ಬಳ್ಳಾರಿ: ಕಳೆದ ಮಾರ್ಚ್ 5 ರಂದು ಬಳ್ಳಾರಿಯಲ್ಲಿ ಮಾಜಿ ಮೇಯರ್ ಮಗನಿಂದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೇ ಹಲ್ಲೆಗೊಳಗಾದ ಯುವಕ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ತಲೆ ಭಾಗಕ್ಕೆ ಬಡಿಗೆಯಿಂದ ಬಲವಾದ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು, ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹಲ್ಲೆಗೊಳಗಾದ ಯುವಕ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ.
ಘಟನೆ ಹಿನ್ನಲೆ
ಬಳ್ಳಾರಿ ಮಾಜಿ ಮೇಯರ್ ನಾಗಮ್ಮ ಮಗ ರಘು ಹುಟ್ಟು ಹಬ್ಬದ ದಿನದಂದೇ ಡಿಜೆ ಹಾಕಿ ತಲವಾರ್ ಹಿಡಿದು ಡ್ಯಾನ್ಸ್ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರಘು ಹಾಗೂ ಅವನ ಸ್ನೇಹಿತರಿಂದ ತಿಪ್ಪೇಸ್ವಾಮಿ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಲಾಗಿತ್ತು. ಬಡಿಗೆ ಯಿಂದ ಹಲ್ಲೆ ಮಾಡಿದರ ಪರಿಣಾಮ ತಿಪ್ಪೆಸ್ವಾಮಿಯ ತೆಲೆ ಹಾಗೂ ದೇಹದ ಇತರ ಭಾಗಗಕ್ಕೆ ತೀವ್ರ ಗಾಯಗಳಾಗಿತ್ತು.
ಬಳ್ಳಾರಿ ಗಾಂಧಿ ನಗರ ಠಾಣೆಯಲ್ಲಿ ರಘು ಸೇರಿ ಎಂಟು ಜನರ ವಿರುದ್ದ ಎಫ್ ಐ ಆರ್ ಆಗಿತ್ತು. ಪ್ರಮುಖ ಆರೋಪಿ ರಘು ಸೇರಿ ಏಳು ಜನರನ್ನ ಬಂದಿಸಿದ್ದ ಪೋಲೀಸರು. ಆರೋಪಿಗಳಾದ ರಘು, ಅನಿಲ್, ಮುತ್ತು, ಬಾಸ್ಕರ್ ಸೇರಿದಂತೆ ಏಳು ಜನರ ಬಂಧನವಾಗಿತ್ತು.