ಬೆಂಗಳೂರು:- ಮೂರು ವರ್ಷದ ಬಳಿಕ ಬನಶಂಕರಿ ದೇವಸ್ಥಾನದಲ್ಲಿ ಅಂಜನೇಯ ದೇಗುಲ ನಿರ್ಮಾಣ ಅಸ್ತು ಎನ್ನಲಾಗಿದೆ.
ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರ ದೇವಸ್ಥಾನ ಎಷ್ಟು ಪ್ರಸಿದ್ದಿ ಪಡೆದಿದಿಯೋ ಅಷ್ಟೇ ದೇವಸ್ಥಾನದಲ್ಲಿರುವ ಅಂಜನೇಯ ದೇವಸ್ಥಾನವು ಕೂಡ ಅಷ್ಟೇ ಪ್ರಸಿದ್ದಿ ಪಡೆದಿದೆ. ಸಧ್ಯ ಅಂಜನೇಯ ದೇವಸ್ಥಾನವನ್ನ ಅಭಿವೃದ್ಧಿ ಪಡಿಸುವ ಸಲುವಾಗಿ ಕಳೆದ 9 ತಿಂಗಳ ಹಿಂದೆ ಅಂಜನೇಯ ದೇವಸ್ಥಾನವನ್ನ ಡೆಮಾಲೀಷನ್ ಮಾಡಲಾಗಿತ್ತು. ಇದೀಗ ಹಲವು ತಿಂಗಳ ಬಳಿಕ ದೇವಸ್ಥಾನದ ಕೆಲಸ ಆರಂಭವಾಗಿದೆ.
ಅಂಜನೇಯ ದೇವಸ್ಥಾನವನ್ನ ಕಳೆದ 8 ತಿಂಗಳ ಹಿಂದೆ ಡೆಮಾಲಿಶ್ ಮಾಡಲಾಗಿತ್ತು. ಆದಾದ ಬಳಿಕ ದೇವಸ್ಥಾನ ನಿರ್ಮಾಣಕ್ಕೆ ಮುಜುರಾಯಿ ಇಲಾಖೆಯಿಂದ ಹಣ ಸ್ಯಾಂಕ್ಷನ್ ಆಗಿರ್ಲಿಲ್ಲ. ಇದೀಗ ದೇವಸ್ಥಾನ ಕಾಮಗಾರಿ ಮುಜುರಾಯಿ ಇಲಾಖೆ ಪರ್ಮಿಷನ್ ನೀಡಿದ್ದು, ಒಟ್ಟು 9 ಕೋಟಿ 96 ಲಕ್ಷದಷ್ಟು ಹಣದಿಂದ ದೇವಸ್ಥಾನ ನಿರ್ಮಾಣದ ಕೆಲಸ ನಡೆಯುತ್ತಿದೆ. ಇನ್ನು ದೇವಸ್ಥಾನವು ದ್ರಾವಿಡ ಶೈಲಿಯಲ್ಲಿ ಮೂಡಿ ಬರುತ್ತಿದ್ದು, ವಿಶೇಷವಾಗಿ 38 ವಿಶೇಷ ಕಂಬಗಳನ್ನ ನಿರ್ಮಿಸಲಾಗುತ್ತಿದೆಯಂತೆ. ಈ ಅಂಜನೇಯ ಪ್ರತಿಮೆಯನ್ನ ಬದಲಿಸಿ ದೊಡ್ಡ ಮಟ್ಟದ ಪ್ರತಿಮೆಯನ್ನ ಕೆತ್ತಿಸಲು ಚಿಂತನೆ ನಡೆದಿದ್ದು, ಈ ಪ್ರತಿಮೆಯನ್ನ ರಾಮಮಂದಿರದ ಬಾಲರಾಮನನ್ನ ಕೆತ್ತಿರುವ ಅರುಣ್ ಯೋಗರಾಜ್ ರಿಂದಲೇ ಮೂರ್ತಿ ಕೆತ್ತಿಸಲೂ ದೇವಸ್ಥಾನದ ಆಡಳಿತ ಮಂಡಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ.
ಈಗಾಗಲೇ ದೇವಸ್ಥಾನದ ಕೆಲಸವು ಆರಂಭ ಮಾಡಿದೆ. ಇನ್ನು ಒಂದು ವರ್ಷದಲ್ಲಿ ದೇವಸ್ಥಾನ ನಿರ್ಮಾಣದ ಕಲಸ ಮುಗಿಯಲಿದ್ದು, ದೊಡ್ಡ ಮಟ್ಟದಲ್ಲಿ ದೇವಸ್ಥಾನ ನಿರ್ಮಿಸಲು ಆಡಳಿತ ಮಂಡಳಿ ಸಜ್ಜಾಗಿದೆ.