ಬೆಂಗಳೂರು: ಮಳೆ ಬಂದ್ರೆ ಸಾಕು ತಾವೆಲ್ಲಾ ಬೈಕ್ ಬಿಟ್ಟು ಮನೆಗೆ ಅಥವಾ ಆಫೀಸ್ ಗೆ ಹೋಗ್ತೀರಾ.. ಆದ್ರೆ ಅದನ್ನೆ ಬಂಡವಾಳ ಮಾಡಿಕೊಂಡು ಖದೀಮರು ಬೈಕ್ ಕದ್ದು ಎಸ್ಕೇಪ್ ಅಗಿದ್ದ ಆರೋಪಿಗಳಿಬ್ಬರನ್ನ ಪೊಲೀಸರು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.. ಹಾಗಾದರೆ ಖದೀಮರು ಯಾರು ಅಂತೀರಾ ತೋರ್ಸ್ತೀವಿ ನೋಡಿ… ಯೆಸ್… ಮಳೆ ಬಂದ್ರೆ ಎಲ್ರೂ ಮನೆ ಸೇರಿಕೊಳ್ತಾರೆ. ಮಳೆಯಲ್ಲಿ ಯಾರಪ್ಪ ಹೊರಗಡೆ ಹೋಗ್ತಾರೆ ಅಂತ ಸೋಂಬೇರಿ ಬೀಳ್ತಾರೆ. ಈ ಮಳೆಗಾಲವೆ ಈ ಕಳ್ಳರಿಗೆ ಬೆಸ್ಟ್ ಟೈಮ್. ಬೈಕ್ ಕದಿಯೋಕೆ ಮಳೆ ಟೈಮ್ ಅನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಕಳ್ಳರು ಪೊಲೀಸ್ರ ಬಲೆಗೆ ಬಿದ್ದಿದ್ದಾರೆ.
ನವೀನ್, ತರುಣ್ ಬಂಧಿತ ಬೈಕ್ ಕಳ್ಳರಾಗಿದ್ದು, ರಾತ್ರಿ ಹೊತ್ತು ಮನೆ ಹೊರಗಡೆ ನಿಲ್ಲಿಸುತ್ತಿದ್ದ ಬೈಕ್ ಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಿಲಾಡಿಗಳು ಮಳೆ ಬರುವ ಹೊತ್ತಲ್ಲಿ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದರು. ಮಳೆ ಬರುವ ವೇಳೆ ಜನ ಯಾರು ಹೊರಗಡೆ ಬರಲ್ಲ ಎಂದು ಹೊಂಚು ಹಾಕಿ ಹ್ಯಾಂಡಲ್ ಲಾಕ್ ಬೈಕ್ ಮುರಿದು ಕಳ್ಳತನ ಮಾಡ್ತಿದ್ರು. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸ್ರು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ 7 ಲಕ್ಷ ಮೌಲ್ಯದ 11 ಬೈಕ್ ಗಳು ಸೀಜ್ ಮಾಡಿದ್ದಾರೆ.
Pension Rules: ಗಂಡನ ಸಾವಿನ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ? EPFO ನಿಯಮದಲ್ಲಿ ಏನಿದೆ..?
ಹೌದು ಐಪಿಎಲ್ ಪಂದ್ಯಗಳನ್ನ ವೀಕ್ಷಿಸಲು ಬರುವವರ ಮೊಬೈಲ್ ಫೋನ್ಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಸಿದ್ದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಪಂಕಜ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ಆತನಿಂದ 19.50 ಲಕ್ಷ ಮೌಲ್ಯದ 32 ಮೊಬೈಲ್ ಫೋನ್ಗಳನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು,
ಪತ್ತೆಕಾರ್ಯ ಮುಂದುವರೆದಿದೆ. ಇನ್ನು ಜಾರ್ಖಂಡ್ ಮೂಲದವರಾದ ಆರೋಪಿಗಳು, ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಸ್ಟೇಡಿಯಂ ಬಳಿ ಜನಸಂದಣಿ ಇರುವಾಗ ಮೊಬೈಲ್ ಫೋನ್ಗಳನ್ನ ಕಳ್ಳತನ ಮಾಡುತ್ತಿದ್ದರು.ಮೇ 18ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ವೀಕ್ಷಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಸಿದ್ದಾಪುರದಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು.
ಈ ವೇಳೆ ಬಿಎಂಟಿಸಿ ಬಸ್ನಲ್ಲಿ ಜನಸಂದಣಿಯ ನಡುವೆ ಅವರ ಮೊಬೈಲ್ ಫೋನ್ನ್ನ ಆರೋಪಿಗಳು ಎಗರಿಸಿದ್ದರು. ಬಸ್ ಇಳಿದ ಬಳಿಕ ಪರಿಶೀಲಿಸಿದಾಗ ಫೋನ್ ಇಲ್ಲದಿರುವುದನ್ನ ಗಮನಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ಕೊನೆಗೆ ಸಿದ್ಧಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಫೋನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ತನ್ನ ಮೂವರು ಸಹವರ್ತಿಗಳೊಂದಿಗೆ ಸೇರಿ ನಗರದ ವಿವಿಧೆಡೆ ಮೊಬೈಲ್ ಫೋನ್ಗಳನ್ನ ಕಳ್ಳತನ ಮಾಡುತ್ತಿದ್ದುದು ತಿಳಿದು ಬಂದಿದೆ. ಸದ್ಯ ಉಳಿದ ಮೂವರು ಆರೋಪಿತರು ಪರಾರಿಯಾಗಿದ್ದು, ಬಂಧಿತನ ವಿಚಾರಣೆ ಮುಂದುವರೆಸಲಾಗಿದೆ ಎಂದು ನಗರ ಪೊಲೀಸ್ ಅಯುಕ್ತ ಬಿ ದಯಾನಂದ ಹೇಳಿದ್ದಾರೆ. ಏನೇ ಆಗಲಿ ಮೈ ಬಗ್ಗಿಸಿ ಕೆಲಸ ಮಾಡೋದು ಬಿಟ್ಟು ಈತರ ಕಳ್ಳತನ ಮಾಡಿ ಕಂಬಿಹಿಂದಿ ನಿಂತಿದ್ದಾರೆ ಈ ಖದೀಮರು.. ಇನ್ನಾದ್ರು ಮಳೆ ಬರುವ ಸಂದರ್ಭದಲ್ಲಿ ಬೈಕ್ ನಿಲ್ಲಿಸಿ ಹೋಗುವುದು ಹಾಗೂ ಜನದಟ್ಟಣೆಯಲ್ಲಿ ಮೊಬೈಲ್ ಇಟ್ಟುಕೊಂಡು ಓಡಾಡುವಾಗ ಹುಷಾರಾಗಿ ಇರುವುದು ಒಳ್ಳೆಯದು.