ಬಳ್ಳಾರಿ: ಬಳ್ಳಾರಿಯಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ನಾಗೇಂದ್ರ ಭಾಷಣ ಮಾಡಿದ್ದು, ಒಂದು ಸುಳ್ಳಿಗೆ ಒಂದು ಸತ್ಯಕ್ಕೆ ಚುನಾವಣೆಯಾಗಿದೆ. ಸುಳ್ಳಿಗೆ ಬಿಜೆಪಿ, ಸತ್ಯಕ್ಕೆ ಕಾಂಗ್ರೆಸ್, ಈ ಚುನಾವಣೆ ಬಹಳ ಪ್ರತಿಷ್ಠೆಯ ಚುನಾವಣೆ, ನಮ್ಮ ಗ್ಯಾರಂಟಿ ಬಗ್ಗೆ ಪ್ರಧಾನಿ ಕೂಡಾ ಹಾಸ್ಯ ಮಾಡಿದ್ರು, ಆದ್ರೇ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದು ಹೇಳಿದರು.
ಇನ್ನೂ ಹನ್ನೆರಡನೇ ತಾರೀಖು ನಾಮಿನೇಷನ್ ಆದ ಮೇಲೆ ನಮ್ಮ ಆಟ ಶುರುವಾಗುತ್ತೆ, ಒಬ್ಬ ಆ್ಯಕ್ಟರ್, ಇನ್ನೊಬ್ಬ ವರ್ಕರ್ ನಡುವೆ ನಡೆಯುವ ಚುನಾವಣೆಯಾಗಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಸಾಕಷ್ಟು ಸುಳ್ಳು ಹೇಳ್ತಾರೆ, ಈ ಬಾರಿ ಯಾರೇ ಬಿಜೆಪಿ ಅಭ್ಯರ್ಥಿ ಆದ್ರೂ ಸೋಲಿಸೋದು ಗ್ಯಾರಂಟಿ, ಬಿಜೆಪಿ ಅವರು ಅಬ್ ಕಿ ಬಾರ್ ಚಾರ್ ಸೌ ಪಾರ್ ಅಂತಾರೆ, ಆದ್ರೇ ಅಬ್ ಕಿ ಬಾರ್ ಪಾರ್ಲಿಮೆಂಟ್ ಕಿ ಬಹರ್ ಆಗ್ತಾರೆ ಬಿಜೆಪಿ ಎಂದು ವ್ಯಂಗ್ಯವಾಡಿದ್ದು.