ಬೆಂಗಳೂರು: ಬೆಂಗಳೂರಲ್ಲಿ ಯಾರದ್ದು ಜಾಗಕ್ಕೆ ಇನ್ಯಾರೋ ಬೇಲಿ ಹಾಕ್ತಾರೆ. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊದು ಖತರ್ನಾಕ್ ಗ್ಯಾಂಗ್ ಬೆಂಗಳೂರು ಎಸ್ಪಿ ಕಚೇರಿ ಜಾಗವನ್ನೇ ಕಬಳಕೆ ಮಾಡುವುದಕ್ಕೆ ಹೋಗಿ ಮೂವರು ಪೊಲೀಸರ ಅತಿಥಿಯಾಗಿದಾರೆ ಎಸ್ ಪಿ ಕಚೇರಿಯ ದಾಖಲೆಗಳನ್ನು ನಕಲಿ ಮಾಡಿ ಮಾರಾಟಕ್ಕೆ ಮುಂದಾಗಿದ ಪ್ರಮುಖ ಆರೋಪಿಗಳ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರ್ ಸಿಟಿಯಲ್ಲಿ ಖಾಲಿ ಜಾಗ ಕಾಣಿಸಿದ್ರೆ ಸಾಕು. ಯಾರದ್ದೋ ಜಾಗಕ್ಕೆ ಯಾರೋ ಅಪ್ಪ ಅಮ್ಮ ಆಗ್ತಾರೆ. ಇನ್ಯಾರೋ ಬೇಲಿ ಹಾಕ್ತಾರೆ. ಇಂತಹ ಪ್ರಕರಣಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಒಂದ್ ಸೈಟ್ ತೆಗೆದುಕೊಳ್ಳಬೇಕಾದ್ರೆ ಸಾವಿರ ಸಲ ಯೋಚನೆ ಮಾಡಿ, ದಾಖಲೆಗಳ ಪರಿಶೀಲಿಸಿ ಫರ್ಚೇಸ್ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಖಾಲಿ ಸೈಟ್ ಗಳ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡ್ತಿರೊ ಭೂಗಳ್ಳರು ಧೈರ್ಯ ಮಾಡಿ ಸೂಪರಿಡೆಂಟ್ ಆಪ್ ಪೊಲೀಸ್ ಕಚೇರಿಯ ಆಸ್ತಿಯನ್ನೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿ ಪೊಲೀಸ್ರ ಅತಿಥಿಯಾಗಿದ್ದಾರೆ.
ಹೌದು ಬೆಂಗಳೂರಿನ ಹೃದಯ ಭಾಗದಲ್ಲಿರೋ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ನೇಪಾಳ ರಾಜರ ಹೆಸ್ರಿನಲ್ಲಿದೆಯಂತೆ. ಅದೊಂದ್ ಕಡೆ ಸಿವಿಲ್ ಡಿಸ್ಫ್ಯೂಟ್ ಇದೆ. ಇರದ ನಡುವೆ ಎಸ್ ಪಿ ಕಚೇರಿಯ ಆಸ್ತಿಗಳನ್ನ ನಕಲಿ ಮಾಡಿಕೊಂಡಿರೋ ಕೆಲ ಭೂಗಳ್ಳರು ಸದ್ದಿಲ್ಲದೇ ಯಾವ್ದೋ ಬಕ್ರನ ಹುಡುಕಿ ಎಸ್ ಪಿ ಕಚೇರಿಯ ಆಸ್ತಿಯನ್ನ ಮಾರಾಟ ಮಾಡಲು ಯತ್ನಿಸಿದ್ದಾರೆ. ಅದರ ಮೊದಲ ಹಂತವಾಗಿ ಹನೀಫ್ ಎಂಬಾತ ಎಸ್ ಪಿ ಕಚೇರಿಯ ಪೋಟೋಸ್ ಹಾಗೂ ವಿಡಿಯೋಗಳನ್ನ ತೆಗೆದು ಫರ್ಚೇಸ್ ಗೆ ಮುಂದಾದ ಪಾರ್ಟಿಗಳಿಗೆ ಶೇರ್ ಮಾಡಲು ಯತ್ನಿಸಿದ್ದು,
ಅದನ್ನ ಕಂಡ ಎಸ್ ಪಿ ಕಚೇರಿಯಲ್ಲಿ ಕೆಲಸ ಮಾಡುವ ವೈರ್ ಲೆಸ್ ವಿಭಾಗದ ಇನ್ಸ್ ಪೆಕ್ಟರ್ ಸಂತೋಷ್ ಗೌಡ ಪ್ರಶ್ನಿಸಿದ್ದು, ಈ ಜಾಗ ನಮ್ಮದು. ನನ್ನ ಹಾಗೂ ಮೋಹನ್ ಶೆಟ್ಟ ಜಿಪಿಎ ಇದೆ ಎಂದು ಅವಾಜ್ ಹಾಕಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಇನ್ಸ್ ಪೆಕ್ಟರ್ ಸಂತೋಷ್ ಗೌಡ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷ್ಯ ಮುಟ್ಟಿಸಿ,
ಹನೀಫ್ ಸೇರಿದಂತೆ ನಕಲಿ ದಾಖಲೆ ಸೃಷ್ಟಿಸಿ ಎಸ್ ಪಿ ಕಚೇರಿ ಆಸ್ತಿಯನ್ನ ಮಾರಾಟಕ್ಕೆ ಮುಂದಾದ ರಾಜಶೇಖರ್,ಮೊಹಮದ್ ನದೀಮ್, ಮೋಹನ್ ಶೆಟ್ಟಿ ಹಾಗೂ ಗಣಪತಿ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ 353, 447 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸ್ರು ಸದ್ಯ ಮೂವರು ಆರೋಪಿಗಳನ್ನ ಬಂಧಿಸಿ, ತಲೆಮರೆಸಿಕೊಂಡಿರೋ ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.