ಚಿಕ್ಕಬಳ್ಳಾಪುರ:- ರಾಜ್ಯದೆಲ್ಲೆಡೆ ಮಳೆ ಆದ್ರೂ ಆದ್ರೆ ಈ ಜಿಲ್ಲೆಯಲ್ಲಿ ಮಾತ್ರ ಮಳೆ ಆಗಿಲ್ಲ. ಹೀಗಾಗಿ ಮಳೆರಾಯ ಚಿಕ್ಕಬಳ್ಳಾಪುರದತ್ತ ಕರುಣೆ ತೊರಲಿ ಎಂದು ಚಿಕ್ಕಬಳ್ಳಾಪುರ ನಗರದ ಶ್ರೀ ಮಹಾಕಾಳಿ ದೇವಸ್ಥಾನಲ್ಲಿ ಮಳೆಗಾಗಿ ಪ್ರಾರ್ಥಿಸಿ, ವಿವಿಧ ದೇವರುಗಳ ಕಲ್ಯಾಣೋತ್ಸವ ನಡೆಸಲಾಯಿತು.
ದೇವಸ್ಥಾನದಲ್ಲಿ ನಡೆಯುವ ಪೂಜೆ ನೋಡಲು ಸಾವಿರಾರು ಜನ ಮಹಿಳೆಯರು, ಭಕ್ತರು ಆಗಮಿಸಿದ್ದರು. ಕಲ್ಯಾಣೋತ್ಸವ ಪ್ರಯುಕ್ತ ಮಹಾಕಾಳಿ ದೇವಸ್ಥಾನವನ್ನು ವಿವಿಧ ತಳಿರು ತೊರಣ, ಎಳನೀರು, ತೆಂಗಿನಕಾಯಿ, ಜೋಳದ ತೆನೆ, ವಿವಿಧ ಹೂ ಗಳಿಂದ ಅದ್ದೂರಿಯಾಗಿ ಅಲಂಕರಿಸಲಾಗಿತ್ತು. ಒಂದೆ ಜಾಗದಲ್ಲಿ ಗಿರಿಜಾ ಕಲ್ಯಾಣೋತ್ಸವ, ಸುಬ್ರಮಣ್ಯೇಶ್ವರ ಸ್ವಾಮಿ ಕಲ್ಯಾಣೋತ್ಸವ, ಸೀತಾರಾಮ ಕಲ್ಯಾಣೋತ್ಸವ, ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವ, ಲಕ್ಷ್ಮಿ ನರಸಿಂಹಸ್ವಾಮಿ ಕಲ್ಯಾಣೋತ್ಸವ ನೋಡು ಭಾಗ್ಯ ಭಕ್ತಾಧಿಗಳಿಗೆ ದೊರೆಯಿತು.
ಒಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಬೇಡ ಎಂದರೂ ಮಳೆಯ ಅಬ್ಬರ ಜೋರಾಗಿದೆ