Author: Author AIN

ರಾಮನಗರ : ಶಿವರಾತ್ರಿ ಹತ್ತಿರ ಬರುತ್ತಿದ್ದಂತೆ ಐದು ದಿನಗಳ ಮುಂಚೆಯೇ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರನ ದರ್ಶನ ಪಡೆಯಲು ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುತ್ತಾರೆ. ಮೊದಲಿಗೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದ ಮಾರ್ಗವಾಗಿ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದರ ಮೂಲಕ ಕಾಲ್ನಡಿಗೆಯಲ್ಲಿ  ಪಾದಯಾತ್ರೆ ನಡೆಸುವುದು ಶತಮಾನ ವರ್ಷಗಳಿಂದಲೂ ನಡೆದು ಬಂದಿರುವ ಪದ್ಧತಿಯಾಗಿದೆ. ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲೆ ಮಾದಪ್ಪನ ದರ್ಶನಕ್ಕೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಕ್ಷಾಂತರ ಭಕ್ತಾದಿಗಳು ಹಲವು ವರ್ಷಗಳಿಂದ ಪಾದಯಾತ್ರೆ ಮಾಡುವ ರೂಢಿಯಲ್ಲಿದ್ದು,  ಕೆಲವು ಭಕ್ತಾದಿಗಳು ತಮ್ಮ ಮನೆಗಳಿಂದಲೇ ಮಲೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದರೆ 90 ಭಾಗ ಲಕ್ಷಾಂತರ ಭಕ್ತಾದಿಗಳು  ಕನಕಪುರ ತಾಲೂಕಿನ ಏಳಗಳ್ಳಿಗೆ ವಾಹನಗಳ ಮೂಲಕ ತೆರಳಿ ತಾಯಿ ಮುದ್ದಮನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಬೇಡಿ ಭೋಜನ ಸೇವಿಸುವುದರ ಮೂಲಕ  ಪಾದಯಾತ್ರೆ ಮುಂದುವರಿಸುವುದು ರೂಢಿಯಲ್ಲಿದೆ. https://ainlivenews.com/distribution-of-compensation-check-to-the-families-of-farmers-who-died-due-to-electric-wire/ ಇನ್ನೂ ಭಕ್ತಾದಿಗಳು ಪಾದಯಾತ್ರೆ ನಡೆಸುವ ಮಾರ್ಗದಲ್ಲಿ ಕನಕಪುರ…

Read More

ನಿರ್ದೇಶಕ ಗುರುಪ್ರಸಾದ್ ನಟಿಸಿ ನಿರ್ದೇಶನ ಮಾಡಿರುವ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ 2 ಇಂದು ಬಿಡುಗಡೆ ಆಗಬೇಕಿತ್ತು. ಆದ್ರೆ ಗುರುಪ್ರಸಾದ್‌ ಪತ್ನಿ ಸುಮಿತ್ರಾ ಕೋರ್ಟ್‌ ಮೆಟ್ಟಿಲೇರಿದ್ದು ಹೀಗಾಗಿ ಇಂದು ಬಿಡುಗಡೆ ಆಗಬೇಕಿದ್ದ ಸಿನಿಮಾಗೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೈಸೂರು ರಮೇಶ್ ಮತ್ತು ರವಿ ದೀಕ್ಷಿತ್ ನಿರ್ಮಾಣ ಮಾಡಿದ, ಗುರುಪ್ರಸಾದ್‌ ನಿರ್ದೇಶಿಸಿ, ನಟಿಸಿದ್ದ ಎದ್ದೇಳು ಮಂಜುನಾಥ 2 ಸಿನಿಮಾ ಇಂದು (ಫೆ.21) ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಬಿಡುಗಡೆಯಾಗದಂತೆ ಗುರುಪ್ರಸಾದ್‌ 2ನೇ ಪತ್ನಿ ಸುಮಿತ್ರಾ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ಸಿನಿಮಾದಲ್ಲಿ ಬಂದ ಲಾಭದಿಂದ ಶೇ.50 ರಷ್ಟು ಹಣವನ್ನು ಗುರುಪ್ರಸಾದ್ ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದೆವು. ಆದರೆ ಬಿಡುಗಡೆಗೂ ಮುನ್ನ 4 ಲಕ್ಷ ರೂ.ಗೆ ಸುಮಿತ್ರಾ ಬೇಡಿಕೆ ಇಟ್ಟಿದ್ದಾರೆ. ಸುಮಿತ್ರಾಗೆ ಮುಂಗಡ ಹಣ ನೀಡದ್ದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ನಿರ್ಮಾಪಕ ರಮೇಶ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಮಿತ್ರಾ, ಸಿನಿಮಾ ಪೂರ್ಣ ಮಾಡಬೇಕು ಎಂದು ಕಂಟೆಂಟ್ ತೆಗೆದುಕೊಂಡಿದ್ದಾರೆ. ನನ್ನ ಪತಿ ಮೃತದೇಹದ ಅಂತ್ಯಕ್ರಿಯೆಯೂ…

Read More

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ತನ್ನ ಪ್ರಯಾಣವನ್ನು ಗೆಲುವಿನೊಂದಿಗೆ ಆರಂಭಿಸಿದೆ. ದುಬೈನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಪಂದ್ಯದಲ್ಲಿಯೇ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದ ನಡೆದ ಈ ಪಂದ್ಯದಲ್ಲಿ 229 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಸುಲಭವಾಗಿ ಜಯ ಸಾಧಿಸಲು ಬಾಂಗ್ಲಾದೇಶ ಬಿಡಲಿಲ್ಲ. ಆದರೆ ಒಂದು ತುದಿಯಲ್ಲಿ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದ ಶುಭ್​ಮನ್ ಗಿಲ್ ಅದ್ಭುತ ಶತಕ ಬಾರಿಸಿದಲ್ಲದೆ, ತಂಡಕ್ಕೆ ಗೆಲುವು ತಂದುಕೊಟ್ಟ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಗಿಲ್ ಗಿಂತ ಮೊದಲು, ಸ್ಟಾರ್ ವೇಗಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಬಾಂಗ್ಲಾದೇಶದ ಭರವಸೆಯನ್ನು ಹುಸಿಗೊಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿಗೆ ಅಡಿಪಾಯ ಹಾಕಿದರು. ಈಗ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಗೆಲುವಿಗೆ ಕಾರಣವಾದ ಐದು ಪ್ರಮುಖ ಅಂಶಗಳನ್ನು ನೋಡೋಣ. ಬೌಲಿಂಗ್: ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಅದ್ಭುತವಾಗಿತ್ತು…

Read More

ಒಬ್ಬ ವ್ಯಕ್ತಿ ಹೇಗೆಲ್ಲಾ ತನ್ನ ದೇಶಪ್ರೇಮ ವ್ಯಕ್ತಪಡಿಸುತ್ತಾನೆ ಎಂಬುದನ್ನು ‘ಮಿಷನ್ ಹಿಂದೂಸ್ತಾನ್’ ಪುಸ್ತಕದಲ್ಲಿ ಲೇಖಕಿ ವೇದಶ್ರೀ ಅವರು  ವಿವರಿಸಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜು ತಿಳಿಸಿದರು. ಚಿತ್ರಕಲಾ ಪರಿಷತ್ ನಲ್ಲಿ ಸರಸ್ವತಿ ಸಂಪದ ಪ್ರಕಾಶನದಿಂದ ನಡೆದ ಮಿಷನ್ ಹಿಂದೂಸ್ತಾನ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕ ಓದುವುದು ಸುಲಭ, ಆದರೆ ಬರೆಯಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.  ಲವ್ ಸ್ಟೋರಿ ಜೊತೆ ಫಿಕ್ಷನ್ ಸೇರಿಸಿಕೊಂಡು ಬರೆಯುವುದು ಕಷ್ಟ ಅದನ್ನುವರು ಮಾಡಿದ್ದಾರೆ, ಅದರಲ್ಲಿ ದೇಶಪ್ರೇಮ ಸಾರುವ ಕೆಲಸ ಮಾಡಿದ್ದಾರೆ. ಮೊಘಲ್, ಫ್ರೆಂಚ್, ಕಾಶ್ಮೀರ್, ಪುರಾತನ ಕಾಲದ ವೈಭವ, ರಾಜ ಮಹಾರಾಜರ ಕಾಲದ ಸಂಸ್ಕೃತಿಯನ್ನು ಬಳಸಿದ್ದಾರೆ. ಈ ಪುಸ್ತಕದಲ್ಲಿ ಎಲ್ಲವೂ ಇದೆ. ದಯವಿಟ್ಟು ಓದಿ, ಅರ್ಥವಾಗುತ್ತದೆ ಸರಳವಾಗಿದೆ ಎಂದು ಹೇಳಿದರು. ಪ್ರಸ್ತುತ ಜನರಿಗೆ ಅರ್ಥವಾಗುವ ರೀತಿ ಸರಳವಾಗಿ ಇಂಗ್ಲಿಷ್ ಭಾಷೆಯಲ್ಲಿ ಈ ಪುಸ್ತಕವನ್ನು ಬರೆದಿದ್ದಾರೆ. ಅರ್ಥವಾಗುವ ರೀತಿ ಕಥೆಯನ್ನು ಕೊಂಡೊಯ್ದಿದ್ದಾರೆ. ವೇದ, ಪುರಾಣ, ಇತಿಹಾಸ, ರಾಜ ಮಹಾರಾಜರ ಕಾಲದ ವೈಭವವನ್ನು  ತೋರಿಸಿದ್ದಾರೆ. ಜನಸಾಮಾನ್ಯರಿಗೂ ಅರ್ಥವಾಗುವ…

Read More

ಕಾಳೇಶ್ವರಂ ಯೋಜನೆಯ ಭಾಗವಾಗಿ ಮೇಡಿಗಡ್ಡ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಇತರರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ಬುಧವಾರ ಜಯಶಂಕರ್ ಭೂಪಾಲಪಲ್ಲಿ ಪಟ್ಟಣದಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. https://ainlivenews.com/this-friday-task-will-make-all-your-money-problems-disappear/ ಹೌದು ರಾಜಲಿಂಗಮೂರ್ತಿ ಬುಧವಾರ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಭೂ ವಿವಾದದ ಹಿನ್ನೆಲೆ ಇಬ್ಬರು ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಡಿಗಡ್ಡ ಬ್ಯಾರೇಜ್‌ನ ಕೆಲವು ಕಂಬಗಳು ಮುಳುಗಿದ ನಂತರ ಕೆಸಿಆರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜಲಿಂಗಮೂರ್ತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೆಸಿಆರ್, ಅವರ ಸೋದರಳಿಯ ಮತ್ತು ಮಾಜಿ ಸಚಿವ ಟಿ.ಹರೀಶ್ ರಾವ್ ತಮ್ಮ ವಿರುದ್ಧದ ಅರ್ಜಿ ವಜಾಗೊಳಿಸಲು ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು.

Read More

ಬೀದರ್‌ : ವಿದ್ಯುತ್‌ ತಗುಲಿ ಸಾವನಪ್ಪಿದ ರೈತರ ಕುಟುಂಬಗಳಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಪರಿಹಾರ ಚೆಕ್ ವಿತರಿಸಿದ್ದಾರೆ. ಬೀದರ್‌ ದಕ್ಷಿಣ ಕ್ಷೇತ್ರದ ವಿವಿಧೆಡೆ ವಿದ್ಯುತ್ ತಗುಲಿ ಮೃತಪಟ್ಟ ರೈತರ ಎರಡು ಕುಟುಂಬದ ಸಂತ್ರಸ್ತರಿಗೆ ತಲಾ 2 ಲಕ್ಷ ಸೇರಿ ಒಟ್ಟು 4 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಇದು ಅಲ್ಲದೇ ವಿದ್ಯುತ್‌ ಅವಘಡದಲ್ಲಿ ಮೃತ ಪಟ್ಟ ಎರಡು ಎತ್ತುಗಳ ಮಾಲೀಕರಿಗೆ 1 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. https://ainlivenews.com/blockade-by-sescom-officials-demanding-adequate-power-supply/ ಬೀದರ್ ನಗರದ ಶಾಸಕರ ಕಚೇರಿಯಲ್ಲಿ ಜೆಸ್ಕಾಂ ವತಿಯಿಂದ ಶಾಸಕರು ಸಂತ್ರಸ್ತರಿಗೆ ಚೆಕ್ ವಿತರಣೆ  ಮಾಡಿದರು. ಬೀದರ್ ದಕ್ಷಿಣ ಕ್ಷೇತ್ರದ ಮರ್ಜಾಪುರ ಎಂ ಗ್ರಾಮದ ಪ್ರಕಾಶ್  ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರೆ, ಯದಲಾಪುರ ಗ್ರಾಮದ ಜೈ ಭೀಮ ತಮ್ಮ ಮನೆಯ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿದ್ದರು. ಬಗದಲ್ ತಾಂಡದ ರೈತ ಹರಿಲಾಲ ಅವರಿಗೆ ಸೇರಿದ…

Read More

ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೋಹಕ ಕಣ್ಣುಗಳ ಮೋನಾಲಿಸ ರಾತ್ರೋ ರಾತ್ರಿ ಸ್ಟಾರ್‌ ಆಗಿ ಮಿಂಚಿದ್ದಳು. ಸೋಷಿಯಲ್‌ ಮೀಡಿಯಾದಲ್ಲಿ ಆಕೆಯ ಫೊಟೋಗಳು ವೈರಲ್‌ ಆಗಿ ಬಾಲಿವುಡ್‌ ನಿಂದಲೂ ಆಫರ್‌ ಬಂದಿತ್ತು. ಜೊತೆಗೆ ಕೆಲ ಜಾಹೀರಾತುಗಳಲ್ಲಿ ಮಿಂಚಿದ್ದಳು. ಈಕೆ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾಳೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಆಕೆಯ ಮೊದಲ ಸಿನಿಮಾ ಚಿತ್ರೀಕರಣ ಪ್ರಾರಂಭ ಆಗುವುದಕ್ಕೆ ಮುಂಚೆಯೇ ನಿಂತು ಹೋಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್ ಅಲಿಯಾಸ್ ವಸೀಮ್ ರಿಜ್ವಿ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಸನೋಜ್ ಮಿಶ್ರಾ ಒಬ್ಬ ಸುಳ್ಳುಗಾರ, ಮೋಸಗಾರ, ಮಹಾನ್ ಕುಡುಕ, ಆತ ಸುಳ್ಳು ಹೇಳಿ ಹಲವರಿಗೆ ಮೋಸ ಮಾಡಿದ್ದಾನೆ. ಯುವತಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಈಗ ಕುಂಭಮೇಳ ಮೊನಲಿಸಾಗೂ ಮೋಸ ಮಾಡುತ್ತಿದ್ದಾನೆ…

Read More

ಚಾಮರಾಜನಗರ : ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ನಲ್ಲೂರು ಗ್ರಾಮದಲ್ಲಿ ರೈತರು ಸೆಸ್ಕಾಂ ಅಧಿಕಾರಿಗಳನ್ನು ದಿಗ್ಬಂಧನ ಹಾಕಿದ  ಘಟನೆ ಜರುಗಿದೆ. ಜಿಲ್ಲೆಯ ಹನೂರು ತಾಲೂಕಿನ ತಮಿಳುನಾಡು ಗಡಿಹಂಚಿನಲ್ಲಿರುವ  ನೆಲ್ಲೂರು ಗ್ರಾಮದಲ್ಲಿನ ವಿದ್ಯುತ್ ಪರಿವರ್ತಕಕ್ಕೆ ಅಳವಡಿಸಿದ್ದ ಬೂಸ್ಟರ್ ಪದೆಪದೇ  ಸುಟ್ಟುಹೋಗುತ್ತಿದ್ದು, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸಮಸ್ಯೆಯಾಗುತ್ತಿದೆ‌.  ಇದರಿಂದ ಜಮೀನುಗಳಲ್ಲಿ ಬೆಳೆದಿರುವ ಫಸಲನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ ಎಂದು ಸೆಸ್ಕಾಂ ಅಧಿಕಾರಿಗಳಿಗೆ  ರೈತರು ದೂರು ನೀಡಿದ್ದರು. ಅಧಿಕಾರಿಗಳು ಬೂಸ್ಟರ್ ಆಳವಡಿಸಲು ಹೋಗಿದ್ದಂತಹ ವೇಳೆಯೂ  ವಿದ್ಯುತ್ ಟ್ರಾನ್ಸ್ಫರ್ ನಲ್ಲಿ  ದಿಢೀರ್ ಬೆಂಕಿ ಬಿದ್ದು ಅದು ಕೂಡ  ಸುಟ್ಟು ಹೋಗಿತ್ತು. https://ainlivenews.com/the-miscreants-stabbed-the-farmer-and-stole-money-and-property-and-fled/ ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ರೈತರು ರಾಮಾಪುರ ಉಪ ಕೇಂದ್ರದ ಜೆಇ ನವೀನ್, ಪವರ್ ಮ್ಯಾನ್ ಗಳಾದ ರಾಜಶೇಖರ್ ನಾಯಕ್, ರಮೇಶ್ ಮಡಿವಾಳರ್, ಕುಮಾರ್ ರವರುಗಳನ್ನು ಗ್ರಾಮದಲ್ಲಿಯೆ ದಿಗ್ಬಂಧನದಲ್ಲಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ತದ ನಂತರ ಹಿರಿಯ ಅಧಿಕಾರಿಗಳ ಭರವಸೆ ಬಳಿಕ ದಿಗ್ಬಂಧನ ತೆರವು ಮಾಡಿದ್ದಾರೆ. https://www.youtube.com/watch?v=p33MFLBmtXY

Read More

ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಮುಕ್ತಯವಾಗಲು ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ಜನಸಾಮಾನ್ಯರು, ಗಣ್ಯರು, ಸೇರಿದಂತೆ ಕೋಟ್ಯಾಂತರ ಜನ ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರಾ ಗಂಗಾ ಸ್ನಾನ ಮಾಡಿದ್ದಾರೆ. ಇದೀಗ ನಟ ಹಾಗೂ ರಾಜಕಾರಣಿ ಜಗ್ಗೇಶ್‌ ಕೂಡ ಭಾಗಿಯಾಗಿದ್ದು ತಮ್ಮ ಅನುಭವದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಕಳೆದ ಬಾರಿ 1880ರಲ್ಲಿ ನಡೆದದ್ದು ಈ ಮಹಾಕುಂಭಮೇಳ. ನನ್ನ ತಾತನ ಜನನ ಆದದ್ದು 1896ರಲ್ಲಿ. ಅಂದರೆ ನಮ್ಮ ತಾತ ಹುಟ್ಟುವ 16ವರ್ಷದ ಹಿಂದೆ. ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೇ ತಲೆಮಾರಿಗೆ ಬಂದಿದೆ. ಮುಂದಿನ ಬಾರಿ ಈ ಮಹಾಕುಂಭ ಬರೋದು 2170 ಇಸವಿಯಲ್ಲಿ. ಅಂದರೆ ನಮ್ಮ ಮುಂದಿನ 5 ತಲೆಮಾರಿನ ಬದುಕು ಇಲ್ಲವಾಗಿರುತ್ತದೆ.’ ‘ನಾನು ನನ್ನದು ನನ್ನಹಣ ನನ್ನ ಮನೆ ನನ್ನ ಹೆಂಡತಿ ನನ್ನ ಮಕ್ಕಳು ನನ್ನ ಪರಿವಾರ ಎನ್ನುವ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ. ಕಡೆಯಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಅಟ್ಟ ಸೇರುತ್ತೆ,…

Read More

ಯುಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಈ ಸಂಬಂಧ ಚಾಹಲ್ ಮತ್ತು ಧನಶ್ರೀ ಫೆಬ್ರವರಿ 21 ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮುಂದೆ ಹಾಜರಾದರು. ನ್ಯಾಯಾಧೀಶರು ಮೊದಲು ದಂಪತಿಗೆ 45 ನಿಮಿಷಗಳ ಕೌನ್ಸೆಲಿಂಗ್ ನೀಡಿ, ಬೇರ್ಪಡುವಿಕೆಗೆ ಕಾರಣಗಳನ್ನು ತಿಳಿದುಕೊಂಡರು. ನಂತರ, ‘ನೀವು ಇನ್ನೂ ಬೇರ್ಪಡಲು ಬಯಸುತ್ತೀರಾ?’ ಕೇಳಿದಾಗ, ಚಾಹಲ್ ಮತ್ತು ಧನಶ್ರೀ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು ಬಯಸುತ್ತಿದ್ದೇವೆ ಎಂದು ಬಹಿರಂಗಪಡಿಸಿದರು. ಇದರೊಂದಿಗೆ ನ್ಯಾಯಾಧೀಶರು ಚಹಾಲ್-ಧನಶ್ರೀ ಅವರ ವಿಚ್ಛೇದನವನ್ನು ಅನುಮೋದಿಸಿದರು. ಏತನ್ಮಧ್ಯೆ, ಧನ ಶ್ರೀ ವರ್ಮಾ ವಿಚ್ಛೇದನವನ್ನು ದೃಢೀಕರಿಸುವ ರಹಸ್ಯ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. https://ainlivenews.com/this-friday-task-will-make-all-your-money-problems-disappear/ “ನಾವು ಎದುರಿಸುವ ಕಷ್ಟ ಮತ್ತು ಪರೀಕ್ಷೆಗಳನ್ನು ದೇವರು ಕಾಲಾನಂತರದಲ್ಲಿ ಆಶೀರ್ವಾದಗಳಾಗಿ ಪರಿವರ್ತಿಸಬಲ್ಲನೆಂದು ನಾನು ತಿಳಿದುಕೊಂಡಿದ್ದೇನೆ.” ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡದಲ್ಲಿದ್ದರೆ ಅಥವಾ ಚಿಂತೆಗೊಳಗಾಗಿದ್ದರೆ, ನಿಮಗೆ ಇನ್ನೊಂದು ಅವಕಾಶವಿದೆ ಎಂಬುದನ್ನು ಮರೆಯಬೇಡಿ. ನಿಮ್ಮ ಎಲ್ಲಾ ದುಃಖಗಳನ್ನು ಮರೆತು ಪೂರ್ಣ ಹೃದಯದಿಂದ ದೇವರನ್ನು ಪ್ರಾರ್ಥಿಸಿ. “ದೇವರ ಮೇಲಿನ ನಿಮ್ಮ…

Read More