ಹಾಸನಾಂಬ ಫಿಲ್ಮ್ಸ್ ಸಂಸ್ಥೆಯು ನಿರ್ಮಾಣದ ಕಿರುಚಿತ್ರಗಳ ಸಿನಿಮಾಗಳಿಗೆ ಆಸಕ್ತ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಆಡಿಷನ್ ನಡೆಸಲಾಗುತ್ತಿದೆ. ಈ ಅವಕಾಶವನ್ನು ಜಿಲ್ಲೆಯ ಆಸಕ್ತ ಕಲಾವಿದರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಾಸನಾಂಬ ಫಿಲ್ಮ್ಸ್ನ ದಿಲೀಪ್ ಗೌಡ ಹೇಳಿದರು.
ನಗರದ ವಾಸವಿ ಇಂಗ್ಲೀಷ್ ಶಾಲೆಯಲ್ಲಿ ಹಾಸನಾಂಬ ಫಿಲ್ಮ್ಸ್ ಸಂಸ್ಥೆಯ ಕಿರುಚಿತ್ರಗಳ ನಿರ್ಮಾಣಕ್ಕೆ ಕಲಾವಿದರ ಆಡಿಷನ್ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಸಂಸ್ಥೆ ಅನೇಕ ಕಿರುಚಿತ್ರಗಳನ್ನು ನಿರ್ಮಾಣ ಮಾಡಿ ಜನಮನ್ನಣೆ ಗಳಿಸಿದೆ. ಜನರಿಗೆ ಅನೇಕ ಉತ್ತಮ ಸಂದೇಶಗಳನ್ನು ನೀಡುವ ನಿಟ್ಟಿನಲ್ಲಿ ಕಿರುಚಿತ್ರಗಳನ್ನು ಮಾಡಲಾಗುತ್ತಿದೆ. ಆಸಕ್ತ ಕಲಾವಿದರು, ಸಿನಿಮಾಗಳಲ್ಲಿ ನmನೆ ಮಾಡಲು ಆಸಕ್ತಿ ಹೊಂದಿದವರು, ವೇದಿಕೆಗಳಿಂದ ವಂಚಿತರಾದವರು, ನಮ್ಮ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗುತ್ತಿರುವ ಕಿರು ಸಿನಿಮಾಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ಅವಕಾಶವನ್ನು ಜಿಲ್ಲೆಯ ಆಸಕ್ತ ಕಲಾವಿದರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾಸನಾಂಬ ಫಿಲ್ಮ್ಸ್ ಸಂಸ್ಥೆಯ ಸೂರ್ಯ ಅವರು ಮಾತನಾಡಿ, ನಮ್ಮ ಕಿರುಸಿನಿಮಾಗಳಲ್ಲಿ ನಟನೆ ಮಾಡಲು ಚಿಕ್ಕಮಗಳೂರು, ಹಾಸನ, ಬೆಂಗಳೂರು, ತಿಪಟೂರು ಸೇರಿದಂತೆ ವಿವಿಧೆಡೆಯಿಂದ ಅನೇಕ ಕಲಾವಿದರು ಆಡಿಷನ್ಗೆ ಬಂದಿದ್ದಾರೆ. ಆಡಿಷನ್ ಸಂಜೆ ಐದುಗಂಟಯವರೆಗೆ ನಡೆಯಲಿದೆ. ಆರ್ಆರ್ ಕಿರುಚಿತ್ರಗಳು ಸೇರಿದಂತೆ ಹಳ್ಳಿಸೊಗಡಿನ ಚಿತ್ರಣ, ಕಾಲೇಜು ವಿಷಯ ಕುರಿತಂತೆ ಉತ್ತಮ ವಿಷಾಯಧಾರಿತ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಡಿಷನ್ಗೆ ಆಗಮಿಸಿದ್ದ ಕಲಾವಿದರು ಹಾಡು , ಡೈಲಾಗ್, ನmನೆ ಮಾಡಿ ಆಡಿಷನ್ ನೀಡಿದರು. ಸುಮಾರು ಐವತ್ತಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದರು.