ಹುಬ್ಬಳ್ಳಿ:- ಪರಿಶಿಷ್ಟರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆದು, ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಈಚೆಗೆ ಪರಿಶಿಷ್ಟರ ಮೇಲೆ ಶೋಷಣೆ, ಅಸ್ಪೃಶ್ಯ ಆಚರಣೆಗಳು ಹೆಚ್ಚುತ್ತಿವೆ. ಧಾರವಾಡ ಜಿಲ್ಲೆಯ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮದ ಪರಿಶಿಷ್ಟ ಜಾತಿಯ ವಿರೂಪಾಕ್ಷಪ್ಪ ಹರಿಜನ ಅವರು ಮೇಲ್ತಾತಿ ಅವರ ಮನೆ ಪ್ರವೇಶಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಕೊಲೆ ಯತ್ನ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಲು ಹೋಗಿದ್ದ ಪರಿಶಿಷ್ಟ ಜಾತಿಯ ಯಮನೂರಪ್ಪ ಬಂಡಿಹಾಳಅವರನ್ನು ಕೊಲೆ ಮಾಡಲಾಗಿದೆ.
ಇಂತಹ ಘಟನೆಗಳು ಪುನರಾವರ್ತನೆಯಾಗದಂ- ತೆ ಪರಿಶಿಷ್ಟರಿಗೆ ಕಾನೂನು ಬದ್ಧ ರಕ್ಷಣೆ ಒದಗಿಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೂ ಭೇಟಿ ನೀಡುವುದಿಲ್ಲ. ಅವರಿಂದ ಯಾವ ರಕ್ಷಣೆಯ ನಿರೀಕ್ಷೆ ಹೊಂದಲು ಸಾಧ್ಯ’ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಮುಖಂಡರಾದ ಕೆಂಚಪ್ಪ ಮಲ್ಲಮ್ಮನವರ ಮುಂತಾದವರು ಭಾಗವಹಿಸಿದ್ದರು.