ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಥೆ ಮುಗಿಯಿತು ಎಂದು ಹೇಳಿದ್ದವರೆಲ್ಲಾ ಕಣ್ಣು ಬಾಯಿ ಬಿಟ್ಟು ನೋಡುವಂತ್ತಾಗಿದೆ. 17ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಾನು ಆಡಿದ ಮೊದಲ 8 ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಆರ್ಸಿಬಿ ಗೆದ್ದದ್ದು ಕೇವಲ 1 ಪಂದ್ಯವನ್ನು ಮಾತ್ರ.
ಅಂಕಪಟ್ಟಿಯ ಕೊನೇ ಸ್ಥಾನ ತಲುಪಿದ್ದ ಆರ್ಸಿಬಿ ಪ್ಲೇ-ಆಫ್ಸ್ ತಲುಪುವ ಸನಿಹಕ್ಕಾದರೂ ಬರುತ್ತದೆ ಎಂದು ಯಾರೊಬ್ಬರೂ ಅಂದಾಜಿಸಿರಲಿಲ್ಲ. ಆದರೆ, ಕಳೆದ 6 ಪಂದ್ಯಗಳಲ್ಲಿ ಆರ್ಸಿಬಿ ಅಸಾಧಾರಣ ಪ್ರದರ್ಶನ ನೀಡಿದೆ. ಸತತ 5 ಜಯ ದಾಖಲಿಸಿ ಪ್ಲೇ-ಆಫ್ಸ್ ಆಸೆಯನ್ನು ಬಲಪಡಿಸಿಕೊಂಡಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ತಂಡದ ಈ ಅಸಾಧಾರಣ ಕಮ್ಬ್ಯಾಕ್ ಬಗ್ಗೆ ಮಾತನಾಡಿರುವ ಯುವ ಎಡಗೈ ವೇಗದ ಬೌಲರ್ ಯಶ್ ದಯಾಳ್, ಆಕ್ರಣಕಾರಿ ಆಟದ ರಣತಂತ್ರವೇ ತಂಡವನ್ನು ಪುಟಿದೇಳುವಂತೆ ಮಾಡಿದೆ ಎಂದು ಯಶಸ್ಸಿನ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಆರ್ಸಿಬಿ ಆಕ್ರಮಣಕಾರಿ ಆಟವಾಡಿ ಯಶಸ್ಸು ಕಂಡಿದೆ ಎಂದಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಶುಭ ಸುದ್ದಿ: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
“ತಂಡದಲ್ಲಿ ಒಂದು ಧನಾತ್ಮಕ ಬದಲಾವಣೆ ಆಗಿದೆ. ನಾವು ಪಂದ್ಯಗಳನ್ನು ಸೋತಾಗಲು ಕೂಡ ಯಾರೊಬ್ಬರೂ ಕೂಡ ಯಾರ ಕಡೆಗೂ ಬಿಟ್ಟು ಮಾಡಲಿಲ್ಲ. ತಂಡದಲ್ಲಿ ಎಲ್ಲರಿಗೂ ಬೆಂಬಲ ಸಿಗುವಂತಹ ವಾತಾವರಣವಿದೆ. ಜೊತೆಗೆ ಹೊಸದಾಗಿ ಕಂಡುಕೊಂಡಿರುವ ಆಕ್ರಮಣಕಾರಿ ಆಟ ಯಶಸ್ಸನ್ನು ತಂದುಕೊಟ್ಟಿದೆ. ಆಕ್ರಮಣಕಾರಿ ಆಟವೇ ಆರ್ಸಿಬಿ ತಂಡದ ಗೆಲುವಿನ ಫಾರ್ಮುಲಾ ಎಂಬುದನ್ನು ನಾವು ಕಂಡುಕೊಂಡಿದ್ದೇವೆ,” ಎಂದು ಯಶ್ ದಯಾಳ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್ಸಿಬಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ತಂಡದ ಕೋಚಿಂಗ್ ಬಳಗದ ಶ್ರಮದ ಬಗ್ಗೆ ಯಶ್ ದಯಾಳ್ ಗುಣಗಾನ ಮಾಡಿದ್ದಾರೆ. ಗೆಲುವಿಗೆ 188 ರನ್ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಕ್ರಮಣಕಾರಿ ಬೌಲಿಂಗ್ ಮೂಲಕ ಆರ್ಸಿಬಿ 140 ರನ್ಗಳಿಗೆ ಆಲ್ಔಟ್ ಮಾಡಿತ್ತು. ಯಶ್ ದಯಾಳ್ 20ಕ್ಕೆ 3ವಿಕೆಟ್ ಪಡೆದು ಆರ್ಸಿಬಿ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದರು.
“ಈ ಗೆಲುವಿನ ಶ್ರೇಯಸ್ಸು ತಂಡದ ಕೋಚಿಂಗ್ ಬಳಗಕ್ಕೆ ಸಲ್ಲಬೇಕು. ನಾನು ಬೌಲಿಂಗ್ ಮಾಡಲು ಬಂದಾಗಲೆಲ್ಲಾ, ಎದುರಿರುವ ಬ್ಯಾಟರ್ನ ಔಟ್ ಮಾಡಬೇಕು ಎಂಬುದಷ್ಟೇ ನನ್ನ ಗುರಿ. ಔಟ್ ಮಾಡಿದರೆ ರನ್ ಕೂಡ ಉಳಿಸಬಹುದು. ಇದು ತಂಡದಲ್ಲಿ ಆಗಿರುವ ಧನಾತ್ಮಕ ಬದಲಾವಣೆ ಆಗಿದೆ,” ಎಂದು ದಯಾಳ್ ಹೇಳಿಕೊಂಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)