ಗಂಗಾವತಿ:- ಆನೆಗುಂದಿ ಗ್ರಾಮ ಪಂಚಾಯತಿ ಪಿಡಿಒ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.
ಕಳೆದ ಏಳು ವರ್ಷಗಳಿಂದ ಆನೆಗುಂದಿ ಗ್ರಾಮ ಪಂಚಾಯತಿ ಯ ಪಿಡಿಒ ಆಗಿ ಕೆಲಸ ಮಾಡುತ್ತಿರುವ ಕೃಷ್ಣಪ್ಪ ಯಾವ ZP ಸಿಇಒ ಗೆ ಕಡಿಮೆ ಇಲ್ಲ. ಗಂಗಾವತಿಯ ಮಲ್ಲಾಪುರದಲ್ಲಿ ಕಾರ್ಯದರ್ಶಿ ಯಾದ ನೇಮಕವಾದ ಕೃಷ್ಣಪ್ಪ ಮೂಲತಃ ಖಾಸಗಿ ಶಾಲೆಯ ಶಿಕ್ಷಕ, ಕಳೆದ ಐದು ವರ್ಷಕ್ಕಿಂತ ಹೆಚ್ಚಾಗಿ ಆನೆಗುಂದಿ ಪಿಡಿಒ ಕೆಲಸ ಮಾಡುತ್ತಿರುವ ಕೃಷ್ಣಪ್ಪನ ಆಸ್ತಿಗೆ ಲೆಕ್ಕವಿಲ್ಲ, ಇದಕ್ಕೆ ಕಾರಣ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳ ಸಹಕಾರವೇ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ವರ್ಷ ಬಿಸಿಯೂಟ ನೇಮಕಾತಿ ವಿಷಯದಲ್ಲಿ ವಿಧವೆಗೆ ಬಿಟ್ಟು ವಿಧ್ಯಾಭ್ಯಾಸ ಅರ್ಹತೆ ಎಂದೇಳಿ ಅಕ್ರಮ ನೇಮಕಾತಿ ಮಾಡಿದ್ದು ಒಂದು, ಆರು ತಿಂಗಳ ಹಿಂದೆ ಮತ್ತೆ ಬಿಸಿಯೂಟ ನೌಕರರ ನೇಮಕಾತಿಯಲ್ಲಿ ವಿಷ ಬೀಜ ಬಿತ್ತಿದ್ದೇ ಇದೇ ಪಿಡಿಒ ಕೃಷ್ಣಪ್ಪ.
ಉದ್ಯೋಗ ಖಾತ್ರಿ ಯಲ್ಲಿ ಲಕ್ಷಾನುಗಟ್ಟಲೇ ನಡೆಯದೇ ಇರುವ ಅಕ್ರಮ ಕಾಮಗಾರಿ ಹೆಸರಿನಲ್ಲಿ ಆನೆಗುಂದಿಯ ಗ್ರಾಮ ಪಂಚಾಯತಿ ಪಿಡಿಒ ಲೂಟಿ ಹೊಡೆದಿದ್ದಾರೆ. ನಿನ್ನೆ ನಡೆದ ಆನೆಗುಂದಿ ಬೋಟ್ ಹರಾಜು ಪ್ರಕ್ರಿಯೆ ಯಲ್ಲಿ ಭಾಗವಹಿಸಿದರಿಗೆ ಅನ್ಯಾಯ ವಾಗಿದೇ ಎಂದು ದೂರು ಕಳೆದ ಎಳು ವರ್ಷಗಳಿಂದ ಒಂದೆ ಜಾಗದಲ್ಲಿ ಕೆಲಸ ಮಾಡುತ್ತಿರುವ ನಿಮ್ಮ ಇಲಾಖೆಯ ಪಿಡಿಒ ಕಡೆಯಿಂದ
ಮಾಹಿತಿ ಸರಿಯಾಗಿ ನೀಡದೇ ಪಾರದರ್ಶಕತೆ ಇಲ್ಲದೇ ದೌರ್ಜನ್ಯ ಅರೋಪ ಕೇಳಿ ಬಂದಿದೆ.
ಅಧ್ಯಕ್ಷ , ಉಪಾಧ್ಯಕ್ಷ ಹಾಗೂ ನೋಡಲ್ ಅಧಿಕಾರಿ ಇಲ್ಲದೇ ಟೆಂಡರ್ ಪ್ರಕ್ರಿಯೆ ನಡೆಸಿ ಸೂಕ್ತ ದಾಖಲಾತಿ ಇಲ್ಲದವರಿಗೆ ಬುದ್ದಿವಂತ ಪಿಡಿಒ ಕೃಷ್ಣಪ್ಪ ಟೆಂಡರ್ ನೀಡಿದ್ದಾನೆ.
ಇದಕ್ಕೆ ನೇರವಾಗಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳ ಸಹಕಾರವೇ ಇಷ್ಟು ದೌರ್ಜನ್ಯ ನಡೆಸಲು ಕಾರಣ ಎಂದು ದೂರು ನೀಡಿದರು ಪಂಚಾಯತಿ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.