ಚಿಕ್ಕೋಡಿ : ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಗಂಗಾರಾಮ ಪ್ರಥಮ ದರ್ಜೆ ಕಾಜೇಜು, ನ್ಯಾಷನಲ್ ಪಿ ಯು ಕಾಲೇಜು ಹಾಗೂ ಲಿಟಲ ಹಾರ್ಟ್ ಬಿ. ಆರ್. ಆಜೂರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾರೂಗೇರಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯಾಗಿ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು
ದಿವ್ಯ ಸಾನಿಧ್ಯವನ್ನು ಪೂಜ್ಯ ಗುರುಸಿದ್ದ ಸ್ವಾಮೀಜಿ ಬೆಂಡವಾಡ ವಹಿಸಿದ್ದರು ಮುಖ್ಯ ಅತಿಥಿಗಳ ಸ್ಥಾನ ವಹಿಸಿ ಮಾತನಾಡಿದ ಶಶಿಕಾಂತ ಗುರೂಜಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ದೇಶಭಿಮಾನದ ಪ್ರತೀಕವಾಗಬೇಕು ಈ ನಿಟ್ಟಿನಲ್ಲಿ ಸದೃಢ ಸಮಾಜಕ್ಕೆ ಅಡಿಪಾಯ ಎಂದು ಹೇಳಿದರು,
ಮದುವನಗಿತ್ತಿಯಂತೆ ಶೃಂಗಾರ ಗೊಂಡಿರುವ ಭವ್ಯ ವರ್ಣರಂಜಿತ ವೇದಿಕೆಯು ಮಕ್ಕಳ ಪಾಲಕ ಪೋಷಕರ ಸಂತಸವನ್ನು ಇಮ್ಮಡಿಗೊಳಿಸಿತು, ವೇದಿಕೆಯಲ್ಲಿ ಮಕ್ಕಳು ಜಾನಪದ ದೇಶಭಕ್ತಿ ಗೀತೆ, ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದ ನೃತ್ಯ ವೈಭವ ನೋಡುಗರನ್ನು ಮಂತ್ರ ಮುಗ್ದಗೊಳಿಸಿದವು. ಕಾರ್ಯಕ್ರಮದಲ್ಲಿ ದುಂಡಪ್ಪ ಆಜೂರ, ಸಂಗಪ್ಪ ಅಪ್ಪನಗೋಳ, ಬಿ. ಸಿ. ಸರಿಕರ, ಹಣಮಂತ ಬೆನ್ನಡಿ, ಬಸವರಾಜ ಸನದಿ, ಕಾರ್ಯದರ್ಶಿ ಶ್ರೀಧರ್ ಆಜೂರ್, ಪ್ರಾಚಾರ್ಯಕೀರ್ತಿಕುಮಾರ ಬಾಳೋಜಿ, ಪ್ರಮೋದ್ ಚಂಡಕೆ, ಅನಿಲ್ ಸರ್, ಸುಧಾಕರ್ ಕಾಂಬ್ಳೆ, ಜಿತೇಂದ್ರ ಕದಂ,ರಾಜು ಸನದಿ, ಪೂಜಾ ಸಪ್ತಸಾಗರ, ಸುಧಾ ಗುಣದಾಳ, ಐಶ್ವರ್ಯ ಹೋನಗೌಡರ್,ರೋಮನ ಜಮಾದಾರ, ಶೃತಿ ಚನ್ನದಾಸರ, ಮುಂತಾದವರು ಉಪಸ್ಥಿತರಿದ್ದರು, ಸಂಸ್ಥೆಯ ಅಧ್ಯಕ್ಷ ಬಿ. ಆರ್. ಆಜೂರ ಸರ್ವರನ್ನು ಸ್ವಾಗತಿಸಿದರು ಶಾಲಾ ಮಕ್ಕಳು ಪ್ರಾರ್ಥಿಸಿದರು, ಸುಧಾರಾಣಿ ಪೋಳ ವಾರ್ಷಿಕ ವರದಿವಾಚನ ಮಾಡಿ ಕೊನೆಯಲ್ಲಿ ವಂದಿಸಿದರು