Author: Author AIN

ನ್ಯಾಟೋದ 32 ರಾಷ್ಟ್ರಗಳು ಬುಧವಾರ ನಿರ್ಗಮಿತ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ಮೈತ್ರಿಕೂಟದ ಹೊಸ ಮುಖ್ಯಸ್ಥರಾಗಿ ನೇಮಿಸಿವೆ. ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧವು ತೀವ್ರಗೊಳ್ಳುತ್ತಿರುವ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. “ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರ ಉತ್ತರಾಧಿಕಾರಿಯಾಗಿ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ನ್ಯಾಟೋದ ಮುಂದಿನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲು ಉತ್ತರ ಅಟ್ಲಾಂಟಿಕ್ ಕೌನ್ಸಿಲ್ ನಿರ್ಧರಿಸಿದೆ” ಎಂದು ಮೈತ್ರಿಕೂಟ ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು ಒಂದು ದಶಕದ ನಂತರ ಹುದ್ದೆಯಿಂದ ಕೆಳಗಿಳಿಯುತ್ತಿರುವ ನಾರ್ವೆಯ ಜೆನ್ಸ್ ಸ್ಟೋಲ್ಟೆನ್ಬರ್ಗ್, ರುಟ್ಟೆ “ನಿಜವಾದ ಅಟ್ಲಾಂಟಿಕ್ ವಾದಿ” ಮತ್ತು “ಒಮ್ಮತ-ನಿರ್ಮಾತೃ” ಎಂದು ಹೇಳಿದರು. “ಮಾರ್ಕ್ ನಿಜವಾದ ಅಟ್ಲಾಂಟಿಕ್ ವಾದಿ, ಬಲವಾದ ನಾಯಕ ಮತ್ತು ಒಮ್ಮತ-ನಿರ್ಮಾತೃ” ಎಂದು ಸ್ಟೋಲ್ಟೆನ್ಬರ್ಗ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಬರೆದಿದ್ದಾರೆ.

Read More

ಅಮೆರಿಕಾದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದಾ ಶೀತ ಪ್ರದೇಶದಿಂದ ಕೂಡಿರುತ್ತಿದ್ದ ಅಮೆರಿಕಾದಲ್ಲಿ 37 ರಿಂದ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುತ್ತಿದೆ. ಬಿಸಿಲಿಗೆ ಶಾಲಾ ಆವರಣದಲ್ಲಿ ಇರಿಸಲಾಗಿದ್ದ, ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರ ಆರು ಅಡಿ ಎತ್ತರದ ಮೇಣದ ಪ್ರತಿಮೆ ದಿನೇ ದಿನೇ ಕರಗುತ್ತಿದೆ. ಪ್ರತಿಮೆಯ ತಲೆ ಮತ್ತು ಕಾಲುಗಳು ಹಂತ ಹಂತವಾಗಿ ಕರಗಲು ಆರಂಭಿಸಿದೆ. ಸದ್ಯ ಪ್ರತಿಮೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಾಶಿಂಗ್ಟನ್ ಡಿಸಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಬ್ರಾಹಂ ಲಿಂಕನ್ ಮೇಣದ ಪ್ರತಿಮೆಯನ್ನು ಇರಿಸಲಾಗಿತ್ತು. ಬಿಸಿಲು ಹೆಚ್ಚಾಗುತ್ತಿರುವ ಕಾರಣ ಪ್ರತಿಮೆಯಿಂದ ತಲೆ ಭಾಗ ಬೇರೆಯಾಗುತ್ತಿದೆ. ಉಳಿದಂತೆ ಪ್ರತಿಮೆ ಗಾತ್ರ ಇಳಿಕೆಯಾಗುತ್ತಿದೆ. ಶನಿವಾರ ವಾಶಿಂಗ್ಟನ್ ಡಿಸಿಯಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಮೇಣದ ಪ್ರತಿಮೆಯನ್ನು ಸ್ಯಾಂಡಿ ವಿಲಿಯಮ್ಸ್‌ IV ನಿರ್ಮಿಸಿದ್ದರು. ಇದೇ ವರ್ಷ ಫೆಬ್ರವರಿಯಿಂದ ಅಬ್ರಾಹಿಂ ಲಿಂಕನ್ ಪ್ರತಿಮೆಯನ್ನು ನಾರ್ಥ್‌ವೆಸ್ಟ್‌ ವಾಶೀಂಗ್ಟನ್‌ ಶಾಲೆಯ ಆವರಣದಲ್ಲಿ ಇರಿಸಲಾಗಿತ್ತು. ಅತಿಯಾದ ಬಿಸಿಲಿನಿಂದ ಪ್ರತಿಮೆ…

Read More

ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿದೆ. ಇದೀಗ ಆರೋಪಿಗಳ ಮನೆಯಲ್ಲಿ ಸಿಕ್ಕ 70 ಲಕ್ಷ ರೂ. ಹಣದ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಪತ್ರ ಬರೆದಿದ್ದಾರೆ. ರೇಣುಕಾಸ್ವಾಮಿ ಕೊಲೆಯ ನಂತರ ಶವ ಸಾಗಾಟಕ್ಕೆ ನಟ ದರ್ಶನ್‌30 ಲಕ್ಷ ರೂ. ಡೀಲ್‌ ಕೊಟ್ಟಿದ್ದರು ಮತ್ತು ಆರೋಪಿಗಳ ಮನೆಯಲ್ಲಿ 70 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂದ ತನಿಖೆ ನಡೆಸುವಂತೆ ಕೋರಿ ಐಟಿ ಇಲಾಖೆಗೆ ಪೊಲೀಸರು ಮನವಿ ಮಾಡಿದ್ದಾರೆ. ಜೂನ್‌ 19 ರಂದು ಆರ್.‌ ಆರ್‌ ನಗರದ ದರ್ಶನ್‌ ಮನೆಯಲ್ಲಿ 37.40 ಲಕ್ಷ ರೂ. ಹಾಗೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಉಳಿದ ಹಣ ಆರೋಪಿಗಳ ಮನೆಯಲ್ಲಿ ಜಪ್ತಿಯಾಗಿತ್ತು. ಹೀಗಾಗಿ ಪೊಲೀಸರು ತನಿಖೆಗೆ ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ.

Read More

ಕಳೆದ ಒಂದೆರಡು ದಿನಗಳ ಹಿಂದೆ ನಟ ಅಕ್ಕಿನೇನಿ ನಾಗಾರ್ಜುನ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದರು. ವಿಮಾನ ನಿಲ್ದಾಣದಿಂದ ನಾಗಾರ್ಜುನ್ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಯೋರ್ವ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದರಿಂದ ನಾಗಾರ್ಜುನ್ ಬಾಡಿಗಾರ್ಡ್ ಆತನನ್ನು ದೂರ ತಳ್ಳಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದ ನಟ ಇದೀಗ ಆ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಅಭಿಮಾನಿಯನ್ನು ಬಾಡಿಗಾರ್ಡ್​ ತಳ್ಳಿ ಬೀಳಿಸಿದಾಗ ಅದು ನಾಗಾರ್ಜುನ ಅವರ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ವೈರಲ್ ಆದ ನಂತರ ಅವರಿಗೆ ಆ ಬಗ್ಗೆ ತಿಳಿಯಿತು. ಈಗ ಮತ್ತೆ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಂದು ಕೆಳಗೆ ಬಿದ್ದ ಅಭಿಮಾನಿಯನ್ನು ನಾಗಾರ್ಜುನ ಮಾತನಾಡಿಸಿ,  ಆ ವ್ಯಕ್ತಿಯನ್ನು ತಬ್ಬಿಕೊಂಡು ಫೋಟೋಗೆ ಪೋಸ್​ ನೀಡಿದ್ದಾರೆ. ಇಷ್ಟೆಲ್ಲ ಟೀಕೆ ಎದುರಾಗಿದ್ದಕ್ಕೆ ಆ ಅಭಿಮಾನಿಯು ನಾಗಾರ್ಜುನ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ‘ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ’ ಎಂದು ನಾಗಾರ್ಜುನ ಅವರು ಸಮಾಧಾನ ಮಾಡಿದ್ದಾರೆ. ಅಲ್ಲದೇ ಅಭಿಮಾನಿಯ ಜೊತೆ…

Read More

ಪ್ರಭಾಸ್, ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ದಿಗ್ಗಜರು ಅಭಿನಯಿಸಿರುವ ಕಲ್ಕಿ 2898 AD ಮೂವಿ ಗ್ರ್ಯಾಂಡ್​ ಆಗಿ ವಿಶ್ವದ್ಯಾಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಮೂವಿ ಇದಾಗಿದ್ದು ಅಭಿಮಾನಿಗಳು ಕಾತುರದಿಂದ ಇದ್ದರು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರಿನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು ಡಾರ್ಲಿಂಗ್​ ಫ್ಯಾನ್ಸ್​ ಫುಲ್ ಜೋಶ್​ನಲ್ಲಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಕಲ್ಕಿ 2898 AD ಸಿನಿಮಾ ರಿಲೀಸ್ ಆಗಿದೆ. 2D, 3D ವರ್ಸನ್​ನಲ್ಲಿ ತೆರೆಗೆ ಅಪ್ಪಳಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಊರ್ವಶಿ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಮೊದಲ ಶೋವನ್ನು ಪ್ರದರ್ಶನ ಮಾಡಲಾಗಿದೆ. ಇನ್ನು ಕೆಲ ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 5 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಮಾಡಲಾಗಿದ್ದು ಸಿನಿಮಾ ಕಣ್ಮುಂಬಿಕೊಂಡ ಪ್ರಭಾಸ್ ಫ್ಯಾನ್ಸ್​ ಸಖತ್ ಖುಷಿಯಾಗಿದ್ದಾರೆ. ಕಲ್ಕಿ 2898 ಎಡಿ ಸಿನಿಮಾದ 3 ಗಂಟೆ 59…

Read More

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಟ ಝಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸೋನಾಕ್ಷಿ, ಝಹೀರ್ ನಾಗಾರೀಕ ವಿವಾಹವಾಗಿದ್ದಾರೆ. ಅಂದ ಹಾಗೆ ಸೋನಾಕ್ಷಿ ಮದುವೆಯಾಗಿರೋದು ಮುಸ್ಲಿಂ ಯುವಕನನ್ನ. ಇದು ಆಕೆಯ ಮನೆಯಲ್ಲಿ ಸುತರಾಂ ಇಷ್ಟವಿರಲಿಲ್ಲ. ಆದರೂ ಸೋನಾಕ್ಷಿ ಪಟ್ಟು ಬಿಡದೆ ಝಹೀರ್ ನನ್ನು ವಿವಾಹವಾಗಿದ್ದರು. ಇದೇ ಕಾರಣಕ್ಕೆ ಒಬ್ಬಳ್ಳೆ ಒಬ್ಬ ಮುದ್ದಿನ ತಂಗಿಯ ಮದುವೆಗೆ ಆಕೆಯ ಅಣ್ಣಂದಿರು ಬರಲಿಲ್ಲ ಎನ್ನಲಾಗಿತ್ತು. ನಟ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿರುವ ಶತ್ರುಘ್ನ ಸಿನ್ಹಾಗೂ ಮೊದಲು ಈ ಮದುವೆ ಇಷ್ಟವಿರಲಿಲ್ಲ.  ಅದೇ ಕಾರಣಕ್ಕೆ ಮೊದಲು ಗೊಂದಲದ ಹೇಳಿಕೆ ನೀಡಿದ್ದರು. ಆ ಬಳಿಕ ಸೋನಾಕ್ಷಿ ತುಂಬಾ ಖುಷಿಯಾಗಿ ಕಾಣುತ್ತಾಳೆ. ಅವರಿಬ್ಬರೂ ಸುಖವಾಗಿರಲಿ ಎಂದಿದ್ದು ಮದುವೆಗೆ ಹೋಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಆದರೆ ಅವರ ಮುಖದಲ್ಲಿ ಅಷ್ಟೇನು ಖುಷಿ ಕಾಣಿಸುತ್ತಿರಲಿಲ್ಲ. ಸೋನಾಕ್ಷಿ ಮದುವೆಗೆ ತಂದೆ ತಾಯಿ ಬಂದಿದ್ದರು ಅಣ್ಣಂದಿರು ಮಾತ್ರ ಬಂದಿರಲಿಲ್ಲ.  ಮದುವೆ ಕೆಲವೇ ದಿನ ಮೊದಲು ಸೋನಾಕ್ಷಿ ಸಿನ್ಹಾ…

Read More

ವೈದ್ಯಕೀಯ ಲೋಕದಲ್ಲಿ ವೈದ್ಯರು ನಿತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂಥದ್ದೆ ಹೊಸ ಪ್ರಯೋಗ ಮಾಡುವ ಮೂಲಕ ಚಿಕಾಗೋದ ನಾರ್ತ್‌ವೆಸ್ಟರ್ನ್ ಮೆಡಿಸಿನ್  ಆಸ್ಪತ್ರೆ ವೈದ್ಯರು ಅಚ್ಚರಿ ಮೂಡಿಸಿದ್ದಾರೆ. ರೋಗಿ ಸಂಪೂರ್ಣ ಎಚ್ಚರವಾಗಿರುವಂತೆ ನೋಡಿಕೊಂಡು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ.  ರೋಗಿ ಜೊತೆ ಮಾತುಕತೆ ನಡೆಸುತ್ತಲೇ ವೈದ್ಯರ ತಂಡ ಎರಡು ಗಂಟೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಚಿಕಾಗೋ ನಿವಾಸಿ 28 ವರ್ಷದ ಜಾನ್ ನಿಕೋಲಸ್‌ಗೆ ಮೂತ್ರಪಿಂಡ ಕಸಿಗೊಳಗಾದ ರೋಗಿ. ಶಸ್ತ್ರಚಿಕಿತ್ಸೆ ನಡೆದ 24 ಗಂಟೆಯೊಳಗೆ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಸರ್ಜರಿಯ ಅನುಭವ ಕೂಲ್ ಆಗಿತ್ತು ಎಂದು  ಜಾನ್ ನಿಕೋಲಸ್‌ ಹೇಳಿಕೊಂಡಿದ್ದಾನೆ. ವೈದ್ಯರ ತಂಡ ಸಾಮಾನ್ಯ ಅರವಳಿಕೆ ಬದಲಾಗಿ, ಬೆನ್ನುಮೂಳೆಗೆ ಮಾತ್ರ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಪಡುವ ದೇಹದ ಭಾಗದ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತದೆ. ಆದ್ರೆ ಈ ವಿಧಾನ ಅಪಾಯದ ಮಟ್ಟ ಹೆಚ್ಚಾಗಿರುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆ ಮೊದಲನೇಯದ್ದು ಆಗಿದೆ. ಸರ್ಜರಿ ನಡೆದ ಮರುದಿನವೇ ರೋಗಿ ಮನೆಗೆ ಹಿಂದಿರುಗಿದ್ದಾರೆ ಏಂದು  ಕಸಿ ಶಸ್ತ್ರಚಿಕಿತ್ಸಕ,…

Read More

ಸದಾ ಸಿನಿಮಾಗಳ ಮೂಲಕವೇ ಸಖತ್ ಸುದ್ದಿಯಾಗುತ್ತಿದ್ದ ಕಾಲಿವುಡ್ ಖ್ಯಾತ ನಟ ಜಯಂ ರವಿ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಅಂದ ಹಾಗೆ ಈ ಅನುಮಾನಕ್ಕೆ ಕಾರಣವಾಗಿರೋದು ಜಯಂ ರವಿ ಪತ್ನಿ ಆರತಿ ನಡೆ. ಆರತಿ ರವಿ ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನಿಂದ ಪತಿ ಜಯಂ ರವಿ ಜೊತೆಗಿನ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನೂ ಆರತಿ ರವಿ ಡಿಲೀಟ್ ಮಾಡಿದ್ದಾರೆ. ಇದನ್ನ ಗಮನಿಸಿರುವ ಅಭಿಮಾನಿಗಳಿಗೆ ಬಿಗ್ ಶಾಕ್ ಆಗಿದೆ ಜಯಂ ರವಿ ಸಂಸಾರದಲ್ಲೂ ಬಿರುಗಾಳಿ ಬೀಸಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ, ತಮಿಳು ಕಿರುತೆರೆಯ ಪ್ರಖ್ಯಾತ ನಿರ್ಮಾಪಕರಾದ ಸುಜಾತಾ ವಿಜಯ್ ಕುಮಾರ್ ಅವರ ಪುತ್ರಿ ಆರತಿ. ಪರಸ್ಪರ ಪ್ರೀತಿಸಿ ಜಯಂ ರವಿ ಹಾಗೂ ಆರತಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಂದ ಹಾಗೆ ಆರತಿ ತಮ್ಮ ಹೆಸರಿನ ಜೊತೆಗೆ ‘ರವಿ’ ಅಂತ ಬರೆದುಕೊಂಡಿದ್ದು…

Read More

ಗೆಳತಿ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗು ಮೂಲದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಎಂಡ್ ಗ್ಯಾಂಗ್ ಕೊಲೆ ಮಾಡಿದ್ದಾರೆ. ಇದೀಗ ಘಟನೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಖೈದಿ ನಂಬರ್ 6106 ನೀಡಲಾಗಿದ್ದು ಈ ನಂಬರ್ ಗೆ ಸಾಕಷ್ಟು ಡಿಮ್ಯಾಂಡ್ ಕೇಳಿ ಬರ್ತಿದೆ. ದರ್ಶನ್ ಗೆ ವಿಚಾರಣಾಧಿನ ಖೈದಿ 6106 ನಂಬರ್ ಕೊಡಲಾಗಿದೆ. ಈ ನಂಬರ್ ಅನ್ನು ಹೊಸ ಸಿನಿಮಾಗೆ ಶೀರ್ಷಿಕೆಯಾಗಿಸಲು ಭದ್ರಾವತಿ ಮೂವೀ ಮೇಕರ್ಸ್ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ. ಆದ್ರೆ ಈ ಕೇಸ್ ಈಗ ತನಿಖೆ ಹಂತದಲ್ಲಿ ಇರುವ ಹಿನ್ನೆಲೆ ಈ ಕೇಸ್ ಗೆ ಸಂಬಂಧಿಸಿದ ಟೈಟಲ್ ಗಳನ್ನು ನೀಡದಿರಲು ವಾಣಿಜ್ಯ ಮಂಡಳಿ ತೀರ್ಮಾನಿಸಿದೆ. ಯಾವುದೇ ಸಿನಿಮಾ ಮಾಡಬೇಕು ಎಂದ್ರು ಮೊದಲು ಶೀರ್ಷಿಕೆಯನ್ನು ನೋಂದಣಿ ಮಾಡಿಕೊಳ್ಳಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆ ಟೈಟಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವಷ್ಟೇ…

Read More

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲ ತಿಂಗಳ ಹಿಂದೆ ಜೋರಾಗಿಯೇ ಕೇಳಿ ಬಂದಿತ್ತು. ವಿಜಯ್ ಹಾಗೂ ಪತ್ನಿ ಸಂಗೀತ ಮಧ್ಯೆ ಮನಸ್ತಾಪ ಮೂಡಲು ಕಾರಣ ನಟಿ ತ್ರಿಷಾ ಎನ್ನಲಾಗಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದು ಇದೇ ಕಾರಣಕ್ಕೆ ವಿಜಯ್ ತಮ್ಮ ಪತ್ನಿಗೆ ಡಿವೋರ್ಸ್ ನೀಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮತ್ತೆ ತ್ರಿಷಾ ಹಾಗೂ ವಿಜಯ್ ಒಟ್ಟಿಗಿರೋ ಫೋಟೋವೊಂದು ವೈರಲ್ ಆಗಿದೆ. ನಟಿ ತ್ರಿಷಾ ಕೃಷ್ಣನ್ ಮತ್ತು ವಿಜಯ್ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಶುರುವಾಗಿದೆ. ಈ ಅನುಮಾನಕ್ಕೆ ಕಾರಣವಾಗಿದ್ದು, ನಟಿ ಶೇರ್ ಮಾಡಿರುವ ಪೋಸ್ಟ್. ವಿಜಯ್ ಹುಟ್ಟುಹಬ್ಬಕ್ಕೆ ನಟಿ ವಿಶೇಷವಾಗಿ ಶುಭಕೋರಿದ್ದಾರೆ. ವಿಜಯ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ತ್ರಿಷಾ ಲಿಫ್ಟೊಳಗೆ ಇಬ್ಬರೂ ಇರುವ ಮತ್ತು ತ್ರಿಷಾ ಮಿರರ್‌ನಲ್ಲಿ ಫೋಟೋ ತೆಗೆಯುತ್ತಿರುವಂಥ ಫೋಟೋ ಹಂಚಿಕೊಂಡಿದ್ದಾರೆ. ಮತ್ತು ‘ದಿ ಕಾಮ್ ಟು ಎ ಸ್ಟಾರ್ಮ್, ಸ್ಟಾರ್ಮ್ ಟು ಎ ಕಾಮ್, ಟು ಮೆನಿ…

Read More