ಪೀಣ್ಯ ದಾಸರಹಳ್ಳಿ:’ ಚಿಕ್ಕಸಂದ್ರದ ಕಾಲೋನಿ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಅದನ್ನು ಮನಗಂಡು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಚಿಕ್ಕಸಂದ್ರದ ಕಾಲೋನಿಯ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅಕ್ಕನ ಬಳಗದವರು ಆಯೋಜಿಸಲಾದ ಅಲ್ಲಿನ ಉದ್ಯಾನಕ್ಕೆ ‘ಅಕ್ಕಮಹಾದೇವಿ ಉದ್ಯಾನ’ ಎಂದು ನಾಮಕರಣ ಮಾಡಿ ಮಾತನಾಡಿದರು. ಇನ್ನು ಮುಂದೆ ಐದು ರೂಪಾಯಿಗೆ 20 ಲೀಟರ್ ಶುದ್ದ ಕುಡಿಯುವ ನೀರು ಸಿಗಲಿದೆ. ಜನರು ಶುದ್ಧ ನೀರನ್ನು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಅವರಲ್ಲಿ ಮನವಿ ಮಾಡಿದರು.
ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ’ ಕನ್ನಡದ ಪ್ರಸಿದ್ಧ ವಚನಗಾರ್ತಿ ಅಕ್ಕಮಹಾದೇವಿ. ಆಕೆ ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿ ಎಂದು ಪರಿಭಾವಿಸಿ ಸಾವಿರಾರು ವಚನಗಳನ್ನು ರಚಿಸಿದ ಉತ್ಕಟ ಶಿವಭಕ್ತೆ. ಅವರ ಹೆಸರಿನಲ್ಲಿ ‘ಅಕ್ಕಮಹಾದೇವಿ ಉದ್ಯಾನ’ ನಾಮಕರಣ ಮಾಡಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಬಿಜೆಪಿ ಮುಖಂಡರಾದ ಸಿ.ಎನ್. ದಯಾನಂದ್, ಮೋಹನ್, ಕೇಶವ್, ಶಿಕ್ಷಕ ಸಿದ್ದಲಿಂಗಯ್ಯ, ಅಕ್ಕನ ಬಳಗದ ಪ್ರೇಮ ಆರಾಧ್ಯ, ಗಾಯಿತ್ರಿ, ಚೇತನ,ಪಾಲಿಕೆ ಅಧಿಕಾರಿಗಳಾದ ಎಇಇ ಕೃಷ್ಣಮೂರ್ತಿ, ಮಧು ಮುಂತಾದವರಿದ್ದರು.