ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ ಜೋರಾಗಿ ನಡೆಯುತ್ತಿದೆ. ಆದರೆ ಈ ಸಂಭ್ರಮದಲ್ಲಿ ದಚ್ಚು ಗೈರಾಗಿದ್ದು,ಕಿಚ್ಚ ಹಾಜರಾಗಿದ್ದಾರೆ.
ಮನೆಯಲ್ಲಿ ಹಲ್ಲಿ ಮರಿ ಸತ್ರೆ ಏನ್ ಮಾಡ್ಬೇಕು? ನೀವು ತಿಳಿಯಲೇಬೇಕಾದ ವಿಚಾರ!
ರಾಣಾ ಅಮರ್ ಅಂಬರೀಶ್’ ಎಂದು ಮುದ್ದಾದ ಹೆಸರನ್ನು ಅಂಬಿ ಮೊಮ್ಮಗನಿಗೆ ಹೆಸರಿಡಲಾಗಿದೆ. ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ದರ್ಶನ್ ಗೈರಾಗಿದ್ದಾರೆ.
ಇಂದು ನಡೆದ ಸುಮಲತಾ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ನಟ ದರ್ಶನ್ ಬರುತ್ತಾರೆ ಅನ್ನೋ ಕುತೂಹಲ ಸಹಜವಾಗಿ ಮೂಡಿತ್ತು. ಆದರೆ ದರ್ಶನ್ ಈ ಸಂಭ್ರಮದಿಂದ ದೂರ ಉಳಿದಿದ್ದಾರೆ. ಸುಮಲತಾ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರೂ ಅಲ್ಲಿ ಹಾಜರಿರುತ್ತಿದ್ದ ದರ್ಶನ್ ಈ ಬಾರಿಯ ಅನುಪಸ್ಥಿತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸುಮಲತಾ ಅಂಬರೀಶ್ ಮನೆಯ ಸಂಭ್ರಮದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ಸುದೀಪ್ ಭಾಗಿಯಾಗಿದ್ದಾರೆ. ಕೆಲವೇ ಕೆಲವು ಆಪ್ತರಿ ಹಾಗೂ ಕುಟುಂಬಸ್ಥರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅಲ್ಲದೇ ಈ ಮದರ್ ಇಂಡಿಯಾ ಮನೆಯ ಕಾರ್ಯಕ್ರಮದ ಆಮಂತ್ರಣವನ್ನು ಸ್ವೀಕರಿಸದ ದರ್ಶನ್ ನಡೆ ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸದ್ಯ ದರ್ಶನ್ ‘ಡೆವಿಲ್’ ಚಿತ್ರೀಕರಣಕ್ಕಾಗಿ ಮೈಸೂರಿಗೆ ತೆರಳಿದ್ದರು. ಹೀಗಾಗಿ ಫಾರ್ಮ್ಹೌಸ್ನಲ್ಲೇ ಈ ವೀಕೆಂಡ್ ಕಳೆಯುತ್ತಿದ್ದಾರಂತೆ ಎನ್ನಲಾಗ್ತಿದೆ.
ಇತ್ತ ನಟಿ ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಕಿಚ್ಚ ಸುದೀಪ್ ದಂಪತಿ ಹಾಜರಿ ಹಾಕಿದ್ದಾರೆ. ಅಂಬಿ ಮೊಮ್ಮಗನ ನಾಮಕರಣ ಸಮಾರಂಭಕ್ಕೆ ಆಗಮಿಸಿ ವಿಶೇಷ ಉಡುಗೊರೆಯನ್ನು ಸುದೀಪ್ ದಂಪತಿ ನೀಡಿದ್ದಾರೆ.
ಅಂಬಿ ಮನೆಯ ಕುಡಿ ‘ರಾಣಾ ಅಮರ್ ಅಂಬರೀಶ್’ಗೆ ಪುಟ್ಟ ಗೊಂಬೆಗಳಿರುವ ಬಾಕ್ಸ್ ಅನ್ನು ಸುದೀಪ್ ಮತ್ತು ಪ್ರಿಯಾ ದಂಪತಿ ಉಡುಗೊರೆಯಾಗಿ ನೀಡಿದ್ದಾರೆ.
ಇನ್ನೂ ಈ ಕಾರ್ಯಕ್ರಮಕ್ಕೆ ಸುದೀಪ್ ಆಗಮನ ಹೈಲೈಟ್ ಆಗಿದ್ರೆ, ಮತ್ತೊಂದ್ ಕಡೆ ಮನೆಮಗ ದರ್ಶನ್ ಗೈರಾಗಿರೋದು ಚರ್ಚೆಗೆ ಗ್ರಾಸವಾಗಿದೆ.