ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ 9 ತಿಂಗಳು ಭರ್ತಿಯಾಗಿದೆ. ಅಂದಿನಿಂದ ಇವತ್ತಿನ ತನಕವೂ ಸಾರಿಗೆ ಬಸ್ ಗಳು ತುಂಬಿತುಳುಕ್ತಿವೆ. ಶಕ್ತಿ ಯೋಜನೆಗಾಗಿ ಹಗಲು ರಾತ್ರಿ ಶ್ರಮಿಸುವ ಮಹಿಳಾ ಕಂಡೆಕ್ಟರ್ ಗೆ ಟಾರ್ಚರ್ ಆಗ್ತಿದ್ಯಾ?..ಈ ಹಿಂಸೆಯಲ್ಲಿ ಕೆಲಸ ಮಾಡಲು ಆಗ್ತಿಲ್ಲ ksrtc ನಿರ್ವಾಹಕಿಯೊಬ್ಬರು ಹಾಕಿರುವ ಕಣ್ಣಿರು, ಇಂತಹದೊಂದು ಪ್ರಶ್ನೆ ಮೂಡಲು ಕಾರಣವಾಗಿದೆ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಶಕ್ತಿ ಯೋಜನೆ ಆರಂಭವಾದ ದಿನದಿಂದ ತುಂಬಿ ತುಳುಕಿದ ಬಸ್ಗಳು ಈಗಲೂ ರಶ್ ಆಗಿಯೇ ಓಡಾಡ್ತಿವೆ. ನಿತ್ಯ ಪ್ರಯಾಣಿಕರ ಗೋಳಾಟ.. ಪರದಾಟ…ಗದ್ದಲ, ಗೊಂದಲ ಗಲಾಟೆಗಳ ನಡುವೆ 9 ತಿಂಗಳು ಭರ್ತಿಯಾಗಿ.. 10ನೇ ತಿಂಗಳು ಸಾರಿಗೆ ಬಸ್ ನಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸ್ತಿದ್ದಾರೆ. ಆದರೆ ಶಕ್ತಿ ಯೋಜನೆ ಬಸ್ ಕಂಡೆಕ್ಟರ್ ಹಾಗೂ ಡ್ರೈವರ್ ಗಳಿಗೆ ಟಾರ್ಚರ್ ಗೆ ಕಾರಣವಾಗ್ತಿಯಾ? ಇಂತಹದೊಂದು ಪ್ರಶ್ನೆಗೆ ಕಾರಣವಾಗಿದ್ದು ಈ ವಿಡಿಯೋ
ಇವರು ಕೆ.ಎಸ್.ಆರ್.ಟಿ.ಸಿ ಕಂಡೆಕ್ಟರ್…ದೀಪಾಂಜಲಿ ನಗರದ ksrtc ಡಿಪೋ 5ದಲ್ಲಿ ಕೆಲಸ ಮಾಡ್ತಿದ್ದಾರೆ. ಅಧಿಕಾರಿಗಳು ಕೊಡ್ತಿರುವ ಟಾರ್ಚರ್ ಗೆ ಕೆಲಸ ಮಾಡಲ್ತಿಲ್ಲ ಅಂತ ಗಳಗಳನೇ ಅತ್ತಿದ್ದಾರೆ. ಪಿರಿಯಡ್ಸ್ ಆಗಿದೆ ಅಂದರೂ ಡ್ಯೂಟಿ ಮಾಡಿ ಅಂತಾರೆ ಅಂತ ಕಣ್ಣಿರು ಸುರಿಸಿದ್ದಾರೆ. ಅಷ್ಟಕ್ಕೂ ಈ ಟಾರ್ಚರ್ ಗೆಲ್ಲ ಪ್ರಮುಖ ಕಾರಣ Ksrtc ಡಕೋಟ ಬಸ್ ಗಳಿಂದ ಚಾಲಕರು ಹಾಗೂ ನಿರ್ವಾಹಕರು ಅನುಭವಿಸ್ತಿರೋ ಸಂಕಷ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಂತೆ.
ಟಾರ್ಚರ್ ಕೆಎಸ್ಆರ್ಟಿಸಿ
ಅಕ್ಟೊಬರ್ 17ರಂದು ತಮ್ಮ ಬಸ್ ಸರಿಯಿಲ್ಲ ಅಂತ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದ ಮಂಜಮ್ಮ
ಪದೆ-ಪದೇ ಬಸ್ ಹಾಳಾಗಿ ನಿಂತು ಸಮಸ್ಯೆ ಆಗ್ತಿದೆ ಅಂತ ವಿಡಿಯೋ ಮಾಡಿ ಕಳುಹಿಸಿದ್ರು
ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕಾಗಿ ಡಿಪೋ ಮ್ಯಾನೇಜರ್ ರಿಂದ ಕಿರುಕುಳ ಆರೋಪ
ಎರಡು ದಿನ ಬಿಟ್ಟು ಅಂದರೆ ಅಕ್ಟೋಬರ್ 19ಕ್ಕೆ ಮಂಜಮ್ಮ ಮೇಲೆ ಚಾರ್ಜ್ ಶೀಟ್ ದಾಖಲು
ಅಗಸ್ಟ್ 29 ಅಂದರೆ ಒಂದೂವರೆ ತಿಂಗಳ ಹಿಂದೆ ಕರ್ತವ್ಯ ಲೋಪ ಮಾಡಿದ್ದೀರಿ ಅಂತ ಚಾರ್ಜ್ ಶೀಟ್
ಒಂದೂವರೆ ತಿಂಗಳ ನಂತರ ಚಾರ್ಜ ಶೀಟ್ ಹಾಕಿದ್ದ ಡಿಪೋ ಮ್ಯಾನೇಜರ್ ಎಂ.ಕೃಷ್ಣಪ್ಪ
ಅಲ್ಲದೆ ಡಿಪೋ ಮ್ಯಾನೇಜರ್ ಎಂ.ಕೃಷ್ಣಪ್ಪ ಅವರು ಬೇಗ ಬಂದರೂ ಲೇಟ್ ಆಗಿ ಡ್ಯೂಟಿ ನೀಡ್ತಿದ್ದಾರೆ
ಎಷ್ಟೇ ತಡವಾದ್ರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಟಾರ್ಚರ್ ನೀಡ್ತಿದ್ದಾರೆ ಅಂತ ಆರೋಪ
ಅತ್ತ ಟಾರ್ಚರ್ ಬಗ್ಗೆ ಕೆಸ್ ಆರ್ಟಿಸಿ ಸಿಟಿಎಂ ಅಂತೋನಿ ಜಾರ್ಜ್ ಗಮನಕ್ಕೆ ತಂದರೆ ದರ್ಪದ ಮಾತುಗಳಿದ್ದಾರೆ. ದರಿದ್ರ ಅಂತ ನಿಂದಿಸಿರುವ ಆಡಿಯೋ ಕೂಡ ಲಭ್ಯವಾಗಿದೆ
ಕೆಎಸ್ಆರ್ ಟಿಸಿ ಸಿಟಿಎಂ ದರ್ಪ
ಸಿಟಿಎಂ ಅಂತೋನಿ ಜಾರ್ಜ್: ಸುಮ್ಮನೆ ವಿಡಿಯೋ ಬಿಡೋದೆಲ್ಲ ಬಿಟ್ಟು ಕೆಲಸ ಮಾಡೋದು ಕಲಿತ್ಕೊ
ಕಂಡೆಕ್ಟರ್ ಮಂಜಮ್ಮ: ಸರ್…..
ಸಿಟಿಎಂ ಅಂತೋನಿ ಜಾರ್ಜ್: ನೋಡಮ್ಮ ನಾನು ಹೇಳೋದು ಕೇಳಿಸ್ಕೊ, ಕಂಡೆಕ್ಟರ್ ಆಗಿ ಕೆಲಸ ಮಾಡೋದು ಕಲಿತ್ಕೋ, ಡೋರ್ ಬಂದಿಲ್ಲ..ವಿಡಿಯೋ ಬಿಡೋದು ಸರಿಯಿರಲ್ಲ ನೋಡಮ್ಮ, ಎಲ್ಲ ದಿನ ಇದೆ ತರಹ ಆಗಲ್ಲ. ತಿನ್ನೋ ಮನೆಗೆ ದ್ರೋಹ ಬಗೆಯೋದು ಸರಿಯಲ್ಲ
ಕಂಡೆಕ್ಟರ್ ಮಂಜಮ್ಮ: ಸರ್ ನಾವು ಆ ರೀತಿಯೆಲ್ಲ ಮಾಡಲ್ಲ….
ಸಿಟಿಎಂ ಅಂತೋನಿ ಜಾರ್ಜ್: ಫೋನ್ ಇಡಮ್ಮ ಸಾಕು, ದರಿದ್ರವೂ!!*
ಟಾರ್ಚರ್ ಬಗ್ಗೆ ಸಾರಿಗೆ ಸಚಿವರಿರೂ ಮಂಜಮ್ಮ ಪತ್ರ ಬರೆದಿದ್ದಾರಂತೆ ದೀಪಾಂಜಲಿ ನಗರದ ಡಿಪೋ 5ರ 44 ಜನರ ಸಹಿ ಹಾಕಿ ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಡ್ಯೂಟಿ ನೀಡದೆ ಸುಮ್ಮನೆ ರಜೆ ಅಂತ ಬರೆಯುತ್ತಿದ್ದಾರೆ..ತಡವಾಗಿ ಗಾಡಿ ಕೊಟ್ಟು ಪೂರ್ತಿ ಕಿಲೋ ಮೀಟರ್ ಮಾಡಬೇಕು ಅಂತ ಟಾರ್ಚರ್ ನೀಡ್ತಿದ್ದಾರೆ..ಡಿಪೋ ಮ್ಯಾನೇಜರ್ ಕೇಳಿದ್ರೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ..ಘಟಕದಲ್ಲಿ ಸುಮ್ಮನೆ ಮೂರ್ನಾಲ್ಕು ದಿನ ಕೂರಿಸಿಕೊಂಡು ರಜೆ ಅರ್ಜಿ ಬರೆಸಿಕೊಳ್ತಿದ್ದಾರೆ..ಲೇಡಿಸ್ ಗೆ ತೊಂದರೆ ಇದೆ ಅಂದರೂ, ತಡವಾಗಿ ಗಾಡಿಕೊಟ್ಟು ಟ್ರಿಪ್ ಪೂರ್ತಿ ಮಾಡಲು ಟಾರ್ಚರ್ ನೀಡ್ತಿದ್ದಾರೆ, ರಜೆನೂ ಸರಿಯಾಗಿ ಕೊಡಲ್ಲ ಅಂತ ನೋವು ತೊಡಕೊಂಡಿದ್ದಾರೆ.
ಸಿಎಂಗೂ ಜನಸ್ವಂದನದಲ್ಲಿ ಈ ಬಗ್ಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಚಿವರು ಪರಿಶೀಲನೆ ನಡೆಸಿ, ಅಧಿಕಾರಿಗಳು ಟಾರ್ಚರ್ ವಿರುದ್ಧ ಕ್ರಮ ಕೈಗೊಳ್ತಾರಾ ಕಾದು ನೋಡಬೇಕಿದೆ.