ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ನಭಾ ನಟೇಶ್ ಬಳಿಕ ನನ್ನನ್ನು ದೋಚುಕುಂದುವಟೆ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿ ಟಾಲಿವುಡ್ ಗೆ ಎಂಟ್ರಿಕೊಟ್ಟ ನಭಾ ನಟೇಶ್ ಗೆ ಖ್ಯಾತಿ ತಂದುಕೊಟ್ಟಿದ್ದು 2019ರಲ್ಲಿ ತೆರೆಕಂಡ ಪೂರಿ ಜಗನ್ನಾಥ್ ನಿರ್ದೇಶಕದ ಇಸ್ಮಾರ್ಟ್ ಶಂಕರ್ ಸಿನಿಮಾ. ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಭಾ ನಟೇಶ್ ಈ ಮಧ್ಯೆ ಚಂದದ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ನಟಿಯ ಲುಕ್, ಹೇರ್ ಸ್ಟೈಲ್ ಎಲ್ಲವು ಬದಲಾಗಿದ್ದು ಈಕೆಯನ್ನು ಹೊಸ ಅವತಾರದಲ್ಲಿ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಐಸ್ಮಾರ್ಟ್ ಶಂಕರ್ ಯಶಸ್ಸಿನ ನಂತರ, ನಭಾ ನಟೇಶ್ ಅವರು ರವಿತೇಜಾ ಅವರೊಂದಿಗೆ ಡಿಸ್ಕೋ ರಾಜಾ ಚಿತ್ರದಲ್ಲಿ ನಟಿಸಿದ್ದಾರೆ. ನಭಾ ಅವರು ತಮ್ಮ 19 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ನಭಾ ನಟೇಶ್ ಯಶಸ್ಸಿನ ಹಾದಿಯಲ್ಲೇ ಸಾಗುತ್ತಿದ್ದಾರೆ. 2017ರಲ್ಲಿ ನಭಾ ಅವರು ಸುಮಂತ್ ಶೈಲೇಂದ್ರ ಅವರೊಂದಿಗೆ ಲೀ…
Author: Author AIN
ಸಾಕಷ್ಟು ಸಧಭಿರುಚಿಯ ಧಾರವಾಹಿಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡ ಇದೀಗ ಮತ್ತೊಂದು ಹೊಸ ಕಥೆಯ ಮೂಲಕ ಜನರ ಮನ ಗೆಲ್ಲಲ್ಲು ರೆಡಿಯಾಗಿದೆ. ‘ನನ್ನ ದೇವ್ರು’ ಹೆಸರಿನ ಹೊಸ ಧಾರವಾಹಿ ಹೊಸ ಕತೆಯನ್ನು ಹೊತ್ತು ತಂದಿದೆ. ಜುಲೈ 8ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ ಆರೂ ವರೆಗೆ ವೀಕ್ಷಿಸಬಹುದು. ಈ ಧಾರವಾಹಿ ಮೂಲಕ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಗ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಡ್ತಿದ್ದಾರೆ. ‘ನನ್ನ ದೇವ್ರು’ ಧಾರಾವಾಹಿಯ ಮತ್ತೊಂದು ವಿಶೇಷವೆಂದರೆ ‘ಅಶ್ವಿನಿ ನಕ್ಷತ್ರ’ ಸೀರಿಯಲ್ನಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ಜನಾನುರಾಗಿ ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಂಬಲಿಸುತ್ತಿರುವ…
ದಕ್ಷಿಣ ಗಾಜಾ ಪಟ್ಟಿಯ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್ ಪಡೆಯು ಮಂಗಳವಾರ ಬಾಂಬ್ ದಾಳಿ ನಡೆಸಿದೆ. ಇದರ ಪರಿಣಾಮ ಸಾವಿರಾರು ಮಂದಿ ಪ್ಯಾಲೆಸ್ಟೀನಿಯರು ತಮ್ಮ ಮನೆಗಳನ್ನು ತೊರೆದು ಅನ್ಯ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಪಡೆಯ ದಾಳಿಯಲ್ಲಿ ಪ್ಯಾಲೆಸ್ಟೀನ್ನ ಎಂಟು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧದಲ್ಲಿ ಸೋಮವಾರ ತಮ್ಮ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. ಹಮಾಸ್ ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಲು ಯುದ್ಧ ಟ್ಯಾಂಕರ್ಗಳು ಪುನಃ ಬರಲಿವೆ. ಹೀಗಾಗಿ, ಪೂರ್ವ ಖಾನ್ ಯೂನಿಸ್ ಭಾಗದಲ್ಲಿರುವ ವಿವಿಧ ಗ್ರಾಮಗಳು ಮತ್ತು ಪಟ್ಟಣಗಳಲ್ಲಿರುವ ಜನರು ಬೇರೆ ಸ್ಥಳಗಳಿಗೆ ತೆರಳುವಂತೆ ಇಸ್ರೇಲ್ ಸೇನೆ ಆದೇಶಿಸಿದೆ. ಇದರ ಹೊರತಾಗಿಯೂ ಅದೇ ಸ್ಥಳದಲ್ಲಿ ಉಳಿದುಕೊಂಡ ಸಾವಿರಾರು ಮಂದಿಯನ್ನು ಮಧ್ಯರಾತ್ರಿ ವೇಳೆ ಬಲವಂತವಾಗಿ ಮನೆಗಳಿಂದ ಹೊರದಬ್ಬಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವರು ತಮ್ಮ ಮನೆಗಳನ್ನು ತೊರೆದು ಅನ್ಯ ಸ್ಥಳಗಳಿಗೆ ಪಲಾಯನ ಮಾಡುತ್ತಿದ್ದಾರೆ.
ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಲ್ಲಿ ನಟ ಶಾರುಖ್ ಖಾನ್ ಕೂಡ ಒಬ್ಬರು. ಇಂದು ಶಾರುಖ್ ಖಾನ್ ಬಳಿ ಕೋಟ್ಯಾಂರ ರೂಪಾಯಿ ಬೆಲೆ ಬಾಳುವ ಕಾರುಗಳಿವೆ. ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಒಂದು ಕಾಲದಲ್ಲಿ ತೆಗೆದುಕೊಂಡ ಕಾರಿಗೆ ಇಎಂಐ ಕಟ್ಟಲಾಗದೆ ಕಾರು ಕಳೆದುಕೊಂಡಿದ್ದರು. ಅಂದಹಾಗೆ ಈ ಘಟನೆಯನ್ನು ಶಾರುಖ್ ಖಾನ್ ಸ್ನೇಹಿತೆ ನಟಿ ಜೂಹಿ ಚಾವ್ಲಾ ಹೇಳಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ಶಾರುಖ್ ಖಾನ್ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದು ಇಂದು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರನ್ನು ಹತ್ತಿರದಿಂದ ಕಂಡವರಲ್ಲಿ ಚೂಹಿ ಚಾವ್ಲಾ ಕೂಡ ಪ್ರಮುಖರು. ಸಿನಿಮಾಗಳಲ್ಲಿ ಅವರು ಜೋಡಿಯಾಗಿ ನಟಿಸಿದ್ದಾರೆ. ಅಲ್ಲದೇ ಬಿಸ್ನೆಸ್ ಪಾರ್ಟ್ನರ್ ಕೂಡ ಹೌದು. ಕೊಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲಿಕತ್ವವನ್ನು ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೂಹಿ ಚಾವ್ಲಾ ಅವರು ಹಳೇ ದಿನಗಳ ಬಗ್ಗೆ ಮಾತನಾಡಿದ್ದಾರೆ. ‘ಶಾರುಖ್ ಖಾನ್ ಬಳಿ ಕಪ್ಪು ಬಣ್ಣದ ಒಂದು…
ಶುಕ್ರವಾರ ಬಂತು ಅಂದರೆ ಗಾಂಧಿನಗರದಲ್ಲಿ ಸಂಭ್ರಮ ಶುರುವಾಗುತ್ತೆ. ಸಿನಿಮಾಗಳು ತೆರೆಗೆ ಬರುತ್ತೆ. ಹೊಸ ಹೊಸ ಪ್ರತಿಭೆಗಳು ಚಿತ್ರಗಳು ಒಂದು ಕಡೆಯಾದರೆ ಸ್ಟಾರ್ ನಟರ ಸಿನಿಮಾಗಳು ಮತ್ತೊಂದು ಕಡೆ ಬಿಡುಗಡೆ ಆಗುತ್ತವೆ. ಅಂಥದ್ದೇ ಹೊಸ ಪ್ರತಿಭೆಗಳ ಕಾಗದ ಸಿನಿಮಾ ಇದೇ ಶುಕ್ರವಾರ (ಜು.5) ತೆರೆಗೆ ಬರಲು ಸಜ್ಜಾಗಿದೆ. 2005ರ ಸಂದರ್ಭದ ಕಹಾನಿಯೂ ಈ ಸಿನಿಮಾದಲ್ಲಿದೆ. ಹೊಸ ನಟ ಆದಿತ್ಯ ಹಾಗೂ ಬಾಲನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಂ ‘ಕಾಗದ’ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡ್ತಿದ್ದಾರೆ. ಎರಡು ಹಳ್ಳಿಗಳ ನಡುವಿನ ವೈಷಮ್ಯದ ಮಧ್ಯೆಯೂ ಅರಳಿದ ಪ್ರೇಮಕಥೆ ‘ಕಾಗದ’ ಸಿನಿಮಾದಲ್ಲಿ ಇರಲಿದೆ. ಆದಿತ್ಯ ಹಾಗೂ ಅಂಕಿತಾ ಜೊತೆ ನಟಿ ನೇಹಾ ಪಾಟೀಲ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜ್ವಾಡಿ, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್, ಶಿವಮಂಜು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಅಭಿನಯ ಕಲಿತು, ಕಿರುಚಿತ್ರ ಮತ್ತು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಸಿನಿಮಾ’ ಎಂದು ಆದಿತ್ಯ ಹೇಳಿದ್ದಾರೆ. ಚಿತ್ರದಲ್ಲಿ…
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮದುವೆ ಸುದ್ದಿ ಗಾಂಧಿನಗರದಲ್ಲಿ ಜೋರಾಗಿಯೇ ಕೇಳಿ ಬರ್ತಿದೆ. ತರುಣ್ ನಟಿ ಸೋನಾಲ್ ಮಂಥೆರೋ ಅವರನ್ನು ವಿವಾಹವಾಗುತ್ತಿದ್ದಾರೆ ಎಂಬ ಗುಸು ಗುಸು ಕೇಳಿ ಬರ್ತಿದೆ. ಇದೀಗ ಈ ಬಗ್ಗೆ ತರುಣ್ ತಾಯಿ ಮಾಲತಿ ಸುಧೀರ್ ಸ್ಪಷ್ಟನೆ ನೀಡಿದ್ದಾರೆ. ತರುಣ್ ಸುಧೀರ್ – ಸೋನಾಲ್ ಮಂಥೆರೊ ಮದುವೆ ಬಗ್ಗೆ ಗಾಸಿಪ್ ಕೇಳಿ ಬಂದಿದೆ ಎಂದು ಈ ಹಿಂದೆ ನಟಿಯನ್ನು ಪ್ರಶ್ನೆ ಮಾಡಿದ್ದಕ್ಕೆ ‘’ಇದು ವದಂತಿ ಅಷ್ಟೇ’’ ಅಂತ್ಹೇಳಿ ಸೋನಾಲ್ ಮಂಥೆರೊ ನಾಚಿ ನೀರಾಗಿದ್ದರು. ಇದೀಗ ಇದೇ ಗುಸುಗುಸು ಬಗ್ಗೆ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಕ್ಲಾರಿಟಿ ಕೊಟ್ಟಿದ್ದಾರೆ. ‘’ಮಗನ ಮದುವೆ ಆಗುತ್ತೆ. ಡೇಟ್ ಇನ್ನೂ ಕನ್ಫರ್ಮ್ ಆಗಿಲ್ಲ’’ ಎಂದು ಮಾಧ್ಯಮಗಳಿಗೆ ಮಾಲತಿ ಸುಧೀರ್ ತಿಳಿಸಿದ್ದಾರೆ. ಆ ಮೂಲಕ ತರುಣ್ ಸುಧೀರ್ ಮದುವೆ ಸುದ್ದಿಯನ್ನ ತಾಯಿ ಮಾಲತಿ ಸುಧೀರ್ ಕನ್ಫರ್ಮ್ ಮಾಡಿದ್ದಾರೆ. ‘’ಹುಡುಗಿಯನ್ನ ಹುಡುಕುತ್ತಾ ಇದ್ದೀನಿ’’ ಎಂದ ಮಾಲತಿ ಸುಧೀರ್ ಅವರಿಗೆ ಸೋನಾಲ್ ಮಂಥೆರೊ…
ಭಾರತ ಮೂಲದ ಅಮೆರಿಕದ ಉದ್ಯಮಿ ರಿಷಿ ಶಾ 8300 ಕೋಟಿ ರೂ. ಹಗರಣದಲ್ಲಿ ಸಿಲುಕಿಕೊಂಡ ಪರಿಣಾಮ ಅಮೆರಿಕದ ಕೋರ್ಟ್ ಅವರಿಗೆ 7.5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರತಿಷ್ಠಿತ ಜಾಗತಿಕ ಕಂಪನಿಗಳಾದ ಗೋಲ್ಡಮನ್ ಸ್ಯಾಕ್ಸ್ ಗ್ರುಪ್, ಗೂಗಲ್ ಪೇರೆಂಟ್ ಅಲ್ಫಾಬೆಟ್, ಪ್ರಿಟ್ಸ್ಕರ್ ಕಂಪನಿಗಳಿಗೆ ವಂಚನೆ ಮಾಡಿದ ಹಿನ್ನೆಲೆ ರಿಷಿ ಶಾಗೆ ಶಿಕ್ಷೆ ನೀಡಲಾಗಿದೆ. ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿರುವ ರಿಷಿ ಶಾ, 2006ರಲ್ಲಿ ಔಟಕಮ್ ಹೆಲ್ತ್ ಕಂಪನಿ ಸ್ಥಾಪಿಸಿದ್ದರು. ವೈದ್ಯಕೀಯ ಕ್ಷೇತ್ರದ ಜಾಹೀರಾತು ಕಂಪನಿ ಇದಾಗಿದ್ದು, ಬಹುಬೇಗ ವ್ಯಾಪಕವಾಗಿ ಬೆಳೆದಿತ್ತು. ಹೂಡಿಕೆದಾರರಿಗೆ, ಗ್ರಾಹಕರಿಗೆ ರಿಷಿ ಶಾ 8300 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 2017ರಲ್ಲಿ ರಿಷಿ ಹೂಡಿಕೆದಾರರಿಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದ್ದವು. ಹೂಡಿಕೆ ಮಾಡಿದ ಕಂಪನಿಗಳು ಶಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಬಳಿಕ ರಿಷಿ ಶಾ ತಪ್ಪೊಪ್ಪಿಕೊಂಡಿದ್ದು, ಕೋರ್ಟ್ ಅವರಿಗೆ 7.5 ವರ್ಷ ಜೈಲು ಶಿಕ್ಷೆ…
ರಜನಿಕಾಂತ್ ಹಾಗೂ ಕಮಲ್ ಹಾಸನ್ ತಮಿಳು ಚಿತ್ರರಂಗದ ಖ್ಯಾತ ನಟರು. ಇಬ್ಬರು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಿ ಒಟ್ಟಾಗಿ ಸುಮಾರು 19 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದ್ರೆ ಬಳಿಕ ಮತ್ತೆಂದು ಒಂದಾಗಲೇ ಇಲ್ಲ. ಈ ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ತೆರೆ ಮೇಲೆ ನೋಡಬೇಕು ಎಂದು ಆಸೆ ಪಟ್ಟಿದ್ದ ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿತ್ತು. ಅಂದ ಹಾಗೆ ರಜನಿ ಹಾಗೂ ಕಮಲ್ ಒಟ್ಟಿಗೆ ನಟಿಸದೆ ಇರೋದಕ್ಕೆ ಕಾರಣವನ್ನು ಕಮಲ್ ಹಾಸನ್ ತಿಳಿಸಿದ್ದಾರೆ. ಎರಡು ಸ್ಟಾರ್ಗಳು ಒಟ್ಟಾಗಿ ಕೆಲಸ ಮಾಡದೆ ಇರಲು ಹಲವು ಕಾರಣ ಇರುತ್ತದೆ. ಎರಡೂ ಹೀರೋಗಳನ್ನು ಒಟ್ಟಾಗಿ ಹ್ಯಾಂಡಲ್ ಮಾಡಬಲ್ಲ ನಿರ್ದೇಶಕರು ಸಿಕ್ಕಿರುವುದಿಲ್ಲ. ಇನ್ನು ಸಿನಿಮಾದ ಬಜೆಟ್ ಕೂಡ ಹೆಚ್ಚುವುದರಿಂದ ನಿರ್ಮಾಪಕರು ಕೂಡ ರೆಡಿ ಇರಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಕಥೆ ಸಿಗಬೇಕಾಗುತ್ತದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ‘ಇದು ಹೊಸ ಕಾಂಬಿನೇಷನ್ ಅಲ್ಲ. ನಾವಿಬ್ಬರೂ ಒಟ್ಟಾಗಿ ಹಲವು ಸಿನಿಮಾ ಮಾಡಿದ್ದೇವೆ. ಆ ಬಳಿಕ ನಾವು ಒಟ್ಟಾಗಿ ಕೆಲಸ ಮಾಡಬಾರದು ಎಂದು ನಿರ್ಧರಿಸಿದೆವು.…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜುಲೈ4ಕ್ಕೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದ್ದು ದರ್ಶನ್ ಗೆ ಬೇಲ್ ಸಿಗುತ್ತಾ? ಅಥವಾ ಅಪರಾಧಿ ಎಂದು ಸಾಭಿತಾಗುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಇದೀ ಜ್ಯೋತಿಷಿಯೊಬ್ಬರು ದರ್ಶನ್ ಅವರ ಜಾತಕ ನೋಡಿ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. “ರೇಣುಕಾಸ್ವಾಮಿ ಕೊಲೆಯಾಗಿದೆ. ಈ ಥರ ಸಾವಿಗೀಡಾದವರಿಗೆ ಮೋಕ್ಷ ಸಿಗೋದಿಲ್ಲ, ಅವರು ಪ್ರೇತ ಆಗಿ ತಮಗೆ ತೊಂದರೆ ಕೊಟ್ಟವರಿಗೆ ಹಿಂಸೆ ಮಾಡ್ತಾರೆ ಅಂತ ಗರುಡ ಪುರಾಣವು ಹೇಳುತ್ತದೆ. ಆದ್ದರಿಂದ ಈ ಕೊಲೆ ಮಾಡಿದವರ ಮನೆಯಲ್ಲಿ ಏನಾದರೊಂದು ಅವಘಡ ಆಗಬಹುದು, ವಿಧ ವಿಧವಾದ ರೀತಿಯಲ್ಲಿ ಕೌಟುಂಬಿಕ ಸಮಸ್ಯೆ ಆಗಬಹುದು, ಅಷ್ಟೇ ಅಲ್ಲದೆ ಆ ಕುಟುಂಬದಲ್ಲಿ ಮುಂದೆ ಹುಟ್ಟುವ ಮಕ್ಕಳಿಗೂ ಸಮಸ್ಯೆ ಬರಬಹುದು. ದರ್ಶನ್ ಜಾತಕದ ಪ್ರಕಾರ ಅವರಿಗೆ ಸಾಡೇಸಾತ್ ನಡೆಯುತ್ತಿದೆ. ಅವರ ಜಾತಕದಲ್ಲಿ ದೇವತಾನುಗ್ರಹ ಇಲ್ಲ. ಜಾತಕದಲ್ಲಿ ಸಾಡೇಸಾತಿ ಶನಿ ಮಧ್ಯಭಾಗದಲ್ಲಿದ್ದಾನೆ” ಎಂದು ಹೇಳಿದ್ದಾರೆ. “ದರ್ಶನ್ ಜಾತಕದಲ್ಲಿ 3 ರಿಂದ 4…
ತಮ್ಮ ಸರಕಾರದ ವಿರುದ್ಧ ಎರಡು ಪ್ರಮುಖ ಪ್ರತಿಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಹೊಸ ಸರಕಾರ ರಚಿಸಲು ಪ್ರಯತ್ನ ನಡೆಸಿರುವ ಹೊರತಾಗಿಯೂ ರಾಜೀನಾಮೆ ನೀಡಲು ನಿರಾಕರಿಸಿರುವ ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ಪ್ರಚಂಡ, ಮತ್ತೊಮ್ಮೆ ವಿಶ್ವಾಸಮತ ಯಾಚಿಸುವುದಾಗಿ ಘೋಷಿಸಿದ್ದಾರೆ. ಎರಡು ಪ್ರಮುಖ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಯುಎಂಎಲ್ ಒಪ್ಪಂದ ಮಾಡಿಕೊಂಡಿದ್ದು ಹೊಸ ರಾಷ್ಟ್ರೀಯ ಸಹಮತದ ಸರಕಾರ ರಚಿಸುವುದಾಗಿ ಘೋಷಿಸಿವೆ. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದುರ್ ದೆವುಬಾ ಮತ್ತು ಸಿಪಿಎನ್-ಯುಎಂಎಲ್ ಪಕ್ಷದ ಮುಖಂಡ, ಮಾಜಿ ಪ್ರಧಾನಿ ಕೆ.ಪಿ.ಶರ್ಮ ಒಲಿ ಒಪ್ಪಂದಕ್ಕೆ ಬಂದಿದ್ದು ಈಗಿನ ಸಂಸತ್ತಿನ ಕಾರ್ಯಾವಧಿ ಮುಗಿಯುವವರೆಗೆ ಸರದಿಯ ಆಧಾರದಲ್ಲಿ ಪ್ರಧಾನಿ ಹುದ್ದೆಯನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. 275 ಸದಸ್ಯ ಬಲ ಹೊಂದಿರುವ ನೇಪಾಳಿ ಸಂಸತ್ನಲ್ಲಿ ನೇಪಾಳಿ ಕಾಂಗ್ರೆಸ್ 89 ಸ್ಥಾನ, ಸಿಪಿಎನ್-ಯುಎಂಎಲ್ 78 ಸ್ಥಾನ ಪಡೆದಿದ್ದು ಒಟ್ಟು 167 ಸದಸ್ಯರನ್ನು ಹೊಂದಿದ್ದು ಬಹುಮತಕ್ಕೆ 138 ಸ್ಥಾನಗಳ ಅಗತ್ಯವಿದೆ. ಈ ಮಧ್ಯೆ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ(ಮಾವೋವಾದಿ)ದ…