ಕಲಬುರಗಿ: ಆದಿಗುರು ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಸೇವಾ ಸಮಿತಿ ಬಿದ್ದಾಪುರ ಕಾಲನಿ ವತಿಯಿಂದ ಕಲಬುರಗಿ ನಗರದಲ್ಲಿ ಅದ್ವೈತಾಮೃತ ಎಂಬ ಸ್ತೋತ್ರ ಹಾಗು ಭಜನೆಗಳ ಸಂಗ್ರಹ ಪುಸ್ತಕ ಬಿಡುಗಡೆ ಮಾಡಲಾಯಿತು ಸತತ 16 ವರ್ಷಗಳಿಂದ ನಡೆದುಕೊಂಡು ಬಂದ ಅಷ್ಟೋತ್ತರ ಸೇವಾ ಸಮಿತಿ ಮನೆ ಮನೆಗೂ ತೆರಳಿ ಶ್ರೀ ಶಂಕರಾಚಾರ್ಯರ ಸ್ತ್ರೋತ್ರಗಳನ್ನ ಮತ್ತು ತತ್ವಗಳನ್ನ ಎಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದೆ.
ಸಮಿತಿಯ ಮೂಲ ಸಂಸ್ಥಾಪಕರಾದ ನಾನಾ ಸಾಹೇಬ ಇಜೇರಿ ಮತ್ತು ಪಿ ಎಚ್ ಕುಲಕರ್ಣಿ ನಾಗೇಶ್ ಮೊಹರೆ ಚಂದ್ರಕಾಂತ ನಾಗುರೆ ಹಾಗು ರಾಘವೇಂದ್ರ ಮಾರಡಗಿ ಸೇರಿದಂತೆ ಶಂಕರಾಚಾರ್ಯರ ಅನೇಕ ಭಕ್ತರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.