ಹುಬ್ಬಳ್ಳಿ : ಏನೇ ಸುಗ್ರೀವಾಜ್ಞೆ ಜಾರಿಗೆ ತಂದರೂ ಸಹ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ಲುತ್ತಿಲ್ಲ. ಇದೀಗ ಹುಬ್ಬಳ್ಳಿಯಲ್ಲಿ ಬಡ್ಡಿ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಬಡ್ಡಿದಂಧೆಕೋರರ ಕಿರುಕುಳದಿಂದಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಗಣನೀಯ ಹೆಚ್ಚಳಕ್ಕೆ ಸಿಇಒ ಜೆ.ಸೋಮಶೇಖರ್ ಸೂಚನೆ
ಹುಬ್ಬಳ್ಳಿಯ ಉಣಕಲ್ ನಿವಾಸಿ ಶಿವಾನಂದ ಕಳ್ಳಿಮನಿ (36) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರ್ತಿಕ್ ಬಳ್ಳಾರಿ ಎಂಬುವವರ ಬಳಿ 4 ಲಕ್ಷ ಸಾಲ ಪಡೆದಿದ್ದ ಶಿವಾನಂದ್, ಈಗಾಗಲೇ ನಾಲ್ಕು ಲಕ್ಷ ಬಡ್ಡಿ ತುಂಬಿದ್ದಾರೆ. ಆದರೆ ಇನ್ನೂ ಕೂಡ ಬಡ್ಡಿ ಕಟ್ಟುವಂತೆ ಒತ್ತಡ ಹಾಕಿದ್ದಾರೆ. ನಿರಂತರ ಬಡ್ಡಿ ಕಿರುಕುಳದಿಂದಾಗಿ ಬೇಸತ್ತ ಶಿವಾನಂದ್ ಡೆತ್ ನೋಟ್ ಬರೆದಿಟ್ಟು, ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಮ್ಸ್ ನ ಶವಾಗಾರದ ಮುಂದೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.