ರಾಯಚೂರು: ರಾಯಚೂರಿಗೆ ಕಿಚ್ಚ ಸುದೀಪ್ ಬಂದಿಳಿದಿದ್ದಾರೆ. ಪತ್ನಿ ಪ್ರಿಯಾ ಜೊತೆ ರಾಯಚೂರಿಗೆ ಆಗಮಿಸಿರುವ ಅವರು, ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಂಪತಿ ಸಹಿತ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಯಚೂರು ನಗರದ ಗಾಂಧಿ ವೃತ್ತದಲ್ಲಿರುವ ಹನುಮಾನ್ ದೇವಾಲಯ ಜೀರ್ಣೋದ್ಧಾರ ಬಳಿಕ ಇತ್ತೀಚೆಗೆ ಉದ್ಘಾಟನೆಯಾಗಿದೆ. ಈ ಸಂದರ್ಭದಲ್ಲಿ ಸುದೀಪ್ ದಂಪತಿಯಿಂದ ಹೋಮ ಹವನ ವಿಶೇಷ ಪೂಜೆ ನಡೆದಿದೆ. ಜೀರ್ಣೊದ್ದಾರ ವೇಳೆಯೂ ದೇವಾಲಯಕ್ಕೆ ಭೇಟಿ ನೀಡಿದ್ದ ಸುದೀಪ್ ಆಗ ಒಬ್ಬರೇ ಬಂದಿದ್ದರು.
ಈಗ ಪತ್ನಿಯನ್ನೂ ಕರೆತಂದು ಹನುಮಾನ್ ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮೂರಿಗೆ ನೆಚ್ಚಿನ ನಟ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ, ಸುದೀಪ್ ನೋಡಲು ಬಿರು ಬಿಸಿಲಿನಲ್ಲಿ ಅಭಿಮಾನಿಗಳು ಕಾದು ನಿಂತಿದ್ದರು.