ಭಾರತ ತಂಡ ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಈ ಮೂಲಕವಾಂಖೆ ನ್ಯೂಜಿಲೆಂಡ್ ವಿರುದ್ಧ ತನ್ನ ಹಳೆಯ ಸೇಡನ್ನು ತೀರಿಸಿಕೊಂಡಿದೆ.
ಇನ್ನೂ ನಿನ್ನೆ ಪಂದ್ಯ ಶುರುವಾಗುವುದಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದಲ್ಲಿನ ಪಿಚ್ ಬದಲಾಯಿಸಲಾಗಿದೆ ಎಂದು ಕೆಲ ಮಾಜಿ ಕ್ರಿಕೆಟಿಗರು, ಸುದ್ದಿ ಮಾಧ್ಯಮಗಳು ಆರೋಪಿಸಿದ್ದವು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗಳು ಸಹ ನಡೆಯುತ್ತಿದ್ದವು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ವೀಕ್ಷಕ ವಿವರಣೆಗಾರ ಸುನೀಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು, ಆರೋಪ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸುನೀಲ್, ಭಾರತದ ಬೌಲರ್ಗಳಿಗೆ ನೆರವಾಗುವಂತೆ ಪಿಚ್ ತಯಾರಿಸಲಾಗುತ್ತಿದೆ ಎಂದು ಹೇಳುವವರೆಲ್ಲಾ ದೊಡ್ಡ ಮೂರ್ಖರು. ಗಮನ ಸೆಳೆಯುವುದಕ್ಕಾಗಿ ಈ ರೀತಿಯ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಪಿಚ್ ಬದಲಾವಣೆ ಮಾಡಿದರು ಅದು ಟಾಸ್ಗಿಂತ ಮೊದಲು ಮಾಡುತ್ತಾರೆ.
ಪಂದ್ಯದ ಮಧ್ಯದಲ್ಲಿ ಆ ರೀತಿ ಬದಲಾಯಿಸಲು ಸಾಧ್ಯವಿಲ್ಲ. ನೀವು ಉತ್ತಮ ತಂಡ ಆಗಿದ್ದರೆ ಎಂತಹ ಕಷ್ಟ ಪರಿಸ್ಥಿತಿ ಇದ್ದರು ಆಡಿ ಗೆಲ್ಲುತ್ತೀರಾ ಎಂದು ಪಿಚ್ ಬದಲಾವಣೆ ಆರೋಪದ ಕುರಿತು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ತಿರುಗೇಟು ನೀಡಿದ್ದಾರೆ.