ತನ್ನನ್ನು ನೋಡಲು ಜೈಲಿಗೆ ಬಂದ ಮಗ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ದರ್ಶನ್ ಭಾವುಕರಾದ್ರು ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ಕಣ್ಣೀರು ಹಾಕಿದ್ರು ಎಂದು ವರದಿ ಆಗಿದೆ.
ಪುರುಷರೇ ಗಮನಿಸಿ: ನಿಮ್ಮ ಕಾಲುಗಳಲ್ಲಿ ಈ ಸಮಸ್ಯೆ ಕಂಡು ಬಂದ್ರೆ ಡೌಟೇ ಇಲ್ಲ ಇದು ಹೃದಯ ಕಾಯಿಲೆ!
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಹೀಗಾಗಿ ಇಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಪರಪ್ಷನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ರು. ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾದ ವಿಜಯಲಕ್ಷ್ಮಿ ಪತಿಗೆ ಧೈರ್ಯ ಹೇಳಿದ್ದಾರೆ ಎನ್ನಲಾಗ್ತಿದೆ.
ಮಗನನ್ನು ತಬ್ಬಿಕೊಂಡು ಮುದ್ದಾಡಿದ ದರ್ಶನ್, ಪತ್ನಿ ಬಳಿ ನಡೆದ ಘಟನೆಯ ಬಗ್ಗೆ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ. ಭಾವುಕರಾಗಿಯೇ ವಿಜಯಲಕ್ಷ್ಮಿ ಬಳಿ ಮಾತಾಡಿದ್ದಾರೆ ಎನ್ನಲಾಗ್ತಿದೆ
ದರ್ಶನ್ ಗೆ ಧೈರ್ಯ ತುಂಬಿದ ಪತ್ನಿ ವಿಜಯಲಕ್ಷ್ಮೀ, ಕಾನೂನು ಹೋರಾಟದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಕೆಲ ಹೊತ್ತು ದರ್ಶನ್ ಜೊತೆ ಮಾತಾಡಿದ ಬಳಿಕ ವಿಜಯಲಕ್ಷ್ಮಿ ವಾಪಸ್ ತೆರಳಿದ್ದಾರೆ.
ಭದ್ರತಾ ಕೊಠಡಿಯಲ್ಲಿರುವ ನಟ ದರ್ಶನ್ ಅವರಿಗೆ ಜೈಲಿನ ಇನ್ಸ್ ಪೆಕ್ಟರ್ ಸೇರಿದಂತೆ ಮೂರು ಸಿಬ್ಬಂದಿಯಿಂದ ಭದ್ರತೆಗೆ ಆಯೋಜಿಸಲಾಗಿದೆ. ಯಾರ ಭೇಟಿಗೂ ಅವಕಾಶವಿಲ್ಲ ಎಂದಿದ್ದಾರಂತೆ. ತನ್ನ ಜೊತೆಗಿದ್ದವರ ಜೊತೆಯೇ ನಟ ದರ್ಶನ್ ಸರಿಯಾಗಿ ಮಾತಾಡುತ್ತಿಲ್ಲ.
ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ಜೊತೆ ಹದಿನೈದು ನಿಮಿಷ ಭೇಟಿಗೆ ಅವಕಾಶ ನೀಡಲಾಗಿತ್ತು. ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ ಗಂಡನಿಗೆ ಧೈರ್ಯದ ತುಂಬಿದ್ದಾರೆ ಎನ್ನಲಾಗ್ತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)