ಚಿಕ್ಕಮಗಳೂರು: ಗೋಬ್ಯಾಕ್ ಶೋಭಾ ಕರಂದ್ಲಾಜೆ ಎಂಬ ಅಭಿಯಾನ ವಿಚಾರ ಒಬ್ಬರ ತೇಜೋವಧೆ ಮಾಡಿ ಟಿಕೆಟ್ ಕೇಳುವುದು ಸರಿಯಲ್ಲ ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಟಿಕೆಟ್ ಕೇಳೋದು ತಪ್ಪಲ್ಲ, ಟಿಕೆಟ್ ಕೇಳುವುದಕ್ಕೂ ರೀತಿಯಿದೆ ಅಭಿವೃದ್ಧಿ ವಿಚಾರವಾಗಿ ಚುನಾವಣೆ ಎದುರಿಸ್ತೇನೆಂದು ಹೇಳಿದ್ದೇನೆ ನಾನು ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಕ್ಷೇತ್ರದ ಮತದಾರರು, ಹೈಕಮಾಂಡ್ ಇದಕ್ಕೆ ಉತ್ತರ ನೀಡುತ್ತಾರೆ ಕೆಲವೇ ದಿನದಲ್ಲಿ ಉತ್ತರ ನೀಡಬೇಕಾದವರೇ ಉತ್ತರ ಕೊಡುತ್ತಾರೆ ಹೈಕಮಾಂಡ್ ಮುಂದೆ ಎಲ್ಲವೂ ಚರ್ಚೆಯಾಗುತ್ತೆ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರಿಂದ ಇಂತಹ ಕೆಲಸ ಎಂದು ಆರೋಪ
ಈ ಹಿಂದೆ ಇದ್ದ ಪಕ್ಷದಲ್ಲೂ ಇದೇ ಕೆಲಸ ಮಾಡಿಕೊಂಡು ಬಂದವರು ಇಂತಹ ಅಭಿಯಾನಕ್ಕೆ ಯಾರೋ ಸ್ಪಾನ್ಸರ್ ಮಾಡಿದ್ದಾರೆ ನನ್ನ ವಿರೋಧ ಮಾಡುವವರಿಗೆ ಬಹಿರಂಗ ಆಹ್ವಾನ ನೀಡುತ್ತೇನೆ ಅಭಿವೃದ್ಧಿ ಹೆಸರಲ್ಲಿ ಚರ್ಚೆಯಾಗಲಿ, ಮುಕ್ತ ಅವಕಾಶವಿದೆ ಚರ್ಚೆಗೆ ಬನ್ನಿ ಈ ರೀತಿ ವಿರೋಧಗಳಿದ್ದಾಗಲೇ ನಾವು ಮತ್ತಷ್ಟು ಗಟ್ಟಿಯಾಗ್ತವೆ ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.