ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಆಡಳಿತಾ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಇ.ಟಿ.ಸಿ.ಎಂ ನರ್ಸಿಂಗ್ ಕಾಲೇಜು ಇವರ ಸಹಯೋಗದೊಂದಿಗೆ ಕ್ಯಾನ್ಸರ್ ತಡೆಗಟ್ಟುವಿಕೆ ಕುರಿತಂತೆ ಕಾಲ್ನಡಿಗೆ ಜನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಗಳಾದ ಡಾ|| ಶಂಕರ್ ವಣಿಕ್ಯಾಳ್ರವರು ಇದೇ ಸಂದರ್ಭದಲ್ಲಿ ಮಾತನಾಡಿದ ಅವ್ರು,
ಸಾರ್ವಜನಿಕರು ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಕೆಲವರು ಸೇವನೆ ಮಾಡುವಂತಹ ಆಹಾರ ಪದಾರ್ಥಗಳಾದ ಫಿಜ್ಹಾ, ಬರ್ಗರ್, ಪಾನಿಪುರಿ, ಗೋಬಿಮಂಚೂರಿ, ಚೈನಿಸ್ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ ಇದು ಒಳ್ಳೆಯ ಆಹಾರ ಪದ್ಧತಿಯಲ್ಲ ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದಾಗಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗಿದೆ ಆದ್ದರಿಂದ ನಾವೇಲ್ಲರು ಕೂಡ ಇಂತಹ ಫಾಟ್ಪುಡ್ ಸೇವನೆ ಮಾಡದಂತೆ ತಿಳುವಳಿಕೆ ಮೂಡಿಸಲು ಕಾರ್ಯಪ್ರವೃತರಾಗಬೇಕು ಹಾಗೂ ಮುಖ್ಯವಾಗಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಪಾನ್ಮಸಾಲ, ಹನ್ಸ್, ಕಡ್ಡಿಪುಡಿ ಇತ್ಯಾದಿ ತಂಬಾಕು ಉತ್ಪನ್ನಗಳು ಸೇವನೆ ಮಾಡುವುದರಿಂದ ಶೇಕಡಾ ೨೨ ರಷ್ಟು ಕ್ಯಾನ್ಸರ್ ರೋಗ ಬರುತ್ತದೆ.
ಕ್ಯಾನ್ಸರ್ ರೋಗ ಲಕ್ಷಣಗಳು ಕಂಡುಬದ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಬೇಟಿನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು, ಡಾ|| ಚಾರಿಣಿ. ಎಂ.ಎ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮಾತನಾಡಿ ತಂಬಾಕು ಸೇವನೆ ಉತ್ಪನ್ನಗಳಿಂದ ಶೇಕಡಾ ೩೫ ರಷ್ಟು ಕ್ಯಾನ್ಸರ್ ರೋಗ ಹರಡುವ ಸಾಧ್ಯತೆ, ಅನಾರೋಗ್ಯ ಆಹಾರ ಪದಾರ್ಥಗಳ ಸೇವನೆಯಿಂದ 30 ರಷ್ಟು ಕ್ಯಾನ್ಸರ್ ರೋಗ ಹರಡುವ ಸಾಧ್ಯತೆ ಮತ್ತು ಇತರೇ ವರ್ತಿಸುವುದರಿಂದ 26 ರಷ್ಟು ಕ್ಯಾನ್ಸರ್ ರೋಗ ಹರಡುವ ಸಾಧ್ಯತೆ ಇರುತ್ತದೆ.
ಮತ್ತು ಪ್ರತಿ 9 ಜನರಲ್ಲಿ ಒಬ್ಬನಿಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು ಮತ್ತು ಡಾ|| ವಿಜಯಕುಮಾರ್.ಎಸ್.ಎನ್, ಜಿಲ್ಲಾ ಶಸ್ತçಚಿಕಿತ್ಸಕರು ಮಾತನಾಡಿ ತಂಬಾಕು ಉತ್ಪನ್ನಗಳು ಸೇವನೆ ಮಾಡುವುದರಿಂದ ಕ್ಯಾನ್ಸರ್ ಹರಡುವ ಸಾಧ್ಯತೆ ಹಾಗೂ ಕ್ಯಾನ್ಸರ್ ಚಿಕಿತ್ಸೆ ಲಭ್ಯವಿದ್ದು ಹಾಗೂ ಉಪಶಮನ ಆರೈಕೆ ಕೇಂದ್ರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ|| ವಿಜಯಕುಮಾರ್.ಎಸ್.ಎನ್, ಜಿಲ್ಲಾ ಕುಷ್ಠ ರೋಗನಿವಾರಣಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ ಎಂ.ಎ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ|| ಎ. ವಿ. ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರೇಮಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಶ್ರೀಯುತ ಮಹಮದ್ ಪಿ, ಮತ್ತು ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಇ.ಟಿ.ಸಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.