ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸ್ತೀನಿ ಎಂದು ವಂಚಿಸಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ವಿರೂಪಾಕ್ಷಪ್ಪ, ಮಂಜಪ್ಪ ಎಂಬುವರನ್ನು ಬಂಧಿಸಿದ ಪೊಲೀಸರು ಪಶ್ವಿಮ ಬಂಗಾಳ ಮೂಲದ ಬ್ಯುಸಿನೆಸ್ ಮೆನ್ ಗೆ ಬರೋಬ್ಬರಿ 1.57 ಕೋಟಿ ರೂ. ವಂಚಿಸಿದ್ದ ಇಬ್ಬರು ಆರೋಪಿಗಳು.
BREAKING: ಮಲ್ಲಿಕಾರ್ಜುನ ಖರ್ಗೆಯನ್ನ ದಿಢೀರ್ ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ
ಮಗಳಿಗೆ ಪಿಜಿ ಮೆಡಿಕಲ್ ಸೀಟ್ ಕೊಡಿಸಲು ಪ್ರಯತ್ನಪಡ್ತಿದ್ದ ಪೋಷಕರುಈ ವೇಳೆ ಪರಿಚಯಸ್ಥ ವಿರೂಪಾಕ್ಷಪ್ಪ ಸೀಟ್ ಕೊಡಿಸೋದಾಗಿ ಹೇಳಿದ್ರು ಬಳಿಕ ಮಂಜಪ್ಪ ಎಂಬುವರನ್ನ ಪರಿಚಯ ಮಾಡಿಸಿದ್ದ ವಿರೂಪಾಕ್ಷಪ್ಪ 2022ರಲ್ಲಿ ಈ ಸಂಬಂಧ ಬ್ಯಾಡರಹಳ್ಳಿ ಕಚೇರಿಯೊಂದರಲ್ಲಿ ಡೀಲ್ ಆಗಿತ್ತು
ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜ್ ಮ್ಯಾನೆಜ್ಮೆಂಟ್ ಪರಿಚಯವಿದ್ದಾರೆ, ವೈದ್ಯಕೀಯ ಶಿಕ್ಷಣ ಇಲಾಖೆಯ ದೊಡ್ಡ ಅಧಿಕಾರಿಗಳ ಪರಿಚಯ ಇದೆ ಎಂದಿದ್ದ ಮಂಜಪ್ಪ ಹಾಗಾಗಿ ಮಂಜಪ್ಪನ ಮಾತು ನಂಬಿ 1.57 ಕೋಟಿ ರೂ. ನೀಡಿದ್ದ ಪೋಷಕರು
ಸೀಟ್ ಸಿಗ್ಲಿಲ್ಲ ಅಂದ್ರೂ ಷೇರ್ ಮಾರ್ಕೆಟ್ ನಲ್ಲಿ ಹಣ ಡಬಲ್ ಮಾಡ್ತೀನಿ ಕೊಡ್ತೀನಿ ಅಂತ ನಂಬಿಸಿದ್ದ ಆದ್ರೆ 2 ವರ್ಷ ಕಳೆದ್ರೂ ಆರೋಪಿಗಳು ಸೀಟ್ ಕೊಡಿಸ್ಲಿಲ್ಲ, ಹಣವನ್ನೂ ಕೊಡಲಿಲ್ಲ ಹಣ ವಾಪಸ್ ಕೇಳಿದ್ರೆ ಪೋಷಕರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ರಂತೆ ಹೀಗಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪೋಷಕರು ಸದ್ಯ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿರೋ ಪೊಲೀಸರು