Author: Author AIN

ರಾತ್ರೋ ರಾತ್ರಿ ಯಾರು ಊಹಿಸಿರ ಮಟ್ಟಿಗೆ ಬೆಳೆದ ಮಲಾರ್ ಬ್ಯೂಟಿ ಸಾಯಿ ಪಲ್ಲವಿ ಸದ್ಯ ಸೌತ್​​ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಏಕಾಕಾಲಕ್ಕೆ ನಾಲ್ಕೈದು ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟಿ ಇದೀಗ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ಸಾಯಿ ಪಲ್ಲವಿ ಯಾವುದೇ ಬಿಗ್ ಬಜೆಟ್ ಸಿನಿಮಾದಲ್ಲಿ ಬಣ್ಣ ಹಚ್ಚಿಲ್ಲ, ಆಕೆ ನಟಿಸಿರೋ ಸಿನಿಮಾಗಳು ನೂರಾರು ಕೋಟಿ ಕ್ಲಬ್ ಸೇರಿಲ್ಲ. ಆದರೆ ಆಕೆಗಿರೋ ಕ್ರೇಜ್ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಗ್ಲಾಮರ್ ಇದ್ದರೆ ಮಾತ್ರ ಇಂಡಸ್ಟ್ರಿಯಲ್ಲಿ ನಾಯಕಿಯಾಗಲು ಸಾಧ್ಯ ಎನ್ನುವ ಕಲ್ಪನೆಯನ್ನು ಹುಸಿಯಾಗಿಸಿದ ನಟಿ ಈಕೆ. ನ್ಯಾಚುರಲ್ ಸೌಂದರ್ಯದಿಂದಲೂ ಇನ್ನಿಲ್ಲದ ಜನಪ್ರಿಯತೆ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇಂದಿನ ಪೀಳಿಗೆಯಲ್ಲಿ ಗ್ಲಾಮರ್ ಮೀರಿದ ಸಿನಿಮಾಗಳನ್ನು ಮಾಡಿ ಸ್ಟಾರ್ ಹೀರೋಯಿನ್ ಗೂ ಇಲ್ಲದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ಸಾಯಿ ಪಲ್ಲವಿ. ಪ್ರೇಮಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಬ್ಯೂಟಿ ಸದ್ಯ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದಾರೆ. ಬಾಲಿವುಡ್ ಪ್ರಾಜೆಕ್ಟ್ ಮೂಲಕ ನಟಿ ಸಾಯಿ ಪಲ್ಲವಿ ಸಿಕ್ಕಾಪಟ್ಟೆ ಫೇಮಸ್…

Read More

ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದು 45 ಮಂದಿ ಗಾಯಗೊಂಡಿದ್ದಾರೆ. ಗಾಝಾದಲ್ಲಿರುವ ತನ್ನ ಕಚೇರಿಗೆ ತೀವ್ರ ಹಾನಿಯಾಗಿದೆ ಎಂದು ರೆಡ್‍ಕ್ರಾಸ್ ಅಂತರಾಷ್ಟ್ರೀಯ ಸಮಿತಿ ತಿಳಿಸಿದೆ. ಗಾಝಾದಲ್ಲಿ ಇಸ್ರೇಲ್ ಭಾರೀ ಸಾಮಥ್ರ್ಯದ ಸ್ಫೋಟಕಗಳೊಂದಿಗೆ ನಡೆಸಿದ ದಾಳಿಯಲ್ಲಿ ವ್ಯಾಪಕ ಪ್ರಾಣಹಾನಿ ಸಂಭವಿಸಿದ್ದು ರೆಡ್‍ಕ್ರಾಸ್ ಕ್ಷೇತ್ರ ಆಸ್ಪತ್ರೆಗೆ 22 ಮೃತದೇಹ ಹಾಗೂ 45 ಗಾಯಾಳುಗಳನ್ನು ಸಾಗಿಸಲಾಗಿದೆ. ಮಾನವೀಯ ನೆರವಿನ ಸಂಸ್ಥೆಗಳ ಬಳಿಯಲ್ಲಿ ಹೀಗೆ ಅಪಾಯಕಾರಿ ರೀತಿಯಲ್ಲಿ ವೈಮಾನಿಕ ದಾಳಿ ನಡೆಸುವುದು ನಾಗರಿಕರು ಮತ್ತು ಮಾನವೀಯ ನೆರವು ಕಾರ್ಯಕರ್ತರ ಬದುಕನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ರೆಡ್‍ಕ್ರಾಸ್ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿರುವುದಾಗಿ ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿನ ಗ್ಯಾರೇಜ್ ಒಂದರ ಮೇಲಿನ ಬಾಂಬ್‍ದಾಳಿಯಲ್ಲಿ ಐವರು ಪುರಸಭೆ ಸಿಬಂದಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಉತ್ತರ ಇಸ್ರೇಲ್‍ನಲ್ಲಿ ಇಸ್ರೇಲ್‍ನ ಸೇನಾ ನೆಲೆಗಳನ್ನು ಗುರಿಯಾಗಿಸಿ ರಾಕೆಟ್‍ಗಳ ಮಳೆಗರೆದಿರುವುದಾಗಿ ಲೆಬನಾನ್ ಮೂಲದ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ…

Read More

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚೀನಾದಾದ್ಯಂತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ವಿವಿಧ ಭಂಗಿಗಳನ್ನು ನೂರಾರು ಯೋಗ ಉತ್ಸಾಹಿಗಳು ಪ್ರದರ್ಶಿಸಿದರು. ವಿವಿಧ ನಗರಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಯುವ ಜನರ ಸಂಖ್ಯೆಯೇ ಹೆಚ್ಚಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಶನಿವಾರ ಆಯೋಜಿಸಿದ್ದ ಎರಡು ಗಂಟೆಗಳ ಕಾರ್ಯಕ್ರಮದಲ್ಲಿ, ಒಂದು ಸಾವಿರಕ್ಕೂ ಹೆಚ್ಚು ಯೋಗ ಉತ್ಸಾಹಿಗಳು ಭಾಗವಹಿಸಿದ್ದರು. ವಾರಾಂತ್ಯದ ರಜೆಗೆ ಹೊಂದಾಣಿಕೆಯಾಗುವಂತೆ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಒಂದು ದಿನದ ನಂತರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಹಳೆ ರಾಯಭಾರ ಕಚೇರಿ ಆವರಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಚೀನಾದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Read More

ಬಿಸ್ಕತ್ತುಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಇದ್ದೇ ಇರುತ್ತೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಒಂದಲ್ಲ ಒಂದು ಬಿಸ್ಕತ್ತುಗಳನ್ನು ಇಷ್ಟಪಡ್ತಾರೆ. ಅಂದ ಹಾಗೆ ನಾವು, ನೀವು ಹೆಚ್ಚು ಅಂದ್ರೆ 100, 200, 300 ರೂಪಾಯಿಗಳ ಬಿಸ್ಕೇಟ್ ತಿಂದಿರ್ತಿವೆ. ಇನ್ನೂ ಕೆಲವರು ಅದಕ್ಕಿಂತ ಹೆಚ್ಚಿನ ಬೆಲೆಯ ಬಿಸ್ಕತ್ತುಗಳನ್ನು ತಿಂದಿರ್ತಾರೆ. ಆದ್ರೆ ಈ ಬಿಸ್ಕತ್ತಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ. ಯೆಸ್. ಇದು 15,000 ಪೌಂಡ್ ಬೆಲೆಯ ಬಿಸ್ಕತ್ತು. ಅಂದರೆ ನಮ್ಮ ನಗದು ರೂಪದಲ್ಲಿ 15 ಲಕ್ಷ. ಇನ್ನು ಈ ಹಣಕ್ಕೆ ಬಿಸ್ಕತ್ತುಗಳ ಸಂಪೂರ್ಣ ಪ್ಯಾಕೆಟ್ ಸಿಗೋದಿಲ್ಲ. ಕೇವಲ 10 ಸೆಂ.ಮೀನ ಈ ಸರಳ ಬಿಸ್ಕತ್ತು ಸಿಗುತ್ತೆ. ಅಂದ್ಹಾಗೆ, ಈ ಬಿಸ್ಕತ್ತು ತುಂಬಾ ದುಬಾರಿಯಾಗಲು ಕಾರಣವೆಂದ್ರೆ, ಇದು ಟೈಟಾನಿಕ್ ಹಡಗಿನೊಂದಿಗೆ ಸಂಬಂಧವನ್ನ ಹೊಂದಿದೆ. ಅಂದ್ಹಾಗೆ, ಈ ಬಿಸ್ಕತ್ತುಗಳ ಪ್ಯಾಕೆಟ್’ನ್ನ ಟೈಟಾನಿಕ್ ಲೈಫ್ ಬೋಟ್’ನಲ್ಲಿ ಇರಿಸಲಾದ ಸರ್ವವೈವಲ್ ಕಿಟ್’ನಲ್ಲಿದೆ. ಟೈಟಾನಿಕ್ ಮುಳುಗಿದ ನಂತರ, ಅದರ ಸಂಬಂಧಿತ ಸರಕುಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಯಿತು. ಅನೇಕ ಜನರು…

Read More

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಇಂದಿಗೂ ಅದೆಷ್ಟೋ ಮಂದಿಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನರಾಗಿ 3 ವರ್ಷ ಕಳೆದಿದ್ದರು ಇಂದಿಗೂ ಅಪ್ಪು ನೆನಪಲ್ಲಿ ಕೋಟ್ಯಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಹಠತ್ ನಿಧನ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಅಷ್ಟೊಂದು ಫಿಟ್ ಆಗಿದ್ದ ಪುನೀತ್ ರಾಜ್‌ಕುಮಾರ್ ಅಗಲುವುದಕ್ಕೆ ಹೇಗೆ ಸಾಧ್ಯ ಅನ್ನುವ ಗೊಂದಲದಲ್ಲಿ ಹಲವರಲ್ಲಿ ಇಂದಿಗೂ ಇದೆ. ಆಧ್ಯಾತ್ಮೀಕ ಗುರುಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಆತ್ಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಸಂಭಾಷಣೆ ನಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಆರ್‌ ಜೆ ರಾಜೇಶ್ ನಡೆಸಿಕೊಡುವ ಸಂದರ್ಶನದಲ್ಲಿ ಭಾಗಿಯಾಗಿದ್ದ ಡಾ. ಶ್ರೀ ರಾಮಚಂದ್ರ ಗುರೂಜಿ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಪ್ಪು ಆತ್ಮಕ್ಕೆ ಕೇಳಿದ ಮೂರು ಪ್ರಶ್ನೆಗಳ ಬಗ್ಗೆ ರಿವೀಲ್ ಮಾಡಿದ್ದು, ಅಪ್ಪು ಕಡೆಯಿಂದ ಸಿಕ್ಕ…

Read More

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಕೇಳಿ ಬರ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ನಿರ್ದೇಶನ ಹಾಗೂ ರಿಯಾಲಿಟಿ ಶೋ ತೀರ್ಪುಗಾರರಾಗಿ ಬ್ಯುಸಿಯಾಗಿರೋ ತರುಣ್ ಸುಧೀರ್ ಕೊನೆಗೂ ಮದುವೆಯಾಗೋ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಗಾಂಧಿನಗರದಲ್ಲಿ ತರುಣ್ ಮದುವೆ ಸುದ್ದಿ ಜೋರಾಗಿಯೇ ಕೇಳಿ ಬರ್ತಿದೆ. ಕನ್ನಡ ಖ್ಯಾತ ನಟಿ ಜೊತೆ ತರುಣ್ ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ತರುಣ್ ಸುಧೀರ್ ವಯಸ್ಸು 40 ಗಡಿಯಲ್ಲಿದೆ. ತಾಯಿ ಮಾಲತಿ ಕೂಡ ಮಗನಿಗೆ ಮದುವೆ ಮಾಡಬೇಕು ಎನ್ನುತ್ತಿರುತ್ತಾರೆ. ಆದರೆ ಸಿನಿಮಾ ಕೆಲಸಗಳಲ್ಲಿ ಮುಳುಗಿ ಹೋಗಿರುವ ತರುಣ್ ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೀನಿ ಎಂದು ತಮಾಷೆಯಾಗಿ ಹೇಳುತ್ತಾ ಬರುತ್ತಿದ್ದರು. ಆದರೆ ಇದೀಗ ಮದುವೆ ಫಿಕ್ಸ್ ಆಗಿದ್ದು, ಇನ್ನೆರಡು ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ತೆರೆಮರೆಯಲ್ಲಿ ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಅವರ ಆಪ್ತರಿಗೂ ಕೂಡ ಈ…

Read More

ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ನಟ ದರ್ಶನ್​, ಪವಿತ್ರ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಘಟನೆಯ ಕುರಿತು ನಟಿ ರಮ್ಯಾ, ಕಿಚ್ಚ ಸುದೀಪ್​​, ನಟ ಉಪೇಂದ್ರ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್​ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ತಮ್ಮ ಆಪ್ತ ಸ್ನೇಹಿತ ದರ್ಶನ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಜಮೀರ್ ಅಹಮದ್‌ ಖಾನ್ ಅವರು, ದರ್ಶನ್​ ಪ್ರಕರಣದಲ್ಲಿ ಯಾರೂ ಒತ್ತಡ ಮಾಡಲು ಹೋಗಿಲ್ಲ. ಮಾಧ್ಯಮದಲ್ಲಿ ಬಂದಿರೋದು ನಾನು ನೋಡಿರುವೆ. ದರ್ಶನ್​ ಹಾಗೂ ನಾನು ಸ್ನೇಹಿತರು. ತಪ್ಪು ಮಾಡಿದಾಗ ಯಾರು ಅವರ ಪರ ನಿಂತು ಕೊಳ್ತಾರೆ ಹೇಳಿ. ತಪ್ಪು ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅಷ್ಟೇ. ದರ್ಶನ್​ ಇದ್ದರು ಅಷ್ಟೇ ಯಾರಿದ್ದರೂ ಅಷ್ಟೇ. ಕಾನೂನಿನ ಚೌಕಟ್ಟಿನಲ್ಲಿ ಏನಾಗಬೇಕು ಅದು ಆಗತ್ತೆ. ಇನ್ನೂ ದರ್ಶನ ಪ್ರಕರಣದ ವಿಚಾರವಾಗಿ ಬೇರೆಯವರು ಏನು ಹೇಳುತ್ತಾರೋ ಗೊತ್ತಿಲ್ಲ. ತನಿಖೆ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಜೈಲು ಸೇರಿದ್ದಾರೆ. ದರ್ಶನ್‌ಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪವಿತ್ರಾ ಗೌಡ ಸೇರಿದಂತೆ ಹಲವು ಮೂರು ದಿನಗಳ ಹಿಂದೆ ಜೈಲು ಸೇರಿದ್ದಾರೆ. ನಿನ್ನೆ ದರ್ಶನ್ ಸೇರಿ ಉಳಿದ ನಾಲ್ವರು ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಿಂದ ದರ್ಶನ್‌ ಅವರನ್ನು ಬಿಗಿ ಪೊಲೀಸ್ ಭಧ್ರತೆಯಲ್ಲಿ ಬೆಂಗಳೂರಿನ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಇದೇ ವೇಳೆ ದರ್ಶನ್‌ ಪರ ವಕೀಲರು ಹಾಗೂ ಎಸ್‌ಪಿಪಿ ಪರ ವಾದ ಪ್ರತಿ ವಾದಗಳು ನಡೆಯಿತು. ಈ ವೇಳೆ ಎಸ್‌ಪಿಪಿ ಕೋರ್ಟ್‌ ಒಂದು ಮನವಿಯನ್ನು ಮಾಡುತ್ತಾರೆ. ಬಂಧಿತರನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್‌ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ವಿಚಾರಣೆಯನ್ನು ಕೋರ್ಟ್‌ ಸೋಮವಾರಕ್ಕೆ ಮುಂದೂಡಿದೆ. ನಟ ದರ್ಶನ್‌ ಹಾಗೂ ಉಳಿದ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಆದರೆ ಇದಕ್ಕೆ ಎಸ್‌ಪಿಪಿ ಬೇರೆ ಜೈಲಿಗೆ…

Read More

ಬಾಲಿವುಡ್‌ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ನಟ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಸೋನಾಕ್ಷಿ ಹಾಗೂ ಜಹೀರ್ ಅವರ ಮೆಹೆಂದಿ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಧ್ಯೆ ಮದುವೆಯ ಬಳಿಕ ಸೋನಾಕ್ಷಿ ಇಸ್ಲಾಂ ಧರ್ಮಾಕ್ಕೆ ಮತಾಂತರವಾಗುತ್ತಾರೆ ಎಂಬ ಪ್ರಶ್ನೆಗೆ ಜಹೀರ್ ತಂದೆ ಉತ್ತರಿಸಿದ್ದಾರೆ. ಇನ್ನು, ನಟಿ ಸೋನಾಕ್ಷಿ ಸಿನ್ಹಾ ಅವರು ಮದುವೆಯ ಬಳಿಕ ಜಹೀರ್‌ ಇಕ್ಬಾಲ್‌ ಅವರ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡಿತ್ತು. ಇದೀಗ ಈ ಬಗ್ಗೆ ಜಹೀರ್ ಅವರ ತಂದೆ, ಉದ್ಯಮಿ ಇಟ್ಬಾಲ್ ರತ್ನಾಸಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಜಹೀರ್ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ. ಈ ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ, ಇದೊಂದು ನಾಗರಿಕ ವಿವಾಹವಾಗಿರುತ್ತದೆ ಎಂದಿದ್ದಾರೆ. ನಟಿ ಸೋನಾಕ್ಷಿ ಮತ್ತು ಇಕ್ಬಾಲ್‌ 2022ರಲ್ಲಿ ಬಿಡುಗಡೆಯಾದ ‘ಡಬಲ್‌ ಎಕ್ಸ್‌ಎಲ್‌’ ಚಿತ್ರದಲ್ಲಿ ನಟಿಸಿದ್ದರು. ಅಂದಿನಿಂದ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಲ್ಲಿ ನಟ ದರ್ಶನ್​​ ಸೇರಿ ಇಡೀ ಗ್ಯಾಂಗ್​​​ ಜೈಲು ಸೇರಿದೆ. ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ಬಳಿಕ ನಿನ್ನೆ ಕೋರ್ಟ್​ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. 13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​ ಮೌನಕ್ಕೆ ಶರಣಾಗಿದ್ದಾರೆ. ಪವಿತ್ರಾ ಗೌಡ ಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಕಿಡ್ನ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿತ್ತು. ಇದೀಗ ಘಟನೆಯ ಕುರಿತು ಎಲ್ಲಾ 17 ಆರೋಪಿಗಳನ್ನು ಬಂಧಿಸಿರೋ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ದರ್ಶನ್ ಕೋರ್ಟ್ ಗೆ ಹಾಜರಾಗುತ್ತಾರೆ ಎಂದು ಸುದ್ದಿ ಕೇಳಿದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕೋರ್ಟ್ ಮುಂದೆ ನೆರೆದಿದ್ದರು. ಇವರನ್ನು ಕಂಟ್ರೋಲ್ ಮಾಡೋದೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಈ ವೇಳೆ ದರ್ಶನ್ ಪೊಲೀಸ್ ವ್ಯಾನ್‌ನಿಂದಲೇ ಅಭಿಮಾನಿಗಳತ್ತ ಕೈ ಬೀಸಿ ತೆರಳಿದ ದರ್ಶನ್ ಮುಖದಲ್ಲಿ ಮೇಲ್ನೋಟಕ್ಕೆ ನಗು ಕಾಣ್ತಿತ್ತು. ಆದರೆ ಮನಸ್ಸಿನ…

Read More