ಮೈಸೂರು: ದರ್ಶನ್ ಕಲೆ, ಕಲಾತ್ಮಕತೆಯ ಜೊತೆಗೆ ಕೈಚಳಕನೂ ನೋಡಬೇಕಾಯಿತು. ಎಷ್ಟು ನಡೆಯುತ್ತದೆ ಅವರ ಕೈಚಳಕ? ದರ್ಶನ್ ನಮ್ಮ ಮೈಸೂರಿನ ಮಗ. ಆತನಿಗೆ ಜನರು ಪ್ರೀತಿ, ಪ್ರೋತ್ಸಾಹ, ಅಭಿಮಾನ ಎಲ್ಲವನ್ನೂ ಕೊಟ್ಟರು. ಆದರೆ, ಆತ ಏನು ಮಾಡಿಕೊಂಡ?” ಎಂದು ಎಂಎಲ್ಸಿ ಎಚ್ ವಿಶ್ವನಾಥ್ ಪ್ರಶ್ನಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನಾವು ಯಾರ ಬಗ್ಗೆ ಓದಬೇಕು ಎಂಬುದನ್ನು ತಿಳಿಯೋದೆ ಕಷ್ಟವಾಗಿದೆ. ಸೂರಜ್ ಬಗ್ಗೆನಾ, ದರ್ಶನ್ ಬಗ್ಗೆನಾ, ಪ್ರಜ್ವಲ್ ಬಗ್ಗೆನಾ…? ಛೇ! ಇವರೆಲ್ಲರೂ ಚರಿತ್ರೆಯ ಪುಟಗಳನ್ನು ಸೇರುತ್ತಾರೆ. ಇವರೇ ಚರಿತ್ರೆಯಾಗುತ್ತಾರೆ. ಅವರೇ ಹೀರೋಗಳು,
![Demo](https://ainlivenews.com/wp-content/uploads/2023/12/spoorthi-1.jpg)
ಹೊಸ ‘ರೇಷನ್ ಕಾರ್ಡ್’ ಗೆ ಅರ್ಜಿ ಸಲ್ಲಿಸುವವರೇ ಗಮನಿಸಿ.. ಈ ದಾಖಲೆಗಳು ಮಾತ್ರ ಕಡ್ಡಾಯ
ಅವರ ಬಗ್ಗೆ ಸಿನಿಮಾಗಳೂ ಆಗಿಬಿಡಬಹುದು. ಜನರು ಶಾಶ್ವತವಾಗಿ ಯಾರಿಗೂ ನೆನಪಿನಲ್ಲಿ ಉಳಿಯುವುದಿಲ್ಲ. ಅಭಿಮಾನಿ ದೇವರುಗಳೇ ಅನ್ನುತ್ತಿದ್ದ ರಾಜ್ಕುಮಾರ್ ಅವರನ್ನೇ ನೆನಪಿಸಿಕೊಳ್ಳುತ್ತಿಲ್ಲ. ಜನರಿಗೆ ಮರೆವು ಇದೆ. ದರ್ಶನ್ ಅಭಿಮಾನಿಗಳ ಅಭಿಮಾನ ಎಷ್ಟು ದಿನ ಉಳಿಯುತ್ತದೆ?” ಎಂದು ಎಚ್ ವಿಶ್ವನಾಥ್ ಕೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)