ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನಿಗಾಗಿ ಎದುರು ನೋಡ್ತಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೂಡಲಾಗುತ್ತಿದೆ. ಈ ಮಧ್ಯೆ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಪತಿಯನ್ನು ನೋಡಲು ಜೈಲಿಗೆ ಆಗಮಿಸಿದ್ದಾರೆ.
ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ ಜೊತೆ ಸುಶಂತ್ ನಾಯ್ಡು,ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಕೂಡಾ ಆಗಮಿಸಿದ್ದಾರೆ. ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದರು.
ಸಂದರ್ಶಕರ ಕೊಠಡಿಗೆ ವಿಜಯಲಕ್ಷ್ಮಿ ಹಾಗೂ ಇತರರು ತೆರಳಿದ್ದಾರೆ. ದರ್ಶನ್ ಗೆ ಬೆನ್ನುನೋವು ಹಿನ್ನಲೆ ಆರೋಗ್ಯ ವಿಚಾರಣೆ ಮಾಡಲು ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಭೇಟಿ ನೋಡಿ ವಾಪಾಸಾಗಿದ್ದಾರೆ.ದರ್ಶನ್ ಜೈಲು ಸೇರಿದಾಗಿನಿಂದಲೂ ಅವರ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಲೆ ಇದ್ದಾರೆ. ಇದಕ್ಕಾಗಿಯೇ ನಟನಿಗೆ ಸರ್ಜಿಕಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು.
Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ದೀಪಾವಳಿಗೆ ಡಬಲ್ ಧಮಾಕಾ ಆಫರ್ ಘೋಷಣೆ
ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲ್ತಿರುವ ಆರೋಪಿ ದರ್ಶನ್ ಇದರಿಂದಾಗಿ ಕಷ್ಟಪಡುತ್ತಿದ್ದಾರಂತೆ. ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಜೈಲಿನಲ್ಲೇ ಆರೋಗ್ಯ ತಪಾಸಣೆ ನಡೆಸಿದ್ದು ವೈದ್ಯರು ಎಂಆರ್ ಐ ಸ್ಕ್ಯಾನ್ ಮಾಡಲು ತಿಳಿಸಿದ್ದಾರೆ. ಆದರೆ ದರ್ಶನ್ ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿಯೇ ಸ್ಕ್ಯಾನ್ ಮಾಡಿಸೋದಾಗಿ ಹೇಳಿದ್ದಾರಂತೆ.
ದರ್ಶನ್ ಭೇಟಿಗೆ ಬಂದ ವಿಯಲಕ್ಷ್ಮಿ ಎರಡು ಬ್ಯಾಗ್ ಗಳನ್ನು ದರ್ಶನ್ ಗೆ ನೀಡಿದ್ದಾರೆ. ಆದರೆ ಬ್ಯಾಗ್ ಗಳನ್ನುಎತ್ತಿಕೊಂಡು ಹೋಗಲಾಗದಷ್ಟು ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ. ಬ್ಯಾಗ್ನ ಕೆಳಗೆ ಇಳಿಸಿ ನೋವಿನಿಂದ ಬಳಲಿದ್ದಾರೆ ದರ್ಶನ್.