Author: Author AIN

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್‌ ಅನ್ನು ಜೈಲಾಧಿಕಾರಿಗಳು ನೀಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಭೇಟಿಗೆ ಅವರ ಪೋಷಕರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ತಮ್ಮ ಗರಂ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಪವಿತ್ರಾ ಗೌಡ ಭೇಟಿ ಮಾಡಲು ಆಕೆಯ ತಂದೆ, ತಾಯಿ, ತಮ್ಮ ಮತ್ತು ಚಿಕ್ಕಮ್ಮ ಬಂದಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ತಮ್ಮ ಗರಂ ಆದರು. ʻʻನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾʼʼ ಎಂದು ಪವಿತ್ರಾ ಗೌಡ ತಮ್ಮ ಧಿಮಾಕಿನಿಂದ ಪ್ರಶ್ನೆ ಮಾಡಿದ್ದಾರೆ. ಮನೆಯಲ್ಲಿದ್ದಷ್ಟು ದಿನವೂ ಸಖತ್ ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ನಟಿ ಪವಿತ್ರಾ ಗೌಡಗೆ ಜೈಲು ವಾಸ ಹಿಂಸೆಯಾಗಿದೆ. ಜೈಲಿನಲ್ಲಿ 5 ಗಂಟೆಗೆ ಎದ್ದ ಪವಿತ್ರಾ ಒಂದಷ್ಟು…

Read More

ಕೆನಡಾದ ಬಹುಮುಖ ಮತ್ತು ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಡೊನಾಲ್ಡ್ ಸದರ್ಲ್ಯಾಂಡ್ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1960 ರಿಂದ 2020 ರ ದಶಕದವರೆಗೆ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದ ನಟ ಗುರುವಾರ ನಿಧನರಾದರು ಎಂದು ಅವರ ಮಗ, ನಟ ಕೀಫರ್ ಸದರ್ಲ್ಯಾಂಡ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಡೊನಾಲ್ಡ್ ಸದರ್ಲ್ಯಾಂಡ್ ಜೇನ್ ಫಾಂಡಾ ಮತ್ತು ಜೂಲಿ ಕ್ರಿಸ್ಟಿ ಅವರಂತಹವರ ವಿಲನ್ ಪಾತ್ರಗಳಿಂದ ಪ್ರಣಯ ಪಾತ್ರಗಳಿಗೆ ಸಲೀಸಾಗಿ ಬದಲಾಯಿಸಿದರು. ಅವರು ಬೆಡ್ಬಾಲ್ಗಳು ಮತ್ತು ಖಳನಾಯಕರ ಪಾತ್ರಗಳನ್ನು ಸಹ ನಿರ್ವಹಿಸಿದರು. 1970 ರ ದಶಕದಲ್ಲಿ ಹಾಲಿವುಡ್ ನ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾದ ಅವರು ತಮ್ಮ 80 ರ ದಶಕದಲ್ಲಿ ಚಲನಚಿತ್ರ ಮತ್ತು ಟಿವಿ ಯೋಜನೆಗಳಿಗೆ ಬೇಡಿಕೆಯಲ್ಲಿದ್ದರು. ಅವರ ಅಸಾಂಪ್ರದಾಯಿಕ ನೋಟ ಮತ್ತು ನಟನಾಗಿ ಅವರ ಬಹುಮುಖತೆಗೆ ಹೆಸರುವಾಸಿಯಾದ ಸದರ್ಲ್ಯಾಂಡ್ ವ್ಯಾಪಕ ಶ್ರೇಣಿಯ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದರು. ಸದರ್ಲ್ಯಾಂಡ್ ನಿಧನಕ್ಕೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ.

Read More

ಅಮೆರಿಕದ ಕಾಲೇಜುಗಳಿಂದ ಪದವಿ ಪಡೆದ ವಿದ್ಯಾರ್ಥಿಗಳು ದೇಶದಲ್ಲಿ ಉಳಿಯಲು ಗ್ರೀನ್ ಕಾರ್ಡ್ ಪಡೆಯಬೇಕು ಎಂದು ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸಿಲಿಕಾನ್ ವ್ಯಾಲಿ ಟೆಕ್ ಹೂಡಿಕೆದಾರರು ಆಯೋಜಿಸಿದ್ದ ಆಲ್-ಇನ್ ಪಾಡ್ಕಾಸ್ಟ್ನಲ್ಲಿ, ಏಂಜೆಲ್ ಹೂಡಿಕೆದಾರ ಜೇಸನ್ ಕ್ಯಾಲಕಾನಿಸ್ ಟ್ರಂಪ್ಗೆ ಯುಎಸ್ ಹೆಚ್ಚು ಉನ್ನತ ಕೌಶಲ್ಯದ ಕಾರ್ಮಿಕರನ್ನು ಕಾನೂನುಬದ್ಧವಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಂಎಉ ಟ್ರಂಪ್ ತಿಳಿಸಿದರು. “ಪ್ರಪಂಚದಾದ್ಯಂತದ ಅತ್ಯುತ್ತಮ ಮತ್ತು ಪ್ರಕಾಶಮಾನವಾದದನ್ನು ಅಮೆರಿಕಕ್ಕೆ ಆಮದು ಮಾಡಿಕೊಳ್ಳಲು ನೀವು ನಮಗೆ ಹೆಚ್ಚಿನ ಸಾಮರ್ಥ್ಯವನ್ನು ನೀಡುತ್ತೀರಿ ಎಂದು ದಯವಿಟ್ಟು ನಮಗೆ ಭರವಸೆ ನೀಡಬಹುದೇ?” ಕ್ಯಾಲಕಾನಿಸ್ ಹೇಳಿದರು. “ನಾನು ಭರವಸೆ ನೀಡುತ್ತೇನೆ” ಎಂದು ಹೇಳಿದ ಟ್ರಂಪ, “ಆದರೆ ನಾನು ಒಪ್ಪುತ್ತೇನೆ, ಇಲ್ಲದಿದ್ದರೆ ನಾನು ಭರವಸೆ ನೀಡುವುದಿಲ್ಲ … ನೀವು ಕಾಲೇಜಿನಿಂದ ಪದವಿ ಪಡೆದಿದ್ದೀರಿ, ನಿಮ್ಮ ಡಿಪ್ಲೊಮಾದ ಭಾಗವಾಗಿ ಈ ದೇಶದಲ್ಲಿ ಉಳಿಯಲು ನೀವು ಸ್ವಯಂಚಾಲಿತವಾಗಿ ಗ್ರೀನ್ ಕಾರ್ಡ್ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ ಮತ್ತು ಅದರಲ್ಲಿ ಜೂನಿಯರ್ ಕಾಲೇಜುಗಳೂ ಸೇರಿವೆ.” ಎಂದರು. ಶಾಶ್ವತ ನಿವಾಸಿ ಕಾರ್ಡ್…

Read More

ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಚರ್ಚೆಗಳನ್ನು ಬೆಂಬಲಿಸುವುದಾಗಿ ಅಮೆರಿಕ ಹೇಳಿದೆ. ಆದರೆ, ಮಾತುಕತೆಯ ವೇಗ, ವ್ಯಾಪ್ತಿ ಮತ್ತು ಸ್ವರೂಪವನ್ನು ಉಭಯ ರಾಷ್ಟ್ರಗಳು ನಿರ್ಧರಿಸಬೇಕು ಎಂದು ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ವಕ್ತಾರ ಮ್ಯಾಥ್ಯೂ ಮಿಲ್ಲರ್, ಭಾರತ ಮತ್ತು ಪಾಕಿಸ್ತಾನದ ಜೊತೆಗಿನ ಅತ್ಯಂತ ಪ್ರಮುಖ ಸಂಬಂಧದ ಮೌಲ್ಯಗಳನ್ನು ಅಮೆರಿಕ ಗೌರವಿಸುತ್ತದೆ ಎಂದಿದ್ದಾರೆ. ಇದೇವೇಳೆ, ಪ್ರಾದೇಶಿಕ ಭದ್ರತೆಗೆ ಇರುವ ಅಪಾಯಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಪರಸ್ಪರ ಹಿತದೃಷ್ಟಿಯನ್ನು ಕಾಯ್ದುಕೊಂಡಿವೆ ಎಂದು ಹೇಳಿದ್ದಾರೆ. ‘ಭಯೋತ್ಪಾದನೆ ನಿಗ್ರಹ ಕುರಿತಾದ ತಮ್ಮ ಉನ್ನತ ಮಾತುಕತೆಯಲ್ಲಿ ಪಾಕಿಸ್ತಾನದ ಜೊತೆ ಸಹಭಾಗಿತ್ವ ಹೊಂದಿದ್ದೇವೆ. ಭಯೋತ್ಪಾದನೆ ನಿಗ್ರಹ ಸಾಮರ್ಥ್ಯವನ್ನು ವೃದ್ಧಿಸುವ ಮತ್ತು ಅದಕ್ಕೆ ಬೇಕಾದ ಅಮೆರಿಕ-ಪಾಕಿಸ್ತಾನ ನಡುವಿನ ಮಿಲಿಟರಿ ಟು ಮಿಲಿಟರಿ ಸರಣಿ ಸಹಭಾಗಿತ್ವವನ್ನು ಹೊಂದಿದ್ದೇವೆ’ಎಂದು ಹೇಳಿದ್ದಾರೆ. ಭಯೋತ್ಪಾದನೆ ಸದೆಬಡಿಯುವ ಸಹಭಾಗಿತ್ವದ ಭಾಗವಾಗಿ ಪಾಕಿಸ್ತಾನದ ನಾಯಕರ ಜೊತೆ ನಾವು ನಿರಂತರ ಸಂಪರ್ಕ ಹೊಂದಿದ್ದೇವೆ. ಪ್ರಾದೇಶಿಕ ಭದ್ರತೆ ಕುರಿತಂತೆ ವಿವರವಾಗಿ ಚರ್ಚೆ ನಡೆಸುವುದನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Read More

ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನ ಐಕಾನಿಕ್‌ ಟೈಮ್ಸೌ ಸ್ಕ್ವೇರ್‌ನಲ್ಲಿ ಸಾವಿರಾರು ಮಂದಿ ಯೋಗ ಮಾಡಿ ಗಮನ ಸೆಳೆದರು.ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಶನ್‌ನೊಂದಿಗೆ ಸ್ವಯಂಸೇವಕ ಮತ್ತು ಅಧ್ಯಾಪಕ ಸದಸ್ಯರಾಗಿ ಎರಡು ದಶಕಗಳ ಅನುಭವ ಹೊಂದಿರುವ ಯೋಗ ತರಬೇತುದಾರ ಮತ್ತು ಉಸಿರಾಟದ ಧ್ಯಾನ ಶಿಕ್ಷಕಿ ರಿಚಾ ಧೆಕ್ನೆ ಅವರು ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲೇಟ್‌ ಜನರಲ್‌ ಆಯೋಜಿಸಿದ್ದ ಯೋಗ ಮತ್ತು ಧ್ಯಾನ ಅಧಿವೇಶನವನ್ನು ಮುನ್ನಡೆಸಿದರು. ಹಲವಾರು ಇತರ ಯೋಗ ಶಿಕ್ಷಕರು ಮತ್ತು ತಜ್ಞರು ಟೈಮ್ಸ್‌‍ ಸ್ಕ್ವೇರ್‌ನಲ್ಲಿ ದಿನವಿಡೀ ವಿವಿಧ ಧ್ಯಾನ, ವ್ಯಾಯಾಮಗಳು ಮತ್ತು ಉಸಿರಾಟದ ಅವಧಿಗಳನ್ನು ಮುನ್ನಡೆಸಿದರು.ನೀವು ನೋಡುವಂತೆ, ನಾವು ಹಲವಾರು ರಾಷ್ಟ್ರೀಯತೆಗಳಿಂದ ಯೋಗದಲ್ಲಿ ಭಾಗವಹಿಸುವವರನ್ನು ಹೊಂದಿದ್ದೇವೆ ಮತ್ತು ಇದು ಇಂದು ಇಡೀ ದಿನ ಮುಂದುವರಿಯಲಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್‌ ಜನರಲ್‌ ಬಿನಯಾ ಶ್ರೀಕಾಂತ ಪ್ರಧಾನ್‌ ಹೇಳಿದರು. ಸ್ವಯಂ ಸಮಾಜಕ್ಕಾಗಿ ಯೋಗ ಎಂಬ ಥೀಮ್‌ ಆಧಾರದ ಮೇಲೆ ಇಲ್ಲಿ ನಡೆಸಲಾಗುತ್ತಿರುವ ಯೋಗಾದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇಂದು ಇಲ್ಲಿ…

Read More

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ ಅನ್ನು ಅಪವಿತ್ರಗೊಳಿದ್ದಾರೆಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಠಾಣೆಯಲ್ಲೇ ವ್ಯಕ್ತಿಯೊಬ್ಬನನ್ನ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಖೈಬರ್ ಪಖ್ತುಂಕ್ವಾದ ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್ ಜಿಲ್ಲೆಯ ವ್ಯಕ್ತಿಯೊಬ್ಬ ತೆಹಸಿಲ್‌ನಲ್ಲಿ ಪವಿತ್ರ ಕುರಾನ್‌ ಗ್ರಂಥದ ಕೆಲವು ಪುಟಗಳನ್ನು ಸುಟ್ಟು ಹಾಕಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆದ್ರೆ ಉದ್ರಿಕ್ತರ ಗುಂಪು ಠಾಣೆ ಮುಂದೆ ಜಮಾಯಿಸಿ ಆತನನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿತ್ತು. ಒಪ್ಪಿಸಲು ಪೊಲೀಸರು ನಿರಾಕರಿಸಿದ ನಂತರ ಆರೋಪಿಯನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ. ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಮಧ್ಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಒಪ್ಪಿಸಲು ಪೊಲೀಸರು ನಿರಾಕರಿಸುತ್ತಿದ್ದಂತೆ ರೊಚ್ಚಿಗೆದ್ದ ಜನ…

Read More

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಮ್ಮನಾಗುವ ಖುಷಿಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ದೀಪಿಕಾ ಕಳೆದ ಎರಡು ದಿನಗಳ ಹಿಂದೆ ನಡೆದ ‘ಕಲ್ಕಿ 2898 ಎಡಿ’ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಿಗಿಸಿಕೊಂಡಿದ್ದಾರೆ. ಈ ವೇಳೆ ನಟಿ ದುಬಾರಿ ಮೊತ್ತದ ಡ್ರೆಸ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಲ್ಕಿ’ ಸಿನಿಮಾ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಸಿಂಪಲ್ ಡ್ರೆಸ್‌ನಲ್ಲಿ ಆಗಮಿಸಿದ್ದರು. ನೋಡಲು ಸಖತ್ ಸಿಂಪಲ್ ಎನಿಸಿದರೂ ಅದು ದುಬಾರಿ ಮೊತ್ತದ ಬಟ್ಟೆಯಾಗಿದೆ. ದೀಪಿಕಾ ಧರಿಸಿದ ಕಪ್ಪು ಬಣ್ಣದ ಡ್ರೆಸ್‌ಗೆ 1,14,000 ಲಕ್ಷ ರೂ.ಎನ್ನಲಾಗುತ್ತಿದೆ. ಅಂದಹಾಗೆ ‘ಕಲ್ಕಿ’ ಚಿತ್ರದ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಪ್ರಭಾಸ್  ಸಹಾಯ ಮಾಡಿದ್ದಾರೆ. ಅದಕ್ಕೆ, ಅಮಿತಾಭ್ ಬಚ್ಚನ್ ಕಾಲೆಳೆದಿದ್ದು ಈ ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಸಿನಿಮಾ ಕುರಿತು ಈವೆಂಟ್‌ನಲ್ಲಿ ಮಾತಾಡಿ, ಬರುತ್ತಿದ್ದಂತೆ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ…

Read More

2019ರಲ್ಲಿ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಶ್ರೀಲೀಲಾಗೆ ಭರಾಟೆ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ಟಾಲಿವುಡ್ ಗೆ ಹಾರಿದ ನಟಿಗೆ ಅಲ್ಲಿ ಅದೃಷ್ಟ ಹೇಳಿಕೊಳ್ಳುವ ಮಟ್ಟಿಗೆ ಸಿಗದೆ ಹೋಯಿತು. ಶ್ರೀಲೀಲಾ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡದೆ ಹೋದ್ರೆ ಆಕೆ ಮಾತ್ರ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಶ್ರೀಲೀಲಾ ಸುಮಾರು 5.3 ಮಿಲಿಯನ್ ಫಾಲೋವರ್ಸ್‌ನ ಹೊಂದಿದ್ದಾರೆ. ಆಗಾಗ ವಿಭಿನ್ನ ಫೋಟೋಶೂಟ್‌ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಪಡ್ಡೆ ಹುಡುಗರ ಹೃದಯ ಕದ್ದ ನಟಿ ಶ್ರೀಲೀಲಾ ಬೋಲ್ಡ್ ಫೋಟೋಶೂಟ್ ಮೂಲಕ ಮತ್ತೆ ಟೆಂಪರೇಚರ್ ಹೆಚ್ಚಿಸಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ನಟಿ ಶ್ರೀಲೀಲಾ ಮಿಂಚಿದ್ದು, ಮಿರರ್ ಮುಂದೆ ಮಸ್ತ್ ಪೋಸ್ ನೀಡಿದ್ದಾರೆ. ಬಾತ್​ರೂಮ್​ನಲ್ಲಿ ನಟಿ ಶ್ರೀಲೀಲಾ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಫೋಟೋ ನೋಡಿದ ನೆಟ್ಟಿಗರು…

Read More

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ತನಗಿಂತ ಕಿರಿಯ ನಟ ಝಹೀರ್​ ಇಖ್ಬಾಲ್​ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರದ್ದು ಅಂತರ್ ​ಧರ್ಮೀಯ ವಿವಾಹ ಆಗಲಿರುವುದರಿಂದ ಕುಟುಂಬದವರಿಗೆ ಪೂರ್ಣ ಸಮ್ಮತಿ ಇಲ್ಲ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದರು. ಅಲ್ಲದೇ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾಗೆ ಈ ಮದುವೆಗೆ ಹೋಗಲು ಮನಸ್ಸಿಲ್ಲ ಎಂದು ಸುದ್ದಿ ಹರಡಿತ್ತು. ಆದರೆ ಇದೀಗ ಮಗಳ ಮದುವೆಯ ಬಗ್ಗೆ ಶತ್ರುಘ್ನ ಸಿನ್ಹಾ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಗಳ ಮದುವೆ ಕುರಿತು ಮಾತನಾಡಿದ ಶತ್ರುಘ್ನ ಸಿನ್ಹಾ, ‘ನಾನು ಖಂಡಿತವಾಗಿ ಮದುವೆಗೆ ಹೋಗುತ್ತೇನೆ. ಯಾಕೆ ಹೋಗಬಾರದು? ಸೋನಾಕ್ಷಿ ಮತ್ತು ಝಹೀರ್​ ಒಟ್ಟಿಗೆ ಬಾಳಬೇಕು. ಅವರಿಬ್ಬರ ಜೋಡಿ ತುಂಬ ಚೆನ್ನಾಗಿದೆ’ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ‘ಸುಳ್ಳು ಸುದ್ದಿ ಹಬ್ಬಿಸುವವರು ಈ ಮದುವೆ ಬಗ್ಗೆ ಹತಾಶರಾಗಿದ್ದಾರೆ ಅಷ್ಟೇ. ಅದಕ್ಕಾಗಿ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ. ಈ ಮದುವೆ ಅವರಿಗೆ ಸಂಬಂಧಿಸಿದ್ದಲ್ಲ. ಅಂಥವರೆಲ್ಲ ತಮ್ಮ ತಮ್ಮ ಕೆಲಸ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​​, ಪವಿತ್ರಾ ಗೌಡ ಸೇರಿ 17 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ನಿನ್ನೆ ದರ್ಶನ್ ಹಾಗೂ ನಾಲ್ವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿರುವುದರಿಂದ ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೊಲೆ ಪ್ರಕರಣವನ್ನ ಸರ್ಕಾರ ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ, ಗುರುವಾರ ಖುದ್ದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಆಡಿರುವ ಮಾತೇ ಸಾಕ್ಷಿಯಾಗಿದೆ. ರೇಣುಕಾಸ್ವಾಮಿ ಮೈ ಮೇಲೆ ಆಗಿರೋ ಗಾಯಗಳು, ಅದೆಂಥಾ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿವೆ. ಕೈ ಮೇಲಿದ್ದ ಹಚ್ಚೆ ಕಿತ್ತು ಬರುವಂತೆ ಸುಟ್ಟಿದ್ದಾರೆ. ಎದೆ ಮೇಲೆ, ಕಾಲಿನ ಮೇಲೂ ಸುಟ್ಟ ಗಾಯಗಳಿವೆ. ಇನ್ನು ಬೆನ್ನ ತುಂಬಾ ರಕ್ತ ಹೆಪ್ಪುಗಟ್ಟುವಂತೆ, ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ. ತಲೆಗೂ ರಕ್ತ ಬರುವಂತೆ ಹೊಡೆಯಲಾಗಿದೆ. ಇಷ್ಟೇ ಅಲ್ಲ. ಮರ್ಮಾಂಗಕ್ಕೆ ಹೊಡೆದಿರುವ ಫೋಟೋ ಕೂಡ ಇದೆ. ಆದರೆ, ಅದನ್ನು ತೋರಿಸಲಾಗದು, ಅಷ್ಟೊಂದು ಭಯಾನಕವಾಗಿದೆ ಎಂದು ಸಿಎಂಗೆ ಮಾಹಿತಿ ನೀಡಲಾಗಿದೆ. ಅಕ್ಷರಶಃ ನರಕ ಹೇಗಿರುತ್ತದೆ ಎಂಬುದನ್ನು ರೇಣುಕಾಸ್ವಾಮಿಗೆ ಭೂಮಿಯ ಮೇಲೆಯೇ…

Read More