ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಬಿರುಕು ಬಿಟ್ಟಿದ್ದು, ಜನತೆ ಆತಂಕದಲ್ಲಿದ್ದಾರೆ.
ನಗರದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಎರಡು ದಿನಗಳ ಹಿಂದೆಯಷ್ಟೇ ಬಾಬುಸಾಪಾಳ್ಯದ ಕಟ್ಟಡವೊಂದು ಬುಡಮೇಲಾಗಿ ಉರುಳಿತ್ತು. ಇದೀಗ ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ಬಿರುಕು ಬಿಟ್ಟಿದ್ದು, ಕೊಂಚ ವಾಲಿದಂತೆ ಕಾಣುತ್ತಿದೆ. ಪುಟ್ಟಪ್ಪ ಎಂಬುವರಿಗೆ ಈ ಕಟ್ಟಡ ಸೇರಿದ್ದು, ಈಗಾಗಲೇ ಕಟ್ಟಡ ತೆರವಿಗಾಗಿ ಬಿಬಿಎಂಪಿ ಅಧಿಕಾರಿಗಳಿಂದ ಸೂಚನೆಯನ್ನು ನೀಡಲಾಗಿದೆ.
ನಿಖಿಲ್ ಗೆಲುವು ನಿಶ್ಚಿತ, ಬೇರೆಯವರ ಬಗ್ಗೆ ಮಾತನಾಡಲು ಇಷ್ಟ ಪಡಲ್ಲ: ಯಡಿಯೂರಪ್ಪ!
ನಂಜಪ್ಪ ವಾರ್ಡ್ನ ಸರ್ವೇ ನಂಬರ್ 54/1ರಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಸೆ.20 ರಂದು ಕಟ್ಟಡ ತೆರವಿಗಾಗಿ ಬಿಬಿಎಂಪಿಯಿAದ ನೋಟಿಸ್ ನೀಡಲಾಗಿತ್ತು. ಅ.14 ರಂದು ತೆರವಿಗಾಗಿ ಉತ್ತರ ನೀಡಿದ್ದ ಮಾಲೀಕ ಅ.24 ರಂದು ಅಂದರೆ ಇಂದು ತೆರವುಗೊಳಿಸುವುದಾಗಿ ತಿಳಿಸಿದ್ದರು. ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಕಟ್ಟಡವನ್ನು ತೆರವುಗೊಳಿಸುವುದಾಗಿ ತಿಳಿಸಿದ್ದರು. ನೆಲಮಹಡಿ ಸೇರಿದಂತೆ ಒಟ್ಟು 6 ಅಂತಸ್ತಿನ ಮಹಡಿಯ ಮನೆಯನ್ನು ಉರುಳಿಬಿದ್ದ ಕಟ್ಟಡದಂತೆಯೇ ಕಟ್ಟಿಸಲಾಗಿತ್ತು. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ನಿರ್ಮಾಣದ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ. ಮಂಜೂರಾತಿ ನಕ್ಷೆ, ನಡು ಜಾಗಗಳನ್ನು ಬಿಡದೇ ಕಟ್ಟಡವನ್ನು ಕಟ್ಟಿಸಿದ್ದರು.