೊತೆ ಸಿನಿಮಾ ಮಾಡಲು ಸ್ಟಾರ್ ನಟಿಯರೇ ಕ್ಯೂನಲ್ಲಿ ನಿಂತಿರುವಾಗ ಪ್ರಿಯಾಂಕ ಹೀಗೆ ಹೇಳಲು ಕಾರಣವೇನು ಎಂಬ ಪ್ರಶ್ನೆ ಶುರುವಾಗಿದೆ. ಈ ಬಗ್ಗೆ ಪ್ರಿಯಾಂಕ ತಾಯಿ ಮಧು ಚೋಪ್ರಾ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಇದು ನಡೆದದ್ದು 2002ರಲ್ಲಿ. ಅಂದು ಏನಾಯಿತು, ಹಾಗೂ ತಾವು ವಿಜಯ್​ ಜೊತೆ ನಟಿಸಲು ಹೇಗೆ ಮಗಳ ಮನವೊಲಿಸಿದೆ ಎಂಬ ಬಗ್ಗೆ ಮಧು ಅವರು ಈಗ ಹೇಳಿದ್ದಾರೆ. 2000ನೇ ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಿಸ್​ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡರು. ಅವರಿಗೆ ಕೂಡಲೇ ತಮಿಳು ಚಿತ್ರರಂಗದಿಂದ ಆಫರ್​ ಬಂತು. ದಳಪತಿ ವಿಜಯ್​ ನಟನೆಯ ‘ತಮಿಳನ್​’ ಸಿನಿಮಾಗೆ ನಾಯಕಿ ಆಗುವಂತೆ ಆಫರ್​ ನೀಡಲಾಗಿತ್ತು. ಆದರೆ ಪ್ರಿಯಾಂಕಾ ಇದು ಸಾಧ್ಯವಿಲ್ಲ ಎಂದು…

Read More