ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಹಾಗೂ ನಟ ಧನುಷ್ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದರು. ಆದರೆ ಎರಡು ವರ್ಷಗಳ ಹಿಂದೆ ತಾವು ಬೇರೆ ಆಗುತ್ತಿರುವ ಬಗ್ಗೆ ಇಬ್ಬರು ಘೋಷಣೆ ಮಾಡಿದ್ದರು. ಬೇರೆ ಬೇರೆಯಾದ ಎರಡು ವರ್ಷಗಳ ಬಳಿಕ ಜೋಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದೆ.
ಐಶ್ವರ್ಯಾ ಹಾಗೂ ಧನುಷ್ ಡಿವೋರ್ಸ್ ಪೇಪರ್ ನ ಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಚೆನ್ನೈನ ಕೌಂಟುಬಿಕ ನ್ಯಾಯಾಲಯದಲ್ಲಿ ಈ ಪ್ರಕರಣ ಇತ್ಯರ್ಥ ಆಗಲಿದೆ.
ಭಾರತೀಯ ನೀತಿ ಸಂಹಿತೆ ಸೆಕ್ಷನ್ 13 ಬಿ ಅಡಿಯಲ್ಲಿ ಡಿವೋರ್ಸ್ ಸಲ್ಲಿಕೆ ಮಾಡಲಾಗಿದೆ. ಅಂದರೆ ಇಬ್ಬರೂ ಸಮ್ಮತಿಸಿಯೇ ವಿಚ್ಛೇದನ ಪಡೆಯುತ್ತಿದ್ದೇವೆ ಎಂಬುದು ಇದರ ಅರ್ಥವಾಗಿದೆ. ಈ ಪ್ರಕರಣ ಶೀಘ್ರವೇ ಇತ್ಯರ್ಥ ಆಗಲಿದೆ. ದೂರವಾಗುವ ಬಗ್ಗೆ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.
2022ರ ಜನವರಿ ತಿಂಗಳಲ್ಲಿ ಈ ಬಗ್ಗೆ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದರು. ‘18 ವರ್ಷ ನಾವು ಗೆಳೆಯರಾಗಿ, ದಂಪತಿ ಆಗಿ, ಪೋಷಕರಾಗಿ ಜೊತೆಗಿದ್ದೆವು. ಈಗ ನಮ್ಮ ಹಾದಿ ಬೇರೆ ಆಗಿದೆ’ ಎಂದು ದಂಪತಿ ಬರೆದುಕೊಂಡಿದ್ದರು. ಈ ಮೂಲಕ ತಾವು ಬೇರೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದರು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.