Author: Author AIN

ಬಿಸಿಲಿನ ತಾಪ ಮತ್ತು ಅನಧಿಕೃತ ಪ್ರವಾಸಗಳಿಂದಾಗಿ ಹಜ್ ಯಾತ್ರೆಯ ವೇಳೆ 1,301 ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಭಾನುವಾರ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸೌದಿ ಸರ್ಕಾರ, “ಆರೋಗ್ಯ ವ್ಯವಸ್ಥೆಯು ಈ ವರ್ಷ ಶಾಖದ ಒತ್ತಡದ ಹಲವಾರು ಪ್ರಕರಣಗಳನ್ನು ಪರಿಹರಿಸಿದೆ, ಕೆಲವು ವ್ಯಕ್ತಿಗಳು ಇನ್ನೂ ಆರೈಕೆಯಲ್ಲಿದ್ದಾರೆ. ದುರದೃಷ್ಟವಶಾತ್, ಸಾವಿನ ಸಂಖ್ಯೆ 1,301 ಕ್ಕೆ ತಲುಪಿದೆ. ಮೃತಪಟ್ಟವರಲ್ಲಿ ಶೇಕಡಾ 83 ರಷ್ಟು ಜನರು “ಹಜ್ ಮಾಡಲು ಅನಧಿಕೃತರಾಗಿದ್ದಾರೆ” ಮತ್ತು “ಸಾಕಷ್ಟು ಆಶ್ರಯ ಅಥವಾ ಸೌಕರ್ಯವಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ಬಹಳ ದೂರ ನಡೆದಿದ್ದಾರೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸತ್ತವರಲ್ಲಿ “ಹಲವಾರು ವೃದ್ಧರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳು” ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸತ್ತವರ ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ಸಿಎನ್‌ಎನ್ ವರದಿ ತಿಳಿಸಿದೆ. ಘಟನೆ ಕುರಿತು ಹೇಳಿಕೆ ನೀಡಿರುವ ಸಚಿವರು, 95 ಯಾತ್ರಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಕೆಲವರನ್ನು ರಾಜಧಾನಿ ರಿಯಾದ್‌ನಲ್ಲಿ ಚಿಕಿತ್ಸೆಗಾಗಿ ವಿಮಾನದಲ್ಲಿ ಕಳುಹಿಸಲಾಗಿದೆ ಎಂದು…

Read More

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.  ವಿಚಾರಣಾಧೀನ ಖೈದಿಯಾಗಿರುವ ದರ್ಶನ್​ ಗೆ 6106 ನಂಬರ್​ ನೀಡಲಾಗಿದೆ. ಆದರೀಗ ಇದೇ ನಂಬರ್​ ಅನ್ನು ದರ್ಶನ್​ ಅಭಿಮಾನಿಯೊಬ್ಬ ಲಕ್ಕೀ ನಂಬರ್​ ಎಂದು ಹೇಳಿಕೊಂಡಿದ್ದಾನೆ. ಮಾತ್ರವಲ್ಲದೆ ಅದೇ ನಂಬರ್​ ನಮ್ಮ ಗಾಡಿ ಮೇಲೆ ಇರುತ್ತೆ ಎಂದಿದ್ದಾನೆ. ದರ್ಶನ್ ರ ಅಭಿಮಾನಿಯಾಗಿರೋ ಮೈಸೂರು ಮೂಲದ ಧನುಷ್ ಎಂಬಾತ 6106 ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್. ಈ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದು ಆರ್ ಟಿಓದಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾನೆ. ಮಾತ್ರವಲ್ಲದೆ ಈ ಕುರಿತಾಗಿ ವಿಡಿಯೋ ಮಾಡುವ ಮೂಲಕ ಹೇಳಿಕೊಂಡಿದ್ದಾನೆ. ವಿಡಿಯೋದಲ್ಲಿ ದರ್ಶನ್ ಜೈಲುವಾಸ ನೆನೆದು ಅಭಿಮಾನಿ ಧನುಷ್ ಗಳಗಳನೆ ಕಟ್ಟೀರಿಟ್ಟಿದ್ದಾನೆ. ಶೀಘ್ರ ಬಿಡುಗಡೆಗೆ ಹರಕೆ ಹೊತ್ತಿದ್ದಾನೆ. ನಾಡ ಅಧಿದೇವತೆ ಚಾಮುಂಡಿಯಲ್ಲಿ…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿರುವ ದರ್ಶನ್ ಗೆ ಅಲ್ಲಿನ ಊಟ ಸೇರದೆ, ರಾತ್ರಿ ಎಲ್ಲ ನಿದ್ದೇ ಬಾರದೆ ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸದಾ ಚಿಕನ್, ಮಟನ್, ಫ್ರೂಟ್ಸ್, ಜ್ಯೂಸ್ ಸೇವಿಸುತ್ತಿದ್ದ ದರ್ಶನ್‍ಗೆ ಜೈಲೂಟ ಹಿಡಿಸುತ್ತಿಲ್ಲ. ಜೈಲಿನಲ್ಲಿ ಸರಿಯಾಗಿ ಉಪ್ಪು ಖಾರ ಇಲ್ಲದ ಸಾಂಬಾರ್, ಮುದ್ದೆ, ಅನ್ನ ತಿನ್ನಲು ಯಜಮಾನ ಕಷ್ಟಪಡುತ್ತಿದ್ದಾರೆ. ನಿನ್ನೆ ರಾತ್ರಿ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಸಿಬ್ಬಂದಿ ನೀಡಿದ್ದಾರೆ. ಹೀಗಾಗಿ ಜೈಲೂಟ ತಿನ್ನಲಾಗದೆ ದರ್ಶನ್ ಹಿಂಸೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಹೊತ್ತು ಎಚ್ಚರವಾಗಿಯೇ ಇದ್ದ ದರ್ಶನ್, ತಡರಾತ್ರಿ ನಿದ್ದೆಗೆ ಜಾರದ್ದಾರೆ. ಬಳಿಕ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದು, ಕಾಫಿ ಕುಡಿಯದೆ ಬಿಸಿನೀರು ಕೇಳಿ ಪಡೆದಿದ್ದಾರೆ. ಸಹಖೈದಿಗಳು ಮಾತನಾಡಲು ಯತ್ನಿಸಿದ್ರೂ ದರ್ಶನ್ ಅವರ ಜೊತೆಗೂ ಅಷ್ಟಾಗಿ ಬೆರೆಯಲಿಲ್ಲ. ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಕೊಠಡಿಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಸದ್ಯ…

Read More

‘ಸೀತಾರಾಮಂ’ ಸಿನಿಮಾದ ಮೂಲಕ ನಟಿ ಮೃಣಾಲ್ ಠಾಕೂರ್ ಲೈಫ್ ಸಂಪೂರ್ಣವಾಗಿ ಬದಲಾಯ್ತು. ಈ ಚಿತ್ರದ ಬಳಿಕ ಮೃಣಾಲ್ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಆ ಬಳಿಕ ಮೃಣಾಲ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಸೀತಾರಾಂ ಚಿತ್ರದ ಜೋಡಿ ಸ್ಕ್ರೀನ್ ಮೇಲೆ ಒಂದಾಗಲು ರೆಡಿಯಾಗಿದೆ. 2022ರಲ್ಲಿ ಸೀತಾರಾಮಂ ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಜೋಡಿ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದರು. ಸೀತಾ ಮತ್ತು ರಾಮ್ ಲವ್ ಸ್ಟೋರಿ ನೋಡಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬಂದಿತ್ತು. ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗಬೇಕು ಎಂದು ಸಿನಿ ರಸಿಕರು ಆಸೆಪಟ್ಟಿದ್ದರು. ಇದೀಗ ಅದೇ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮೃಣಾಲ್ ನಟಿಸುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು. ಆದರೆ ಈಗ ದುಲ್ಕರ್ ಸಲ್ಮಾನ್ ಕೂಡ ನಟಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಅತಿಥಿ…

Read More

ಮದ್ಯದ ದೊರೆ, ಆರ್​ಸಿಬಿ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್‌ ಮಲ್ಯ ಅವರ ಪುತ್ರ ಸಿದ್ಧಾರ್ಥ್‌ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿದ್ಧಾರ್ಥ್‌ ಮಲ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾಸ್ಮಿನ್ ಜತೆಗಿರುವ ಫೋಟೊ ಪೋಸ್ಟ್‌ ಶೇರ್ ಮಾಡಿ ಮದುವೆಯ ವಾರ ಆರಂಭವಾಗಿದೆ ಎಂದಿದ್ದರು. ಇದೀಗ ಈ ಜೋಡಿ ಲಂಡನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. 2023ರ ಆರಂಭದಲ್ಲಿ ಸಿದ್ಧಾರ್ಥ್ ಕ್ಯಾಲಿಫೋರ್ನಿಯಾದಲ್ಲಿನ ಹ್ಯಾಲೋವಿನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಹಾಗೂ ಜಾಸ್ಮಿನ್ ಪರಿಚಯವಾದರು. ಈ ವೇಳೆ ಜಾಸ್ಮಿನ್ ಪ್ರೀತಿಯನ್ನು ಒಪ್ಪಿಕೊಂಡಿದ್ದು ಬಳಿಕ ಕಳೆದ ವರ್ಷವೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಜಾಸ್ಮಿನ್ ಅವರು ರಿಂಗ್​ ತೊಟ್ಟ ಫೋಟೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾದ ವಿಚಾರವನ್ನು ಖಚಿತಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್‌ ಮಲ್ಯ ಡೇಟಿಂಗ್‌ ನಡೆಸುತ್ತಿದ್ದರು. ಇವರು ಐಪಿಎಲ್‌ ಪಂದ್ಯಗಳಿಗೆ ಜತೆಯಾಗಿ ತೆರಳುತ್ತಿದ್ದರು. ಒಂದೊಮ್ಮೆ ಇಬ್ಬರು ಪಂದ್ಯ ವೀಕ್ಷಿಸುತ್ತಿರುವಾಗಲೇ ಪರಸ್ಪರ…

Read More

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕಳೆದ ವರ್ಷ ಫೆಬ್ರವರಿಯಲ್ಲಿ ನಿರ್ಮಾಪಕ, ನಟ ಜಾಕಿ ಭಗ್ನಾನಿ ಅವರನ್ನು ಮದುವೆ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕ ಎನಿಸಿಕೊಂಡಿರುವ ಜಾಕಿ ಭಗ್ನಾನಿ ಅವರನ್ನು ಕೈ ಹಿಡಿದ ಬಳಿಕ ರಕುಲ್​ ಪ್ರೀತ್​ ಸಿಂಗ್​ ಜೀವನ ಸೆಟ್ಲ್​ ಆಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಸಾಲದ ಸುಳಿಗೆ ಜಾಕಿ ಭಗ್ನಾನಿ ಸಿಲುಕಿಕೊಂಡಿದ್ದು ಇದರಿಂದ ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ. ಜಾಕಿ ಭಗ್ನಾನಿ ಅವರು ‘ಪೂಜಾ ಎಂಟರ್​ಟೇನ್ಮೆಂಟ್​’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಸಂಸ್ಥೆಯಿಂದ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಸಿನಿಮಾಗಳೆಲ್ಲವೂ ಹೀನಾಯವಾಗಿ ಸೋತಿವೆ. ಈ ವರ್ಷ ತೆರೆಕಂಡ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಂಡವಾಳ ಹೂಡಿದ್ದು ಕೂಡ ಇದೇ ಸಂಸ್ಥೆ. ಅಂದಾಜು 350 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾದ ಆ ಸಿನಿಮಾ ಫ್ಲಾಪ್​ ಆಯಿತು. ಹಾಗಾಗಿ ನಿರ್ಮಾಪಕರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ತಮ್ಮ…

Read More

ನಟ, ನಟಿಯರು, ರಾಜಕಾರಣಿಗಳ ಭವಿಷ್ಯ ಹೇಳುವ ಮೂಲಕ ಖ್ಯಾತಿ ಘಳಿಸಿರುವ ವೇಣು ಸ್ವಾಮಿ ಇದೀಗ ಮತ್ತೊಬ್ಬ ನಟಿಯ ಯಶಸ್ಸಿಗಾಗಿ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಬದುಕು ಬದಲಾಗಿಸಿದ್ದು ಇದೇ ಜ್ಯೋತಿಷಿ ಎನ್ನಲಾಗಿತ್ತು. ಇದೀಗ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಕೂಡ ವೇಣು ಸ್ವಾಮಿಯನ್ನು ಭೇಟಿಯಾಗಿ ಸಕ್ಸಸ್ ಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ವೇಣು ಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ನಿಶ್ವಿಕಾ ನಾಯ್ಡುಗೆ ಹೇಳಿಕೊಳ್ಳುವಂತೆ ಸಕ್ಸಸ್ ಸಿಕ್ಕಿಲ್ಲ. ಇದೇ ಕಾರಣಕ್ಕೆ ಇದೀಗ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆಯ ಕಾರ್ಯದ ಬಳಿಕ ನಟಿಯ ಕುರಿತು ಮಾತನಾಡಿರುವ ವೇಣು ಸ್ವಾಮಿ, ನಿಶ್ವಿಕಾ ಕನ್ನಡದ ನಟಿ, ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಪ್ರಭುದೇವ ಅವರೊಂದಿಗೆ ಡ್ಯಾನ್ಸ್ ಮಾಡೋದು ಸುಮ್ಮನೆ ಅಲ್ಲ. ಪ್ರಭುದೇವ ಅವರಿಗೆ ಸಮವಾಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನಿಶ್ವಿಕಾ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ. ನಿಶ್ವಿಕಾಗೆ ಶುಭವಾಗಲಿ ಎಂದಿದ್ದಾರೆ. ನಿಶ್ವಿಕಾ ಜಾತಕವನ್ನು…

Read More

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 6ನೇ ಆರೋಪಿ ಜಗದೀಶ್ ಜೈಲು ಸೇರಿದ್ದಾನೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದರಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಮಗ ಜೈಲು ಸೇರುತ್ತಿದ್ದಂತೆ ಹೆತ್ತವರು ಕಂಗಾಲಾಗಿದ್ದಾರೆ. ಮಗ ಜೈಲು ಸೇರಿರೋ ನೋವು ಒಂದು ಕಡೆಯಾದ್ರೆ. ಆತನಿಲ್ಲದೇ ಮನೆ ಸಂಬಾಳಿಸಲಾಗದ ಸಂಕಷ್ಟ ಮತ್ತೊಂದು ಕಡೆ. ಜಗದೀಶನ ತಾಯಿಗೆ ನರ ಬ್ಲಾಕ್ ಆಗಿದೆಯಂತೆ. ಮನೆಯಲ್ಲಿ ಕೆಲಸ ಮಾಡುವವರು ಯಾರು ಇಲ್ಲದೆ ಮಾತ್ರೆ, ಔಷಧಿಗಳನ್ನೂ ಖರೀದಿಸೋದಕ್ಕೂ ದುಡ್ಡಿಲ್ಲದೆ ಪರದಾಡುವಂತಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ ಜೊತೆ ಕಂಬಿಹಿಂದೆ ಸೇರಿರೋ ಜಗ್ಗ ಅಲಿಯಾಸ್ ಜಗದೀಶ್​ ಯಾರ ತಂಟೆಗೂ ಹೋಗದೇ ನಿತ್ಯ ಆಟೋ ಓಡಿಸ್ಕೊಂಡು ಕೆಲಸಕ್ಕೆ ಹೋಗಿ 800 ರೂಪಾಯಿ ತಗೊಂಡು ಮನೆಗೆ ಬರ್ತಿದ್ನಂತೆ. ಆ 800 ರೂಪಾಯಿಯಲ್ಲೇ ಮನೆಯವರ ಊಟ, ಔಷಧಿ ಖರ್ಚು ಎಲ್ಲವೂ ನಡೀತಿತ್ತಂತೆ. ಅಲ್ಲದೇ, ಜಗದೀಶನ ತಾಯಿಗೆ ನರದ ತೊಂದರೆ ಇದೆಯಂತೆ. ಅದಕ್ಕಾಗಿ ಮಾತ್ರೆ, ಔಷಧಿಯನ್ನೂ ಜಗದೀಶ ತಂದುಕೊಂಡಿದ್ನಂತೆ. ಆದ್ರೀಗ ತಾನು ಮಾತ್ರೆ ನುಂಗದಿದ್ರೂ ಪರ್ವಾಗಿಲ್ಲ, ನೋವು ಅನುಭವಿಸಿಕೊಂಡೇ ಇದ್ದುಬಿಡ್ತೀನಿ ಎಂದು ಜಗದೀಶ್…

Read More

ಬಾಲಿವುಡ್ ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್​ ಜೊತೆ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮುಂಬೈನಲ್ಲಿ ನಡೆದ ಮದುವೆಗೆ ಕೇವಲ ಆಪ್ತರು ಹಾಗೂ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇವರದ್ದು ಅಂತರ್​ಧರ್ಮೀಯ ವಿವಾಹವಾಗಿದ್ದು ಮದುವೆಯ ಬಳಿಕ ಝಹೀರ್​ ಇಖ್ಬಾಲ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ಮೊದಲ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 7 ವರ್ಷಗಳಿಂದ ಸೋನಾಕ್ಷಿ ಹಾಗೂ ಝಹೀರ್​ ಇಖ್ಬಾಲ್ ಪ್ರೀತಿಸುತ್ತಿದ್ದು ತಮ್ಮ ಪ್ರೀತಿಯನ್ನು ಸಾಕಷ್ಟು ಗೌಪ್ಯತೆಯಿಂದ ಕಾಪಾಡಿಕೊಂಡಿದ್ದರು. ಇದೀಗ ಎರಟು ಕುಟುಂಬಸ್ಥರ ಒಪ್ಪಿಗೆ ಪಡೆದು ಜೋಡಿಗಳು ಮದುವೆಯಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಝಹೀರ್​ ಇಖ್ಬಾಲ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ತಮ್ಮ ಲವ್​ ಸ್ಟೋರಿಯ ಫ್ಲ್ಯಾಶ್​ಬ್ಯಾಕ್​ ಬಗ್ಗೆ ತಿಳಿಸಿದಾರೆ.‘7 ವರ್ಷಗಳ ಹಿಂದೆ ಇದೇ ದಿನಾಂಕದಂದು (23.06.2017) ಪರಸ್ಪರ ನಾವು ನಮ್ಮ ಕಣ್ಣಿನಲ್ಲಿ ನಿರ್ಮಲವಾದ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದೆವು. ಅದೇ ಪ್ರೀತಿ ನಮಗೆ ಎಲ್ಲ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದರ್ಶನ್ ಬಂಧನದ ಬಳಿಕವು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ನಿರ್ದೇಶಕ ಕಮ್ ನಿರ್ಮಾಪಕ ಓಂ ಪ್ರಕಾಶ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.  ರೇಣುಸ್ವಾಮಿ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಅಪಾರ ಅಭಿಮಾನಿಗಳ ಬಳಗ ಹೊಂದಿರುವ ದರ್ಶನ್ ಸಣ್ಣ ಕಾರಣಕ್ಕೆ ಹೀಗೆಲ್ಲಾ ಮಾಡಿಕೊಂಡರು. ರೇಣುಕಾಸ್ವಾಮಿ ಮೆಸೇಜ್ ಮಾಡಿರೋದು ಅಷ್ಟೇ. ಇದು ಸಣ್ಣ ವಿಚಾರ. ರೇಣುಕಾಸ್ವಾಮಿ ಮೇಲೆ ಆಗಿರುವ ಪ್ರಯೋಗ ತುಂಬಾ ತಪ್ಪು ಅನಸ್ತು. ಇದನ್ನು ಯಾರೇ ಮಾಡಿದ್ರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಮ್ಮ ಕರ್ನಾಟಕ ಪೊಲೀಸ್ ವಿಚಾರಣೆ ಮಾಡಿರುವ ರೀತಿ, ಅವರು ಇಟ್ಟಿರುವ ಹೆಜ್ಜೆ ಗ್ರೇಟ್ ಆಗಿದೆ ಎಂದು ಓಂ ಪ್ರಕಾಶ್ ಹೇಳಿದ್ದಾರೆ. ಅಂತಹ ಮೇಧಾವಿ ನಟ ದರ್ಶನ್ ಈಗ ಆರೋಪಿ ಸ್ಥಾನದಲ್ಲಿ ನಿಂತಿರೋದು ನಿಜಕ್ಕೂ ಬೇಜಾರು ಆಗ್ತಿದೆ. ನಾನು ಈಗ ದರ್ಶನ್‌ರನ್ನು ಭೇಟಿ ಮಾಡದೇ 10 ವರ್ಷಗಳಾಗಿವೆ. ಆದರೆ ಅವರು ಒಳ್ಳೆಯ ವ್ಯಕ್ತಿ.…

Read More