ಬೆಂಗಳೂರು:- ವಿಪಕ್ಷ ಸ್ಥಾನದಲ್ಲಿರುವ ಅಶೋಕ ಒಬ್ಬ ಬೆನ್ನುಮೂಳೆಯಿಲ್ಲದ ನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಿತ್ಯ ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುತ್ತಾ ಬನ್ನಿ ನಿಮ್ಮ ಬಳಿ ಸುಳಿಯಲ್ಲ ಈ ಕಾಯಿಲೆಗಳು..!
ಈ ಸಂಬಂಧ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿ ಬಗ್ಗೆ ನಿಲುವು ಸ್ಪಷ್ಟಪಡಿಸದೆ ನುಣುಚಿಕೊಳ್ಳುತ್ತಿರುವ ಅಶೋಕ ಒಬ್ಬ ಬೆನ್ನುಮೂಳೆಯಿಲ್ಲದ ನಾಯಕ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಜ್ವಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದು ನಿಜ, ಅದನ್ನು ಅಲ್ಲಗಳೆಯುವುದಿಲ್ಲ, ಆದರೆ 2024 ರ ಚುನಾವಣೆಗೆ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ಅಶೋಕ ಯಾಕೆ ಮಾತಾಡಲ್ಲ, ಎಲ್ಲರೂ ಜಾರಿಕೊಂಡರೆ ಉತ್ತರ ಕೊಡುವವರು ಯಾರು? ಎಂದು ಶಿವಕುಮಾರ್ ಕೇಳಿದರು.
ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ ಕುಮಾರ್, ಅಶ್ವಥ್ ನಾರಾಯಣ, ಪ್ರಲ್ಹಾದ್ ಜೋಶಿ ಮೊದಲಾದವರೆಲ್ಲ ಎಲ್ಲಿ? ಯಾಕೆ ಅವರು ಮೈತ್ರಿ ಬಗ್ಗೆ ಮಾತಾಡುತ್ತಿಲ್ಲ? ತಮ್ಮ ನಿಲುವು ಏನು ಅನ್ನೋದನ್ನು ಯಾಕೆ ಸ್ಪಷ್ಟಪಡಿಸುತ್ತಿಲ್ಲ? ಮೈತ್ರಿಯನ್ನು ಮುಂದುವರಿಸುತ್ತೀರಾ, ಮೊಟಕುಗೊಳಿಸುತ್ತೀರಾ ಅಂತ ಅಶೋಕ ಹೇಳಬೇಕು ತಾನೇ? ಮುಂದುವರಿಸುತ್ತೇವೆ ಅಂತ್ಲೇ ಹೇಳಲಿ ಯಾರು ಬೇಡ ಅಂತಾರೆ, ಆದರೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಲ್ವಾ? ಎಂದು ಶಿವಕುಮಾರ್ ಹೇಳಿದರು.