ವಿಜಯಪುರ:- ಗ್ರಾಹಕರ ಹಣದ ಸುರಕ್ಷತೆಗೆ ಹೆಸರುವಾಸಿಯಾದ ಪೋಸ್ಟ್ ಆಫೀಸ್ನಲ್ಲಿಯೂ ಹಣಕ್ಕೆ ಭದ್ರತೆ ಇಲ್ಲ. ಯಾಕೆ ಎಂದು ತಿಳಿಯಲು ಈ ಸುದ್ದಿ ಪೂರ್ತಿ ಓದಿ..
ನಿಮ್ಮ ಕೂದಲು ಹೊಳೆಯಲು ಈ ಹಣ್ಣು ಬಳಸಿ.. ಮ್ಯಾಜಿಕ್ ನೋಡಿ ನೀವೆ ಬೆರಗಾಗ್ತೀರಾ!?
ನಗರದ ಅಂಚೆ ಕಚೇರಿಯಲ್ಲಿ ಗ್ರಾಹಕರ ಖಾತೆಯಿಂದ ಸಿಬ್ಬಂದಿಯೇ ಹಣ ಎಗರಿಸಿರುವ ಆರೋಪ ಕೇಳಿಬಂದಿದೆ. ಚೆನ್ನಬಸಯ್ಯ ಶಾಸ್ತ್ರೀಮಠ ಎಂಬುವವರು ಜಲನಗರ ಅಂಚೆ ಕಚೇರಿಯಲ್ಲಿ ಚಾಲ್ತಿ ಖಾತೆಯನ್ನು ಹೊಂದಿದ್ದಾರೆ. ತಮ್ಮ ಖಾತೆಯಲ್ಲಿ ಚೆನ್ನಬಸಯ್ಯ 2,22,442 ಹಣವನ್ನು ಇಟ್ಟಿದ್ದರು. ಈ ಹಣದಲ್ಲಿ ಮೇ.27 ರಂದು 1,50,000 ಹಣ ಡ್ರಾ ಆಗಿದೆ ಎಂದು ಚೆನ್ನಬಸಯ್ಯ ಅವರಿಗೆ ಮೆಸೇಜ್ ಬಂದಿದೆ. ‘ನಾನು ಹಣವನ್ನೇ ಡ್ರಾ ಮಾಡಿಲ್ಲ, ಆದರೂ ನನ್ನ ಖಾತೆಯಿಂದ 1.50 ಲಕ್ಷ ರೂಪಾಯಿ ಡೆಬಿಟ್ ಆಗಿದ್ದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದರು.
ಕೂಡಲೇ ಅಂಚೆ ಕಚೇರಿಗೆ ಹೋಗಿ ಕ್ಯಾಶಿಯರ್ ಕೆಲಸ ಮಾಡುತ್ತಿದ್ದ ಶ್ರೀಕಾಂತ ಶಿವೂರ ಎಂಬುವವರಿಗೆ ಪ್ರಶ್ನೆ ಮಾಡಿದ್ದಾರೆ. ನನ್ನ ಖಾತೆಯಿಂದ ಹಣವನ್ನೇ ತೆಗೆದಿಲ್ಲ. ಆದರೂ ಹಣ ಹೇಗೆ ಡೆಬಿಟ್ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಆಗ ಕ್ಯಾಶಿಯರ್ ಶ್ರೀಕಾಂತ ಶಿವೂರ ‘ನಾನೇ ಹಣ ಡ್ರಾ ಮಾಡಿದ್ದು, ತುರ್ತು ಹಣ ಬೇಕಾಗಿತ್ತು ಎಂದು ಶ್ರೀಕಾಂತ ಹೇಳಿದರಂತೆ. ಇದರಿಂದ ಸಿಟ್ಟಾದ ಚೆನ್ನಬಸಯ್ಯ, ಮಾರನೇ ದಿನ ಅಂದರೆ ಮೇ.28 ರಂದು ನಗರ ಸ್ಟೇಷನ್ ರಸ್ತೆಯಲ್ಲಿರೋ ಮುಖ್ಯ ಅಂಚೆ ಕಚೇರಿಯ ಪ್ರಧಾನ ವ್ಯವಸ್ಥಾಪಕರಿಗೆ ಭೇಟಿಯಾಗಿ ಶ್ರೀಕಾಂತ ಶಿವೂರ ಮೇಲೆ ದೂರು ನೀಡಿದ್ದಾರೆ.
ಈ ವಿಚಾರ ಶ್ರೀಕಾಂತ ಶಿವೂರಗೆ ತಿಳಿಯತ್ತಿದ್ದಂತೆ ಕೂಡಲೇ ಚೆನ್ನಬಸಯ್ಯ ಅವರ ಖಾತೆಗೆ 1.50 ಲಕ್ಷ ಹಣವನ್ನು ಹಾಕಿದ್ಧಾರೆ. ಇದು ಅಂಚೆ ಕಚೇರಿಯ ಖಾತೆ ಹೊಂದಿರುವ ಚೆನ್ನಬಸಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜಲನಗರ ಅಂಚೆ ಕಚೇರಿಗೆ ತೆರಳಿ ಕ್ಯಾಶಿಯರ್ ಶ್ರೀಕಾಂತ ಶಿವೂರ್ ಹಾಗೂ ಇತರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಗ್ರಾಹಕರೊಬ್ಬರು ಮಾತನಾಡಿ, ‘ನಾವು ಕಷ್ಟ ಪಟ್ಟು ಕೇಂದ್ರ ಸರ್ಕಾರದ ಆಧೀನದ ಅಂಚೆ ಕಚೇರಿಗಳನ್ನು ನಂಬಿ ಹಣ ಇಟ್ಟಿರುತ್ತೇವೆ. ದೇಶದಲ್ಲಿ ಅದೆಷ್ಟೋ ಬ್ಯಾಂಕ್ಗಳು ಗ್ರಾಹಕರಿಗೆ ಮೋಸ ಮಾಡಿವೆ. ಅದಕ್ಕಾಗಿ ನಾವು ಅಂಚೆ ಕಚೇರಿಗಳನ್ನು ನಂಬಿ ಹಣ ಇಟ್ಟಿದ್ದೇವೆ. ಇಲ್ಲಿನ ಸಿಬ್ಬಂದಿ ಮಾಡಿದ ತಪ್ಪಿಗೆ ಇತರರ ಮೇಲೂ ನಮಗೆ ಸಂಶಯ ಮೂಡುತ್ತದೆ. ಅಂಚೆ ಕಚೇರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಗ್ರಾಹಕರು ಅಸಮಾಧಾನ ಹೊರ ಹಾಕಿದರು.