ಬೆಂಗಳೂರು:- ಯಲಹಂಕದಿಂದ ಯಶವಂತಪುರಕ್ಕೆ ಬರುತ್ತಿದ್ದ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಬಲಿಯಾಗಿರುವ ಘಟನೆ ನಗರದ ಟಾಟಾ ಇನ್ ಸ್ಟಿಟ್ಯೂಟ್ ಮುಂಭಾಗದಲ್ಲಿ ಜರುಗಿದೆ.
ಮಮತಾ ಬ್ಯಾನರ್ಜಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸುಪ್ರೀಂ!
ಘಟನೆಯಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಂದಿಲ್ಲ. ಬರೋಬ್ಬರಿ ಎಪ್ಪತ್ತು ನಿಮಿಷವಾದ್ರೂ ಪೋಲಿಸರು ಆಗಮಿಸಲಿಲ್ಲ.
ಸ್ಥಳದಲ್ಲೇ ಮೃತದೇಹ ಇದ್ದು, ಬಿಎಂಟಿಸಿ ಅಧಿಕಾರಿಗಳಿಂದಲೂ ರೆಸ್ಪಾನ್ಸ್ ಇಲ್ಲದಂತಾಗಿದೆ.