ಬಳ್ಳಾರಿ: ಲೋಕಸಭಾ ಕ್ಷೇತ್ರದಲ್ಲಿ ಟಾಕ್ ವಾರ್ ಜೋರಾಗಿದೆ. ಸಚಿವ ನಾಗೇಂದ್ರ ಅವರು ಬಿಜೆಪಿಯವರನ್ನು ಕೌರವರಿಗೆ ಹೋಲಿಸಿ ನೀಡಿದ್ದ ಹೇಳಿಕೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಸಚಿವ ನಾಗೇಂದ್ರರನ್ನ ಭೂತ, ಮದವೇರಿದ ಆನೆ, ಕುತಂತ್ರ ನರಿಗೆ ಹೋಲಿಕೆ ಮಾಡಿದರು.
ಮೊಕಾ ನಂದು, ಮೊಕಾದಲ್ಲಿ ಲೀಡ್ ತಗೊಂಡು ತೋರಿಸು ಎಂದು ಸಾವಲು ಹಾಕಿದ್ದ ಸಚಿವ ನಾಗೇಂದ್ರಗೆ ಮಧ್ಯೆ ರಾತ್ರಿಯಲ್ಲಿ ಹುಟ್ಟಿದ ನಾಯಕ ಎಂದ ಶ್ರೀರಾಮುಲು ಟಾಂಗ್ ಕೊಟ್ಟಿದ್ದಾರೆ. ಮಧ್ಯೆ ರಾತ್ರಿಯಲ್ಲಿ ಹುಟ್ಟಿದವರೆಲ್ಲಾ ಹಂಗೆ ಮಾತಾಡ್ತಾರೆ. ಆನೆಗೆ ಹೆಂಗೆ ಮದ ಹೇರಿದಾಗ ಮಾಡತ್ತೋ ಹಂಗೆ ಇವರಿಗೆ ಮದ ಹೇರಿದೆ. ನರಿಗಳ ರೀತಿ ಕುತಂತ್ರ ಮಾಡ್ತಾ ಇದ್ದಾರೆ. ಇದ್ದಕ್ಕೆಲ್ಲ ಕಾಲ ಉತ್ತರ ಕೊಡುತ್ತೆ ಎಂದು ಜರಿದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)