ನಿಮಗೆ ಯಾವಾಗಲೂ ಸುಸ್ತು ಆಗುವುದು, ನಿಶ್ಯಕ್ತಿಯ ಅನುಭವ ಆಗುವುದು, ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವಂತಾಗುತ್ತಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿರಿ
ಯಾವಾಗಲೂ ಸುಸ್ತು ಆದಂತಹ ಅನುಭವ ಆಗುವುದು, ಸದಾ ನಿಶ್ಯಕ್ತಿಯಿಂದ ದೇಹದ ಬಳಲುವುದು, ಯಾವುದೇ ಕೆಲಸದಲ್ಲೂ ಆಸಕ್ತಿ ಇಲ್ಲದೆ ಇರುವಂತಾಗುವುದು ಮುಂತಾದವು. ಹೀಗೆ ಸಾಕಷ್ಟು ರೀತಿಯ ಅನಾರೋಗ್ಯದ ಪರಿಣಾಮಗಳನ್ನು ಪ್ರತಿಯೊಬ್ಬರು ಒಂದಿಲ್ಲೊಂದ ಕ್ಷಣ ಅನುಭವಿಸಿಯೇ ತೀರಿರುತ್ತಾರೆ.
ಇವುಗಳಿಗೆಲ್ಲ ಮುಖ್ಯ ಕಾರಣವೆಂದರೆ ನೀವು ದೈಹಿಕ ಹಾಗೂ ಮಾನಸಿಕವಾಗಿ ಅನಾರೋಗ್ಯದಿಂದ ಕೂಡಿರುವಿರಿ ಎಂದು ಅರ್ಥ. ಹಾಗಿದ್ದರೆ ಹೀಗೆ ಆಗುವುದಕ್ಕೆ ಮುಖ್ಯ ಕಾರಣವೇನು? ಇದನ್ನ ಹೋಗಲಾಡಿಸಲು ನಾವು ಏನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.
ದೇಹದಲ್ಲಿ ಸದಾ ಆಯಾಸದ ಅನುಭವ ಆಗುವುದು. ಎಷ್ಟೊ ಜನರಿಗೆ ಸದಾ ದೈಹಿಕ ಅಥವಾ ಮಾನಸಿಕ ಬಳಲಿಕೆಯ ಅನುಭವವಾಗುತ್ತದೆ. ಇದಕ್ಕೆ ಕಾರಣ ಪೌಷ್ಠಿಕಾಂಶಗಳ ಕೊರತೆ (Vitamin Deficiency), ಹಾರ್ಮೋನುಗಳ ಸಮಸ್ಯೆ (Hormonal Problem), ಜತೆಗೆ ಜೀವನ ಶೈಲಿಯೂ (Life Style) ಕೂಡ ಈ ತರದ ಬಳಲಿಕೆಗೆ ಕಾರಣವಾಗುತ್ತವೆ
ತಾಜಾ ಸೊಪ್ಪು, ತರಕಾರಿಗಳ ಸೇವನೆ (Consumption of fresh greens and vegetables) : ಆಹಾರದಲ್ಲಿ ತಾಜಾ ಸೊಪ್ಪು ತರಕಾರಿ, ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.
ಇದು ದೇಹಕ್ಕೆ ಬೇಕಾದ ಸಾಕಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ಅಲ್ಲದೇ ಆರೋಗ್ಯದ ವೃದ್ಧಿಯಲ್ಲಿ ಹಸಿರು ತಾಜಾ ಸೊಪ್ಪು-ತರಕಾರಿಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ.