Author: Author AIN

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಜುಲೈ4ರ ವರೆಗೂ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇಷ್ಟಾದರೂ ದರ್ಶನ್‌ಗೆ ಕೆಲವು ಅಭಿಮಾನಿಗಳು ಹಾಗೂ ನಟ ನಟಿಯರು ಬೆಂಬಲ ನೀಡಿದ್ದಾರೆ. ದಿನ ಕಳೆದಂತೆ ತನಿಖೆಯಿಂದ ಬೆಚ್ಚಿ ಬೀಳಿಸುವ ಸತ್ಯಗಳು ಹೊರಬೀಳುತ್ತಿವೆ. ಕಲೆವರು ಅಂದಿನಿಂದ ದರ್ಶನ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಸಾರ್ವಜನಿಕ ಆಕ್ರೋಶದ ನಡುವೆ, ಟಾಲಿವುಡ್ ಹೀರೊ ನಾಗ ಶೌರ್ಯ ದರ್ಶನ್‌ಗೆ ಬೆಂಬಲ ನೀಡಿದ್ದಾರೆ. ʻದರ್ಶನ್ ಅಣ್ಣ ತಮ್ಮ ಕೆಟ್ಟ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆʼʼಎಂದು ಬರೆದುಕೊಂಡಿದ್ದಾರೆ. ಘಟನೆ ಬಗ್ಗೆ ಕೇಳಿದಾಗ ಮೃತರ ಕುಟುಂಬಕ್ಕೆ ನನ್ನ ಹೃದಯ ಮರಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ವಿಷಯದಲ್ಲಿ ಜನರು ಈಗಾಗಲೇ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತದೆ. ದರ್ಶನ್ ಅಣ್ಣ ತಮ್ಮ ಕೆಟ್ಟ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್‌ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು…

Read More

ನಟಿ ಹಾಗೂ ರಾಜಕಾರಣಿ ಪಾಯಲ್‌ ಘೋಷ್‌ ಆಗಾಗ ತಮ್ಮ ಹೇಳಿಕೆ ಮೂಲಕವೇ ಸದಾ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಮತ್ತೆ ತಮ್ಮ ಹೇಳಿಕೆಯ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಇದೀಗ 9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ʻʻ9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ. ಇದು ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ ಎಂದು ನಟಿ ತಮ್ಮ ಇನ್​ಸ್ಟಾ ಪೋಸ್ಟ್​ನಲ್ಲಿ ಹೇಳಿದ್ದಾರೆ. ತಾನು ಹಾಗೂ ಇರ್ಫಾನ್ ಪಠಾಣ್ ಲವ್ ಮಾಡುತ್ತಿದ್ದೆವು ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆ ಹಲವು ಪೋಸ್ಟ್ ಮಾಡಿ ಹೇಳಿದ್ದಾರೆ. ಈ ಪೋಸ್ಟ್ ನೋಡಿ ಸಾಕಷ್ಟು ಮಂದಿ ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇರ್ಫಾನ್‌ ಪಠಾಣ್‌ ಸಾಂಪ್ರದಾಯಿಕ ಕುಟುಂಬ , ಹಾಗಾಗಿ ನಾನು ಬ್ರೇಕಪ್‌ ಆದೆ ಎಂದು ಹೇಳಿಕೊಂಡಿದ್ದಾರೆ. ಇದೀಗ…

Read More

ಸದ್ಯ ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಳು ಸದ್ದು ಮಾಡ್ತಿದ್ದಾರೆ. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಲು ಎಐಗಳು ಮುಂದಾಗಿವೆ. ಅದರಲ್ಲೂ ಭಾರತದಲ್ಲಿ ನಿರ್ಮಿತವಾದ ಜಾರಾ ಶತಾವರಿ ಹೆಸರಿನ ಮಾಡೆಲ್ ಮಿಸ್ ಎಐ ಸ್ಪರ್ಧೆಯಲ್ಲಿ ಅಗ್ರ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ.  ಈ ಮೂಲಕ ಭಾರತ ನಿರ್ಮಿತ ಎಐ ಮಾಡೆಲ್ ಜಾಗತಿಕ ಗಮನವನ್ನು ಸೆಳೆದಿದೆ. ಭಾರತವನ್ನು ಪ್ರತಿನಿಧಿಸುತ್ತಿರುವ ಜಾರಾ, 1,500 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಾಡೆಲ್​ಗಳನ್ನು ಹಿಂದಿಕ್ಕಿ ಆಯ್ಕೆ ಆಗಿದ್ದಾರೆ. ಜಾರಾ ಶತಾವರಿಯನ್ನು ಭಾರತೀಯ ಮೊಬೈಲ್ ಜಾಹೀರಾತು ಏಜೆನ್ಸಿಯ ಸಹ-ಸಂಸ್ಥಾಪಕ ರಾಹುಲ್ ಚೌಧರಿ ರಚಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಪ್ರಾರಂಭವಾದ ಮಿಸ್ ಎಐ ಸ್ಪರ್ಧೆಯು ಈ ರೀತಿಯ ಮೊದಲನೆಯ ಸ್ಪರ್ಧೆಯನ್ನು ಏರ್ಪಡಿಸಿದೆ. ಇದನ್ನು ವರ್ಲ್ಡ್ ಎಐ ಕ್ರಿಯೇಟರ್ ಅವಾರ್ಡ್ಸ್ ಆಯೋಜಿಸಿದೆ. ಸ್ಪರ್ಧಿಗಳನ್ನು ಅವರ ಸೌಂದರ್ಯ, ತಾಂತ್ರಿಕ ಕೌಶಲ್ಯ ಮತ್ತು ಸಾಮಾಜಿಕ ಪ್ರಭಾವದ ಮೇಲೆ ಮೌಲ್ಯಮಾಪನ ಮಾಡುತ್ತಾರೆ., AI- ರಚಿತವಾದ ತೀರ್ಪುಗಾರರಾದ ಐತಾನಾ ಲೋಪೆಜ್ ಮತ್ತು ಎಮಿಲಿ ಪೆಲ್ಲೆಗ್ರಿನಿ ಸೇರಿದಂತೆ ನಾಲ್ಕು ತೀರ್ಪುಗಾರರಿದ್ದಾರೆ. ಈ ಮಾಡೆಲ್ ಈಗಾಗಲೇ ಇನ್​ಸ್ಟಾಗ್ರಾಮ್​ನಲ್ಲಿ …

Read More

ಬಾಲಿವುಡ್ ನಟಿ, ಖ್ಯಾತ ನಟಿ ಶತ್ರುಜ್ಞಾ ಸಿಹ್ನಾ ಪುತ್ರಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಝಹೀರ್ ಇಕ್ಬಾಲ್ ಜೊತೆ ಜೂನ್ 23ರಂದು ಸರಳವಾಗಿ ನಾಗಾರಿಕ ಮದುವೆಯಾಗಿದ್ದಾರೆ. ಮದುವೆ ಬಳಿಕ ನವ ದಂಪತಿ 25 ಕೋಟಿ ಮೌಲ್ಯದ ಐಷಾರಾಮಿ ಮನೆಗೆ ಶಿಫ್ಟ್ ಆಗಿದ್ದಾರೆ.  ನಟಿ ಸೋನಾಕ್ಷಿ ದುಬಾರಿ ಹಾಗೂ ಅದ್ಭುತ ಮನೆಯನ್ನು ಮುಂಬೈನಲ್ಲಿ ಕಟ್ಟಿಸಿದ್ದಾರೆ. ಮುಂಬೈನಲ್ಲಿರು ಸೋನಾಕ್ಷಿಯ ಐಷಾರಾಮಿ ಮನೆಯನ್ನು ಸುಮಾರು 4000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೋನಾಕ್ಷಿ ಮನೆಯನ್ನು ತನ್ನ ಆಸೆಯಂತೆ ಇಂಟೀರಿಯರ್ ಡಿಸೈನ್ ಮಾಡಿಸಿಕೊಂಡಿದ್ದಾರೆ. ಈ ಮನೆಯನ್ನು ರೆಡ್ ಆರ್ಕಿಟೆಕ್ಟ್ಸ್ ನಿರ್ಮಿಸಿದ್ದಾರೆ. ಈ ಡ್ರೀಮ್ ಹೌಸ್ ನಲ್ಲಿ ನಾಲ್ಕು ಬೆಡ್ ರೂಮ್ ಇದೆ. ಆರ್ಟ್ ಸ್ಟುಡಿಯೊ ಆಗಿ ಮನೆಯನ್ನು ಪರಿವರ್ತಿಸಲಾಗಿದೆ. ಯೋಗ ಕೇಂದ್ರ, ಡ್ರೆಸ್ಸಿಂಗ್ ರೂಮ್, ಸ್ಲೈಡಿಂಗ್ ವಾಲ್, ವಾಕ್ ಇನ್ ವಾರ್ಡ್ರೋಬ್, ಮರ್ಫಿ ಬೆಡ್ಗಳು, ಓಪನ್ ಸ್ಕೈಟಾಪ್ ಮತ್ತು ಬೀಚ್ ವ್ಯೂವ್ ಈ ಎಲ್ಲಾ ಹೈಟೆಕ್ ಸೌಲಭ್ಯಗಳು ಸೋನಾಕ್ಷಿ ಅವರ ಮನೆಯಲ್ಲಿದೆ. ಈ…

Read More

ನಡುರಸ್ತೆಯಲ್ಲಿ ಮಹಿಳೆಯೊಬ್ಬರು ಸಂಪೂರ್ಣ ಬೆತ್ತಲಾಗಿ ಓಡಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕಷ್ಟು ಜನಸಂದಣಿ ಇರುವ ರಸ್ತೆಯಲ್ಲಿ ಮಹಿಳೆ ಯಾರ ಭಯವಿಲ್ಲದೇ ಹೋಗುತ್ತಿರುವ 9 ಸೆಕೆಂಡ್‌ ವಿಡಿಯೋ ತುಣಕು ಭಾರೀ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಪ್ರಮುಖ ರಸ್ತೆಯಲ್ಲಿ ಜೂನ್ 25ರಂದು ಈ ಘಟನೆ ನಡೆದಿದ್ದು ಮಹಿಳೆಯ ನಡೆಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಗಾಜಿಯಾಬಾದ್ ಸಿಟಿಯ ಮೋಹನ್ ನಗರದ ಚೌರ್ಹಾ ಪ್ರದೇಶದ ರಸ್ತೆಯಲ್ಲಿ ಬೆತ್ತಲಾದ ಮಹಿಳೆ ಕಾಣಿಸಿಕೊಂಡಿದ್ದು, ಯಾರು ಆಕೆಯನ್ನು ತಡೆಯಲು ಮುಂದಾಗಿಲ್ಲ. ರಸ್ತೆಯಲ್ಲಿ ಅಷ್ಟು ಜನರಿದ್ದರೂ ಮಹಿಳೆಯನ್ನು ಯಾರೊಬ್ಬರೂ ಸಹ ಪ್ರಶ್ನಿಸಲು ಮುಂದಾಗಿಲ್ಲ. ಮಹಿಳೆ ಬೆತ್ತಲಾಗಿ ಬಂದು ಮಿಂಚಿನಂತೆ ಮಾಯವಾದರು ಎಂದು ಹೇಳಲಾಗುತ್ತಿದೆ. ಮಹಿಳೆ ಸುತ್ತಲೂ ಸಾರ್ವಜನಿಕರು ನಿಂತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಹೀಗೆ ಜನರಿರುವ ಬೀದಿಯಲ್ಲಿ ಬೆತ್ತಲಾಗಿದೆ ಓಡಾಡಿದ ಮಹಿಳೆ ಯಾರು? ಬೆತ್ತಲಾಗಿ ನಡುರಸ್ತೆಯಲ್ಲಿ ಓಡಾಡಿದ್ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಮಹಿಳೆಯ ವಿಡಿಯೋ ತುಣುಕುಗಳು…

Read More

‘ಬಿಗ್ ಬಾಸ್ ಒಟಿಟಿ ಸೀಸನ್ 3’ ಆರಂಭವಾಗಿ ಕೆಲ ದಿನ ಕಳೆದಿದೆ. ಬಿಗ್ ಬಾಸ್ ಮನೆಗೆ ಖ್ಯಾತ ಯುಟ್ಯೂಬರ್ ಅರ್ಮಾನ್ ಮಲಿಕ್ ತಮ್ಮಿಬ್ಬರು ಹೆಂಡತಿಯ ಜೊತೆಗೆ ಹೋಗಿದ್ದಾರೆ. ಇದನ್ನು ನೋಡಿ ಖ್ಯಾತ ನಟಿ ಡೆವೊಲಿನಾ ಭಟ್ಟಾಚಾರ್ಜಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅರ್ಮಾನ್ ಮಲಿಕ್ ಗೆ ಈಗಾಗಲೇ ಮೂರು ಮದುವೆಯಾಗಿದೆ. ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟ ಬಳಿಕ ಮತ್ತೆರಡು ಮದುವೆಯಾದರು. ಈಗ ಅವರು ಒಂದೇ ಮನೆಯಲ್ಲಿ ಇಬ್ಬರು ಪತ್ನಿಯರ ಜೊತೆಗೆ ಇದ್ದಾರೆ. ಈ ಇಬ್ಬರು ಪತ್ನಿಯರಿಗೆ ಇಬ್ಬಿಬ್ಬರು ಮಕ್ಕಳಿದ್ದಾರೆ. ಈಗ ಅವರು ಎರಡನೇ ಪತ್ನಿ ಪಾಯಲ್, ಮೂರನೇ ಪತ್ನಿ ಕೃತಿಕಾ ಜೊತೆಗೆ ‘ಬಿಗ್ ಬಾಸ್ ಒಟಿಟಿ ಸೀಸನ್ 3’ ಮನೆಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಖ್ಯಾತ ನಟಿ ಡೆವೊಲಿನಾ ಭಟ್ಟಾಚಾರ್ಜಿ, ಇದು ಮನರಂಜನೆ ಅಂತ ನಿಮಗೆ ಅನಿಸತ್ತಾ? ಇದು ಮನರಂಜನೆ ಅಲ್ಲವೇ ಅಲ್ಲ, ಇದೊಂದು ನಂಬಿಕೆ. ಇದು ರೀಲ್ ಅಂತ ಲೈಟ್…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನವಾಗಿದೆ. ಜುಲೈ 4ರವರೆಗೆ ದರ್ಶನ್ ರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಘಟನೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ, ದರ್ಶನ್ ಜೊತೆ ಕಾಟೇರ ಸಿನಿಮಾದಲ್ಲಿ ನಟಿಸಿದ್ದ ಶ್ರುತಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಯಾವ ಕಲಾವಿದರನ್ನೂ ನಾವು ಪ್ರತ್ಯೇಕವಾಗಿ ನೋಡಿಲ್ಲ. ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ತೊಂದರೆ ಆದರೆ ಆ ಛಾಯೆ ನಮ್ಮ ಚಿತ್ರರಂಗದ ಮೇಲೆ ಇದ್ದೇ ಇರುತ್ತದೆ. ಎಲ್ಲರೂ ಇದೇ ಮಾತಾಡುತ್ತಿದ್ದಾರೆ. ಎಲ್ಲ ನಿರ್ಮಾಪಕರು ಮಂಕಾಗಿದ್ದಾರೆ. ಮಾನಸಿಕವಾಗಿ ಎಲ್ಲರಿಗೂ ಪರಿಣಾಮ ಬೀರಿದೆ’ ಎಂದಿದ್ದಾರೆ. ರೇಣುಕಾ ಸ್ವಾಮಿಯ ಕೊಲೆ ನಡೆಯಲು ಮುಖ್ಯ ಕಾರಣ ಆಗಿದ್ದೇ ಒಂದು ಅಶ್ಲೀಲ ಸಂದೇಶ. ‘ತಿಳಿದವರು ಕಮೆಂಟ್​ ಮಾಡಿದರೆ ಅದನ್ನು ನಾವು ತಿದ್ದಿಕೊಂಡು ಮುಂದಕ್ಕೆ ಹೋಗಬಹುದು. ಆದರೆ ಫೇಕ್​ ಅಕೌಂಟ್​ಗಳಿಂದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾದ ಕಮೆಂಟ್​ಗಳು ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅದನ್ನು ಸಹಿಸಿಕೊಂಡು…

Read More

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಹಾಗೂ ಸಹಚರರು ಜೈಲು ಸೇರಿದ್ದಾರೆ. ಇತ್ತ ದರ್ಶನ್ ನೋಡಲು ನಿತ್ಯವು ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. ಇದೀಗ ದರ್ಶನ್ ರನ್ನು ನೋಡಲೇ ಬೇಕು ಎಂದು ವಿಶೇಷ ಚೇತನ ಅಭಿಮಾನಿಯೋರ್ವಳು ಜೈಲಿನ ಮುಂದೆ ಊಟ ತಿಂಡಿ ಬಿಟ್ಟು ಹಟ ಹಿಡಿದು ಕುಳಿತಿದ್ದಾಳೆ. ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನ ನಿವಾಸಿ ಸೌಮ್ಯ ತನ್ನ ನೆಚ್ಚಿನ ನಟ ದರ್ಶನ್ ರನ್ನು ನೋಡಬೇಕೆಂದು ಹಠ ಹಿಡಿದಿದ್ದಾಳೆ. ಅಲ್ಲದೆ ದರ್ಶನ್‌ನನ್ನು ನೋಡುವ ತನಕ ಊಟ ಮಾಡುವುದಿಲ್ಲ ಎಂದಿದ್ದಾಳೆ. ಹೀಗಾಗಿ ಸೌಮ್ಯಳ ಪೋಷಕರು ಪರಪ್ಪನ ಅಗ್ರಹಾರಕ್ಕೆ ಕರೆ ತಂದಿದ್ದಾರೆ. ನಟ ದರ್ಶನ್‌ನ ಅಪ್ಪಟ ಅಭಿಮಾನಿಯಾಗಿರುವ ಸೌಮ್ಯ, ದರ್ಶನ್‌ ಜೈಲಿಗೆ ಹೋದ ದಿನದಿಂದ ಸರಿಯಾಗಿ ಊಟ ಮಾಡಿಲ್ಲ. ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಬೇಕೆಂದು ಹಠ ಹಿಡಿದು ಕುಳಿತಿದ್ದಾಳಂತೆ. 2016 ರಲ್ಲಿ ಈ ಬಡ ಕುಟುಂಬಕ್ಕೆ ನಟ ದರ್ಶನ್‌ ಆಟೋವೊಂದನ್ನು ಕೊಡಿಸಿದ್ದರು. ಲಕ್ಷ್ಮೀ ಹಾಗೂ ರಂಗಸ್ವಾಮಿ ದಂಪತಿಯ ಪುತ್ರಿ ವಿಶೇಷ ಚೇತನ ಸೌಮ್ಯಳ ಪೋಷಣೆಗಾಗಿ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಬಗ್ಗೆ  ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಪರ-ವಿರೋಧ ಹೇಳಿಕೆಗಳು ಕೇಳಿಬರುತ್ತಿವೆ. ಯಾರು ಕೂಡ ದರ್ಶನ್ ನಡೆಯನ್ನು ಸಮರ್ಥಿಸಿಕೊಂಡಿಲ್ಲ. ಆದರೆ ದರ್ಶನ್ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಇದೀಗ ಮತ್ತೋರ್ವ ನಟಿ ಯಮುನ ಶ್ರೀನಿಧಿ ದರ್ಶನ್ ಪರವಾಗಿ ನಿಂತಿದ್ದಾರೆ. “ನಿಮ್ಮ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ದರ್ಶನ್ ಸರ್..” ಎಂದು ನಟಿ ಯಮುನ ಶ್ರೀನಿಧಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. “ಈ ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ ಮತ್ತು ನಿಷ್ಠೆ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಾಗುತ್ತಿರಲಿಲ್ಲ. ನಾನು ಇಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ, ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಜನರು ಅಥವಾ ಮಾಧ್ಯಮದ ವಿಚಾರಣೆಗಿಂತ ನ್ಯಾಯಾಲಯದ ವಿಚಾರಣೆಯನ್ನು ನಾನು ನಂಬುತ್ತೇನೆ” ಎಂದು ನಟಿ ಯಮುನಾ ಶ್ರೀನಿಧಿ ಹೇಳಿದ್ದಾರೆ. “ದರ್ಶನ್ ಸರ್ ಬಗ್ಗೆ ನನ್ನ ಬೇಷರತ್ತಾದ ಗೌರವಕ್ಕೆ ಕಾರಣ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ. ನಮ್ಮ ಮಕ್ಕಳು…

Read More

ಚಿತ್ರದುರ್ಗು ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಜುಲೈ 4ರವರೆಗೆ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆದರೆ ಸದ್ಯಕ್ಕೆ ದರ್ಶನ್ ಗೆ ಜಾಮೀನು ಸಿಗುವುದು ಬಹುತೇಕ ಅನುಮಾನವಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪೊಲೀಸರು ಈಗಾಗಲೇ ಪ್ರಬಲ ಸಾಕ್ಷ್ಯವನ್ನು ಕಲೆ ಹಾಕಿದ್ದಾರೆ. ಒಂದೊಮ್ಮೆ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ತಯಾರಿ ನಡೆಸಿದ್ದಾರೆ. ಕಳೆದ ಏಳು ದಿನದಿಂದ ಜೈಲಲ್ಲಿರುವ ನಟ ದರ್ಶನ್‌ಗೆ ಊಟ, ತಿಂಡಿ ಸೇರದೆ ಚಡಪಡಿಸುತ್ತಿದ್ದಾರೆ. ಯಾವಾಗ ಜೈಲಿನಿಂದ ಹೊರ ಹೋಗುವುದು ಎಂದು ದಿನಗಳನ್ನು ಲೆಕ್ಕಾ ಹಾಕುತ್ತಿದ್ದಾರೆ. ಈ ಮಧ್ಯೆ ದರ್ಶನ್ ವಿರುದ್ಧ ರೌಡಿಶೀಟರ್‌ ಪಟ್ಟಿಯನ್ನು ತೆಗೆಯಲು ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ರನ್ನು ನೋಡಲು ಸಾಕಷ್ಟು ಮಂದಿ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ದರ್ಶನ್ ಮಾತ್ರ ಯಾರನ್ನೂ ಭೇಟಿ ಮಾಡುತ್ತಿಲ್ಲ. ಅಲ್ಲದೆ ತಮ್ಮ ಭೇಟಿಗೆ ಯಾರಿಗೂ ಅವಕಾಶ ಕೊಡಬಾರದು ಅಂತ ಜೈಲಾಧಿಕಾರಿಗಳ ಬಳಿಕ ದರ್ಶನ್ ಮನವಿ ಮಾಡಿದ್ದಾರೆ.

Read More