ಕೋಲಾರ: ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಪಲಪುಷ್ಪ ಪ್ರದರ್ಶನವನ್ನು ನಾಳೆಯಿಂದ ಮೂರು ದಿನಗಳ ಕಾಲ ಆರಂಭವಾಗಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಮೂರು ದಿನಗಳ ಕಾಲ ಈ ಮೇಳವನ್ನು ಆಯೋಜಿಸಲಾಗಿದೆ.
ಸಿರಿಧಾನ್ಯಗಳಲ್ಲಿ ವಿವಿಧ ತಿಂಡಿ ತಿನಿಸು ತಯಾರಿಸುವ ಸ್ಪರ್ಧೆ ಹಾಗೂ ಮಾರಾಟ ಇರಲಿದ್ದು ಪುಷ್ಪಗಳಿಂದ ತಯಾರಿಸಲಾದ ಡೈನೋಸರ್, ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ಮರಳಿನ ಆಕೃತಿ ತರಾಕಾರಿಗಳಿಂದ ವಿವಿಧ ರೀತಿಯ ಕಲಾಕೃತಿಗಳು ರಾಮ ಮಂದಿರ , ಗ್ರಾಮೀಣದಲ್ಲಿ ಇರುವಂತಹ ಮನೆ ನಾನ ಜಾತಿಯ ಪ್ರಭೇದದ ಹೂವು,
ಅಲಂಕಾರಿಕ ಹೂವು, ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ಇರಲಿದೆ. ಅಲ್ಲದೇ, ಹೊರಾಂಗಣ, ಒಳಾಂಗಣ ಉದ್ಯಾನ, ಕೈತೋಟದ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ವೈವಿಧ್ಯಮಯ ಹೂ ಕುಂಡಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ ಕೃಷಿ ಸಂಬಂಧಿಸಿದ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಯೂ ಇರಲಿದೆ. ಕೃಷಿ ಪದ್ಧತಿ ಕುರಿತು ಮಾಹಿತಿಯನ್ನು ಸಹ ನೀಡಲಾಗುವುದು.