ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದಲ್ಲಿರುವ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವನ್ನು ದಿ.19 ರಂದು ವಿಜೃಂಭಣೆಯಿಂದ ಮಾಡಬೇಕೆಂದು ಕಮಿಟಿ ತೀರ್ಮಾನ ಮಾಡಿದ್ದೇವೆ ಎಂದು ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಸತ್ಯನಾರಾಯಣ ಗೌಡ ತಿಳಿಸಿದರು.
ದೇವಾಲಯದ ಸಭಾಂಗಣದಲ್ಲಿ ಪತ್ರಿಕಾ ಘೋಸ್ಠಿ ನಡೆಸಿ ಮಾತನಾಡಿದ ಇವರು ದೇವಸ್ಥಾನದ ಅಭಿವೃದ್ಧಿಗಳ ಬಗ್ಗೆ ದೇವಾಲಯದ ಕಾರ್ಯಕ್ರಮದ ಬಗ್ಗೆ ತುಂಬಾ ಉಸ್ತುಕರಾಗಿ ಏಳೆಂಟು ಜನ ಧರ್ಮದರ್ಶಿಗಳು ಕಾರ್ಯಪವೃತ್ತರಾಗಿದ್ದೇವೆ. ಹಣಕಾಸಿನ ಚಿಂತನೆ ಇಲ್ಲ ನಾವು ಮಾಡುವಂತಹ ಜನಪಯೋಗಿ ಕೆಲಸಗಳನ್ನ ಯಾರು ಟೀಕಿಸುವಂತಹ ವ್ಯವಸ್ಥೆ ಇಲ್ಲ ಇಲ್ಲಿಗೆ ಬರುವಂತಹ ಭಕ್ತಾದಿಗಳಿಗೆ ಅನುಕೂಲವಾಗಲು ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿದಿನವೂ ದಾಸೋಹದ ವ್ಯವಸ್ಥೆ ಇದ್ದು ಭಕ್ತಾದಿಗಳು ದಾಸೋಹ ಭವನದಲ್ಲಿ ದಾಸೋಹವನ್ನು ಸ್ವೀಕರಿಸಿ ಎಂದು ವಿನಂತಿಸಿಕೊಂಡರು. ಇನ್ನು ಪತ್ರಿಕಾಗೋಷ್ಠಿಯನ್ನು ಕುರಿತು ಕೆ ವಿ ಪ್ರಕಾಶ್ ಮಾತನಾಡಿ ಬ್ರಹ್ಮರಥೋತ್ಸವ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ಸಮಯದಲ್ಲಿ ನೆರವೇರಲಿದೆ. ನಂತರ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೆ ದೇವಾಲಯದ ಆವರಣದಲ್ಲಿ ನಾಟಕ ಆಯೋಜನೆ ಮಾಡಲಾಗಿದೆ.
ಬರುವ ಭಕ್ತಾದಿಗಳಿಗೆ ಪ್ರತಿದಿನವೂ ಕೂಡ ಊಟದ ವ್ಯವಸ್ಥೆ ,ಕುಡಿಯುವ ನೀರಿನ ವ್ಯವಸ್ಥೆ ,ಪಾರ್ಕಿಂಗ್ ವ್ಯವಸ್ಥೆ,ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು..