ಆನೇಕಲ್:- ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಬೆಂಗಳೂರು ಹೊರವಲಯಗ ಜಿಗಣಿ ಪೊಲೀಸರಿಂದ ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳ: ಕೆಲಸಗಿಟ್ಟಿಸಿಕೊಂಡ ನೂರಾರು ಅಭ್ಯರ್ಥಿಗಳು!
ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದಿಂದ ದಾಳಿ ನಡೆದು ಪರಿಶೀಲಿಸಿದ್ದಾರೆ. ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಗಳ ಮನೆಯಲ್ಲಿ ಖಾಕಿ ತಲಾಶ್ ನಡೆಸಿದೆ. ಪೊಲೀಸರಿಂದ ರೌಡಿ ಶೀಟರ್ ಗಳ ಮನೆಗಳ ಸರ್ಚಿಂಗ್ ನಡೆದಿದ್ದು, ಕೆಲವು ರೌಡಿ ಶೀಟರ್ ಗಳ ಮನೆಗಳಲ್ಲಿ ಮಾರಕಸ್ತ್ರಗಳು ಪತ್ತೆಯಾಗಿದೆ. ಕೂಡಲೇ ಆರು ಮಂದಿ ರೌಡಿ ಶೀಟರ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆತಂದು ಅವರನ್ನು ಪೊಲೀಸರು, ವಿಚಾರಣೆ ಮಾಡುತ್ತಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ರೌಡಿಗಳ ಬೆವರಿಳಿಸಿದ್ದಾರೆ.