ಉತ್ತರ ಕನ್ನಡ:- ಕಾರವಾರ ತಾಲೂಕಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ಮಳೆಯಿಂದ ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.
ಬೆಳಗ್ಗೆ ಎದ್ದಾಕ್ಷಣ ಹೆಚ್ಚು ಬಾಯಾರಿಕೆ ಆಗುತ್ತಿದ್ದರೆ ಇದು ಈ ರೋಗದ ಲಕ್ಷಣ!
ಹಳೇ ಅಂಗಡಿಯ ಗೋಡೆ ಕುಸಿದು 70 ವರ್ಷದ ರುಕ್ಮಾ ಮಾಳ್ಸೇಕರ ಮೃತ ದುರ್ದೈವಿ ಎನ್ನಲಾಗಿದೆ. ಭಾರಿ ಮಳೆ ಬರುತ್ತಿದ್ದ ಹಿನ್ನೆಲೆ ಮೃತ ವೃದ್ಧೆ ಹಳೇ ಅಂಗಡಿಯ ಬಳಿ ನಿಂತಿದ್ದರು. ಈ ವೇಳೆ ಗೋಡೆ ಕುಸಿದು ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ ನೊರೋನ್ಹಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)